Borewell Subsidy Scheme : ನಮಸ್ಕಾರ ಸ್ನೇಹಿತರೇ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅರ್ಹ ಅಭ್ಯರ್ಥಿಗಳಿಗೆ ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ 8 ಯೋಜನೆಗಳಿಗೆ ಅರ್ಜಿಯನ್ನ ಆಹ್ವಾನಿಸಲಾಗಿದೆ. ನಿರುದ್ಯೋಗಿ, ರೈತರು ಹಾಗೂ ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬರಿಗೂ ಸಹಾಯವಾಗುವಂತೆ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಹ್ವಾನಿಸಲಾಗಿರುವ ಯೋಜನೆಗಳ ವಿವರ ಇಲ್ಲಿದೆ.
ಇದನ್ನೂ ಕೂಡ ಓದಿ : Tractor Subsidy : ಟ್ರಾಕ್ಟರ್ ಖರೀದಿಸಲು ರೈತರಿಗೆ 50% ಸಹಾಯಧನ..! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?
ಯಾವೆಲ್ಲಾ ಯೋಜನೆಗಳಿಗೆ ಅರ್ಜಿ ಆಹ್ವಾನ.?
- ಗಂಗಾ ಕಲ್ಯಾಣ ಯೋಜನೆ
- ಸ್ವಾವಲಂಬಿ ಸಾರಥಿ ಯೋಜನೆ
- ಸ್ವಯಂ ಉದ್ಯೋಗ ಸಾಲ ಯೋಜನೆ
- ಹೊಲಿಗೆ ಯಂತ್ರ ವಿತರಣೆ ಯೋಜನೆ
- ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ
- ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ
- ಅರಿವು ಶೈಕ್ಷಣಿಕ ಸಾಲ ಯೋಜನೆ
- ದೇವರಾಜ್ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ
ಇದನ್ನೂ ಕೂಡ ಓದಿ : ತಾಯಿ-ಮಗು ಸಹಾಯ ಹಸ್ತ ಯೋಜನೆ – ₹6,000 ರೂಪಾಯಿ ಆರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನ.! ಬೇಕಾಗುವ ದಾಖಲೆಗಳೇನು.?
ಗಂಗಾ ಕಲ್ಯಾಣ ಯೋಜನೆ (Ganga Kalyana Yojane) :-
ಗಂಗಾ ಕಲ್ಯಾಣ ಯೋಜನೆ (Ganga Kalyana Yojane) ವತಿಯಿಂದ ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವಂತಹ ರೈತರಿಗೆ ತಮ್ಮ ಜಮೀನಿನಲ್ಲಿ ನೀರಾವರಿ ಬೆಳೆಗಳನ್ನು ಬೆಳೆಯಲು ಸಹಾಯವಾಗುವಂತೆ ಬೋರ್ವೆಲ್ ಕೊರೆಸಿಕೊಳ್ಳಲು ಸಹಾಯಧನ ನೀಡಲು ಅರ್ಜಿಯನ್ನ ಅಹ್ವಾನಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ವೈಯಕ್ತಿಕ ಕೊಳವೆಬಾವಿ ಕೋರೆಸಿಕೊಳ್ಳಲು ₹3.75 ಲಕ್ಷ ರೂಪಾಯಿಯಿಂದ ₹4.75 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುವುದು. ಈ ಯೋಜನೆಯ ಹಣವನ್ನು ಜಿಲ್ಲೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ವಿಂಗಡಿಸಲಾಗಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಘಟಕ ವೆಚ್ಚ ₹4.75 ಲಕ್ಷ ನೀಡಲಾಗುವುದು. ಈ ಹಣದಲ್ಲಿ ವಿದ್ಯುತ್ ಸಂಪರ್ಕ ವೆಚ್ಚಕ್ಕೆ ₹75,000/- ರೂಪಾಯಿಯನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಲಾಗುವುದು.
ಇದನ್ನೂ ಕೂಡ ಓದಿ : PMJAY : ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ 5 ಲಕ್ಷ ರೂಪಾಯಿಯ ಬಂಪರ್ ಗಿಫ್ಟ್! ಇದನ್ನ ಪಡೆಯುವುದು ಹೇಗೆ.? ಸಂಪೂರ್ಣ ಮಾಹಿತಿ
ಈ ಮೇಲೆ ತಿಳಿಸಿರುವ ಜಿಲ್ಲೆಗಳ ರೈತರನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ರೈತರಿಗೆ ಘಟಕ ವೆಚ್ಚ ₹3.75 ಲಕ್ಷ ರೂಪಾಯಿ ಹಣವನ್ನು ನೀಡುತ್ತಿದ್ದು, ಈ ಜಿಲ್ಲೆಯವರಿಗೂ ಕೂಡ ವಿದ್ಯುತ್ ಸಂಪರ್ಕ ವೆಚ್ಚಕ್ಕೆ ₹75,000/- ರೂಪಾಯಿಯನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಲಾಗುವುದು. ಒಂದು ವೇಳೆ ಈ ಜಿಲ್ಲೆಯ ರೈತರಿಗೆ ಈ ಹಣದಲ್ಲಿ ಕೊಳವೆಬಾವಿ ಕರೆಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಹೆಚ್ಚಿನ 50 ಸಾವಿರ ಹಣವನ್ನು 1% ಬಡ್ಡಿ ದರದಲ್ಲಿ ಬ್ಯಾಂಕುಗಳಿಂದ ಸಾಲ ಮಂಜೂರು ಮಾಡಿಕೊಡಲಾಗುವುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ರೈತರು ಕನಿಷ್ಠ ಒಂದು ಎಕರೆ ಜಮೀನನ್ನು ಹೊಂದಿರಬೇಕು. ಹಾಗು ಇನ್ನುಳಿದ ಜಿಲ್ಲೆಯ ರೈತರು ಎರಡು ಎಕರೆ ಜಮೀನನ್ನು ಹೊಂದಿರಬೇಕು.
ಇದನ್ನೂ ಕೂಡ ಓದಿ : Shrama Shakthi Scheme : ಕರ್ನಾಟಕ ಶ್ರಮ ಶಕ್ತಿ ಯೋಜನೆ ಮೂಲಕ ₹50,000/- ಹಣ ಸಿಗಲಿದೆ.! ಅರ್ಜಿ ಸಲ್ಲಿಸುವುದು ಹೇಗೆ.?
ಈ ಯೋಜನೆಗೆ ಅರ್ಹರಿರುವ ಎಲ್ಲಾ ರೈತರು ಆಗಸ್ಟ್ 31, 2024ನೇ ತಾರೀಕಿನ ಒಳಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್ ಲೈನ್ ನಲ್ಲಿಯೇ ಅರ್ಜಿಯನ್ನ ಸಲ್ಲಿಸಬೇಕು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಐಷಾರಾಮಿ ಹೋಟೆಲ್ನಲ್ಲಿ ಇಬ್ಬರು ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ
- SBI Bank Updates : ‘ಎಸ್ ಬಿಐ’ ಗ್ರಾಹಕರಿಗೆ ಭರ್ಜರಿ ಸಿಹಿಸುದ್ಧಿ – ಇನ್ಮುಂದೆ ಕೇವಲ 15 ನಿಮಿಷದಲ್ಲೇ ‘ಸಾಲ’ ಲಭ್ಯ – ಸಂಪೂರ್ಣ ಮಾಹಿತಿ
- Driving Licence : ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಹೊಸ ಆದೇಶ ಜಾರಿಗೊಳಿಸಿದ ಸಂಚಾರ ಸಾರಿಗೆ ಇಲಾಖೆ! ಸಂಪೂರ್ಣ ಮಾಹಿತಿ
- ಬಿಪಿಎಲ್ ಕಾರ್ಡ್ ಇದ್ದವರಿಗೆ ₹30,000/- ರೂಪಾಯಿ ಸಹಾಯಧನ.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?
- Pension Scheme : ಈ ಸರ್ಕಾರಿ ಯೋಜನೆಯಡಿ ಹೂಡಿಕೆ ಮಾಡಿದ್ರೆ ಸಿಗಲಿದೆ ಪ್ರತಿ ತಿಂಗಳು ₹5,000/- ರೂಪಾಯಿ ಪಿಂಚಣಿ.! ಸಂಪೂರ್ಣ ಮಾಹಿತಿ
- Anugraha Scheme : ಅನುಗ್ರಹ ಯೋಜನೆಯಡಿ ಪ್ರತಿ ಮೇಕೆಗೆ ₹5,000/- ರೂಪಾಯಿ ಪರಿಹಾರ.! ಬೇಕಾಗುವ ದಾಖಲೆಗಳೇನು.?
- Post Office : ಪೋಸ್ಟ್ ಆಫೀಸ್ ಗ್ರಾಹಕರಿಗೆ ಸಿಹಿಸುದ್ಧಿ.! ಇನ್ಮುಂದೆ ಆ ಟೆನ್ಷನ್ ಇರೋದಿಲ್ಲ! ಸಂಪೂರ್ಣ ಮಾಹಿತಿ
- ದಿನ ಭವಿಷ್ಯ (08-08-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- Loan Scheme For Business : ಸ್ವಂತ ಬ್ಯುಸಿನೆಸ್ ಶುರು ಮಾಡುವುದಕ್ಕೆ 2 ಲಕ್ಷದವರೆಗೂ ಸಿಗಲಿದೆ ಸಾಲ! ಇಂದೇ ಅರ್ಜಿ ಸಲ್ಲಿಸಿ
- State Bank Updates : ಸ್ಟೇಟ್ ಬ್ಯಾಂಕಿನಲ್ಲಿ ಅತಿ ಹೆಚ್ಚು ಬಡ್ಡಿ ನೀಡುವ ಎಫ್ಡಿ ಯೋಜನೆ ಶುರು! ಸಂಪೂರ್ಣ ಮಾಹಿತಿ ಇಲ್ಲಿದೆ
- Post Office Scheme : ಅಂಚೆ ಇಲಾಖೆಯ ಈ ಯೋಜನೆಯಡಿ ರಿಸ್ಕ್ ಇಲ್ಲದೇ 12 ಲಕ್ಷ ರೂ. ಗಳಿಸಿ.!
- PM Shram Yogi Mandhan : ರೈತರಿಗೆ ಸಿಹಿಸುದ್ಧಿ.! ಈ ಯೋಜನೆಯಡಿ ಕೇಂದ್ರದಿಂದ ಸಿಗಲಿದೆ ಪ್ರತೀ ತಿಂಗಳು ₹3,000/- ರೂಪಾಯಿ ಪಿಂಚಣಿ – ಸಂಪೂರ್ಣ ಮಾಹಿತಿ
- Subsidy Scheme : ಕೇಂದ್ರ ಸರ್ಕಾರದ ಈ ಯೋಜನೆಗಳಡಿ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಿಗಲಿವೆ ಸಾಲ ಸೌಲಭ್ಯಗಳು.!
- SBI ಬ್ಯಾಂಕ್ ನಲ್ಲಿ ಖಾತೆ ಇದ್ದರೆ ತಿಂಗಳಿಗೆ ಮನೆಯಲ್ಲೇ ಕಳಿತು 30 ರಿಂದ 50 ಸಾವಿರ ಹಣ ಗಳಿಸುವ ಸುವರ್ಣಾವಕಾಶ.!
- 10 ಲಕ್ಷದವರೆಗೂ ಸಾಲ ಪಡೆದುಕೊಳ್ಳುವ ಭಾಗ್ಯ..! ಮುದ್ರಾ ಯೋಜನೆಯಲ್ಲಿ ನೀವು ಸ್ವಂತ ಉದ್ಯೋಗಕ್ಕಾಗಿ ಸಾಲ ಪಡೆದುಕೊಳ್ಳಿ.!
- Dina bhavishya : ಇಂದಿನ 12 ರಾಶಿಗಳ ಭವಿಷ್ಯ : ಅದೃಷ್ಟ, ಹಣ, ಆರೋಗ್ಯದ ಸಂಪೂರ್ಣ ಮಾಹಿತಿ
- ಮದುವೆ ಮಾಡಿಕೊಟ್ಟ ಬಳಿಕ ಎಷ್ಟು ವರ್ಷದೊಳಗೆ ಹೆಣ್ಣು ಆಸ್ತಿ ಕೇಳಬಹುದು.? ಇಲ್ಲಿದೆ ಹೊಸ ಬದಲಾವಣೆ – Property Rules
- ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದು ಹೇಗೆ.? ಮಕ್ಕಳಿಗೆ ಹಕ್ಕು ಬರುವುದು ಹೇಗೆ.? ಮಹತ್ವದ ಕೋರ್ಟ್ ತೀರ್ಪಿನ ಮಾಹಿತಿ ಇಲ್ಲಿದೆ
- 1 ಎಕರೆಗೆ ಎಷ್ಟು ಗುಂಟೆ.? ಜಮೀನು ಅಳೆಯುವ ಮುನ್ನ ಇಲ್ಲಿದೆ ಪಕ್ಕಾ ಲೆಕ್ಕಾಚಾರ.!
- ತಾತನಿಂದ ತಂದೆಗೆ ಬಂದ ಆಸ್ತಿಯೆಲ್ಲವೂ ಪಿತ್ರಾರ್ಜಿತವಲ್ಲ; ಮಕ್ಕಳಿಗೆ ಜನ್ಮಸಿದ್ಧ ಹಕ್ಕಿಲ್ಲ ಎಂದ ಹೈಕೋರ್ಟ್



















