Drought Relief Amount : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ 16 ಲಕ್ಷ ರೈತರಿಗೆ ಹೆಚ್ಚುವರಿ ₹3,000 ರೂಪಾಯಿ ಹಣ ಬಿಡುಗಡೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಹೌದು, ಯಾವ ಯಾವ ರೈತರಿಗೆ ಹಣ ಜಮೆಯಾಗಿದೆ.? ಯಾವ ಜಿಲ್ಲೆಯ ರೈತರಿಗೆ ಜಮಾ ಆಗಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ರಾಜ್ಯ ಸರಕಾರ ಬರ ಪರಿಹಾರವಾಗಿ 16 ಲಕ್ಷ ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿಗೆ ತಲಾ ₹3,000 ರೂಪಾಯಿ ನೀಡಲು ನಿರ್ಧರಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಹೇಳಿದ್ದಾರೆ. ರಾಜ್ಯದಲ್ಲಿ ಬರ ಪರಿಹಾರ ಪಟ್ಟಿಯಿಂದ ಹೊರಗುಳಿದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ನೀಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದ ಬರ ಪರಿಹಾರ ಪಟ್ಟಿಯಲ್ಲಿ ಸೇರಿದ ಅನೇಕ ರೈತರು ಹೊರಗುಳಿದಿದ್ದಾರೆ. ಅಂತಹ ಹಿಡುವಳಿದಾರರಿಗೆ ಪರಿಹಾರ ಸಿಗಲಿದೆ.
ಇದನ್ನೂ ಕೂಡ ಓದಿ : SBI Bank Updates : ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ | ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ನೋಡಿ | ಬ್ಯಾಂಕ್ ನಿಂದ ಬಂಪರ್ ಗಿಫ್ಟ್
ಪಟ್ಟಿಯಲ್ಲಿ ಸೇರದೇ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ವಿತರಿಸಲಾಗುವುದು. ಅಷ್ಟೇ ಅಲ್ಲ, 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.65 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದಲ್ಲದೆ ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ₹3,000 ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ರೈತರಿಗೆ ಒಟ್ಟಾರೆ ₹460 ಕೋಟಿ ರೂಪಾಯಿ ಪರಿಹಾರ ರೂಪದಲ್ಲಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎಸ್ ಡಿಆರ್ ಎಫ್(SDRF) ಹಾಗು ಎನ್ ಡಿಆರ್ ಎಫ್(NDRF) ಎರಡರಿಂದಲೂ ರೈತರಿಗೆ ಹಣ ಪಾವತಿಸಲಾಗುವುದು ಮತ್ತು ರಾಜ್ಯ ಸರ್ಕಾರದ ಹಣವನ್ನು ಸಹ ಪಾವತಿಸಲಾಗುವುದು. ಮೊದಲ ಬಾರಿಗೆ ಇದು ಸುಮಾರು ₹460 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 240 ತಾಲೂಕುಗಳಲ್ಲಿ ಯಾರು 223 ತಾಲೂಕುಗಳನ್ನ ಬರ ಪೀಡಿತ ಎಂದು ಘೋಷಿಸಿದ್ದು, ಅವುಗಳಲ್ಲಿ 196 ತೀವ್ರ ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ.
ಬರ ಪರಿಹಾರವಾಗಿ ರಾಜ್ಯದ ರೈತರ ಖಾತೆಗಳಿಗೆ 4300 ಕೋಟಿ ರೂಪಾಯಿ ಜಮಾ ಆಗಲಿದೆ ಎಂದು ತಿಳಿಸಿದರು. ಸಚಿವರು ಈ ಪ್ರಕ್ರಿಯೆ ಪೂರ್ಣಗೊಳ್ಳಲು 20 ದಿನ ಬೇಕಾಗಬಹುದು ಮತ್ತು ಈಗಾಗಲೇ 32 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗೆ ಸುಮಾರು 3000 ಕೋಟಿ ರೂಪಾಯಿ ಜಮಾ ಮಾಡಲಾಗಿದೆ ಎಂದು ಅವರು ತಿಳಿಸಿದರು. ಸುಪ್ರೀಂ ಕೋರ್ಟ್ಗೆ ಹೋಗಿ ಕಾನೂನು ಹೋರಾಟ ನಡೆಸಿ ಇಲ್ಲಿಯವರೆಗೆ ಸುಮಾರು 3454 ಕೋಟಿ ರೂ ಬರ ಪರಿಹಾರ ಬಂದಿದ್ದು, ಕಳೆದ ಸೋಮವಾರದಿಂದಲೇ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
ಇದನ್ನೂ ಕೂಡ ಓದಿ : Crop Insurance : ನಿಮಗೆ ಬೆಳೆ ಪರಿಹಾರ ಸಿಕಿದ್ಯಾ.? ಆಧಾರ್ ಕಾರ್ಡ್, ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ
ಇದುವರೆಗೆ 32.12 ಲಕ್ಷ ರೈತರ ಖಾತೆಗೆ ಪರಿಹಾರ ಹಣ ಸಂಪೂರ್ಣವಾಗಿ ಜಮಾ ಮಾಡಲಾಗಿದೆ. ಮೊದಲ ಮತ್ತು ಎರಡನೇ ಕಂತುಗಳು ಇದುವರೆಗೆ 3000 ಕೋಟಿಗಳನ್ನ ನೇರ ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಹೇಳಿದರು. ಸುಮಾರು 15 ಲಕ್ಷ ರೈತರ ಖಾತೆಗಳಿಗೆ ಎರಡನೇ ಕಂತಿನ ಪರಿಹಾರ ಧನ ಇನ್ನೂ ಚರ್ಚೆಯಾಗಿಲ್ಲ ಎಂದು ತಿಳಿಸಿದರು. ಅವರು ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳಿಂದ ಪರಿಶೀಲನೆ ಹಂತದಲ್ಲಿದೆ. ಒಂದೊಮ್ಮೆ ಅದನ್ನು ತೆರವುಗೊಳಿಸಿದರೆ 33 ಲಕ್ಷಕ್ಕೂ ಅಧಿಕ ರೈತರ ಖಾತೆಗಳಿಗೆ ಪರಿಹಾರ ಹೋಗುತ್ತಿತ್ತು ಎಂದು ಅವರು ತಿಳಿಸಿದರು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಐಷಾರಾಮಿ ಹೋಟೆಲ್ನಲ್ಲಿ ಇಬ್ಬರು ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ
- SBI Bank Updates : ‘ಎಸ್ ಬಿಐ’ ಗ್ರಾಹಕರಿಗೆ ಭರ್ಜರಿ ಸಿಹಿಸುದ್ಧಿ – ಇನ್ಮುಂದೆ ಕೇವಲ 15 ನಿಮಿಷದಲ್ಲೇ ‘ಸಾಲ’ ಲಭ್ಯ – ಸಂಪೂರ್ಣ ಮಾಹಿತಿ
- Driving Licence : ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಹೊಸ ಆದೇಶ ಜಾರಿಗೊಳಿಸಿದ ಸಂಚಾರ ಸಾರಿಗೆ ಇಲಾಖೆ! ಸಂಪೂರ್ಣ ಮಾಹಿತಿ
- ಬಿಪಿಎಲ್ ಕಾರ್ಡ್ ಇದ್ದವರಿಗೆ ₹30,000/- ರೂಪಾಯಿ ಸಹಾಯಧನ.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?
- Pension Scheme : ಈ ಸರ್ಕಾರಿ ಯೋಜನೆಯಡಿ ಹೂಡಿಕೆ ಮಾಡಿದ್ರೆ ಸಿಗಲಿದೆ ಪ್ರತಿ ತಿಂಗಳು ₹5,000/- ರೂಪಾಯಿ ಪಿಂಚಣಿ.! ಸಂಪೂರ್ಣ ಮಾಹಿತಿ
- Anugraha Scheme : ಅನುಗ್ರಹ ಯೋಜನೆಯಡಿ ಪ್ರತಿ ಮೇಕೆಗೆ ₹5,000/- ರೂಪಾಯಿ ಪರಿಹಾರ.! ಬೇಕಾಗುವ ದಾಖಲೆಗಳೇನು.?
- Post Office : ಪೋಸ್ಟ್ ಆಫೀಸ್ ಗ್ರಾಹಕರಿಗೆ ಸಿಹಿಸುದ್ಧಿ.! ಇನ್ಮುಂದೆ ಆ ಟೆನ್ಷನ್ ಇರೋದಿಲ್ಲ! ಸಂಪೂರ್ಣ ಮಾಹಿತಿ
- ದಿನ ಭವಿಷ್ಯ (08-08-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- Loan Scheme For Business : ಸ್ವಂತ ಬ್ಯುಸಿನೆಸ್ ಶುರು ಮಾಡುವುದಕ್ಕೆ 2 ಲಕ್ಷದವರೆಗೂ ಸಿಗಲಿದೆ ಸಾಲ! ಇಂದೇ ಅರ್ಜಿ ಸಲ್ಲಿಸಿ
- State Bank Updates : ಸ್ಟೇಟ್ ಬ್ಯಾಂಕಿನಲ್ಲಿ ಅತಿ ಹೆಚ್ಚು ಬಡ್ಡಿ ನೀಡುವ ಎಫ್ಡಿ ಯೋಜನೆ ಶುರು! ಸಂಪೂರ್ಣ ಮಾಹಿತಿ ಇಲ್ಲಿದೆ
- Post Office Scheme : ಅಂಚೆ ಇಲಾಖೆಯ ಈ ಯೋಜನೆಯಡಿ ರಿಸ್ಕ್ ಇಲ್ಲದೇ 12 ಲಕ್ಷ ರೂ. ಗಳಿಸಿ.!
- PM Shram Yogi Mandhan : ರೈತರಿಗೆ ಸಿಹಿಸುದ್ಧಿ.! ಈ ಯೋಜನೆಯಡಿ ಕೇಂದ್ರದಿಂದ ಸಿಗಲಿದೆ ಪ್ರತೀ ತಿಂಗಳು ₹3,000/- ರೂಪಾಯಿ ಪಿಂಚಣಿ – ಸಂಪೂರ್ಣ ಮಾಹಿತಿ
- Subsidy Scheme : ಕೇಂದ್ರ ಸರ್ಕಾರದ ಈ ಯೋಜನೆಗಳಡಿ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಿಗಲಿವೆ ಸಾಲ ಸೌಲಭ್ಯಗಳು.!
- SBI ಬ್ಯಾಂಕ್ ನಲ್ಲಿ ಖಾತೆ ಇದ್ದರೆ ತಿಂಗಳಿಗೆ ಮನೆಯಲ್ಲೇ ಕಳಿತು 30 ರಿಂದ 50 ಸಾವಿರ ಹಣ ಗಳಿಸುವ ಸುವರ್ಣಾವಕಾಶ.!
- 10 ಲಕ್ಷದವರೆಗೂ ಸಾಲ ಪಡೆದುಕೊಳ್ಳುವ ಭಾಗ್ಯ..! ಮುದ್ರಾ ಯೋಜನೆಯಲ್ಲಿ ನೀವು ಸ್ವಂತ ಉದ್ಯೋಗಕ್ಕಾಗಿ ಸಾಲ ಪಡೆದುಕೊಳ್ಳಿ.!
- Dina bhavishya : ಇಂದಿನ 12 ರಾಶಿಗಳ ಭವಿಷ್ಯ : ಅದೃಷ್ಟ, ಹಣ, ಆರೋಗ್ಯದ ಸಂಪೂರ್ಣ ಮಾಹಿತಿ
- ಮದುವೆ ಮಾಡಿಕೊಟ್ಟ ಬಳಿಕ ಎಷ್ಟು ವರ್ಷದೊಳಗೆ ಹೆಣ್ಣು ಆಸ್ತಿ ಕೇಳಬಹುದು.? ಇಲ್ಲಿದೆ ಹೊಸ ಬದಲಾವಣೆ – Property Rules
- ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದು ಹೇಗೆ.? ಮಕ್ಕಳಿಗೆ ಹಕ್ಕು ಬರುವುದು ಹೇಗೆ.? ಮಹತ್ವದ ಕೋರ್ಟ್ ತೀರ್ಪಿನ ಮಾಹಿತಿ ಇಲ್ಲಿದೆ
- 1 ಎಕರೆಗೆ ಎಷ್ಟು ಗುಂಟೆ.? ಜಮೀನು ಅಳೆಯುವ ಮುನ್ನ ಇಲ್ಲಿದೆ ಪಕ್ಕಾ ಲೆಕ್ಕಾಚಾರ.!
- ತಾತನಿಂದ ತಂದೆಗೆ ಬಂದ ಆಸ್ತಿಯೆಲ್ಲವೂ ಪಿತ್ರಾರ್ಜಿತವಲ್ಲ; ಮಕ್ಕಳಿಗೆ ಜನ್ಮಸಿದ್ಧ ಹಕ್ಕಿಲ್ಲ ಎಂದ ಹೈಕೋರ್ಟ್



















