MGNREGA : ನಮಸ್ಕಾರ ಸ್ನೇಹಿತರೇ, ಸಣ್ಣ ರೈತರು ನರೇಗಾ ಯೋಜನೆ ನೆರವು ಪಡೆದು ತಮ್ಮದೇ ಹೊಲ, ಗದ್ದೆ ತೋಟ, ಕೊಟ್ಟಿಗೆ ಕೆಲಸ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಬರೋಬ್ಬರಿ 5 ಲಕ್ಷ ರೂಪಾಯಿ ವರೆಗೂ ನೆರವು ಸಿಗುತ್ತದೆ. ಈ ಸಹಾಯಧನ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಗ್ರಾಮೀಣ ಪ್ರದೇಶಕ್ಕೆ ದೊಡ್ಡ ವರದಾನವಾಗಿದೆ. ಸಣ್ಣ ರೈತರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರಕಾರ ವೈಕ್ತಿಕ ಕಾಮಗಾರಿ ಮೊತ್ತವನ್ನು ಕೂಡ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?
ರೈತರಿಗೆ ಸಿಗಲಿದೆ ಭರ್ತಿ ₹5 ಲಕ್ಷ ನೆರವು
ಈ ಮೊದಲು ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಸಣ್ಣ ಅತೀ ಸಣ್ಣ ರೈತರು, ಹೈನುಗಾರರು ಮತ್ತು ಆಡು-ಕುರಿ ಸಾಕಾಣಿಕೆದಾರರು ಗರಿಷ್ಟ 2.5 ಲಕ್ಷ ರೂಪಾಯಿ ಸಹಾಯಧನ ಪಡೆಯಲು ಅವಕಾಶವಿತ್ತು. ಇದೀಗ ಈ ಮೊತ್ತ ಡಬಲ್ ಆಗಿದ್ದು; ಬರೋಬ್ಬರಿ 5 ಲಕ್ಷ ರೂಪಾಯಿ ವರೆಗೂ ನೆರವು ಪಡೆದು ಹೊಲ, ಗದ್ದೆ ತೋಟ, ಕೊಟ್ಟಿಗೆ ಕೆಲಸ ಮಾಡಿಸಿಕೊಳ್ಳಬಹುದು.
ಗ್ರಾಮೀಣ ಪ್ರದೇಶದಲ್ಲಿ ಅವರದೇ ಗ್ರಾಮದಲ್ಲಿ ಒಂದು ವರ್ಷಕ್ಕೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಉದ್ಯೋಗ ಬಯಸುವ ಹಳ್ಳಿಯ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ (ಬರ ಪೀಡಿತ ಪ್ರದೇಶಗಳಲ್ಲಿ 150 ದಿನಗಳು) ಉದ್ಯೋಗ ಖಾತರಿ ನೀಡಲಾಗುತ್ತದೆ.
ಯಾರಿಗೆಲ್ಲ ಸಿಗಲಿದೆ ಈ ನೆರವು.?
ಸಮುದಾಯ ಕಾಮಗಾರಿ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ಮಿಸಿಕೊಳ್ಳಲು ಈ ಕೆಳಕಂಡ ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ಲಕ್ಷಾಂತರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ.
• ಸಣ್ಣ ಮತ್ತು ಅತಿ ಸಣ್ಣ ರೈತರು
• ಪರಿಶಿಷ್ಟ ಜಾತಿ/ಪಂಗಡ ಜಾತಿ
• ಅಲೆಮಾರಿ ಬುಡಕಟ್ಟುಗಳು
• ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು
• ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು
• ಮಹಿಳಾ ಪ್ರಧಾನ ಕುಟುಂಬಗಳು
• ವಿಕಲಚೇತನ ಕುಟುಂಬಗಳು
• ಭೂ ಸುಧಾರಣಾ ಫಲಾನುಭವಿಗಳು
• ವಸತಿ ಯೋಜನೆಯ ಫಲಾನುಭವಿಗಳು
• ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು
Post Office Scheme : ಅಂಚೆ ಇಲಾಖೆಯ ಈ ಯೋಜನೆಯಡಿ ರಿಸ್ಕ್ ಇಲ್ಲದೇ 12 ಲಕ್ಷ ರೂ. ಗಳಿಸಿ.!
ಯಾವ್ಯಾವ ಕಾಮಗಾರಿಗೆ ಸಹಾಯಧನ.?
ರೈತರು ತಮ್ ಸ್ವಂತ ಜಮೀನುಗಳಲ್ಲಿ ಈ ಕೆಳಕಂಡ ಕಾರ್ಯ ಚಟುವಟಿಕೆಗಳಿಗೆ ನರೇಗಾ ಯೋಜನೆಯಡಿ ಸಹಾಯಧನ ಪಡೆಯಬಹುದಾಗಿದೆ.
• ಜಮೀನುಗಳಲ್ಲಿ ಕೃಷಿ ಹೊಂಡ
• ಬದು ನಿರ್ಮಾಣ
• ತೆರೆದ ಬಾವಿ, ಕುರಿ/ಮೇಕೆ ಕೊಟ್ಟಿಗೆ
• ಬಚ್ಚಲು ಗುಂಡಿ
• ಮೀನು ಕೃಷಿ ಕೊಳ
• ಕಂದಕ ಬದು ನಿರ್ಮಾಣ
• ಕೊಳವೆ ಬಾವಿ ಮರುಪೂರಣ ಘಟಕ
• ತೆರೆದ ಬಾವಿ
• ಅಜೋಲಾ ಘಟಕ
• ಎರೆಹುಳು ಗೊಬ್ಬರ ತೊಟ್ಟಿ
• ಇಂಗು ಗುಂಡಿ ನಿರ್ಮಾಣ
• ಕೃಷಿ ಅರಣ್ಯ
• ತೋಟಗಾರಿಕೆ ಬೆಳೆಗಳು
• ರೇಷ್ಮೆ ಕೃಷಿ
• ಕೋಳಿ ಶೆಡ್, ಆಡು/ಕುರಿ ಶೆಡ್, ಹಂದಿ ಶೆಡ್
ರೈತರು ಕೇವಲ ಒಂದೇ ರೀತಿಯ ಬೆಳೆ ಬೆಳೆದು ನಷ್ಟ ಭವನಿಸುವ ಬದಲು, ನರೇಗಾದಡಿ ಧನಸಹಾಯ ಪಡೆದು ಮಿಶ್ರ ಬೆಳೆಗಳನ್ನು ಬೆಳೆಯಲು ಕೂಡ ಸಾಕಷ್ಟು ಅವಕಾಶವಿದೆ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಯಾವ ಕಾಮಗಾರಿಗೆ ಎಷ್ಟೆಷ್ಟು ಸಹಾಯಧನ.?
• ಕುರಿ/ಮೇಕೆ ಕೊಟ್ಟಿಗೆ : 70 ಸಾವಿರ ರೂಪಾಯಿ
• ಬಚ್ಚಲು ಗುಂಡಿ : 14 ಸಾವಿರ ರೂಪಾಯಿ
• ದನದ ಕೊಟ್ಟಿಗೆ (4 ದನಗಳಿಗೆ) : 57 ಸಾವಿರ ರೂಪಾಯಿ
• ಕೋಳಿ ಶೇಡ್ : 62 ಸಾವಿರ ರೂಪಾಯಿ
• ಮೀನು ಕೃಷಿ ಕೊಳ : 1 ಲಕ್ಷ ರೂಪಾಯಿ
• ಕಂದಕ ಬದು ನಿರ್ಮಾಣ : 35 ಸಾವಿರ ರೂಪಾಯಿ
• ಹಂದಿ ಕೊಟ್ಟಿಗೆ ನಿರ್ಮಾಣ : 87 ಸಾವಿರ ರೂಪಾಯಿ
• ಕೊಳವೆ ಬಾವಿ ಮರುಪೂರಣ ಘಟಕ : 27 ಸಾವಿರ ರೂಪಾಯಿ
• ಎರೆಹುಳು ಘಟಕ : 27 ಸಾವಿರ ರೂಪಾಯಿ
• ತೆರೆದ ಬಾವಿ : 1.50 ಲಕ್ಷ ರೂಪಾಯಿ
• ಅಜೋಲಾ ಘಟಕ : 17 ಸಾವಿರ ರೂಪಾಯಿ
• ಕೃಷಿ ಹೊಂಡ : 77 ಸಾವಿರ ರೂಪಾಯಿ
• ಪೌಷ್ಟಿಕಾಂಶ ಕೈತೋಟ : ಸೀಬೆ, ಕರಿಬೇವು, ನೆಲ್ಲಿ, ನುಗ್ಗೆ, ಸಪೋಟ, ತೆಂಗು ಮತ್ತು ನಿಂಬೆ ಗಿಡಗಳನ್ನು ನಿಮ್ಮ ಕೈತೋಟದಲ್ಲಿ ನೆಟ್ಟರೆ ರೂ. 2,397/- ಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ನರೇಗಾ ನೆರವು ಪಡೆಯುವುದು ಹೇಗೆ?
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಈ ಎಲ್ಲ ಸಹಾಯಧನ ಪಡೆಯಲು ಮುಖ್ಯವಾಗಿ ರೈತರು ಉದ್ಯೋಗ ಚೀಟಿ ಅಥವಾ ಜಾಬ್ ಕಾರ್ಡ್ ಹೊಂದಿರಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕುಟುಂಬ ಸದಸ್ಯರ ಸೂಕ್ತ ದಾಖಲೆಗಳನ್ನು ಒದಗಿಸುವ ಮೂಲಕ ಜಾಬ್ ಕಾರ್ಡ್ ಪಡೆಯಬಹುದು. ಜಾಬ್ ಕಾರ್ಡ್ ಪಡೆದ ನಂತರ ಉದ್ಯೋಗಕ್ಕಾಗಿ ನಮೂನೆ-6ರಲ್ಲಿ ಗ್ರಾಮ ಪಂಚಾಯ್ತಿಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡಯಬೇಕು.
- BSNL Plan : ಬರೋಬ್ಬರಿ 150 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಅತ್ಯುತ್ತಮ ರಿಚಾರ್ಜ್ ಪ್ಲಾನ್!
- ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ.! ಪೋಷಕರ ತೀರ್ಮಾನವೇನು ಗೊತ್ತಾ.?
- 5 ದಿನಗಳಲ್ಲಿ ಈ ಕೆಲಸ ಮಾಡದವರ ಪಿಂಚಣಿ ಬಂದ್.! ಸರ್ಕಾರದ ಹೊಸ ಆದೇಶ.! Pension New Updates
- ಒಂದು EMI ಮಿಸ್ ಆದವರಿಗೆ ಇನ್ಮೇಲೆ ಹೊಸ ರೂಲ್ಸ್ | Missed EMI & CIBIL Score
- ಬ್ಯಾಂಕ್ ಖಾತೆ ಇದ್ದು ಈ ತಪ್ಪು ಮಾಡಿದವರಿಗೆ 2 ವರ್ಷ ಜೈಲು ಹಾಗು ದಂಡ – ಸಂಪೂರ್ಣ ಮಾಹಿತಿ
- ಎಲ್ಲಾ ಗೃಹಲಕ್ಷ್ಮಿ ಯರಿಗೆ ಬಿಗ್ ಶಾಕ್.! ರಾತ್ರೋರಾತ್ರಿ ಹೊಸ ಲಿಸ್ಟ್ ಬಿಡುಗಡೆ | ಹೆಸರು ಇದ್ದವರಿಗೆ ಮಾತ್ರ ಹಣ.!
- ಮಳೆ.! ಮಳೆ.! ಅಕ್ಟೋಬರ್ 29 ರ ವರೆಗೆ | 18 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ | weather forecast
- ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರದಿಂದ ಸಿಹಿಸುದ್ಧಿ.! ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆ ರೂಪಿಸಲು ಅವಕಾಶ
- ತುಟ್ಟಿಭತ್ಯೆ ಶೇ. 55 ರಿಂದ 58ಕ್ಕೆ ಹೆಚ್ಚಳ, ಸರ್ಕಾರದ ಅಧಿಕೃತ ಆದೇಶ ಪ್ರಕಟ – ಯಾರೆಲ್ಲಾ ಇದರ ಪ್ರಯೋಜನ ಪಡೆಯುತ್ತಾರೆ?
- ಕ್ಷುಲಕ ಕಾರಣಕ್ಕೆ ದಂಪತಿ ನಡುವೆ ಜಗಳ, ತವರು ಮನೆ ಸೇರಿದ ಪತ್ನಿ, ಅವಳಿ ಹೆಣ್ಣು ಮಕ್ಕಳ ‘ಕತ್ತು ಸೀಳಿ’ ಕೊಂದ ಕಟುಕ ತಂದೆ!
- ಇನ್ಮೇಲೆ ಈ ಕೆಲಸ ಅಪರಾಧವಲ್ಲ ಕೋರ್ಟ್ ಹೊಸ ಆದೇಶ ಜಾರಿಗೆ | ಹೈಕೋರ್ಟ್ ಕೊಟ್ಟಿರುವ ಈ ತೀರ್ಪು ಯಾವುದು.?
- ರೈತರ ಸಾಲಮನ್ನಾ : ಗುಡ್ ನ್ಯೂಸ್ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
- ನವೆಂಬರ್ 1 ರಿಂದ ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ | ಬ್ಯಾಂಕ್ ಖಾತೆಯನ್ನ ಹೊಂದಿರುವವರು ತಪ್ಪದೇ ನೋಡಿ
- ನೀವು ಈ 10 ರೀತಿಯ ಕ್ಯಾಷ್ ಟ್ರಾನ್ಸಾಕ್ಷನ್ ಮಾಡ್ತಿದ್ದೀರಾ? ಐಟಿ ನೋಟಿಸ್ ಬರಬಹುದು ಎಚ್ಚರ! Income Tax
- ಪೊಲೀಸರು 5 ತಿಂಗಳಲ್ಲಿ 4 ಬಾರಿ ಅತ್ಯಾಚಾರ ಮಾಡಿದ್ರು : ಕೈಯಲ್ಲಿ ಡೆತ್ ನೋಟ್ ಬರೆದುಕೊಂಡು ವೈದ್ಯೆ ಆತ್ಮಹತ್ಯೆ
- ಪರಿಶಿಷ್ಟ ಪಂಗಡದ ಮಹಿಳೆ ಆಸ್ತಿಗೆ ಹಕ್ಕುದಾರಳಲ್ಲ : ಸಂವಿಧಾನವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ಹೇಳಿದ್ದೇನು?
- BPL ಕಾರ್ಡ್ ಇದ್ದ 75 ವರ್ಷದವರಿಗೆ ದೊಡ್ಡ ಸಿಹಿಸುದ್ದಿ – ಹಿರಿಯ ನಾಗರಿಕರಿಗೆ ಈ ಸೇವೆ ಉಚಿತ | BPL Ration Card
- ಪೋಷಕರು ಮಾರಿದ ಆಸ್ತಿಯನ್ನು ಪ್ರಾಪ್ತ ವಯಸ್ಕ ಮಕ್ಕಳು ನಿರಾಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
- ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಹೊಸ ರೂಲ್ಸ್ – ಯಾವ ಪಟ್ಟಿಯಲ್ಲಿ ಹೆಸರಿರಬೇಕು.?
- ನವೆಂಬರ್ 1 ರಿಂದ ಗ್ಯಾಸ್ ಸಿಲಿಂಡರ್ ಗೆ ಹೊಸ ರೂಲ್ಸ್ | ಏನಿದು ಹೊಸ ನಿಯಮ.? Gas Cylinder
- ಗ್ರಾಮೀಣ ಜನತೆಗೆ ಸಿಹಿಸುದ್ದಿ : ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಬಿ-ಖಾತಾ ವಿತರಣೆ, ಇ-ಸ್ವತ್ತು ಸರಳೀಕರಣ
- ಬ್ಯಾಂಕ್ ಸಾಲ ಬಾಕಿ ಇದ್ದವರಿಗೆ RBI ನಿಂದ ಗುಡ್ ನ್ಯೂಸ್ | ಆರ್ ಬಿಐ ನೀಡಿರುವ ಗುಡ್ ನ್ಯೂಸ್ ಏನು.?
- Gold Rate : ಭಾರೀ ಇಳಿಕೆ ಕಂಡ ಚಿನ್ನದ ಬೆಲೆ.? ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ದರ.? ಭರ್ಜರಿ ಇಳಿಕೆಯತ್ತ!
- ಬ್ಯಾಂಕ್ FD ಇಟ್ಟ ಹಿರಿಯ ನಾಗರೀಕರಿಗೆ RBI ಹೊಸ ರೂಲ್ಸ್ | Senior Citizen FD New Rules
- ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್.! BPL Ration Card Updates
- ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್- Inherited property rights
- Online gambling : ಆನ್ಲೈನ್ ಜೂಜು ನಿಷೇಧ : ಕೇಂದ್ರದ ನೆರವು ಕೇಳಿದ ಸುಪ್ರೀಂ ಕೋರ್ಟ್
- ಪ್ಯಾನ್ ಕಾರ್ಡ್ ಹೊಂದಿರೋರೇ ಎಚ್ಚರ! ಈ ತಪ್ಪು ಮಾಡಿದ್ರೇ 10,000 ದಂಡ ಕಟ್ಟಬೇಕಾಗುತ್ತೆ ಹುಷಾರ್! | PAN Card Alert
- 2026 ರ ಚಿನ್ನದ ಬೆಲೆ ಎಷ್ಟಾಗುತ್ತೆ ಎಂದು ತಿಳಿಸಿದ ಸರ್ಕಾರ.! ಚಿನ್ನದ ಭವಿಷ್ಯ ಹೇಗಿದೆ.? | Gold Price Prediction 2026
- ದೀಪಾವಳಿಗೆ BSNL ನಿಂದ ಕೈಗೆಟುಕುವ ದರದಲ್ಲಿ 365 ದಿನಗಳ ಸೇವೆಯ ‘BSNL ಸಮ್ಮಾನ್’ ಪ್ಲಾನ್ ಬಿಡುಗಡೆ
- Weather Forecast : ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ – 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
- ಫೋನ್ ಬಳಸಿದ ವಿದ್ಯಾರ್ಥಿಗೆ ಕಾಲಿನಿಂದ ಒದ್ದು, ಮನಸೋ ಇಚ್ಛೆ ಥಳಿಸಿದ ‘ರಕ್ಕಸ’ ಶಿಕ್ಷಕ! ವಿಡಿಯೋ ವೈರಲ್
- ಇನ್ಮುಂದೆ ಇವರು `BPL – ಅಂತ್ಯೋದಯ’ ರೇಷನ್ ಕಾರ್ಡ್ ಪಡೆಯಲು ಅನರ್ಹ.! ಸಂಪೂರ್ಣ ಮಾಹಿತಿ
- Arecanut : ಅಡಕೆ ನಿಷೇಧ ಮಾಡಲು ʼWHO” ಕರೆ – ಕ್ಯಾನ್ಸರ್ ಕಾರಕ ಎಂದು ಗಂಭೀರ ಆರೋಪ

































