Petrol : ನಮಸ್ಕಾರ ಸ್ನೇಹಿತರೇ, ಇಂದು ನಮ್ಮ ದೇಶದಲ್ಲಿ ಪೆಟ್ರೋಲ್ ವಾಹನಗಳ ಬಳಕೆಯೇ ಹೆಚ್ಚು. ಎಲೆಕ್ಟ್ರಿಕ್ ವಾಹನಗಳ ಆವಿಷ್ಕಾರಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದೇ ಆದರೂ ಪೆಟ್ರೋಲ್ ಗಾಡಿಗಳ ಚಾಲನೆಯೇ ಅಧಿಕ ಸಂಖ್ಯೆಯಲ್ಲಿದೆ. ಇಂತಹ ವಾಹನಗಳ ಸಂಚಾರ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಇಂಧನ ಬೆಲೆ ಗಗನಕ್ಕೇರಿದ್ದು, ವಾಹನ ಸವಾರರ ಅಳಲು ಕೂಡ ಮುಗಿಲು ಮುಟ್ಟಿದೆ. ಸದ್ಯ ಬೆಲೆ ಇಳಿಕೆ ದೂರದ ಮಾತಾಗಿದೆ. ಹೀಗಿರುವಾಗ ಪೆಟ್ರೋಲ್ (Petrol) ಬೈಕ್ ಮತ್ತು ಕಾರುಗಳನ್ನು ಚಲಾಯಿಸುವ ಬಹುತೇಕರು, ತಮ್ಮ ವಾಹನದ ಟ್ಯಾಂಕ್ ಖಾಲಿ ಆಗುವವರೆಗೂ ಪೆಟ್ರೋಲ್ ಹಾಕಿಸುವ ಆಲೋಚನೆ ಮಾಡುವುದಿಲ್ಲ. ಇದೇ ರೀತಿ ಒಂದಷ್ಟು ತಪ್ಪುಗಳನ್ನು ಮಾಡುವ ಸವಾರರು ಈ ಮಾಹಿತಿಯನ್ನು ತಪ್ಪದೇ ತಿಳಿಯುವುದು ಒಳಿತು.
ಎಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು.?
ಪೆಟ್ರೋಲ್ ಇಲ್ಲ ಎಂದರೆ ನಮ್ಮ ವಾಹನಗಳು ಒಂದು ಹೆಜ್ಜೆಯೂ ಮುಂದೆ ಹೋಗಲ್ಲ. ಇದು ಗಾಡಿ ಓಡಿಸುವ ಪ್ರತಿಯೊಬ್ಬರಿಗೂ ಗೊತ್ತಿರುವ ಸಾಮಾನ್ಯ ಸಂಗತಿಯೇ. ಪೆಟ್ರೋಲ್ ಹಾಕಿಸಿಕೊಳ್ಳುವಾಗ ನಾವು ಎಷ್ಟು ಜವಾಬ್ದಾರಿ ವಹಿಸಬೇಕು? ಏನು ತಪ್ಪು ಮಾಡಿದರೆ, ವಾಹನದ ಇಂಜಿನ್ಗೆ ಎಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು? ಇದರಿಂದ ವಾಹನದ ಬಾಳಿಕೆಗೆ ಯಾವ ರೀತಿಯ ಹೊಡೆತ ಎದುರಾಗಬಹುದು ಎಂಬ ಸೂಕ್ಷ್ಮತೆ ವಾಹನ ಬಳಕೆದಾರರಿಗೆ ತಿಳಿದರಲೇ ಬೇಕಾದ ವಿಷಯ. ಆದರೆ, ಇಂತಹ ವಿಚಾರಗಳನ್ನೇ ಮರೆಯುವ ವಾಹನ ಮಾಲೀಕರು, ಪದೇ ಪದೇ ಈ ತಪ್ಪುಗಳನ್ನು ಮಾಡಿ, ತಮ್ಮ ದುಬಾರಿ ವಾಹನಗಳ ಆಯಾಸ್ಸನ್ನು ತಾವೇ ತಮ್ಮ ಕೈಯಾರೆ ಕಡಿತಗೊಳಿಸುತ್ತಾರೆ.
ಈ ತಪ್ಪುಗಳು ಖಂಡಿತವಾಗಿಯೂ ನಿಮ್ಮ ಕಾರು ಮತ್ತು ಬೈಕ್ ಇಂಜಿನ್ ಮೇಲೆ ಪರಿಣಾಮ ಬೀರುತ್ತವೆ. ಎಷ್ಟೋ ಜನ ಪೆಟ್ರೋಲ್ ವಿಚಾರದಲ್ಲಿ ತಮಗೆ ಅರಿವಿಲ್ಲದೇ ಬಹಳ ನಿರ್ಲಕ್ಷ್ಯ ವಹಿಸುತ್ತಾರೆ. ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗಿದೆಯೇ? ನೀವು ಪೆಟ್ರೋಲ್ ಬಂಕ್ಗೆ ಹೋಗಿದ್ದೀರಾ? ಪೆಟ್ರೋಲ್ ಹಾಕಿಸುವ ಸೂಕ್ತ ಕ್ರಮ ಹೇಗೆ? ನಾವು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬುದರ ಬಗ್ಗೆ ಅದರ ಕೆಳಭಾಗಕ್ಕೆ ಹೋಗೋಣ.
ಪೆಟ್ರೋಲ್-ಡೀಸೆಲ್ ಟ್ಯಾಂಕ್ ಕೊಳಕು
ಇಂಜಿನ್ ವಾಹನದ ಹೃದಯವಿದ್ದಂತೆ. ಆದ್ದರಿಂದ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ನಮ್ಮಲ್ಲಿ ಹೆಚ್ಚಿನವರು ಪೆಟ್ರೋಲ್ ಟ್ಯಾಂಕ್ ಸಂಪೂರ್ಣವಾಗಿ ಖಾಲಿಯಾಗುವವರೆಗೆ ಪೆಟ್ರೋಲ್ ಹಾಕಿಸುವ ಮನಸ್ಸು ಮಾಡುವುದೇ ಇಲ್ಲ. ಆದರೆ ಪೆಟ್ರೋಲ್ ಟ್ಯಾಂಕ್ ಖಾಲಿ ಇಡುವುದು ತುಂಬಾ ಅಪಾಯಕಾರಿ. ಕಾರಣ, ಪೆಟ್ರೋಲ್-ಡೀಸೆಲ್ ಟ್ಯಾಂಕ್ ಕೊಳಕು. ಪೆಟ್ರೋಲ್ ಖಾಲಿಯಾದ ನಂತರ, ಎಲ್ಲಾ ತ್ಯಾಜ್ಯ ವಸ್ತುಗಳು ವಾಹನಕ್ಕೆ ಪೆಟ್ರೋಲ್ ಪೂರೈಸುವ ಪಂಪ್ ಮೂಲಕ ಇಂಜಿನ್ ಪಾಲಾಗುತ್ತವೆ. ಆ ತ್ಯಾಜ್ಯವು ಫಿಲ್ಟರ್ ಅನ್ನು ಮುಚ್ಚುತ್ತದೆ. ಇದರಿಂದ ವಾಹನದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಈ ಕಾರಣದಿಂದಾಗಿ ವಾಹನವನ್ನು ಸರಿಯಾಗಿ ನಿಯಂತ್ರಿಸಲು ಆಗುವುದಿಲ್ಲ.
ಕಳಪೆ ಗುಣಮಟ್ಟದ ಇಂಧನ
ಒಮ್ಮೊಮ್ಮೆ ಇದರಿಂದ ಅಪಘಾತ ಸಂಭವವು ಅಧಿಕ. ಹಾಗಾಗಿ ಖಂಡಿತ ಈ ಬಗ್ಗೆ ವಾಹನ ಸವಾರರು ಜಾಗರೂಕರಾಗಿರಿ. ಯಾವತ್ತೂ ಈ ರೀತಿ ಪೆಟ್ರೋಲ್ ಖಾಲಿಯಾಗುವವರೆಗೂ ಕಾದು, ತುಂಬಿಸಬೇಡಿ. ಇದು ಅತ್ಯಂತ ಮುಖ್ಯವಾದ ಸಂಗತಿ. ಅದೇ ಇಂಧನ ಗುಣಮಟ್ಟ. ಕೆಲವರು ಪೆಟ್ರೋಲ್ ಗುಣಮಟ್ಟದಿಂದ ದೂರ ಉಳಿದಿರುವ ಬಂಕ್ಗಳಿಂದ ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಅಂತಹ ಕಳಪೆ ಗುಣಮಟ್ಟದ ಪೆಟ್ರೋಲ್ ವಾಹನಕ್ಕೆ ಒಳ್ಳೆಯದಲ್ಲ. ಪೆಟ್ರೋಲ್ ಉತ್ತಮ ಗುಣಮಟ್ಟದಲ್ಲಿಲ್ಲದಿದ್ದರೆ ಅದು ಇಂಜಿನ್ನಲ್ಲಿ ಸಂಗ್ರಹವಾಗುತ್ತದೆ. ಆಗ ವಾಹನದ ಕಾರ್ಯಕ್ಷಮತೆ ಉತ್ತಮವಾಗಿರುವುದಿಲ್ಲ. ಹಾಗಾಗಿ ಯಾವುದೇ ಸಮಯದಲ್ಲಿ ವಾಹನಕ್ಕೆ ಗುಣಮಟ್ಟದ ಪೆಟ್ರೋಲ್ ಬಳಸುವುದು ಒಳಿತು.
ಇಂಜಿನ್ ಕಾರ್ಯಕ್ಷಮತೆ ಕುಸಿಯುತ್ತದೆ
ಪೆಟ್ರೋಲ್ ಖಾಲಿಯಾದ ನಂತರ, ಇಂಧನ ಟ್ಯಾಂಕ್ನ ಕ್ಯಾಪ್ ಅನ್ನು ಸರಿಯಾಗಿ ಮುಚ್ಚಲಾಗಿದೆಯೇ? ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಇಲ್ಲದಿದ್ದರೆ ಗಾಳಿ ಮತ್ತು ತೇವಾಂಶವು ಟ್ಯಾಂಕಿನೊಳಗೆ ಹೋಗುತ್ತದೆ. ಈ ಕಾರಣದಿಂದಾಗಿ, ನೀರಿನ ಆವಿಯು ಪೆಟ್ರೋಲ್ನೊಂದಿಗೆ ಮಿಕ್ಸ್ ಆಗಿ ಪೆಟ್ರೋಲ್ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ. ಇದು ವಾಹನದ ಎಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಕೆಲವರು ಪೆಟ್ರೋಲ್ ಟ್ಯಾಂಕ್ ಸದಾ ತುಂಬಿರಲಿ ಎಂದು ಪಂಪ್ನಲ್ಲಿ ಪೆಟ್ರೋಲ್ ತುಂಬಿಸುತ್ತಲೇ ಇರುತ್ತಾರೆ. ಇದು ಅತಿಯಾದ ಭರ್ತಿಗೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಇಂಧನ ಪೈಪ್ನಲ್ಲಿ ಸೋರಿಕೆಯಾಗುವ ಅಪಾಯವಿರಲಿದೆ. ಇದರಿಂದ ಇಂಜಿನ್ ಹಾಳಾಗುತ್ತದೆ ಎನ್ನುತ್ತಾರೆ ಟೆಕ್ ತಜ್ಞರು.
ಮೈಲೇಜ್ ಮತ್ತು ಇಂಜಿನ್
ಇನ್ನು ಕೆಲವರು ಪೆಟ್ರೋಲ್ ತುಂಬಿಸುವಾಗ ವಾಹನದ ಇಂಜಿನ್ ಅನ್ನು ಆನ್ನಲ್ಲಿ ಇಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದು ತುಂಬಾ ಅಪಾಯಕಾರಿ. ಇದು ಮೈಲೇಜ್ ಮತ್ತು ಇಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಕೆಲವೊಮ್ಮೆ ಬೆಂಕಿ ಅವಘಡ ಸಂಭವಿಸುವ ಅಪಾಯವೂ ಇರುತ್ತದೆ. ಆದ್ದರಿಂದ ಎಂದಿಗೂ ಇಂಜಿನ್ ಅನ್ನು ಆನ್ನಲ್ಲಿಟ್ಟು, ಪೆಟ್ರೋಲ್ ಹಾಕಿಸಬೇಡಿ. ನಿಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಈ ವಿಷಯಗಳನ್ನು ತಪ್ಪದೆ ನೆನಪಿನಲ್ಲಿಡಿ.
- ಕರ್ನಾಟಕದಲ್ಲಿ ಮದ್ಯ ದರ ಏರಿಕೆ: ಬಡವರ ಬ್ರ್ಯಾಂಡ್ ತುಟ್ಟಿ, ಶ್ರೀಮಂತರ ಮದ್ಯ ಸಸ್ತಾ.. ಸಂಪೂರ್ಣ ವಿವರ ಇಲ್ಲಿದೆ
- ಹಿಜಾಬ್ಗೆ ಗ್ರೀನ್ ಸಿಗ್ನಲ್; ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳ ವಿರೋಧ – ಉಗ್ರ ಪ್ರತಿಭಟನೆ ಎಚ್ಚರಿಕೆ
- Horoscope Today : 14 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಯಾರು ಇಲ್ಲಿ ಅತಿ ದೊಡ್ಡ ಮೂರ್ಖರು? ಇಂಧನ ಉಳಿಸಿ ಎಂದು ಹೇಳಿದ ಬೆನ್ನಲ್ಲೇ ರೋಡ್ ಶೋ ಮಾಡಿದ ಮೋದಿಯೋ? ಜನರೋ?
- ‘ನಿಮ್ಮನ್ನು ಕೇರಳ ಕ್ಷಮಿಸಲ್ಲ, ಮತ್ತೆ ಚುನಾವಣೆಯಲ್ಲಿ ಗೆಲ್ಲಲ್ಲ’; ಸಿಎಂ ಆಯ್ಕೆ ವಿಳಂಬ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ವಿರುದ್ಧ ಪೋಸ್ಟರ್ ಪ್ರೊಟೆಸ್ಟ್
- ಹಿಜಾಬ್, ಜನಿವಾರ, ಶಿವದಾರ ಧರಿಸಲು ಅನುಮತಿ ನೀಡಿದ ಸರ್ಕಾರ! ಪರೀಕ್ಷೆಯಲ್ಲಿ ಇನ್ನು ಧಾರ್ಮಿಕ ಪದ್ಧತಿಗೆ ಮುಕ್ತ ಅವಕಾಶ
- “ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಈ ಹುಚ್ಚುತನ ಬಿಡಿ” : ಡಿ.ಕೆ ಶಿವಕುಮಾರ್ಗೆ ಸಂಸದ ತೇಜಸ್ವಿ ಸೂರ್ಯ ಚಾಟಿ
- ಅರಸನ ಅರಮನೆಗೆ ಗ್ರಹಣ ಪಟ್ಟದ ಆನೆಗೆ ಸಂಕಷ್ಟ: ರಾಜಕೀಯ ಸಂಚಲನ ಮೂಡಿಸಿದ ಕೋಡಿಶ್ರೀಗಳ ಸ್ಫೋಟಕ ಭವಿಷ್ಯವಾಣಿ
- NEET UG: ನೀಟ್ ಪೇಪರ್ 10 ಲಕ್ಷಕ್ಕೆ ಖರೀದಿ, 15 ಲಕ್ಷಕ್ಕೆ ಸೇಲ್! : ಆರೋಪಿ ಶುಭಂ ಅಸಲಿಗೆ ಯಾರು?
- ಸಾರ್. ನನ್ನ ಹೆಂಡತಿ ಮದುವೆಯನ್ನು ತಪ್ಪಿಸಿ..! ಬೆಳಗಾವಿಯಲ್ಲಿ ಪತಿಯ ಗೋಳಾಟ!
- ಮುಂದಿನ 3 ದಿನ ರಾಜ್ಯದ ಈ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ : ಕರಾವಳಿ ಜನರೇ ಎಚ್ಚರ
- ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ನಿಮ್ಮನ್ನು ಕೊಲ್ಲುತ್ತೇವೆ: ಕೊಲೆ ಬೆದರಿಕೆ ಹಾಕಿದ ಶಾಸಕ ಹುಮಾಯೂನ್ ಕಬೀರ್
- ವೈದ್ಯರ ನಿರ್ಲಕ್ಷ್ಯದಿಂದ ಕಣ್ಣುಗಳಿಲ್ಲದೆ ಜನಿಸಿದ ಮಗು ! ಆಸ್ಪತ್ರೆಗೆ 1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್.!
- ಟ್ರೆಕ್ಕಿಂಗ್ ಪ್ರಿಯರಿಗೆ ಸರ್ಕಾರ ಶಾಕ್..! ರಾಜ್ಯಾದ್ಯಂತ ಚಾರಣ ಬ್ಯಾನ್ ಮಾಡಿದ ಸರ್ಕಾರ.. ಕಾರಣವೇನು ಗೊತ್ತೆ.?
- ಸನಾತನ ಧರ್ಮ ನಾಶ : ಸದನದಲ್ಲಿ ಉದಯನಿಧಿ ಗುಡುಗು, ಮೌನವಹಿಸಿ ಸಮ್ಮತಿಸಿದ್ರಾ ಸಿಎಂ ವಿಜಯ್
- ಬಂಗಾಳದ ಮಾಜಿ ಚುನಾವಣಾಧಿಕಾರಿ ಈಗ ರಾಜ್ಯದ ‘ಮುಖ್ಯ ಕಾರ್ಯದರ್ಶಿ’: ಇದು ‘ನಾಚಿಕೆಗೇಡು’ ಎಂದ ತೃಣಮೂಲ ಕಾಂಗ್ರೆಸ್!
- ‘ಮಳೆಗಾಲದಲ್ಲಿ ಪ್ರವಾಹ ಉಂಟಾದ್ರೆ ಸೂಟ್ ಧರಿಸಿ ಜನರ ಸೇವೆ ಹೇಗೆ ಮಾಡ್ತೀರಿ’; ಸಿಎಂ ವಿಜಯ್ ಗೆ ಅಣ್ಣಾಮಲೈ ಟಾಂಗ್
- ಗುಡುಗು-ಸಿಡಿಲಿನ ಆರ್ಭಟಕ್ಕೆ ಭೂಮಿ ತಲ್ಲಣ: ಕೋಡಿಶ್ರೀಗಳ ಸ್ಪೋಟಕ ಭವಿಷ್ಯವಾಣಿ
- PWD ಇಂಜಿನಿಯರ್ ದುರಂತ ಅಂತ್ಯ, ತಾಯಿ ಇಲ್ಲದ ನೋವಲ್ಲಿ ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಪ್ರಾಣಬಿಟ್ಟ!!
- Horoscope Today : 12 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಹುಟ್ಟುಹಬ್ಬದ ದಿನವೇ ದುರಂತ ಅಂತ್ಯ : ಹಾಸ್ಟೆಲ್ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ..
- ತನ್ನ ಎಲೆ ಮೇಲೆ ಆನೆ ಬಿದ್ದಿದ್ದರೂ ನೊಣ ಹುಡುಕುವ ಢೋಂಗಿ ಬುದ್ಧಿ : ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
- ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲೇ ದುರಂತ ಅಂತ್ಯ ಕಂಡ ನವದಂಪತಿ! ಅನುಮಾನ ತಂದ ಆಪತ್ತು.!
- ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಇಬ್ಬರು ಮಕ್ಕಳ ತಾಯಿ : ಪ್ರೇಮಿ ಕೈಕೊಟ್ಟನೆಂದು ಮರಳಿ ಗಂಡನ ಬಳಿ ಬಂದ ಮಹಿಳೆ
- ಓದುವ ಆಸೆಯಿದ್ದ ವಿದ್ಯಾರ್ಥಿನಿ ಮದುವೆ ಭಯಕ್ಕೆ ಬಲಿ: ವಿಷ ಸೇವಿಸಿ ದುರಂತ ಅಂತ್ಯ.! ಅಸಲಿಗೆ ನಡೆದಿದ್ದೇನು?
- ಶೃಂಗೇರಿ ‘ಮರುಎಣಿಕೆ’ ಸಮರಕ್ಕೆ ಸುಪ್ರೀಂ ಯಥಾಸ್ಥಿತಿ ಆದೇಶ ; ಶಾಸಕನಾಗಿ ರಾಜೇಗೌಡ ಮುಂದುವರಿಕೆ, ಜೀವರಾಜ್ ಸ್ಥಾನವೇನು.?
- ರಾಹುಲ್-ವಿಜಯ್ ಸೃಷ್ಟಿಸಿದ ದಾಖಲೆಗೆ ಇನ್ಸ್ಟಾಗ್ರಾಮ್ ಬ್ರೇಕ್ : ಕಾಂಗ್ರೆಸ್ ಆಕ್ರೋಶ, ಇನ್ಸ್ಟಾಗೆ ನಟಿ ರಮ್ಯಾ ಪ್ರಶ್ನೆ!
- ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಹತ್ಯೆ ಕೇಸ್, ಪತ್ನಿ ಹಾಗೂ ಪ್ರಿಯಕರನಿಗೆ ಗಲ್ಲು ಶಿಕ್ಷೆ
- ಮೂಲವ್ಯಾಧಿ (Piles) ಸಮಸ್ಯೆಗೆ ಶಾಶ್ವತ ಮುಕ್ತಿ: ಖಾಲಿ ಹೊಟ್ಟೆಯಲ್ಲಿ ಈ ಬೀಜಗಳ ನೀರು ಕುಡಿದರೆ ಸಾಕು!
- ರಾಜ್ಯ ಸರ್ಕಾರಿ ನೌಕರರಿಗೆ ಶೇ.1.5 ರಷ್ಟು ‘ತುಟ್ಟಿಭತ್ಯೆ’ ಹೆಚ್ಚಳಕ್ಕೆ CM ಸಿದ್ದರಾಮಯ್ಯ ಅಧಿಕೃತ ಅನುಮೋದನೆ
- ಸಾನ್ವಿ ಸುದೀಪ್ ಬೆನ್ನ ಮೇಲೆ ಅರಳಿದ ಗಣಪತಿ ದೇವರ ಟ್ಯಾಟೂ.. ಇದಕ್ಕಾಗಿ ಹೋಗಿದ್ದು ಯಾವ ನಗರಕ್ಕೆ? ವಿಡಿಯೋ






























