Crop Insurance : ನಮಸ್ಕಾರ ಸ್ನೇಹಿತರೇ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ(Prdhana Manthri Fasal Bima Yojana) ಅರ್ಹ ಫಲಾನುಭವಿ ರೈತರಿಗೆ ದೊರೆಯುವ ಬೆಳೆ ವಿಮೆ ಪರಿಹಾರದ ಹಣ ಈಗಾಗಲೇ ಬಿಡುಗಡೆಯಾಗಿದ್ದು, ಕೆಲ ರೈತರು ಸರಕಾರದಿಂದ ಹಣ ಪಡೆದು ಬರಗಾಲದಿಂದ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಪಡೆದಿದ್ದಾರೆ. ಇನ್ನೂ ಬೆಳೆ ವಿಮೆ ಪರಿಹಾರ ಹಣ ಸಿಗದ ಅರ್ಹ ರೈತರು ಅರ್ಜಿ ಸಲ್ಲಿಸುವಾಗ ಮಾಡಿದ ಸಣ್ಣ ಪುಟ್ಟ ತಪ್ಪುಗಳಿಂದ ಹೆಚ್ಚಿನ ರೈತರು ವಿಮಾ ಮೊತ್ತದಿಂದ ವಂಚಿತರಾಗಿದ್ದಾರೆ. ನಿಮಗೂ ಕೂಡ ಬೆಳೆ ವಿಮೆ ಪರಿಹಾರ ಸಿಗದೇ ಇದ್ದರೆ, ನೀವೇನು ತಪ್ಪು ಮಾಡಿದ್ದೀರಿ.? ಹಾಗು ನೀವು ಮಾಡಿದ ತಪ್ಪಿಗೆ ಪರಿಹಾರ ಏನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Housing Scheme : ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.! ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಬಿಡುಗಡೆ.!
ಪ್ರತಿಯೊಬ್ಬ ಅರ್ಹ ರೈತರು ಬೆಳೆಗೆ ವಿಮೆ ಮಾಡಿದ ನಂತರ ಅರ್ಜಿ ಅನುಮೋದನೆ ಪ್ರಕ್ರಿಯೆ ಯಾವ ಹಂತದಲ್ಲಿದೆ.? ವಿಮಾ ಹಣವನ್ನು ಯಾವಾಗ ಠೇವಣಿ ಮಾಡಲಾಗುತ್ತದೆ.? ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿಯಲು ನೀವು ಅಧೀಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಮತ್ತು ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ತಿಳಿಯಲು ಒಂದೆರಡು ತಿಂಗಳಿಗೊಮ್ಮೆ ಮೊಬೈಲ್ನಲ್ಲಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ನೀವು ಸಲ್ಲಿಸಿರುವ ಅರ್ಜಿಯನ್ನ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದಾಗಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಕೂಡಲೇ ಇದನ್ನು ಪರಿಶೀಲಿಸಿ ಸರಿಪಡಿಸಿದರೆ ನಿಮಗೆ ವಿಮೆ ಹಣ ಪಡೆಯಲು ಸಹಕಾರಿಯಾಗುತ್ತದೆ.
ಮೊದಲು ನೀವು ಬೆಳೆ ವಿಮೆ ವಿವರಗಳು ಎಂಬ ಅಧಿಕೃತ ವೆಬ್ಸೈಟ್ ಅಥವಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ(Prdhana Manthri Fasal Bima Yojana) ಅಧೀಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಲಭ್ಯವಿರುವ ಲಿಂಕ್ ಅನ್ನು ನೀವು ಕ್ಲಿಕ್ ಮಾಡಿದ ತಕ್ಷಣ ವಿಮಾ ವರ್ಷ ಮತ್ತು ಋತುವನ್ನು ಆಯ್ಕೆ ಮಾಡಲು ನಿಮಗೆ ತೋರಿಸಲಾಗುತ್ತದೆ. ಅಲ್ಲಿ ನೀವು 2023-2024 ಮತ್ತು ಖಾರಿಫ್ ಋತುವನ್ನು ನಮೂದಿಸಬೇಕು. ವರ್ಷವನ್ನು ನಮೂದಿಸಿ ಮತ್ತು ಮುಂದಿನ ಬಟನ್ ಕ್ಲಿಕ್ ಮಾಡಿ, ಎರಡನೇ ಪುಟದಲ್ಲಿ ರೈತರ ಕಾಲಮ್ ಲಭ್ಯವಿರುತ್ತದೆ. ಅಲ್ಲಿ ಕ್ರಾಪ್ ಇನ್ಸೂರೆನ್ಸ್(Crop Insurance) ಡಿಟೇಲ್ಸ್ ಆನ್ ಸರ್ವೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆಯ ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ಸಂಖ್ಯೆಯನ್ನು ನಮೂದಿಸಿ ಮತ್ತು ಚೆಕ್ ಸ್ಟೇಟಸ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಕೂಡ ಓದಿ : PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.
ನಂತರ ವಿಮಾ ಅಪ್ಲಿಕೇಶನ್ ಸಂಖ್ಯೆ ಮತ್ತು ಕ್ಯಾಪ್ಟಾ ಕೋಡ್ ಅನ್ನು ನಮೂದಿಸಲು ತೋರಿಸಲಾಗುತ್ತದೆ. ನೀವು ಅಲ್ಲಿ ಕೇಳಿರುವ ಎರಡನ್ನೂ ಸರಿಯಾದ ಕ್ರಮದಲ್ಲಿ ನಮೂದಿಸಿದರೆ ನಿಮ್ಮ ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ವಿವರಗಳನ್ನು ಪ್ರಕಟಿಸಲಾಗುತ್ತದೆ. ಎರಡರಲ್ಲಿರುವ ಮಾಹಿತಿಯು ಹೊಂದಾಣಿಕೆಯಾಗಿದೆಯೇ ಎನ್ನುವುದನ್ನ ನೀವು ಪರಿಶೀಲಿಸಿಕೊಳ್ಳಿ.
ಕೆಳಗೆ ನೀಡಿರುವ ಮಾಹಿತಿ ತಪ್ಪಾಗಿದ್ದರೆ ಅರ್ಹ ಫಲಾನುಭವಿ ರೈತರಿಗೆ ಬೆಳೆ ವಿಮೆ ಹಣ ಸಿಗುವುದಿಲ್ಲ.!
ಬೆಳೆ ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹ ಫಲಾನುಭವಿ ರೈತರ ಹೆಸರು ಆಧಾರ್ ಕಾರ್ಡ್(Aadhar Card) ಮತ್ತು ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಒಂದೇ ಆಗಿರಬೇಕು. ಇದರಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸ ಕಂಡು ಬಂದರೂ ಕೂಡ ಬೆಳೆ ಪರಿಹಾರ ಹಣ ರೈತರಿಗೆ ಸಿಗುವುದಿಲ್ಲ. ಮತ್ತು ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಹಾಗಾದರೆ ಎರಡರಲ್ಲಿನ ಹೆಸರು ಹೊಂದಾಣಿಕೆಯಾಗಿದೆಯೇ.? ಪರಿಶೀಲಿಸಿಕೊಳ್ಳಿ. ತಪ್ಪಿದ್ದಲ್ಲಿ ಕೂಡಲೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ.
ಇದನ್ನೂ ಕೂಡ ಓದಿ : PMFBY Scheme : ಈ ಯೋಜನೆ ಅಡಿಯಲ್ಲಿ 88,000 ಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ.!
ರೈತರು ಪಾವತಿಸಿರುವ ಬೆಳೆ ವಿಮೆ ವಿವರವನ್ನೂ ಬೆಳೆ ಸಮೀಕ್ಷೆಯಲ್ಲಿ ಸೇರಿಸಿ ಒಂದಕ್ಕೊಂದು ತಾಳೆ ಹಾಕಬೇಕು. ಹೀಗಾಗಿ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ವಿವರ ತಾಳೆಯಾಗದಿದ್ದರೆ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುವುದಿಲ್ಲ. ಉದಾಹರಣೆಗೆ ಬೆಳೆ ವಿಮೆ ವಿವರದಲ್ಲಿ ‘ಜೋಳ’ ಬೆಳೆಯುವುದಾಗಿ ನಮೂದಿಸಿದ್ದರೂ ಬೆಳೆ ಸಮೀಕ್ಷೆ ಮಾಡುವವರು ‘ರಾಗಿ’ ಎಂದು ತಪ್ಪಾಗಿ ನಮೂದಿಸಿದ್ದರೆ ಕೂಡ ತಾಂತ್ರಿಕ ದೋಷವಿದ್ದು, ಹಣ ಅರ್ಹ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ.
ಇಂತಹ ಸಂದರ್ಭದಲ್ಲಿ ಅರ್ಹ ಫಲಾನುಭವಿ ರೈತರು ಕೂಡಲೇ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ. ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್ ಸಲ್ಲಿಸಿ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆಗೆ ತಿದ್ದುಪಡಿ ಮಾಡಿಸಿಕೊಳ್ಳಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಆರೆಸ್ಸೆಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ; ಪ್ರಿಯಾಂಕ್ ಖರ್ಗೆ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
- ಕೇವಲ 40 ನಿಮಿಷದಲ್ಲೇ ಕೂದಲು ಉದುರುವ ಸಮಸ್ಯೆಗೆ ಮುಕ್ತಿ ನೀಡುತ್ತೆ ಈ ಎಲೆ..! ಇಂದೇ ಟ್ರೈ ಮಾಡಿ
- ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಒಂದೆರಡು ಬಾರಿ ಡ್ರಿಂಕ್ಸ್ ಮಾಡಿದರೂ, ಲಿವರ್ ಗೆ ಸಮಸ್ಯೆ ಆಗುತ್ತಾ.?
- ಯಾರ ಮನೆ ಬಾಗಿಲಿಗೆ ಯಾರು ಹೋಗಿದ್ದರು ಎಂಬುದು ನನಗೂ ಗೊತ್ತು: ಎಚ್ಡಿಕೆ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು!
- ‘ವಿಜಯೇಂದ್ರನನ್ನು ಒದ್ದು ಬಿಸಾಕಿ’ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಲೀಕ್, ನೋ ಕಮೆಂಟ್ಸ್ ಎಂದ ಡಿವಿಎಸ್!!
- ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ
- ‘ನಮ್ಮ ರಾಜಕೀಯ ಮುಗಿಯಿತು.. ಚುನಾವಣಾ ರಾಜಕೀಯದ ಅಂತ್ಯದ ಬಗ್ಗೆ ಮೈಸೂರಲ್ಲಿ ಮುನ್ಸೂಚನೆ ನೀಡಿದ್ರಾ ಮಾಜಿ ಸಿಎಂ ಸಿದ್ದರಾಮಯ್ಯ!
- ಹೋಟೆಲ್ನಲ್ಲಿ ಕೊನೆಯ ಊಟ ಮಾಡಿ ನದಿಗೆ ಹಾರಿದ ದಂಪತಿ, ಇಬ್ಬರು ಮಕ್ಕಳು; ಬಡತನ ತಾಳಲಾರದೆ ಒಂದೇ ಕುಟುಂಬದ ನಾಲ್ವರ ಸಾಮೂಹಿಕ ಆತ್ಮಹತ್ಯೆ!
- ಗರ್ಭದಲ್ಲಿರೋ ಮಗುವಿಗೆ DNA ಟೆಸ್ಟ್ ಮಾಡಿಸಲು ಗಂಡನ ಪಟ್ಟು; ಮನನೊಂದು 23 ವರ್ಷದ ಗರ್ಭಿಣಿ ಆತ್ಮಹತ್ಯೆ!
- 10 ಕೆಜಿ ತೂಕ ಇಳಿಸಿಕೊಳ್ಳಲು ಜೀರಿಗೆ ನೀರನ್ನ ಎಷ್ಟು ದಿನಗಳವರೆಗೆ ಕುಡಿಯಬೇಕು.?
- ರಕ್ತದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಕಿಡ್ನಿ ಹಾಗೂ ಮೂಳೆಗಳಿಗೆ ಹಾನಿ ಜಾಸ್ತಿಯಂತೆ!
- ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ! SIR ಪರಿಣಾಮ ಏನೆಂದು ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳದ ಫಲಿತಾಂಶದಲ್ಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ
- ಕಾರಿನಲ್ಲಿ ನಾಡಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸ್ಪೋಟಕ ವಿಚಾರ ಬಿಚ್ಚಿಟ್ಟ ಸಂತ್ರಸ್ತೆ.!
- ಹರ್ನಿಯಾ : ಹೊಟ್ಟೆ ಭಾಗದಲ್ಲಿ ನೋವು, ತೊಡೆಸಂಧಿಯ ಉಬ್ಬು, ಹರ್ನಿಯಾ ನಡುವಿನ ವ್ಯತ್ಯಾಸ ತಿಳಿಯಿರಿ
- ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಆಗುತ್ತಾ? ವೈದ್ಯರೇ ಬಿಚ್ಚಿಟ್ಟ ಸತ್ಯವಿದು..
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | Health Tips
- ಅಂಬಾನಿ ನೀಡಿದ ₹900 ಕೋಟಿ ದೇಣಿಗೆಯ ಲೆಕ್ಕ ನೀಡಿ: ರಾಮಮಂದಿರ ಟ್ರಸ್ಟ್ʼಗೆ ಬಿ.ಕೆ. ಹರಿಪ್ರಸಾದ್ ಪ್ರಶ್ನೆ
- ಭಾಮೈದುನ ಮೇಲಿನ ದಾಳಿ ಸತ್ಯಾಂಶ ತಿಳಿಯಲು 6 ತಿಂಗಳು ಬೇಕು : ಸಚಿವ ಸತೀಶ್ ಜಾರಕಿಹೊಳಿ
- ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ
- ಮಗುವಿನ ಅಳುವಿಗೆ ಬೇಸತ್ತು ಕತ್ತು ಸೀಳಿ ಹೆತ್ತ ಕಂದನನ್ನೇ ಹತ್ಯೆಗೈದ ತಾಯಿ! ಬಳಿಕ ತನ್ನ ಗಂಟಲು ಸೀಳಿ ಆತ್ಮಹತ್ಯೆಗೆ ಯತ್ನ



















