Server Problem : ನಾಲ್ಕು ದಿನ ಗಳಿಂದ ಸರ್ವರ್ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ಆಸ್ತಿಗಳ ಖರೀದಿ, ಮಾರಾಟ ಸಹಿತ ನೋಂದಣಿ ಪ್ರಕ್ರಿಯೆ ಸ್ತಬ್ಧಗೊಂಡಿದ್ದು ಜನರು ಪರದಾಡುವಂತಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮೇಲ್ದರ್ಜೆಗೇರಿಸಿದ “ಕಾವೇರಿ 2.0′ ತಂತ್ರಾಂಶವನ್ನು ಬಳಕೆ ಮಾಡುತ್ತಿದೆ.
ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ಆದರೆ ಸರ್ವರ್ ಸಮಸ್ಯೆಯಿಂದ 10 ದಿನಗಳಿಂದ ಋಣಭಾರ ಪ್ರಮಾಣಪತ್ರ (ಇ.ಸಿ.) ವಿತರಣೆಯಲ್ಲಿ ಸಮಸ್ಯೆ ಉಂಟಾಗಿತ್ತು. ಅದರ ಮುಂದುವರಿದ ಭಾಗವಾಗಿ 4 ದಿನಗಳಿಂದ ಆಸ್ತಿ ಖರೀದಿ ಮತ್ತು ಮಾರಾಟ ನೋಂದಣಿ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ.
ರಾಜ್ಯದಲ್ಲಿ ದಿನಕ್ಕೆ 8ರಿಂದ 8,500 ನೋಂದಣಿಗಳು ಆಗುತ್ತಿದ್ದವು. ಇದ ರಿಂದ ಅಂದಾಜು 80-100 ಕೋಟಿ ರೂ. ಆದಾಯ ಬರುತ್ತಿತ್ತು. ಆದರೆ ಮಂಗಳವಾರ ಕೇವಲ 500-550 ನೋಂದಣಿ ಸಾಧ್ಯವಾಗಿದ್ದು 15-18 ಕೋ.ರೂ. ಆದಾಯ ಬಂದಿದೆ. ಅದೂ ಬಹುತೇಕ ಹಳೆಯವು. ಇದುವರೆಗೆ ಸರ್ವರ್ ಸಮಸ್ಯೆ ಏನು ಹಾಗೂ ಯಾವಾಗ ಇತ್ಯರ್ಥವಾಗಲಿದೆ ಎಂಬ ಸ್ಪಷ್ಟ ಮಾಹಿತಿಯೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬಳಿ ಇಲ್ಲ.
ಈ ಹಿನ್ನೆಲೆಯಲ್ಲಿ ಸಮಸ್ಯೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ತಾಲೂಕು ಮಟ್ಟದಲ್ಲಿಯ ಉಪನೋಂದಣಾಧಿಕಾರಿ ಕಚೇರಿಗಳ ಮುಂದೆ ಜನ ದಿನಗಟ್ಟಲೆ ಕಾದು, ನೋಂದಣಿಯಾಗದೆ ನಿರಾಸೆಯಿಂದ ಹಿಂತಿರುಗುತ್ತಿರುವುದು ಸಾಮಾನ್ಯವಾಗಿದೆ. ಸಾರ್ವಜನಿಕ ಲಾಗ್ಇನ್ ಮೂಲಕವೇ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆ, ದಾಖಲೆಗಳ ಅಪ್ಲೋಡ್ ಮಾಡುವುದು, ಮಾರಾಟ ಮತ್ತು ಖರೀದಿಸುವವರ ಫೋಟೋ ಮತ್ತು ಹೆಬ್ಬೆಟ್ಟು ಎಂಟ್ರಿ ಸಹಿತ ಪ್ರತಿಯೊಂದು ಆಗಬೇಕು. ಆದರೆ ಲಾಗ್ಇನ್ ಆಗುತ್ತಲೇ ಇಲ್ಲ. ವಿಚಿತ್ರವೆಂದರೆ ಸಮಸ್ಯೆಯ ಮೂಲವೂ ಗೊತ್ತಾಗುತ್ತಿಲ್ಲ. ಇದು ಒಂದೆಡೆ ಜನರಿಗೆ ಕಿರಿಕಿರಿ ಉಂಟಾಗುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಹಲವು ಹಂತಗಳಲ್ಲಿ ನೋಂದಣಿ ಪ್ರಕ್ರಿಯೆ ಅಪೂರ್ಣವಾಗಿದೆ. ಬಹುತೇಕ ಕಡೆಗಳಲ್ಲಿ ಇಸಿ ವಿತರಣೆಯೇ ಆಗಿಲ್ಲ. ಫೋಟೋ ಪಕ್ಕದಲ್ಲಿ ಹೆಬ್ಬೆಟ್ಟು ಗುರುತು ಬಂದಿಲ್ಲ. ಹಲವೆಡೆ ಫೋಟೋ ಬಂದಿಲ್ಲ. ಮುದ್ರಾಂಕ ಶುಲ್ಕ ಪಾವತಿಸಿದ್ದರೂ ಇಲಾಖೆ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿಲ್ಲ. ಹೀಗೆ ಅರ್ಧಕ್ಕೇ ಸ್ಥಗಿತಗೊಂಡಿವೆ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ.
ಆಸ್ತಿಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ನೋಂದಣಿ ಮಾತ್ರವಲ್ಲ, ಬ್ಯಾಂಕ್ ಭೋಜಾ ನೋಂದಣಿ, ಮದುವೆ ನೋಂದಣಿ ಒಳಗೊಂಡಂತೆ ಉಪನೋಂದಣಾಧಿಕಾರಿ ಕಚೇರಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೂ ಇದರಿಂದ ಹಿನ್ನಡೆ ಉಂಟಾಗಿದೆ. ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಹೇಳಲಾಗದು. ಇದರಿಂದ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಂತಾಗಲಿದೆ ಎಂದು ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
ಸಮಸ್ಯೆಗೆ ಕಾರಣ ಏನು.?
ಸರ್ವರ್ ಸಮಸ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ ಮೇಲ್ನೋಟಕ್ಕೆ ಈ ಮೊದಲು ಉಪ ನೋಂದಣಾಧಿಕಾರಿ ಕಚೇರಿಗೆ ಲಾಗ್ಇನ್ ನೀಡಲಾಗಿತ್ತು. ಈಚೆಗೆ ಸಾರ್ವಜನಿಕರಿಗೂ ಲಾಗ್ಇನ್ ನೀಡಲಾಗಿದೆ. ಇದರಿಂದ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿದೆ.
ಪರಿಣಾಮ ಏನು.?
ಆಸ್ತಿ ಖರೀದಿ, ಮಾರಾಟ ನೋಂದಣಿ, ಋಣ ಭಾರ ಪ್ರಮಾಣಪತ್ರ ಅಪ್ಲೋಡ್, ನೋಂದಣಿಗೆ ನೀಡುವ ದೃಢೀಕೃತ ನಕಲು ವಿತರಣೆ, ಮದುವೆ ನೋಂದಣಿ, ಬ್ಯಾಂಕ್ ಸಾಲ ನೋಂದಣಿ ಸ್ಥಗಿತ.
- ವಿಟಮಿನ್ ಕೊರತೆಯಲ್ಲ, ಮೂಳೆಗೆ ಸಂಬಂಧ ಪಟ್ಟ ಕಾಯಿಲೆಯೂ ಅಲ್ಲ; ಹಾಗಿದ್ರೆ ಯಾಕೆ ಬರುತ್ತೆ ಸ್ನಾಯು ನೋವು.?
- ಕೇಬಲ್ ಟಿವಿಗೆ ಅಂತ್ಯ ಹಾಡಲಿದೆ ಜಿಯೋ : 1000+ ಲೈವ್ ಟಿವಿ ಚಾನೆಲ್ ಗಳು, 10+ OTT ಆಪ್, 100 Mbps ಡೇಟಾ.!
- ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಹಿಂದೂ ಹೆಂಡ್ತಿ ; ಗಂಡ-ಮಕ್ಕಳಿಗೂ ಮತಾಂತರವಾಗಲು ಕಿರುಕುಳ!
- ಗ್ಯಾಸ್ ಗೀಸರ್ ಸೋರಿಕೆಯಿಂದ ಗಂಡನ ಸಾವು, ಮುಖವನ್ನೂ ನೋಡಲು ಧೈರ್ಯವಾಗದೇ ನೇಣಿಗೆ ಕೊರಳೊಡ್ಡಿದ ಪತ್ನಿ.!
- ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ : ‘ಫ್ರೀ ಫೈರ್’ ಗೇಮ್ ಚಟಕ್ಕೆ ಇಡೀ ಸಂಸಾರ ಬಲಿ.!
- ‘ಸಂಘಕ್ಕೆ ಭೇಟಿ ಕೋಡಿ’ ; ಪ್ರಕಾಶ್ ರಾಜ್ ಗೆ ನಟ ಜಗ್ಗೇಶ್ ಆಹ್ವಾನ
- ಒಬ್ಬ ವಿದ್ಯಾರ್ಥಿ ಮೇಲೆ 4 ಜನ ಶಿಕ್ಷಕರಿಂದ ಹಲ್ಲೆ.! ಪ್ರಜ್ಞೆ ಕಳೆದುಕೊಂಡ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು
- ರೀಲ್ಸ್ ರಾಣಿ ಸುಚಿತ್ರಾ ಜೊತೆ ಸಂಕರ್ಪಕದಲ್ಲಿದ್ದ ಯುವಕರಿಗೂ ಶಾಕ್!
- Horoscope Today : 07 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಸಂಸತ್ತಲ್ಲಿ ಪ್ರಧಾನಿಗೆ ಬೆದರಿಕೆ, ಅಮಿತ್ ಶಾ ರಾಜೀನಾಮೆ ನೀಡಲಿ : ಬಿ.ಕೆ.ಹರಿಪ್ರಸಾದ್
- 10 ನಿಮಿಷದಲ್ಲಿ ಮನೆಗೆ ಬರುತ್ತೇನೆ, ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಲಿಯಾದ ಅವಳಿ ಸಹೋದರನ ಕೊನೆಯ ಕರೆ
- ರೆಹಮಾನ್ ವಿವಾದಕ್ಕೆ ಪ್ರಕಾಶ್ ರಾಜ್ ಎಂಟ್ರಿ : ಬಿಜೆಪಿ ಸಂಸದೆ ಕಂಗನಾ ವಿರುದ್ಧ ಹರಿಹಾಯ್ದ ನಟ ಪ್ರಕಾಶ್
- ಡಿಕೆಶಿಗೆ ಜಾವಾ ಬೈಕ್ಗೆ ಪೆಟ್ರೋಲ್ ಹಾಕಿಸಲು ಕಾಸಿರಲಿಲ್ಲ, ನಾನೇ ಕೊಟ್ಟಿದ್ದೆ; ನಾನೇ ‘ಕನಕಪುರ ಬಂಡೆ’ ಶ್ರೀನಿವಾಸ್!
- ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ.! ಹೇಳಿದ್ದೇನು..?
- ಯಾರಿಗೆಲ್ಲಾ ಪಿರಿಯೆಡ್ಸ್ ಸಂದರ್ಭದಲ್ಲಿ ವಿಪರೀತ ಹೊಟ್ಟೆ ನೋವು ಕಾಡುತ್ತೋ, ಅವರಿಗೆ ಬೆಸ್ಟ್ ಈ ಮನೆಮದ್ದು
- ಸಾರ್ವಜನಿಕರೇ ಎಚ್ಚರ : ಈ 10 ವಹಿವಾಟುಗಳನ್ನು ಮಾಡಿದ್ರೆ ‘IT’ ನೋಟಿಸ್ ಬರಬಹುದು.!
- ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
- ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್’ಮೇಲ್ : 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಅರೆಸ್ಟ್.!
- Arecanut Price : ಇಂದಿನ ಅಡಿಕೆ ಧಾರಣೆ – 06 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- ಕಾಲಿನಲ್ಲಿ ಕಾಣಿಸಿಕೊಳ್ಳುವ ‘ಆಣಿ’ ಗುಣ ಪಡಿಸಿಕೊಳ್ಳುವುದು ಹೇಗೆ.? ಇಲ್ಲಿದೆ ಮಾಹಿತಿ
- Horoscope Today : 06 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಕಳ್ಳತನ ಅವರ ಕುಟುಂಬ ವೃತ್ತಿ, ಅವರು ಮಹಾತ್ಮಗಾಂಧಿಯವರ ಉಪನಾಮವನ್ನೇ ಕದ್ದವರು : ಪ್ರಧಾನಿ ಮೋದಿ
- ಪ್ರಧಾನಿ ಮೋದಿ ಮೇಲೆ ದಾಳಿಗೆ ಕಾಂಗ್ರೆಸ್ ಪಿತೂರಿ : ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ.!
- ಫೈಲ್ಸ್ ಸಮಸ್ಯೆಯಿಂದ ಬಳಲುತ್ತಿರುವವರು ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ..!
- 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ; ವಿಶೇಷಚೇತನ ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ
- ಪೆಹಲ್ಗಾಮ್ ದಾಳಿಯಾದಾಗ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಯಾಕೆ ಘೋಷಿಸಲಿಲ್ಲ: ಬಿಜೆಪಿಗೆ ಬಿ.ಕೆ.ಹರಿಪ್ರಸಾದ್ ಪ್ರಶ್ನೆ
- ನಿಮ್ಮ ದೇಹದ ಮೇಲಿರುವ ‘ನರುಳ್ಳೆ’ ತಾವಾಗಿಯೇ ಉದುರಿ ಹೋಗಲು ಜಸ್ಟ್ ಹೀಗೆ ಮಾಡಿ.!
- Gold Rate : ಏರಿದಷ್ಟೇ ವೇಗವಾಗಿ ಇಳಿದ ಚಿನ್ನದ ಬೆಲೆ- ಭರ್ಜರಿ 5 ಸಾವಿರ ರೂ ಇಳಿಕೆ, ಬೆಳ್ಳಿಯೂ ಇಳಿಕೆ
- ಲವ್ ಮಾಡಲು ಒಪ್ಪದ ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ 12ನೇ ತರಗತಿ ವಿದ್ಯಾರ್ಥಿ!
- Arecanut Price : ಇಂದಿನ ಅಡಿಕೆ ಧಾರಣೆ – 05 ಫೆಬ್ರವರಿ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- Horoscope Today : 05 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಈ ಬೀಜಗಳಿಂದ ಪುರುಷರನ್ನು ಕಾಡುವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ವಿದಾಯ!
- ಎಚ್ಚರ; ಮಧುಮೇಹ ರೋಗಿಗಳು ಕೈ, ಕಾಲುಗಳು ತಣ್ಣಗಾಗೋದನ್ನು ನಿರ್ಲಕ್ಷಿಸಬೇಡಿ- ಯಾಕೆ ಗೊತ್ತಾ..?
- ಲೈಂಗಿಕ ಸಮಸ್ಯೆ ಮುಚ್ಚಿಟ್ಟಷ್ಟೂ ದಾಂಪತ್ಯ ಬದುಕಿಗೆ ಹಾನಿ – ಸಮಸ್ಯೆಯಿರೋದನ್ನು ಒಪ್ಪಿಕೊಳ್ಳಿ
- ಆಹಾರ ತಿಂದ ಬಳಿಕ ‘ಶುಗರ್’ ಜಾಸ್ತಿ ಆಗ್ತಿದ್ಯಾ? 10 ರೂಪಾಯಿ ಅದ್ಭುತ ಟಿಪ್ಸ್ ಅನುಸರಿಸಿ, ಥಟ್ ಅಂತಾ ಇಳಿಯುತ್ತೆ!


































