ತನ್ನ ಎಲೆ ಮೇಲೆ ಆನೆ ಬಿದ್ದಿದ್ದರೂ ನೊಣ ಹುಡುಕುವ ಢೋಂಗಿ ಬುದ್ಧಿ : ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಪ್ರಧಾನಿ ಮೋದಿ ಪ್ರಧಾನಿ ಅವರು ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ? ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷರೋ? ಇಲ್ಲವೇ ರಾಜ್ಯದ ವಿರೋಧ ಪಕ್ಷದ ನಾಯಕರಾಗಿಯೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬೆಂಗಳೂರಿನಲ್ಲಿ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಮಂತ್ರಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರೂ ಅವರ ಮಾತಿನಲ್ಲಿ ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವೈಫಲ್ಯ ಮತ್ತು … Read more

ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲೇ ದುರಂತ ಅಂತ್ಯ ಕಂಡ ನವದಂಪತಿ! ಅನುಮಾನ ತಂದ ಆಪತ್ತು.!

ಪ್ರೀತಿಸಿ, ಹಿರಿಯರನ್ನು ಒಪ್ಪಿಸಿ ಹಸೆಮಣೆ ಏರಿದ್ದ ಆ ಜೋಡಿಯ ಸಂಸಾರ ನೂರು ಕಾಲ ಸುಖವಾಗಿರಬೇಕಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು. ಮದುವೆಯಾದ ಕೇವಲ ಒಂದು ತಿಂಗಳ ಸಂಭ್ರಮ ಮುಗಿಯುವ ಮೊದಲೇ ನವದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸಿದ್ಧಪೇಟೆ ಜಿಲ್ಲೆಯ ಕೊಂಡಪಾಕದಲ್ಲಿ ನಡೆದಿದೆ. ಪ್ರೀತಿ ಪವಿತ್ರವಾಗಿತ್ತು, ಆದರೆ… ಅಂಜಲಿ (21) ವೃತ್ತಿಯಲ್ಲಿ ದರ್ಜಿಯಾಗಿದ್ದಳು. ವಿನಯ್ (23) ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು, ಇಬ್ಬರ ಮನೆಯವರನ್ನು ಒಪ್ಪಿಸಿ ಕಳೆದ ಏಪ್ರಿಲ್ 9 … Read more

ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಇಬ್ಬರು ಮಕ್ಕಳ ತಾಯಿ : ಪ್ರೇಮಿ ಕೈಕೊಟ್ಟನೆಂದು ಮರಳಿ ಗಂಡನ ಬಳಿ ಬಂದ ಮಹಿಳೆ

ತನ್ನ ಮಡದಿ, ಇಬ್ಬರು ಮುದ್ದಾದ ಮಕ್ಕಳನ್ನು ತೊರೆದು ಪ್ರೇಮಿಯೊಂದಿಗೆ ಪರಾರಿಯಾಗಿದ್ದಾಳೆ ಎಂಬ ಸುದ್ದಿ ತಿಳಿದು ಗಂಡ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದನು. ಆ ಮಹಿಳೆ ಸುಮಾರು 4 ತಿಂಗಳು ತನ್ನ ಪ್ರೇಮಿಯ ಜೊತೆ ಇದ್ದಳು. ಆದರೆ ಇದೀಗ ಮತ್ತೆ ಗಂಡನ ಮನೆಗೆ ಮರಳಿದ್ದಾಳೆ. ಆಕೆಯ ಹೇಳಿಕೆಯ ಪ್ರಕಾರ, ಯಾರಿಗಾಗಿ ಮನೆ ಬಿಟ್ಟು ಹೋಗಿದ್ದಳೋ ಆ ವ್ಯಕ್ತಿಯೇ ಈಗ ಆಕೆಯನ್ನು ಬಿಟ್ಟು ಬೇರೆಡೆ ಹೋಗಿದ್ದಾನೆ. ಹೀಗಾಗಿ ತನ್ನ ಬಳಿ ಬೇರೆ ದಾರಿ ಉಳಿದಿರಲಿಲ್ಲ, ಅದಕ್ಕಾಗಿಯೇ ವಾಪಸ್ ಬರಬೇಕಾಯಿತು ಎಂದು ಆಕೆ … Read more

ಓದುವ ಆಸೆಯಿದ್ದ ವಿದ್ಯಾರ್ಥಿನಿ ಮದುವೆ ಭಯಕ್ಕೆ ಬಲಿ: ವಿಷ ಸೇವಿಸಿ ದುರಂತ ಅಂತ್ಯ.! ಅಸಲಿಗೆ ನಡೆದಿದ್ದೇನು?

ಶಿಕ್ಷಣದ ಮೇಲೆ ಅತೀವ ಆಸೆ ಹೊಂದಿದ್ದ 17 ವರ್ಷದ ಬಾಲಕಿಯೊಬ್ಬಳು, ಮದುವೆಯಾಗಬಹುದೆಂಬ ಕೇವಲ ಒಂದು ಸಣ್ಣ ಭಯಕ್ಕೆ ತನ್ನ ಬದುಕನ್ನೇ ಅಂತ್ಯಗೊಳಿಸಿಕೊಂಡಿರುವ ಮನಕಲಕುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಅಸಲಿಗೆ ನಡೆದಿದ್ದೇನು? ಮೃತ ವಿದ್ಯಾರ್ಥಿನಿಯನ್ನು ರೂಪಕೀರ್ತನ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ್ದ ಈಕೆಯ ಮನೆಯಲ್ಲಿ, ಪೋಷಕರು “ಒಳ್ಳೆಯ ಸಂಬಂಧ ಬಂದರೆ ಮದುವೆ ಮಾಡೋಣ” ಎಂದು ಮಾತಾಡಿಕೊಂಡಿದ್ದರು. ಪೋಷಕರ ಈ ಮಾತು ಮಗಳ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿತು. “ನನಗೆ ಓದುವ ಆಸೆಯಿದೆ…” ಮನೆಯಲ್ಲಿ ಮದುವೆ ಮಾತು … Read more

ಶೃಂಗೇರಿ ‘ಮರುಎಣಿಕೆ’ ಸಮರಕ್ಕೆ ಸುಪ್ರೀಂ ಯಥಾಸ್ಥಿತಿ ಆದೇಶ ; ಶಾಸಕನಾಗಿ ರಾಜೇಗೌಡ ಮುಂದುವರಿಕೆ, ಜೀವರಾಜ್ ಸ್ಥಾನವೇನು.?

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರುಎಣಿಕೆ ಪ್ರಕ್ರಿಯೆ ಮತ್ತು ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಪ್ರಶ್ನಿಸಿ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಹತ್ವದ ಆದೇಶ ನೀಡಿದೆ. ಸುಪ್ರೀಂ ಕೋರ್ಟ್‌ ‘ಯಥಾಸ್ಥಿತಿ’ (Status Quo) ಕಾಯ್ದುಕೊಳ್ಳುವಂತೆ ಸೂಚಿಸಿರುವುದರಿಂದ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್‌ ಅವರು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಒಂದೇ ವಾರದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವಂತಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಾದ-ಪ್ರತಿವಾದ ನ್ಯಾಯಮೂರ್ತಿ ಸಂಜಯ್ ಕುಮಾರ್ … Read more

ರಾಹುಲ್-ವಿಜಯ್ ಸೃಷ್ಟಿಸಿದ ದಾಖಲೆಗೆ ಇನ್‌ಸ್ಟಾಗ್ರಾಮ್ ಬ್ರೇಕ್ : ಕಾಂಗ್ರೆಸ್ ಆಕ್ರೋಶ, ಇನ್ಸ್ಟಾಗೆ ನಟಿ ರಮ್ಯಾ ಪ್ರಶ್ನೆ!

ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಜೊತೆಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತೆಗೆದುಕೊಂಡಂತಹ ಫೋಟೋ ಮತ್ತು ರೀಲ್ ಅನ್ನು ಇನ್‌ಸ್ಟಾಗ್ರಾಮ್ ನಿರ್ಬಂಧಿಸಿರುವುದನ್ನು ಕಾಂಗ್ರೆಸ್ ಪಕ್ಷವು ವಿರೋಧಿಸಿದೆ. ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದಾಗಿ ಫೋಟೋ ಮತ್ತು ರೀಲ್ ಅನ್ನು ಇನ್‌ಸ್ಟಾಗ್ರಾಮ್ ನಿರ್ಬಂಧಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ಗಂಭೀರವಾಗಿ ಆರೋಪಿಸಿದ್ದಾರೆ. ವಿಪಕ್ಷದ ಧ್ವನಿಯನ್ನು ಅಡಗಿಸಲು ಸರ್ಕಾರವು ಇಂತಹ ಕ್ರಮಗಳಿಗೆ ಮುಂದಾಗುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಲಕ್ಷಾಂತರ ವೀಕ್ಷಣೆ ಕಂಡಿದ್ದ ಪೋಸ್ಟ್ಗಳು ಇದೀಗ ಮಾಯವಾಗಿರುವುದು ರಾಜಕೀಯ ಸಂಘರ್ಷಕ್ಕೆ ನಾಂದಿ … Read more

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಹತ್ಯೆ ಕೇಸ್, ಪತ್ನಿ ಹಾಗೂ ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮದುವೆಯಾದ ಕೆಲ ವರ್ಷಗಳಲ್ಲೇ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರ ಜೊತೆ ಸೇರಿದ ಹತ್ಯೆ ಮಾಡಿದ್ದಳು. ಈ ಪ್ರಕರಣದ ತೀರ್ಪು ಇದೀಗ ಹೊರಬಿದ್ದಿದೆ.ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಕ್ರಮ ಸಂಬಂಧ ಹಲವು ಸಂಸಾರಗಳನ್ನು ಹಾಳು ಮಾಡಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುವ ಪತಿ ಅಥವಾ ಪತ್ನಿಯನ್ನು ಹತ್ಯೆ ಮಾಡಿದ ಹಲವು ಘಟನೆಗಳು ನಡೆದಿದೆ. ಹೀಗೆ ಶಿವಮೊಗ್ಗದ ಭದ್ರಾವತಿಯ ಪೇಪರ್‌ಟೌನ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿಯ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ ಘಟನೆ ನಡೆದಿತ್ತು. ಪತ್ನಿ … Read more

ಸಾನ್ವಿ ಸುದೀಪ್‌ ಬೆನ್ನ ಮೇಲೆ ಅರಳಿದ ಗಣಪತಿ ದೇವರ ಟ್ಯಾಟೂ.. ಇದಕ್ಕಾಗಿ ಹೋಗಿದ್ದು ಯಾವ ನಗರಕ್ಕೆ? ವಿಡಿಯೋ

ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್‌ ಅವರು ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಫುಲ್‌ ಬ್ಯುಸಿ ಇದ್ದಾರೆ. ಈಗಾಗಲೇ ಅವರ ಮಾರ್ಕ್‌ ಸಿನಿಮಾ ಬಿಗ್‌ ಸಕ್ಸಸ್‌ ಕಂಡಿದೆ. ಈ ಸಿನಿಮಾದಲ್ಲಿ ಸುದೀಪ್‌ ಅವರ ಮುದ್ದಿನ ಮಗಳು ಹಾಡೊಂದನ್ನು ಹಾಡಿದ್ದು ಇದು ಕೂಡ ದೊಡ್ಡ ಯಶಸ್ಸು ಕಂಡಿತು. ಹೈದರಾಬಾದ್‌ನಲ್ಲಿ ಶಿಕ್ಷಣ ಅಭ್ಯಾಸವನ್ನು ಮುಗಿಸಿರುವ ಸಾನ್ವಿ ಅವರು, ಮ್ಯೂಸಿಕ್‌, ಪೇಟಿಂಗ್‌ ಹಾಗೂ ಗಾಯನದಲ್ಲಿ ಅತ್ಯಂತ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದೀಗ ಕಿಚ್ಚ ಸುದೀಪ್‌ ಅವರ ಮಗಳು ಸಾನ್ವಿ ಅವರು ತಮ್ಮ ಬೆನ್ನಿನ ಮೇಲೆ ಗಣಪತಿ … Read more

ನಾದಿನಿಯ ಫೋಟೋ ತೆಗೆದಿದ್ದಕ್ಕೆ “ಬಾವ” ನೆಗೆ ಧಕ್ಕೆ – ಐವರ ಮೇಲೆ ಆಸಿಡ್ ದಾಳಿ.!

ಹುಬ್ಬಳ್ಳಿ ನಗರದ ತಾರಿಹಾಳದ ವಾಜಪೇಯಿ ನಗರದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಕೌಟುಂಬಿಕ ಜಗಳ ವಿಕೋಪಕ್ಕೆ ಹೋಗಿದ್ದು, ಪತಿಯೇ ತನ್ನ ಪತ್ನಿ ಹಾಗೂ ಆರು ತಿಂಗಳ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ಐವರ ಮೇಲೆ ಆಯಸಿಡ್ ದಾಳಿ ಮಾಡಿದ್ದಾನೆ. ಫೋಟೋ ವಿಚಾರಕ್ಕೆ ಶುರುವಾದ ಕಿರಿಕ್ ಆರೋಪಿ ಸುರೇಶ್ ಬೈಲ್ ಪತ್ತಾರ ವೃತ್ತಿಯಲ್ಲಿ ತಾಮ್ರ ಮತ್ತು ಹಿತ್ತಾಳೆ ಕೆಲಸ ಮಾಡುತ್ತಿದ್ದನು. ಮನೆಯಲ್ಲಿ ತನ್ನ ನಾದಿನಿಯರ ಫೋಟೋ ತೆಗೆಯುವ ವಿಚಾರವಾಗಿ ಸುರೇಶ್ ಹಾಗೂ ಆತನ ಪತ್ನಿ ರಾಜೇಶ್ವರಿ … Read more

ಆಸ್ತಿ ಹಪಾಹಪಿಗೆ ರಕ್ತ ಸಂಬಂಧಗಳ ಬಲಿ.! ತಾಯಿ, ತಮ್ಮನನ್ನೇ ಕೊಲೆಗೈದ ಪಾಪಿ ಮಗ.!

ಜಗತ್ತಿನಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದ ದಿನವೇ ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ದೆಹಲಿಯಲ್ಲಿ ಜರುಗಿದೆ. ಪ್ರೀತಿ ಮತ್ತು ಮಮತೆಯ ಸಂಕೇತವಾಗಿರಬೇಕಾದ ಮಗನೇ ಕ್ರೂರವಾಗಿ ವರ್ತಿಸಿ ತನ್ನ ತಾಯಿಯನ್ನೇ ಇಲ್ಲವಾಗಿಸಿದ್ದಾನೆ. ಹಣ ಮತ್ತು ಆಸ್ತಿಯ ಮೇಲಿನ ವ್ಯಾಮೋಹ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಈ ಭೀಕರ ಕೃತ್ಯದಲ್ಲಿ ಕೇವಲ ತಾಯಿ , ತನ್ನ ಒಡಹುಟ್ಟಿದ ತಮ್ಮನನ್ನೂ ಕೂಡ ಆರೋಪಿ ಹತ್ಯೆ ಮಾಡಿದ್ದಾನೆ. ಮನೆಯ ಹಂಚಿಕೆ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಕಿತ್ತಾಟ ನಡೆಯುತ್ತಿತ್ತು. ಈ ಕಲಹ ಅಂತಿಮವಾಗಿ … Read more