Crop Insurance : ನಿಮಗೆ ಬೆಳೆ ಪರಿಹಾರ ಸಿಕಿದ್ಯಾ.? ಆಧಾರ್ ಕಾರ್ಡ್, ಮೊಬೈಲ್ ನಂಬ‌ರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ

Crop Insurance : ನಮಸ್ಕಾರ ಸ್ನೇಹಿತರೇ, 2023-24ನೇ ಸಾಲಿನ ಹಿಂಗಾರು ಬೆಳೆವಿಮೆಯ (Crop Insurance) ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

2023-22ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಗಳು ಬಾರದೆ ರಾಜ್ಯದ ರೈತರಿಗೆ ಅತ್ಯಂತ ಸಂಕಷ್ಟಕ್ಕೀಡು ಮಾಡಲಾಗಿದೆ. ಇದರಿಂದ ರಾಜ್ಯದ ರೈತರು ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದು, 2024ನೇ ವರ್ಷದ ಮೊದಲ ತಿಂಗಳದಿಂದ ರಾಜ್ಯದಲ್ಲಿ ಅತ್ಯಂತ ಭೀಕರ ಬರಗಾಲ ಎದುರಾಗಿದೆ.

ಇದನ್ನೂ ಕೂಡ ಓದಿ : PM Vishwakarma : ಕೇಂದ್ರದ ಈ ಯೋಜನೆಯಲ್ಲಿ ನಿಮಗೂ ಸಿಗಲಿದೆ 3 ಲಕ್ಷ ರೂಪಾಯಿ ಸಾಲ. ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

2022-23ನೇ ಸಾಲಿನ ಕೃಷಿ ಚಟುವಟಿಕೆಗಳು ಅಷ್ಟೇನು ಹೇಳಿಕೊಳ್ಳುವಷ್ಟು ಬೆಳೆ ಬಾರದಿದ್ದರಿಂದ ದವಸ ಧಾನ್ಯಗಳ ಮತ್ತು ತರಕಾರಿಗಳ ಬೆಲೆ ಗಗನಕ್ಕೇರುವಂತಾಗಿದೆ. ಅಲ್ಲದೆ ಕೊಳವೆ ಬಾವಿಗಳು ಮತ್ತು ತೆರೆದ ಬಾವಿಗಳಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿತ ಕಂಡಿದ್ದು, ಕೃಷಿ ನೀರಾವರಿ ಮಾಡಲು ಅಸಾಧ್ಯವಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರಗಳಲ್ಲಿ ಹಾಗು ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯುವ ನೀರಿಗೂ ಸಹ ಬರ ಎದುರಾಗಿದೆ.

2023ನೇ ಸಾಲಿನ ಮುಂಗಾರು ಮಳೆಯಾಶ್ರಿತ, ಖಾರೀಫ್(kharif) ಬೆಳೆಗೆ, ಬೆಳೆ ವಿಮೆ(Crop Insurance) ಈಗಾಗಲೇ ಒಂದು ಹಂತದಲ್ಲಿ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಹಣವನ್ನು ಜಮಾ ಮಾಡಲಾಗಿದೆ.

ಇದನ್ನೂ ಕೂಡ ಓದಿ : SBI Bank Updates : ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ | ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ನೋಡಿ | ಬ್ಯಾಂಕ್ ನಿಂದ ಬಂಪರ್ ಗಿಫ್ಟ್

ಹಿಂಗಾರು ಬೆಳೆಗಳಾದ ಹುರುಳಿ, ಕಡಲೆ, ಜೋಳ, ಇವೆಲ್ಲವಕ್ಕೂ ಹಿಂಗಾರು ಬೆಳೆ ವಿಮೆ(Crop Insurance) ತುಂಬಲು ಸರ್ಕಾರ ಸುತ್ತೋಲೆ ಹೊರಡಿಸಿ ಆದೇಶ ಮಾಡಲಾಗಿತ್ತು.

ಹಾವೇರಿ ಜಿಲ್ಲೆಯಲ್ಲಿ ಹುರುಳಿ ಮತ್ತು ಮಳೆಯಾಶ್ರಿತ ಜೋಳ ಸಂಪೂರ್ಣ ನಾಶ ಅಥವಾ ಬೆಳೆಯದೆ ಇದ್ದರಿಂದ, ಬೆಳೆ ವಿಮೆ(Crop Insurance) ನೀಡಲು ರಾಜ್ಯ ಸರ್ಕಾರವು ರೈತರ ಸಂಕಷ್ಟಕ್ಕೆ ಪರಿಹಾರ ನಿರ್ಧಾರ ಮಾಡಿದೆ.

ಈಗಾಗಲೇ ಹಿಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಪೂರ್ಣಗೊಂಡು, ಬೆಳೆ ಸಮೀಕ್ಷೆ ಕೂಡ ಆಗಿದೆ. ಇನ್ನೇನು ವಿಮಾ ಕಂಪನಿಗಳಿಗೆ ಬೆಳೆಯ ಮಾಹಿತಿಗಳನ್ನು ತಲುಪಿದರೆ, ಬೆಳೆ ವಿಮೆ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ ಎನ್ನಲಾಗಿದೆ.

ಇದನ್ನೂ ಕೂಡ ಓದಿ : PM Vishwakarma : ಕೇಂದ್ರದ ಈ ಯೋಜನೆಯಲ್ಲಿ ನಿಮಗೂ ಸಿಗಲಿದೆ 3 ಲಕ್ಷ ರೂಪಾಯಿ ಸಾಲ. ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

ನೀವು ಕೂಡ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಮೂಲಕ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಹಾಕಿ ನಿಮ್ಮ ಬೆಳೆ ವಿಮೆ(Crop Insurance) ಸ್ಟೇಟಸ್ ನ್ನೂ ಇದೀಗ ಚೆಕ್ ಮಾಡಬಹುದಾಗಿದೆ.

ಇಲ್ಲಿ ನೀಡಿರುವ ಲಿಂಕ್ ಅನ್ನು ಬಳಸಿ, ಸರ್ಕಾರದ ಸಂರಕ್ಷಣೆ (Samrakshane) ವೆಬ್ ಸೈಟ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ : ಸಂರಕ್ಷಣೆ (Samrakshane)

ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ಮೊಬೈಲ್ ನಂಬರ್, ಆಧಾ‌ರ್ ಕಾರ್ಡ್ ನಂಬರ್ ಹಾಕಿ captcha ಬರೆದು ಸಬ್ಮಿಟ್ ಮೇಲೆ ಒತ್ತಿದರೆ ನಿಮಗೆ ನಿಮ್ಮ ಬೆಳೆ ವಿಮೆ(Crop Insurance) ಜಮಾ ಆಗಿರುವ ಬಗ್ಗೆ ಮಾಹಿತಿ ಸಿಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply