Meerpet Madhavi Case : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟೆಯ ಜಿಲ್ಲಾಲಗುಡದಲ್ಲಿ ನಡೆದ ಭೀಕರ ಕೊಲೆಯ ಪೊಲೀಸ್ ತನಿಖೆ ಮುಂದುವರೆದಿದೆ. ತನಿಖೆಯ ಸಮಯದಲ್ಲಿ ಈ ಪ್ರಕರಣದ ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆರೋಪಿ ಗುರುಮೂರ್ತಿಯ ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಪ್ಲಾನ್ ಮಾಡಿ ಕೊಲೆ ಮಾಡಿದ್ದ ಗುರುಮೂರ್ತಿ, ವೆಬ್ ಸರಣಿಯ ಶೈಲಿಯಲ್ಲಿ ಶವವನ್ನು ವಿಲೇವಾರಿ ಮಾಡಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧವಿ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಆರೋಪಿ ಗುರುಮೂರ್ತಿಯನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪೊಲೀಸರು ಈಗಾಗಲೇ ಎರಡು ಬಾರಿ ಸ್ಥಳ ಮಹಜರು ಮಾಡಿದ್ದು, ನಿರ್ಣಾಯಕ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ತನಿಖಾ ತಂಡವು ಗುರುಮೂರ್ತಿಯ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಶೋಧ ನಡೆಸಿತು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋನ್ ಸಿಗ್ನಲ್ಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಮಾಧವಿ ಕೊಲೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ಮಕ್ಕಳ ಹೇಳಿಕೆಗಳನ್ನು ಸಹ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಹೇಳಿಕೆಗಳ ಸಮಯದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ತಾಯಿ ಕಾಣೆಯಾದ ನಂತರ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು ಎಂದು ಮಕ್ಕಳು ಹೇಳಿದ್ದಾರೆ. ಪೊಲೀಸರು ಕುಟುಂಬ ಸದಸ್ಯರನ್ನು ಸಹ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಆರೋಪಿಯ ಮಾಹಿತಿಯನ್ನು ಅವಲಂಬಿಸದೆ, ಪೊಲೀಸರು ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಆರೋಪಿಯ ಫೋನ್ ಪರಿಶೀಲಿಸಿದಾಗ, ಅಲ್ಲಿ ಮತ್ತೊಬ್ಬ ಮಹಿಳೆಯ ಕೆಲವು ಫೋಟೋಗಳು ಇರುವುದು ಕಂಡುಬಂದಿದೆ. ಈ ತಿಂಗಳ 18ರಂದು ದಾಖಲಾಗಿದ್ದ ವೆಂಕಟ ಮಾಧವಿ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣದ ಸೆಕ್ಷನ್ಗಳ ಅಡಿಯಲ್ಲಿ ವರ್ಗಾಯಿಸಲಾಗುತ್ತಿದೆ. ಇಂದು ಈ ಪ್ರಕರಣದಲ್ಲಿ ಸ್ವಲ್ಪ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.
ನಡೆದಿದ್ದೇನು?
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಾಚರ್ಲಾ ಮಂಡಲದ ಜೆ.ಪಿ. ಚೆರುವು ಗ್ರಾಮದ ನಿವಾಸಿ ಗುರುಮೂರ್ತಿ ಮತ್ತು ಅದೇ ಗ್ರಾಮದ ವೆಂಕಟ ಮಾಧವಿ 13 ವರ್ಷಗಳ ಹಿಂದೆ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗುರುಮೂರ್ತಿ ಸೇನೆಯಲ್ಲಿ ಜವಾನನಾಗಿ ಸೇರಿ ನಾಯಕ್ ಸುಬೇದಾರ್ ಆಗಿ ನಿವೃತ್ತನಾದನು. ಪ್ರಸ್ತುತ ಕಾಂಚನ್ಬಾಗ್ ಡಿಆರ್ಡಿಎಯಲ್ಲಿ ಗುತ್ತಿಗೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಗುರುಮೂರ್ತಿ ಕೆಲ ಸಮಯದಿಂದ ತಮ್ಮ ಹತ್ತಿರದ ಸಂಬಂಧಿಯಾಗಿರುವ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತದೆ. ಈ ವಿಷಯ ಪತ್ನಿ ಮಾಧವಿಗೆ ತಿಳಿದು ಇಬ್ಬರ ನಡುವೆ ಅನೇಕ ಬಾರಿ ಜಗಳಗಳು ನಡೆದಿದ್ದವು. ತಮ್ಮ ಅನೈತಿಕ ಸಂಬಂಧಕ್ಕೆ ಇರುವ ಅಡಚಣೆಯನ್ನು ತೊಡೆದು ಹಾಕಲು ಪತ್ನಿಯನ್ನೇ ಕೊಲ್ಲಲು ಗುರುಮೂರ್ತಿ ಪ್ಲಾನ್ ಮಾಡಿದನು.
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಗುರುಮೂರ್ತಿ ತನ್ನಿಬ್ಬರು ಮಕ್ಕಳನ್ನು ನಗರದಲ್ಲಿನ ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ಹೋಗಿದ್ದ. ಜ. 13 ಮತ್ತು 14 ರಂದು ಗುರುಮೂರ್ತಿ ಮತ್ತು ಮಾಧವಿ ಬೆಳಗ್ಗೆ ತಮ್ಮ ಸಹೋದರಿಯ ಮನೆಗೆ ಹೋಗಿ ಸಂಜೆ ಹಿಂತಿರುಗಿದರು. ಜ. 15 ರಂದು ಬೆಳಗ್ಗೆ ಗುರುಮೂರ್ತಿ ಮತ್ತು ಮಾಧವಿ ಜಗಳವಾಡಲು ಶುರು ಮಾಡಿದರು. ಕಾರಣ ಏನೆಂದರೆ, ಗಂಡ ಇನ್ನೊಬ್ಬ ಮಹಿಳೆಯೊಂದಿಗೆ ಇರುವ ಕೆಲ ಫೋಟೋಗಳನ್ನು ಮಾಧವಿ ನೋಡಿದಳು. ಜಗಳ ನಡೆಯುತ್ತಿದ್ದಂತೆ ಮೊದಲೇ ಕೊಲೆಗೆ ಪ್ಲಾನ್ ಮಾಡಿದ್ದ ಗುರುಮೂರ್ತಿ, ಪತ್ನಿಯ ತಲೆಗೆ ಬಲವಾದ ಆಯುಧದಿಂದ ಹೊಡೆದನು. ಏಟು ತಾಳಲಾರದೇ ಮಾಧವಿ ಕೆಳಗೆ ಬಿದ್ದರು ಮತ್ತು ಸ್ಥಳದಲ್ಲೇ ಆಕೆ ಮೃತಪಟ್ಟಳು. ಬಳಿಕ ಆರು ತಿಂಗಳ ಹಿಂದೆ ಒಟಿಟಿಯಲ್ಲಿ ನೋಡಿದ ವೆಬ್ ಸರಣಿಯ ಪಾತ್ರಗಳಂತೆ ದೇಹವನ್ನು ವಿಲೇವಾರಿ ಮಾಡಲು ಗುರುಮೂರ್ತಿ ಮುಂದಾದನು. ಇದರ ಭಾಗವಾಗಿ, ದೇಹವನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗಿ ತುಂಡುಗಳಾಗಿ ಕತ್ತರಿಸಿದನು.
ನಂತರ ಹೀಟರ್ ಬಳಸಿ ಬಕೆಟ್ ನೀರನ್ನು ಬಿಸಿ ಮಾಡಿ ಮಾಂಸದ ತುಂಡುಗಳನ್ನು ಅದರೊಳಗೆ ಹಾಕಿದ್ದಾನೆ. ತುಂಡುಗಳನ್ನು ಮಾಡಿದ ನಂತರ, ಮಾಂಸವನ್ನು ಮೂಳೆಗಳಿಂದ ಬೇರ್ಪಡಿಸಿದ್ದಾರೆ. ಮಾಂಸ ಮತ್ತು ಮೂಳೆಗಳನ್ನು ಒಂದು ದೊಡ್ಡ ಕುಕ್ಕರ್ನಲ್ಲಿ ಬೇಯಿಸಿದ್ದಾನೆ. ಚೆನ್ನಾಗಿ ಬೇಯಿಸಿದ ಬಳಿಕ ಒಣಗಿಸಿ, ಮಾಂಸವನ್ನು ಸುಟ್ಟು ಹಾಕಿದ್ದಾನೆ. ಅಲ್ಲದೆ, ಮೂಳೆಗಳನ್ನು ಚೆನ್ನಾಗಿ ಪುಡಿ ಮಾಡಿದ್ದಾನೆ. ಇದಾದ ಬಳಿಕ ಬೂದಿಯನ್ನು ಒಳಚರಂಡಿ ಮ್ಯಾನ್ಹೋಲ್ನಲ್ಲಿ ಬೆರೆಸಿ ಉಳಿದ ಮೂಳೆಯ ಪುಡಿಯನ್ನು ಹತ್ತಿರದ ಜಿಲ್ಲಲಾಗುಡದ ಕೊಳಕ್ಕೆ ಎಸೆದಿದ್ದಾನೆ.
ಕೊಲೆಯಾದ ನಂತರ ಸುಮಾರು ಎರಡು ದಿನಗಳ ಕಾಲ ನಿದ್ದೆ ಮಾಡದೆ ಇದನ್ನೆಲ್ಲ ಮಾಡಿದೆ ಎಂದು ಆರೋಪಿ ಗುರುಮೂರ್ತಿ ಪೊಲೀಸರಿಗೆ ಹೇಳಿದ್ದಾನೆ. ದೇಹವನ್ನು ಕತ್ತರಿಸಿದ ಬಳಿಕ ಕೋಣೆಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾನೆ. 17ನೇ ತಾರೀಖಿನಂದು ಸಂಜೆ, ಮಾಧವಿಯ ಪಾಲಕರಿಗೆ ಕರೆ ಮಾಡಿ, ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ಹೇಳಿದ್ದಾನೆ. ಸಣ್ಣ ಜಗಳದಿಂದಾಗಿ ಆಕೆ ಮನೆ ಬಿಟ್ಟು ಹೋದಳು ಎಂದು ಕತೆ ಕಟ್ಟಿದ್ದಾನೆ. ಮಾಧವಿ ಪಾಲಕರ ಜತೆಗೆ ತೆರಳಿ ದೂರು ಸಹ ದಾಖಲಿಸಿದ್ದ.
ಪ್ರಕರಣದ ತನಿಖೆ ನಡೆಸುತ್ತಿದ್ದಾಗ, ಪೊಲೀಸರಿಗೆ ಗುರುಮೂರ್ತಿಯ ಮೇಲೆ ಅನುಮಾನ ಮೂಡಿತು. ಮಾಧವಿ ಮನೆಗೆ ಪ್ರವೇಶಿಸುವುದನ್ನು ಹೊರತುಪಡಿಸಿ, ಆಕೆ ಹೊರಗೆ ಬರುವ ಯಾವುದೇ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿರಲಿಲ್ಲ. ಇದರಿಂದ ಅನುಮಾನ ಮತ್ತಷ್ಟು ಬಲವಾಯಿತು. ಬಳಿಕ ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನಿಜವಾದ ಕತೆ ಬೆಳಕಿಗೆ ಬಂದಿತು. ಬುಧವಾರ ಮತ್ತು ಗುರುವಾರ ಆರೋಪಿಯ ನಿವಾಸವನ್ನು ಪರಿಶೀಲಿಸಿದ್ದ ತನಿಖಾ ತಂಡ ಮತ್ತು ವಿಧಿವಿಜ್ಞಾನ ತಂಡಗಳು, ಮನೆಯಿಂದ ನೀರಿನ ಬಕೆಟ್, ವಾಟರ್ ಹೀಟರ್ ಮತ್ತು ಕೆಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಅವುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದೇಹವನ್ನು ತುಂಡು ಮಾಡಿ ಕುಕ್ಕರ್ನಲ್ಲಿ ಹಾಕಿ ಬೇಯಿಸಲಾಗಿದೆ ಎಂಬುದಕ್ಕೆ ಕೆಲವು ಪುರಾವೆಗಳು ಕಂಡುಬಂದಿವೆ.
ಪೊಲೀಸರ ತನಿಖೆಗೆ ಟ್ವಿಸ್ಟ್
ಆರೋಪಿ ಹೇಳಿರುವ ವಿಷಯಗಳನ್ನು ಆಧರಿಸಿ ತನಿಖಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೂ ಹೊಸ ಟ್ವಿಸ್ಟ್ ತಲೆನೋವಾಗಿ ಪರಿಣಮಿಸಿದೆ. ಮೂಳೆಗಳನ್ನು ಕೆರೆಗೆ ಎಸೆದಿರುವುದಾಗಿ ಹೇಳಿದ್ದರೂ ಅಲ್ಲಿ ಇನ್ನೂ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಶವದ ಕುರುಹುಗಳೇನಾದರೂ ಕಂಡುಬಂದರೆ, ಅದನ್ನು ಮಾಧವಿಯ ಮಕ್ಕಳ ಡಿಎನ್ಎ ಜೊತೆ ಹೋಲಿಸುವ ಸಾಧ್ಯತೆಯಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಇಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಿರ್ಣಾಯಕವಾಗಿರುತ್ತದೆ. ಮಾಧವಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಅವರು ಮನೆಯೊಳಗೆ ಹೋಗುತ್ತಿರುವ ದೃಶ್ಯಗಳು ಮಾತ್ರ ಪತ್ತೆಯಾಗಿವೆ ಎಂದು ಎಲ್ಬಿ ನಗರ ಡಿಸಿಪಿ ಪ್ರವೀಣ್ ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
- ಆಲ್ಕೋಹಾಲ್ ಸೇವನೆ ಮಾಡದೇ ಇದ್ರೂ ಲಿವರ್ ಡ್ಯಾಮೇಜ್ ಆಗೋದಕ್ಕೆ ಕಾರಣವೇನು ಗೊತ್ತಾ.?
- ಎಸ್ಎಸ್ಎಲ್ಸಿ (SSLC) ತೃತೀಯ ಭಾಷೆಗೆ ಅಂಕ, ಹೈಕೋರ್ಟ್ ಆದೇಶಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ
- ಮತ್ತೆ ಜೆಡಿಎಸ್ ಗೂಡು ಸೇರ್ತೀರಂತೆ ನಿಜನಾ.? ಸಚಿವ ಜಮೀರ್ ಅಹ್ಮಮದ್ ಕೊಟ್ರು ಸ್ಪಷ್ಟನೆ
- ‘ಅಡವಿಯಲ್ಲಿ ಕಂಡದ್ದು ಕೇಳದ್ದು ಕುರುಹೀನ ರಟ್ಟು’ : ಕೋಡಿಶ್ರೀಗಳ ಹೊಸ ಭವಿಷ್ಯ – ಏನಿದರ ಅರ್ಥ?
- ರಾತ್ರಿ ಹೊತ್ತು ಗೋಚರಿಸುವ ಈ ಬದಲಾವಣೆಗಳು ‘ಕಿಡ್ನಿ ವೈಫಲ್ಯ’ದ ಲಕ್ಷಣವಾಗಿರಬಹುದು ಎಚ್ಚರ.!
- ನಾವೀಗ ವಿಶ್ವಗುರು ಅಲ್ಲ, ಆ ಪದವನ್ನು ಬಳಸಬಾರದು : BJP ನಾಯಕ ಮುರಳಿ ಮನೋಹರ್ ಜೋಶಿ
- Horoscope Today : 21 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ‘ಗ್ಯಾಸ್ ಸಿಲಿಂಡರ್’ ಬಳಸುವವರು ಈ 3 ತಪ್ಪುಗಳನ್ನು ಮಾಡಬೇಡಿ : ಬಾಂಬ್ ನಂತೆ ಸ್ಪೋಟಗೊಳ್ಳುತ್ತೆ ಎಚ್ಚರ.!
- ಕ್ಯಾನ್ಸರ್’ಗೆ ಯಾವುದೇ ವೆಚ್ಚವಿಲ್ಲದೆ ತಪಾಸಣೆ, ನಿಮ್ಮ ಅಡುಗೆಮನೆಯಲ್ಲೇ ಪವಾಡ ಚಿಕಿತ್ಸೆ! ನಮ್ಮ ಪೂರ್ವಜರ ಸಲಹೆ ಅನುಸರಿಸಿ
- Horoscope Today : 20 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಅವನನ್ನ ಕೊಂದು ಬಿಡು, ಇಬ್ಬರು ಚೆನ್ನಾಗಿರೋಣ; ಗಂಡನ ಉಸಿರು ನಿಲ್ಲಿಸಿ ಜೈಲು ಸೇರಿದ ಪತ್ನಿ
- ಶ್ರೀರಾಮನ ಕುರಿತು ವ್ಯಂಗ್ಯ ಆರೋಪ, ಪ್ರತಿಕ್ರಿಯೆ ನೀಡಿದ ನಟ ಪ್ರಕಾಶ್ ರಾಜ್
- ಕಾರ್, ಸರ್ಕಾರಿ ಬಸ್, ಮೂರು ಬೈಕ್ಗಳಿಗೆ ಡಿಕ್ಕಿ ಹೊಡೆದ ಲಾರಿ : ರಸ್ತೆಯಲ್ಲಿ ಹೆಣಗಳು ಚೆಲ್ಲಾಪಿಲ್ಲಿ
- ಡಾಕ್ಟರ್ ‘ಹೃದಯವಂತ’ ಅಂತ ಗೆಲ್ಲಿಸಿದ್ರೆ, ಕರ್ನಾಟಕದ ಬುಡಕ್ಕೆ ತಂದಿಟ್ರು : ಸಂಸದ ಡಾ. ಸಿ.ಎನ್ ಮಂಜುನಾಥ್ ವಿರುದ್ಧ ಆಕ್ರೋಶ
- ಅಪ್ಪ ಜನರಿಗಾಗಿ ಬದುಕಿದ ನಾಯಕ : ಜೈಲುಪಾಲಾದ ಶಾಸಕ ವಿನಯ ಕುಲಕರ್ಣಿ ಮಗಳ ಭಾವುಕ ಪೋಸ್ಟ್
- ಮಗಳ ಪ್ರಿಯಕರನ ಜೊತೆಗೆ ಸೇರಿ ಅಳಿಯನ ಕತೆನೇ ಮುಗಿಸಿದ ತಾಯಿ, ತಮ್ಮ.!
- Horoscope Today : 19 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಹಣ, ಚಿನ್ನಾಭರಣಕ್ಕಾಗಿ ಚಿಕ್ಕಮ್ಮನ ಕೊಲೆ ಮಾಡಿ ಶವ ಸುಟ್ಟಿದ್ದ ಲೇಡಿ: ವರ್ಷದ ಬಳಿಕ ಹತ್ಯೆ ರಿವೀಲ್
- ಎಣ್ಣೆ ಹೊಡೆದು ಡ್ಯಾಮೆಜ್ ಆಗಿರುವ ಲಿವರ್ಗೆ ಮರುಜೀವ ನೀಡುವ ಹಣ್ಣು.! ವಾರಕ್ಕೊಮ್ಮೆ ತಿನ್ನಿ..
- ರಾಹುಲ್ ಗಾಂಧಿಗೆ ಕಾನೂನು ಸಂಕಷ್ಟ, ಎಫ್ಐಆರ್ ದಾಖಲಿಸಿ ತನಿಖೆಗೆ ಲಕ್ನೋ ಹೈಕೋರ್ಟ್ ಆದೇಶ
- ರಾಜ್ಯದ ಜನತೆಗೆ ‘ವಿದ್ಯುತ್ ದರ ಏರಿಕೆ’ ಶಾಕ್ ಕೊಟ್ಟ ಗ್ಯಾರಂಟಿ ಸರ್ಕಾರ! ಪ್ರತಿ ಯೂನಿಟ್ ಮೇಲೆ 56 ಪೈಸೆ ಹೆಚ್ಚಳ ಆದೇಶ!
- ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಟಿಕೆಟ್ ಬ್ಲಾಕ್ ದಂಧೆ ಬಯಲಿಗೆ.! ಕ್ಯಾಂಟೀನ್ ನೌಕರ ಅರೆಸ್ಟ್.!
- ನಿಶ್ಶಬ್ದವಾಗಿ ನಿಮ್ಮ ‘ಲಿವರ್’ ಕೊಲ್ಲುವ 3 ಆಹಾರಗಳಿವು ; ವೈದ್ಯರ ಎಚ್ಚರಿಕೆ!
- Arecanut Price : ಇಂದಿನ ಅಡಿಕೆ ಧಾರಣೆ – 18 ಏಪ್ರಿಲ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- Horoscope Today : 18 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಸ್ಟ್ರೋಕ್ ಆಗೋ ಮುಂಚೆ ಈ ಎಲ್ಲಾ ಲಕ್ಷಣಗಳು ಕಾಣಿಸುತ್ತಂತೆ! ನೀವೂ ಜಾಗ್ರತೆಯಾಗಿರಿ
- Video : ರಾಮ-ಲಕ್ಷ್ಮಣರು ಕದ್ದು ಹಣ್ಣು ತಿಂದರು, ಅದಕ್ಕೆ ಯುದ್ಧ ಆಯ್ತು: ನಗೆಪಾಟಲಿಗೀಡಾದ ಪ್ರಕಾಶ್ ರಾಜ್


























