ಕನ್ನಡ ನ್ಯೂಸ್ ಟೈಮ್ : ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವಿಲ್ಲುಕುರಿ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಮನೆ ಮಾರಾಟ ಮಾಡಿದ ಹಣದ ಸಮೇತ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ಇತ್ತ ಮನೆ ಹಾಗೂ ಮಡದಿ ಇಲ್ಲದೆ ಕಂಗಾಲಾದ ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಂಜಮಿನ್ (47) ಎಂಬಾತ ತನ್ನ ಕುಟುಂಬದ ನಿರ್ವಹಣೆಗಾಗಿ ದೂರದ ಸೌದಿ ಅರೇಬಿಯಾದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಸುನೀತಾ (45) ಕನ್ಯಾಕುಮಾರಿಯಲ್ಲಿ ವಾಸವಿದ್ದಳು. 19 ವರ್ಷಗಳ ಹಿಂದೆ ಇಬ್ಬರು ವಿವಾಹವಾದರು. ಅವರಿಗೆ ಮಕ್ಕಳಿಲ್ಲ. ಬೆಂಜಮಿನ್ ತಾನು ಸಂಪಾದಿಸಿದ ಹಣವನ್ನು ಪ್ರತಿ ತಿಂಗಳು ಪತ್ನಿಗೆ ಕಳುಹಿಸುತ್ತಿದ್ದ. ಆದರೆ, ಪತ್ನಿ ಮಾತ್ರ ತನ್ನ ಪ್ರಿಯಕರ ಜತೆ ಜಾಲಿ ಮಾಡುತ್ತಿದ್ದಳು.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಗಂಡ ಹೆಂಡತಿ ನಡುವೆ ಆಗಾಗ ಜಗಳಗಳು ಕೂಡ ನಡೆಯುತ್ತಿದ್ದವು. ಈ ಮಧ್ಯೆ, ಕೊನ್ನಕ್ಕುಳಿವಿಲೈನಲ್ಲಿರುವ ಕುಟುಂಬದ ಮನೆಯನ್ನು ಬೆಂಜಮಿನ್ ಮಾರಾಟ ಮಾಡಿದ್ದ. ಬಳಿಕ ಪಕ್ಕದ ಮನಕವಿಲೈನಲ್ಲಿ ಮನೆ ಕಟ್ಟಿಕೊಂಡು ತನ್ನ ಹೆಂಡತಿಯೊಂದಿಗೆ ವಾಸಿಸುತ್ತಿದ್ದ. ಇದರ ನಡುವೆ ಸುನೀತಾ ಕೆಲವು ವಾರಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಸಂಬಂಧಿಕರು ವಿದೇಶದಲ್ಲಿದ್ದ ಬೆಂಜಮಿನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಹೀಗಾಗಿ ಬೆಂಜಮಿನ್ ಕೆಲವು ದಿನಗಳ ಹಿಂದೆ ಗ್ರಾಮಕ್ಕೆ ಮರಳಿದರು. ತಮ್ಮ ಪತ್ನಿ ಸುನೀತಾ ನಾಪತ್ತೆಯಾಗಿರುವ ಬಗ್ಗೆ ಇರಾನಿಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇದರ ನಡುವೆ ಬುಧವಾರ ಬೆಂಜಮಿನ್ ಅವರು ತನ್ನ ಮಣಕ್ಕವಿಲೈ ಮನೆಯಲ್ಲಿ ವಿಷ ಸೇವಿಸಿದರು. ಇದು ಗೊತ್ತಾಗಿ ಆತನ ಸಂಬಂಧಿಕರು ಮತ್ತು ನೆರೆಹೊರೆಯವರ ಕೂಡಲೇ ಆಸರಿಪಲ್ಲಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಂಜಮಿನ್ ದುರಂತ ಸಾವಿಗೀಡಾಗಿದ್ದಾರೆ. ಇದಕ್ಕೂ ಮುನ್ನ ಬೆಂಜಮಿನ್ ತಮ್ಮ ಫೇಸ್ಬುಕ್ ಪುಟದಲ್ಲಿ ಅಳುತ್ತಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ವಿಡಿಯೋದಲ್ಲಿ ಏನಿದೆ.?
ಎಸ್ಪಿ ಸರ್, ನಾನು ನನ್ನ ಹೆಂಡತಿಯನ್ನು 19 ವರ್ಷಗಳ ಕಾಲ ರಾಣಿಯಂತೆ ನಡೆಸಿಕೊಂಡೆ. ನಾನು ನನ್ನ ಕುಟುಂಬದೊಂದಿಗೆ ಬೇರೆ ಮನೆಯಲ್ಲಿದ್ದೆ. ಆಗಲೇ ಆಕೆಗೆ ಅನೈತಿಕ ಸಂಬಂಧವಿತ್ತು. ನನ್ನ ಹೆಂಡತಿ, ಮನೆಯನ್ನು 33 ಲಕ್ಷ ರೂ.ಗೆ ಮಾರಿದ್ದೇನೆ ಎಂದು ಹೇಳಿದಳು. ಹಣದೊಂದಿಗೆ ಪರಾರಿಯಾಗಿದ್ದಾಳೆ. ಅವರನ್ನು ಮಾತ್ರ ಬಿಡಬೇಡಿ. ಸೈಜು, ಸುನೀತಾ ಹಾಗೂ ಶೀಲಾ ನನ್ನ ಸಾವಿಗೆ ಕಾರಣ. ನನ್ನ ಸಾವಿಗೆ ಕಾರಣರಾದವರಿಗೆ ಮರಣದಂಡನೆ ವಿಧಿಸಿ. ನಾನು ಅದನ್ನು ಮೇಲಿನಿಂದ ನೋಡುತ್ತೇನೆ.
ಅಯ್ಯೋ ದೇವರೇ, ಅವರನ್ನು ಬಿಡಬೇಡ. 19 ವರ್ಷಗಳಿಂದ ಈ ಸೈಜು ನನ್ನನ್ನು ಸ್ವಲ್ಪ ಸ್ವಲ್ಪವಾಗಿ ಕೊಲ್ಲುತ್ತಿದ್ದಾನೆ. ಅವನನ್ನು ಬಿಡಬೇಡ. ಅವಳು (ಸುನೀತಾ) ಅವನ ಮನೆಯಲ್ಲಿ ಇದ್ದಾಳೆ. ನನಗೆ ಗೊತ್ತಿರುವುದೆಲ್ಲಾ ಇಷ್ಟೇ ಎಸ್ಪಿ ಸರ್, ಕ್ರಮ ಕೈಗೊಳ್ಳಿ. ನನ್ನ ಸಾವಿಗೆ ಮೂವರೂ ಕಾರಣ ಎಂದು ಬೆಂಜಮಿನ್ ಪದೇಪದೆ ಹೇಳುತ್ತಾ ಎದೆ ಬಡಿದುಕೊಂಡು ಅತ್ತಿದ್ದಾರೆ.
ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
13.09 ನಿಮಿಷಗಳ ಈ ವಿಡಿಯೋದಲ್ಲಿ, ಬೆಂಜಮಿನ್ ಕಿರುಚುತ್ತಾ 10ಕ್ಕೂ ಹೆಚ್ಚು ಬಾರಿ ಎದೆಗೆ ಹೊಡೆದುಕೊಳ್ಳುತ್ತಾರೆ. ಸೈಜು (ಕಳ್ಳ), ಸುನೀತಾ (ಅವನ ಹೆಂಡತಿ) ಮತ್ತು ಶೀಲಾ (ಅವನ ಹೆಂಡತಿಯ ಸಹೋದರಿ) ಮೂವರನ್ನು ಬಿಡಬೇಡಿ ಎಂದು ಹೇಳಿದ್ದಾರೆ. ಇರಾನಿಯಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಪತ್ನಿ ಸುನೀತಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತಲೆಮರೆಸಿಕೊಂಡಿರುವ ಸೈಜು ಮತ್ತು ಸುನೀತಾ ಸಹೋದರಿ ಶೀಲಾ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
- ಹಣಕಾಸಿನ ವಿಚಾರಕ್ಕೆ ಗಲಾಟೆ : ದೊಡ್ಡಪ್ಪನನ್ನೇ ಕೊಲೆಗೈದ ಪಾಪಿ ಪುತ್ರ
- ‘ಹೆಣ್ಣುಮಕ್ಕಳ ತಂಟೆಗೆ ಬಂದ್ರೆ.. ಯಮರಾಜ ಕಾಯುತ್ತಿರುತ್ತಾನೆ’: ಸಿಎಂ ಯೋಗಿ ಆದಿತ್ಯಾನಾಥ್ ಎನ್ಕೌಂಟರ್ ಎಚ್ಚರಿಕೆ!
- ಪುಟಿನ್ಗೆ ಇಲ್ಲೇ ಎಲೆಕ್ಷನ್ ನಿಲ್ಲೋಕೆ ಟಿಕೆಟ್ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್ ಲಾಡ್ ಲೇವಡಿ
- ಸ್ವಂತ ಮಗನಾದ್ರೂ ಸಿಗಲ್ಲ ತಂದೆಯ ಆಸ್ತಿ..! ತಂದೆಯ ಆಸ್ತಿ ವರ್ಗಾವಣೆ ಕುರಿತು ಹೈಕೋರ್ಟ್ ಹೇಳುವುದೇನು ಗೊತ್ತಾ?
- Horoscope Today : ಗಜಕೇಸರಿ ಯೋಗ; ಡಿಸೆಂಬರ್ 07 ರಂದು ಯಾವ ರಾಶಿಗೆ ಶುಭ.? ಯಾವ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
- ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
- ‘ಸೀರಿಯಲ್ ಕಿಲ್ಲರ್’ ಮಹಿಳೆಯಿಂದ ಶಾಕಿಂಗ್ ಹೇಳಿಕೆ: ಏಕಾದಶಿ, ದಶಮಿಯಂದೇ ನಾಲ್ಕು ಮಕ್ಕಳ ಹತ್ಯೆ !
- ಗ್ಯಾಸ್ ಗೀಸರ್ ಹಾಕಿಸಿದ್ದೀರಾ? ಹುಷಾರು..! ಗ್ಯಾಸ್ ಸೋರಿಕೆಯಾಗಿ 24 ರ ಯುವತಿ ಸಾವು
- ‘ಹುಟ್ಟುವಾಗ ಹಿಂದೂವಾಗಿದ್ದೆ, ಸಾಯುವಾಗ ಹಿಂದೂವಾಗಿ ಸಾಯಲಾರೆ ಎಂದು ಅಂಬೇಡ್ಕರ್ ಹೇಳಿದ್ರು’ : ಸಿಎಂ ಸಿದ್ದರಾಮಯ್ಯ
- ನಾದಬ್ರಹ್ಮ ಇಡ್ಲಿ ಸೆಂಟರ್ ಮಾಲೀಕ, 28 ವರ್ಷದ ಸಂದೇಶ್ ಹೃದಯಾಘಾತದಿಂದ ಸಾವು
- 15 ದಿನಗಳಿಂದ ಏರಿಯಾದಲ್ಲಿ ದುರ್ವಾಸನೆ: ವಾಸನೆ ಜಾಡು ಹಿಡಿದ ಪೊಲೀಸರಿಗೆ ಸಿಕ್ಕಿದ್ದು ಟೆಕ್ಕಿ ಶವ.!
- ಎರಡನೇ ಬಾರಿಗೆ ಭೇಟಿ : ಸತೀಶ್ ಜಾರಕಿಹೊಳಿ ಬಳಿ ಬೆಂಬಲ ಕೇಳಿದ್ರಾ ಡಿಕೆ ಶಿವಕುಮಾರ್.!
- ಲಿವರ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಬೆಳಗ್ಗೆ ಈ ಒಂದು ಪಾನೀಯ ಕುಡಿಯಿರಿ
- ಡಿವೈಡರ್ಗೆ ಕಾರ್ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
- ದೇವಾಲಯದ ಹಣ ದೇವರಿಗೆ ಮಾತ್ರ ಸೇರಿದ್ದು ; ಅನ್ಯ ಉದ್ದೇಶಗಳಿಗಾಗಿ ಬಳಕೆ ಮಾಡುವಂತಿಲ್ಲ : ಸುಪ್ರೀಂ ಕೋರ್ಟ್
- ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಮುಸ್ಲಿಂ ವ್ಯಕ್ತಿಯ ಕಿರುಕುಳ : ವಿವಾಹಿತ ಮಹಿಳೆ ಆತ್ಮಹತ್ಯೆ
- ತಂದೆ ಎಂಬ ಪದಕ್ಕೆ ಮಸಿ ಬಳಿದ ಪಾಪಿ : ಕುಡಿತದ ಅಮಲಿನಲ್ಲಿ ಪುತ್ರಿಯರ ಮೇಲೆ ಅತ್ಯಾಚಾರ.!
- ಶಿವಮೊಗ್ಗ : ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ, ಪುತ್ರ ಆಕಾಶ್ ನೇಣಿಗೆ ಶರಣು
- ಸಿಎಂ ಬದಲಾವಣೆ ಅಸಾಧ್ಯ : ಕಾಂಗ್ರೆಸ್ `ಹೈಕಮಾಂಡ್’ ಸಂದೇಶ..!
- ‘ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಕಾಂಗ್ರೆಸ್ ಮುಖಂಡ ಮಿಥುನ್ ರೈಗೆ ನೋಟಿಸ್.?
- ನಮ್ಮ ಮೆಟ್ರೋ ಟ್ರ್ಯಾಕ್ಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ: ಮೃತನ ಗುರುತು ಪತ್ತೆ, ಸಂಚಾರ ಸಹಜ ಸ್ಥಿತಿಗೆ
- ಬಾಳನ್ನೇ ಬಲಿ ತೆಗೆದುಕೊಂಡ ಬಾಳೇಹಣ್ಣು – ಗಂಟಲಲ್ಲಿ ಸಿಲುಕಿ ಐದು ವರ್ಷದ ಬಾಲಕ ಸಾವು!
- ರಾಜ್ಯ ಪೊಲೀಸ್ ಇಲಾಖೆ ಮರ್ಯಾದೆ ತೆಗೆದ ಮತ್ತೊಬ್ಬ ಸಿಬ್ಬಂದಿ, ಬರೋಬ್ಬರಿ 11 ಲಕ್ಷ ಕದ್ದು ಹೆಂಡತಿಗೆ ಚಿನ್ನ ಉಡುಗೊರೆ.!
- ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಬ್ಯಾಚುಲರ್ ಜೊತೆ ರಾತ್ರಿ ತಂಗಿದ್ದ 2 ಹುಡುಗಿಯರು; ನೀಡಿದ ಶಿಕ್ಷೆಗೆ ಆಕ್ರೋಶ
- ವಜ್ರ ಯೋಗ; ಡಿಸೆಂಬರ್ 05 ರಂದು ಯಾವ ರಾಶಿಗೆ ಶುಭ? ಯಾವ ಅಶುಭ? : 12 ರಾಶಿ ಭವಿಷ್ಯ ಇಲ್ಲಿದೆ
- ಲಿವರ್ ನ್ನು ಹಾನಿಗೊಳಿಸುವ ಆಹಾರಗಳು ಇವು.. ವಿಸ್ಕಿ, ಬ್ರ್ಯಾಂಡಿಗಿಂತಲೂ ಡೇಂಜರಸ್!
- ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ – ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತ್ಯು. !
- ಚಾಣಕ್ಯ ನೀತಿ : ಕೆಟ್ಟ ಸಮಯ ಬಂದಾಗ ನಿಮ್ಮ ಹತ್ತಿರದಲ್ಲೇ ಕಾಣಿಸಿಕೊಳ್ಳುವ ಚಿಹ್ನೆಗಳಿವು
- ಸಿದ್ದರಾಮಯ್ಯ ನೆಗೆದುಬಿದ್ದಿದ್ದಾರೆ – ಸಿಎಂ ವಿರುದ್ಧ ನಾಲಿಗೆ ಹರಿಬಿಟ್ಟ ಮಾಜಿ ಸಚಿವ ಈಶ್ವರಪ್ಪ..!
- ಆಯತಪ್ಪಿ ಬಿದ್ದ ಕಾರ್ಮಿಕ ಸಾ*ವು: ಸಿಮೆಂಟ್ ಕಾರ್ಖಾನೆ ಮೇಲೆ ಕಲ್ಲು ತೂರಾಟ






























