Server Problem : ನಾಲ್ಕು ದಿನ ಗಳಿಂದ ಸರ್ವರ್ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ಆಸ್ತಿಗಳ ಖರೀದಿ, ಮಾರಾಟ ಸಹಿತ ನೋಂದಣಿ ಪ್ರಕ್ರಿಯೆ ಸ್ತಬ್ಧಗೊಂಡಿದ್ದು ಜನರು ಪರದಾಡುವಂತಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮೇಲ್ದರ್ಜೆಗೇರಿಸಿದ “ಕಾವೇರಿ 2.0′ ತಂತ್ರಾಂಶವನ್ನು ಬಳಕೆ ಮಾಡುತ್ತಿದೆ.
ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ಆದರೆ ಸರ್ವರ್ ಸಮಸ್ಯೆಯಿಂದ 10 ದಿನಗಳಿಂದ ಋಣಭಾರ ಪ್ರಮಾಣಪತ್ರ (ಇ.ಸಿ.) ವಿತರಣೆಯಲ್ಲಿ ಸಮಸ್ಯೆ ಉಂಟಾಗಿತ್ತು. ಅದರ ಮುಂದುವರಿದ ಭಾಗವಾಗಿ 4 ದಿನಗಳಿಂದ ಆಸ್ತಿ ಖರೀದಿ ಮತ್ತು ಮಾರಾಟ ನೋಂದಣಿ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ.
ರಾಜ್ಯದಲ್ಲಿ ದಿನಕ್ಕೆ 8ರಿಂದ 8,500 ನೋಂದಣಿಗಳು ಆಗುತ್ತಿದ್ದವು. ಇದ ರಿಂದ ಅಂದಾಜು 80-100 ಕೋಟಿ ರೂ. ಆದಾಯ ಬರುತ್ತಿತ್ತು. ಆದರೆ ಮಂಗಳವಾರ ಕೇವಲ 500-550 ನೋಂದಣಿ ಸಾಧ್ಯವಾಗಿದ್ದು 15-18 ಕೋ.ರೂ. ಆದಾಯ ಬಂದಿದೆ. ಅದೂ ಬಹುತೇಕ ಹಳೆಯವು. ಇದುವರೆಗೆ ಸರ್ವರ್ ಸಮಸ್ಯೆ ಏನು ಹಾಗೂ ಯಾವಾಗ ಇತ್ಯರ್ಥವಾಗಲಿದೆ ಎಂಬ ಸ್ಪಷ್ಟ ಮಾಹಿತಿಯೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬಳಿ ಇಲ್ಲ.
ಈ ಹಿನ್ನೆಲೆಯಲ್ಲಿ ಸಮಸ್ಯೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ತಾಲೂಕು ಮಟ್ಟದಲ್ಲಿಯ ಉಪನೋಂದಣಾಧಿಕಾರಿ ಕಚೇರಿಗಳ ಮುಂದೆ ಜನ ದಿನಗಟ್ಟಲೆ ಕಾದು, ನೋಂದಣಿಯಾಗದೆ ನಿರಾಸೆಯಿಂದ ಹಿಂತಿರುಗುತ್ತಿರುವುದು ಸಾಮಾನ್ಯವಾಗಿದೆ. ಸಾರ್ವಜನಿಕ ಲಾಗ್ಇನ್ ಮೂಲಕವೇ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆ, ದಾಖಲೆಗಳ ಅಪ್ಲೋಡ್ ಮಾಡುವುದು, ಮಾರಾಟ ಮತ್ತು ಖರೀದಿಸುವವರ ಫೋಟೋ ಮತ್ತು ಹೆಬ್ಬೆಟ್ಟು ಎಂಟ್ರಿ ಸಹಿತ ಪ್ರತಿಯೊಂದು ಆಗಬೇಕು. ಆದರೆ ಲಾಗ್ಇನ್ ಆಗುತ್ತಲೇ ಇಲ್ಲ. ವಿಚಿತ್ರವೆಂದರೆ ಸಮಸ್ಯೆಯ ಮೂಲವೂ ಗೊತ್ತಾಗುತ್ತಿಲ್ಲ. ಇದು ಒಂದೆಡೆ ಜನರಿಗೆ ಕಿರಿಕಿರಿ ಉಂಟಾಗುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಹಲವು ಹಂತಗಳಲ್ಲಿ ನೋಂದಣಿ ಪ್ರಕ್ರಿಯೆ ಅಪೂರ್ಣವಾಗಿದೆ. ಬಹುತೇಕ ಕಡೆಗಳಲ್ಲಿ ಇಸಿ ವಿತರಣೆಯೇ ಆಗಿಲ್ಲ. ಫೋಟೋ ಪಕ್ಕದಲ್ಲಿ ಹೆಬ್ಬೆಟ್ಟು ಗುರುತು ಬಂದಿಲ್ಲ. ಹಲವೆಡೆ ಫೋಟೋ ಬಂದಿಲ್ಲ. ಮುದ್ರಾಂಕ ಶುಲ್ಕ ಪಾವತಿಸಿದ್ದರೂ ಇಲಾಖೆ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿಲ್ಲ. ಹೀಗೆ ಅರ್ಧಕ್ಕೇ ಸ್ಥಗಿತಗೊಂಡಿವೆ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ.
ಆಸ್ತಿಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ನೋಂದಣಿ ಮಾತ್ರವಲ್ಲ, ಬ್ಯಾಂಕ್ ಭೋಜಾ ನೋಂದಣಿ, ಮದುವೆ ನೋಂದಣಿ ಒಳಗೊಂಡಂತೆ ಉಪನೋಂದಣಾಧಿಕಾರಿ ಕಚೇರಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೂ ಇದರಿಂದ ಹಿನ್ನಡೆ ಉಂಟಾಗಿದೆ. ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಹೇಳಲಾಗದು. ಇದರಿಂದ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಂತಾಗಲಿದೆ ಎಂದು ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
ಸಮಸ್ಯೆಗೆ ಕಾರಣ ಏನು.?
ಸರ್ವರ್ ಸಮಸ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ ಮೇಲ್ನೋಟಕ್ಕೆ ಈ ಮೊದಲು ಉಪ ನೋಂದಣಾಧಿಕಾರಿ ಕಚೇರಿಗೆ ಲಾಗ್ಇನ್ ನೀಡಲಾಗಿತ್ತು. ಈಚೆಗೆ ಸಾರ್ವಜನಿಕರಿಗೂ ಲಾಗ್ಇನ್ ನೀಡಲಾಗಿದೆ. ಇದರಿಂದ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿದೆ.
ಪರಿಣಾಮ ಏನು.?
ಆಸ್ತಿ ಖರೀದಿ, ಮಾರಾಟ ನೋಂದಣಿ, ಋಣ ಭಾರ ಪ್ರಮಾಣಪತ್ರ ಅಪ್ಲೋಡ್, ನೋಂದಣಿಗೆ ನೀಡುವ ದೃಢೀಕೃತ ನಕಲು ವಿತರಣೆ, ಮದುವೆ ನೋಂದಣಿ, ಬ್ಯಾಂಕ್ ಸಾಲ ನೋಂದಣಿ ಸ್ಥಗಿತ.
- ಕನಸ್ಸಿನಲ್ಲಿ ಬಂದ ಆಂಜನೇಯ : ಕ್ರೈಸ್ತ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಇಡೀ ಕುಟುಂಬ!
- ಮದುವೆ ಮನೆಯಲ್ಲಿ ಮೈಮೇಲೆ ಬಿದ್ದಿದ್ದ ಸುಡುವ ಸಾಂಬಾರು : ಹತ್ತಾರು ದೇವರಿಗೆ ಹರಕೆ ಹೊತ್ತ ಬಳಿಕ ಹುಟ್ಟಿದ ಮಗಳು ಸಾವು
- ನಾವು ಮೈ ಮಾರಿಕೊಂಡು ಬದುಕುತ್ತಿಲ್ಲ : ಡಿಕೆಶಿಯ ನಟ್ಟು ಬೋಲ್ಟ್ ಟೈಟ್ ಹೇಳಿಕೆಗೆ ಕಿಚ್ಚ ಸುದೀಪ್ ತಿರುಗೇಟು
- Gold Rate Today : ಮತ್ತೆ ಭರ್ಜರಿ ಇಳಿಕೆಯತ್ತ ಸಾಗಿದ ಚಿನ್ನದ ಬೆಲೆ.? ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- ಬೆಂಗಳೂರಿನ ಅಪಾರ್ಟ್ಮೆಂಟ್ ಚರಂಡಿಯಲ್ಲಿ ತಲೆಬುರುಡೆ, ಅಸ್ತಿಪಂಜರಗಳ ರಾಶಿ: ಆತಂಕದಲ್ಲಿ ನಿವಾಸಿಗಳು
- ಗಂಡನ ಬಿಟ್ಟು ದಾರಿ ತಪ್ಪಿದ ಮಹಿಳೆ.. ಮನನೊಂದು ಮೊಮ್ಮಕಳನ್ನು ಕೊಂದು ಒಂದೇ ಕುಟುಂಬದ ನಾಲ್ವರು ಸಾವು!
- ಆರ್ ಸಿಬಿ ಗೆದ್ರೆ ಪತಿಗೆ ಇನ್ನೊಂದು ಮದ್ವೆ ಮಾಡಿಸುವೆ ಎಂದಿದ್ದ ಬೀದರ್ ಪತ್ನಿಗೆ ಈಗ ಸಂಕಷ್ಟ! ಏನಾಗಿದೆ ನೋಡಿ
- Gold Rate Today : ಮತ್ತೆ ಇಳಿಕೆಯತ್ತ ಸಾಗಿದ ಬಂಗಾರದ ರೇಟ್.? ಇಂದಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ.? ಸಿಹಿಸುದ್ಧಿ ಇದೆಯಾ.?
- ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ
- Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ
- ಸಚಿವ ಪ್ರಿಯಾಂಕ್ ಖರ್ಗೆ ಅಮೆರಿಕ ಪ್ರವಾಸಕ್ಕೆ ಕೇಂದ್ರ ನಿರ್ಬಂಧ : ಕಾರಣ..!
- ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ
- ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ : ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ರಿಲೀಸ್ಗೆ ಸುಪ್ರೀಂ ಸೂಚನೆ
- Gold Rate Today : ಭಾರೀ ಇಳಿಕೆಯತ್ತ ಸಾಗಿದ ಚಿನ್ನದ ಬೆಲೆ.? ಇಂದಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ.?
- ಮಂಗಳೂರಿನಲ್ಲಿ ಘೋರ ಘಟನೆ : ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವು.!
- ನನ್ನ ಮಾತು ಸುಳ್ಳಾದರೆ, ನಾನು ಮತ್ತೆ ವೇದಿಕೆ ಹತ್ತಲ್ಲ, ಭಾಷಣ ಮಾಡಲ್ಲ -ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸವಾಲು
- ಬೆಂಗಳೂರಲ್ಲಿ ಮರದ ಕೊಂಬೆ ಬಿದ್ದು ಯುವಕನ ತಲೆ ಚಿಪ್ಪು 12 ಚೂರು : ತಂದೆಯ ಹುಟ್ಟುಹಬ್ಬಕ್ಕೆ ಮಟನ್ ತರಲು ಹೋಗಿದ್ದ ಮಗ.!
- ನಮಗೆ BJP ಅನಿವಾರ್ಯ, ಸ್ವಲ್ಪ ತಗ್ಗಿಬಗ್ಗಿ ನಡೆದುಕೊಂಡು ಹೋಗೋಣ ಎಂದ ಎಚ್ಡಿ ಕುಮಾರಸ್ವಾಮಿ! ಹೀಗೆ ಹೇಳಿದ್ದೇಕೆ?
- Gold Rate : ಇಳಿಕೆಯತ್ತ ಸಾಗಿದ ಬಂಗಾರದ ಬೆಲೆ.?ಇಂದಿನಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗ ಗೆದ್ದಷ್ಟು ಸೀಟನ್ನು ಕುಮಾರಸ್ವಾಮಿಗೆ ಇನ್ನೂ ಮುಟ್ಟೋಕಾಗಿಲ್ಲ ಎಂದು ಸಚಿವ ಜಮೀರ್ ಭರ್ಜರಿ ಟಾಂಗ್!
- ಇನ್ಮುಂದೆ ಕಾಲ್ತುಳಿತ ಘಟನೆ ನಡೆದರೆ 3 ವರ್ಷ ಜೈಲು ಫಿಕ್ಸ್ : ಹೊಸ ಕಾನೂನು ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ
- ಪುನೀತ 60 ಕೋಟಿ ವ್ಯವಹಾರ ಮಾಡ್ತಾ ಇದ್ದೀನಿ ಅಂದ ಒಂದು ಚಿಟಿಕೆಗೆ ಹೊರಟುಹೋದ ಎಂದ ನಟ ಜಗ್ಗೇಶ್
- Gold Rate : ಅಲ್ಪ ಇಳಿಕೆ ಕಂಡ ಬಂಗಾರದ ದರ.! ಇವತ್ತಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- ಪ್ರೀತಿಸಿ ಮದುವೆಯಾದ ಯುವತಿಯನ್ನು ಗಂಡನ ಮನೆಯಿಂದ ಗೋಣಿ ಚೀಲದಲ್ಲಿ ತುಂಬಿ ಹೊತ್ತೊಯ್ದ ಪೋಷಕರು!
- ಕಾಲ್ತುಳಿತ ಕೇಸ್ : ದುರಂತಕ್ಕೆ ಸಿಎಂ, ಡಿಸಿಎಂ ಹೊಣೆ ಅನ್ನೋದು ಸರಿಯಲ್ಲ – ಸಚಿವ HC ಮಹದೇವಪ್ಪ!
- ಮೊಬೈಲ್ ಕದ್ದ ಆರೋಪ : ಯುವಕನ ಮೇಲೆ ಪೊಲೀಸರ ಎದುರಲ್ಲೇ ಮನಸೋ ಇಚ್ಛೆ ಲಾಠಿಯಿಂದ ಥಳಿಸಿದ ಸೆಕ್ಯೂರಿಟಿ ಗಾರ್ಡ್!
- ಎರಡು ಮಕ್ಕಳ ತಾಯಿಯ ಗುಪ್ತಾಂಗಕ್ಕೆ ಕಾದ ಕಬ್ಬಿಣ ಇಟ್ಟು ಕೊಂದ ಪಾಪಿಗಳು : ಗಂಡನ ಮನೆಯವರ ಕಿರುಕುಳ
- ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು : ಮಧು ಬಂಗಾರಪ್ಪ
- ಬೆಂಗಳೂರನ್ನು ಸಿಂಗಾಪುರ ಮಾಡಿ, ಆದ್ರೆ ನಮ್ಮ ಭಾಗವನ್ನೂ ಮರೀಬೇಡಿ ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
- Gold Rate : ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.? ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ನೀಡುತ್ತಾ ಬಂಗಾರ.?
- SBI Bank Rules : ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ : ಇಂದಿನಿಂದಲೇ ಹೊಸ ನಿಯಮ.!
- AI Plane Crash : ದುರಂತ ಸ್ಥಳ ಪರಿಶೀಲಿಸಿದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್
- ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ : ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದ ಹೆಚ್ ವಿಶ್ವನಾಥ್
- Gold Rate : ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.? ಹೆಣ್ಣುಮಕ್ಕಳಿಗೆ ಖುಷಿ ಸುದ್ದಿ ನೀಡುತ್ತಾ ಬಂಗಾರ.?
- ನಿಜವಾಯ್ತು ದುರಂತದ ಬಗ್ಗೆ ಕೋಡಿಶ್ರೀ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯ! ಸಾಕ್ಷಿಯಾದ ಎರಡು ಘಟನೆಗಳು!