ಬೈಕ್‌ನಿಂದ ರಸ್ತೆಗೆ ಬಿದ್ದ ಇಬ್ಬರ ಮೇಲೆ ಹರಿದ ಸಾರಿಗೆ ಬಸ್ – ಯುವಕರು ಸ್ಥಳದಲ್ಲೇ ಸಾ*ವು!

ಕ್ಷಣ ಮಾತ್ರದಲ್ಲಿ ನಡೆದ ಸರಣಿ ಅಪಘಾತವೊಂದು ಇಬ್ಬರ ಜೀವ ಬಲಿ ಪಡೆದಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಕಡೂರು ತಾಲೂಕಿನ ಹಳೇಹಟ್ಟಿ ಗೇಟ್ ಬಳಿ ಎರಡು ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾದ ಬೆನ್ನಲ್ಲೇ ರಸ್ತೆಗೆ ಬಿದ್ದ ಸವಾರರ ಮೇಲೆ ಸರ್ಕಾರಿ ಬಸ್ ಹರಿದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. WhatsApp Group Join Now ಕಡೂರು ಕಡೆಯಿಂದ ಚಿಕ್ಕಮಗಳೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್‌ಗೆ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಎರಡೂ ಬೈಕ್‌ಗಳ ಸವಾರರು ನಿಯಂತ್ರಣ ಕಳೆದುಕೊಂಡು … Read more

ರಾಜ್ಯದ ಈ 9 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. WhatsApp Group Join Now ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಕೊಡಗು ಸೇರಿದಂತೆ ಪ್ರಮುಖ 9 ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದ್ದು, ಈ ವೇಳೆ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ … Read more

ದಿನ ಭವಿಷ್ಯ, ಇಂದು ಗಣೇಶ ಚತುರ್ಥಿ! ಈ ರಾಶಿಯವರ ಜೀವನದಲ್ಲಿ ಮುಖ್ಯ ಬದಲಾವಣೆ ಸಾಧ್ಯ

ಇಂದು ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ. WhatsApp Group Join Now ಮೇಷ ರಾಶಿ : ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಕೆಲಸದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಕೈಗೊಳ್ಳುವುದು ಅಗತ್ಯವಾಗಿ ಇರುತ್ತದೆ. ವೃಷಭ ರಾಶಿ … Read more

ಬ್ರಿಕ್ಸ್ ಔತಣಕೂಟದ ಸಸ್ಯಾಹಾರಿ ಮೆನು ವಿವಾದ : ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ.!

ಇಲ್ಲಿನ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ 18ನೇ ಬ್ರಿಕ್ಸ್ ಶೃಂಗಸಭೆಯ (BRICS Summit ) ಗಾಲಾ ಡಿನ್ನರ್‌ನಲ್ಲಿ ಜಾಗತಿಕ ನಾಯಕರಿಗೆ ಸಂಪೂರ್ಣ ಸಸ್ಯಾಹಾರಿ (Vegetarian Menu) ಊಟ ಬಡಿಸಿರುವುದು ದೇಶದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. WhatsApp Group Join Now ಜಾಗತಿಕ ನಾಯಕರಿಗೆ ಸಸ್ಯಾಹಾರಿ ಭೋಜನ ನೀಡಿದ ಕ್ರಮವನ್ನು ಪ್ರಶ್ನಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ದೇಶದಲ್ಲಿ ಶೇ. 80ರಷ್ಟು ಮಂದಿ ಮಾಂಸಾಹಾರಿಗಳಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ‘ಎಕ್ಸ್’ ವೇದಿಕೆಯಲ್ಲಿ … Read more

ಹೃದಯವಿದ್ರಾವಕ ಘಟನೆ : ರೈಲಿನ ತುರ್ತು ಕಿಟಕಿಯಿಂದ ಬಿದ್ದು 9 ತಿಂಗಳ ಮಗು ಸಾ*ವು.!

ಉತ್ತರ ಪ್ರದೇಶದ ಫತೇಪುರ ಬಳಿ ಚಲಿಸುತ್ತಿದ್ದ ರೈಲಿನ ತುರ್ತು ಕಿಟಕಿಯಿಂದ (ಎಮರ್ಜೆನ್ಸಿ ವಿಂಡೋ) ಕೆಳಗೆ ಬಿದ್ದು 9 ತಿಂಗಳ ಹಸುಗೂಸು ಸಾವನ್ನಪ್ಪಿರುವ ಅತ್ಯಂತ ದಾರುಣ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಮಧ್ಯಾಹ್ನ ಫೈಜುಲ್ಲಾಪುರ ರೈಲ್ವೆ ನಿಲ್ದಾಣದ ಸಮೀಪದ ಹಳಿಯ ಪಕ್ಕದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. WhatsApp Group Join Now ಮೃತ ಮಗುವನ್ನು ಕನಿಷ್ಕ್ ಎಂದು ಗುರುತಿಸಲಾಗಿದೆ. ಬಿಹಾರದ ಬೇಗುಸರಾಯ್ ಜಿಲ್ಲೆಯ ಸಲೋನಿ ಗ್ರಾಮದ ನಿವಾಸಿ ಮೋಹನ್, ತಮ್ಮ ಪತ್ನಿ ಕಾಜಲ್ ಮತ್ತು 9 ತಿಂಗಳ ಮಗುವಿನೊಂದಿಗೆ … Read more

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಹೊಲಿಗೆ ಯಂತ್ರ, ಗಂಗಾ ಕಲ್ಯಾಣ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ವತಿಯಿಂದ 2026-27ನೇ ಸಾಲಿನ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. WhatsApp Group Join Now ಅರ್ಹ ಅಭ್ಯರ್ಥಿಗಳು ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್ 03, 2026 ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30, 2026 ಕೊನೆಯ ದಿನಾಂಕವಾಗಿದೆ. ಲಭ್ಯವಿರುವ ಸೌಲಭ್ಯಗಳು: ಗಂಗಾ ಕಲ್ಯಾಣ ಯೋಜನೆ, ನೇರ ಸಾಲ ಯೋಜನೆ, ಅರಿವು … Read more

ಬಸ್ ಓಡಿಸುತ್ತಿದ್ದ ಬಾಳೇಶ್‌ಗೆ ಹೃದಯಾಘಾತ; ತಾನು ಓಡಿಸಿದ ಬಸ್‌ನಲ್ಲೇ ಅಂತಿಮಯಾತ್ರೆ ಮಾಡಿಸಿದ ಸಾರಿಗೆ ಇಲಾಖೆ

ಪ್ರಯಾಣಿಕರನ್ನ ಸುರಕ್ಷಿತವಾಗಿ ಮನೆ ತಲುಪಿಸುತ್ತಿದ್ದ ಸಾರಿಗೆ ಬಸ್ ಚಾಲಕ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಾನು ಚಲಾಯಿಸುತ್ತಿದ್ದ ಬಸ್‌ನಲ್ಲಿ ಶವವಾಗಿ ಮನೆ ತಲುಪಿದ ದೃಶ್ಯ ನೋಡುವವರ ಕಣ್ಣಾಲಿಗಳು ತುಂಬಿ ಬಂದವು. ಧಾರವಾಡ ಸಾರಿಗೆ ಸಿಬ್ಬಂದಿ ಏನು ಮಾಡಿದ್ರು ನೋಡಿ. WhatsApp Group Join Now ಧಾರವಾಡ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ದಿಢೀರ್ ಹೃದಯಾಘಾತದಿಂದ ಸಾರಿಗೆ ಬಸ್ ಚಾಲಕ ಬಾಳೇಶ್ ತೇಲಿ(38) ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಾಲಕ ಸಾವನ್ನಪ್ಪಿದ ಬಳಿಕ ಮೃತದೇಹವನ್ನು ಹುಟ್ಟೂರಿಗೆ ಅಂಬುಲೆನ್ಸ್ … Read more

ತಲೆನೋವು ಎಂದು ಸುಮ್ಮನಾಗಬೇಡಿ! ಬ್ರೈನ್ ಟ್ಯೂಮರ್‌ನ ಈ ಲಕ್ಷಣಗಳು ಕಂಡ್ರೆ ಹುಷಾರ್

ತಲೆನೋವಿಗೆ ಸಾಮಾನ್ಯ ಪೇನ್‌ಕಿಲ್ಲರ್‌ಗಳನ್ನು ತೆಗೆದುಕೊಂಡು ದಿನಗಳನ್ನು ಕಳೆಯುವ ಬದಲು, ಲಕ್ಷಣಗಳು 2-3 ವಾರಗಳಿಗೂ ಹೆಚ್ಚು ಕಾಲ ಮುಂದುವರಿದರೆ ಅಥವಾ ಹೊಸದಾಗಿ ನರವ್ಯವಸ್ಥೆಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ನ್ಯೂರಾಲಜಿಸ್ಟ್‌ರನ್ನು ಸಂಪರ್ಕಿಸಿ MRI ಸ್ಕ್ಯಾನ್ ಮಾಡಿಸಿಕೊಳ್ಳುವುದು ಅಗತ್ಯ. WhatsApp Group Join Now ಇದು ಗಂಭೀರ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಗ್ಲಿಯೊಬ್ಲಾಸ್ಟೋಮಾ (Glioblastoma) ಮೆದುಳಿನ ನರಕೋಶಗಳಿಗೆ ರಕ್ಷಣೆ ಮತ್ತು ಸಹಕಾರ ನೀಡುವ ‘ಆಸ್ಟ್ರೋಸೈಟ್ಸ್‌’ (Astrocytes) ಎಂಬ ಕೋಶಗಳಿಂದ ವೇಗವಾಗಿ ಬೆಳೆಯುವ ಗಂಭೀರ ಕ್ಯಾನ್ಸರ್‌ ಆಗಿದೆ. … Read more

21 ವರ್ಷದ ಯುವಕನಿಗೆ ಆಂಟಿ ಮೇಲೆ ಲವ್ ; ವಿರೋಧಿಸಿದ್ದಕ್ಕೆ ಒಂದೇ ನೇಣಿಗೆ ಕೊರಳೊಡ್ಡಿ ಇಬ್ಬರೂ ಆತ್ಮಹತ್ಯೆ.!

ಆಂಟಿ-ಮಗನ ವಯಸ್ಸಿನ ಅಂತರವಿದ್ದರೂ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಕುಟುಂಬಸ್ಥರ ವಿರೋಧಕ್ಕೆ ಬೇಸತ್ತು ಒಂದೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದ ಗುಡ್ಡದಲ್ಲಿ ನಡೆದಿದೆ. WhatsApp Group Join Now ಮೃತರನ್ನು ಶರಣಮ್ಮ (32) ಹಾಗೂ ಬಸವರಾಜ್ (21) ಎಂದು ಗುರುತಿಸಲಾಗಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಇವರ ಪ್ರೀತಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಕುಟುಂಬದ ವಿರೋಧದಿಂದ ಮನನೊಂದು ಇಬ್ಬರೂ ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ … Read more

ದಿನ ಭವಿಷ್ಯ (13-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ಮೇಷ ರಾಶಿ: WhatsApp Group Join Now ಇಂದು ನಿಮ್ಮಲ್ಲಿ ಹೊಸ ಹುರುಪು ಮತ್ತು ಉತ್ಸಾಹ ಎದ್ದು ಕಾಣುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವ ಗುಣಗಳಿಗೆ ಅಧಿಕಾರಿಗಳಿಂದ ಮನ್ನಣೆ ಸಿಗಲಿದೆ. ಬಾಕಿ ಉಳಿದಿದ್ದ ಬಹುಮುಖ್ಯ ಕೆಲಸಗಳನ್ನು ಇಂದು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ವ್ಯಾಪಾರದಲ್ಲಿ ಲಾಭದ ನಿರೀಕ್ಷೆ ಇದ್ದರೂ, ಗ್ರಾಹಕರೊಂದಿಗೆ ತಾಳ್ಮೆಯಿಂದ ವರ್ತಿಸುವುದು ಅಗತ್ಯ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ, ಆದರೆ ನಿಮ್ಮ ಮಾತಿನಲ್ಲಿ ಕೊಂಚ ಒರಟುತನ ಇರಬಹುದು, ಅದನ್ನು ಸರಿಪಡಿಸಿಕೊಳ್ಳಿ. ಆರೋಗ್ಯ ಉತ್ತಮವಾಗಿರುತ್ತದೆ, ಆದರೂ ಉಷ್ಣ ಸಂಬಂಧಿ ಸಮಸ್ಯೆಗಳ … Read more