Meerpet Madhavi Case : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟೆಯ ಜಿಲ್ಲಾಲಗುಡದಲ್ಲಿ ನಡೆದ ಭೀಕರ ಕೊಲೆಯ ಪೊಲೀಸ್ ತನಿಖೆ ಮುಂದುವರೆದಿದೆ. ತನಿಖೆಯ ಸಮಯದಲ್ಲಿ ಈ ಪ್ರಕರಣದ ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆರೋಪಿ ಗುರುಮೂರ್ತಿಯ ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಪ್ಲಾನ್ ಮಾಡಿ ಕೊಲೆ ಮಾಡಿದ್ದ ಗುರುಮೂರ್ತಿ, ವೆಬ್ ಸರಣಿಯ ಶೈಲಿಯಲ್ಲಿ ಶವವನ್ನು ವಿಲೇವಾರಿ ಮಾಡಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧವಿ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಆರೋಪಿ ಗುರುಮೂರ್ತಿಯನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪೊಲೀಸರು ಈಗಾಗಲೇ ಎರಡು ಬಾರಿ ಸ್ಥಳ ಮಹಜರು ಮಾಡಿದ್ದು, ನಿರ್ಣಾಯಕ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ತನಿಖಾ ತಂಡವು ಗುರುಮೂರ್ತಿಯ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಶೋಧ ನಡೆಸಿತು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋನ್ ಸಿಗ್ನಲ್ಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಮಾಧವಿ ಕೊಲೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ಮಕ್ಕಳ ಹೇಳಿಕೆಗಳನ್ನು ಸಹ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಹೇಳಿಕೆಗಳ ಸಮಯದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ತಾಯಿ ಕಾಣೆಯಾದ ನಂತರ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು ಎಂದು ಮಕ್ಕಳು ಹೇಳಿದ್ದಾರೆ. ಪೊಲೀಸರು ಕುಟುಂಬ ಸದಸ್ಯರನ್ನು ಸಹ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಆರೋಪಿಯ ಮಾಹಿತಿಯನ್ನು ಅವಲಂಬಿಸದೆ, ಪೊಲೀಸರು ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಆರೋಪಿಯ ಫೋನ್ ಪರಿಶೀಲಿಸಿದಾಗ, ಅಲ್ಲಿ ಮತ್ತೊಬ್ಬ ಮಹಿಳೆಯ ಕೆಲವು ಫೋಟೋಗಳು ಇರುವುದು ಕಂಡುಬಂದಿದೆ. ಈ ತಿಂಗಳ 18ರಂದು ದಾಖಲಾಗಿದ್ದ ವೆಂಕಟ ಮಾಧವಿ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣದ ಸೆಕ್ಷನ್ಗಳ ಅಡಿಯಲ್ಲಿ ವರ್ಗಾಯಿಸಲಾಗುತ್ತಿದೆ. ಇಂದು ಈ ಪ್ರಕರಣದಲ್ಲಿ ಸ್ವಲ್ಪ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.
ನಡೆದಿದ್ದೇನು?
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಾಚರ್ಲಾ ಮಂಡಲದ ಜೆ.ಪಿ. ಚೆರುವು ಗ್ರಾಮದ ನಿವಾಸಿ ಗುರುಮೂರ್ತಿ ಮತ್ತು ಅದೇ ಗ್ರಾಮದ ವೆಂಕಟ ಮಾಧವಿ 13 ವರ್ಷಗಳ ಹಿಂದೆ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗುರುಮೂರ್ತಿ ಸೇನೆಯಲ್ಲಿ ಜವಾನನಾಗಿ ಸೇರಿ ನಾಯಕ್ ಸುಬೇದಾರ್ ಆಗಿ ನಿವೃತ್ತನಾದನು. ಪ್ರಸ್ತುತ ಕಾಂಚನ್ಬಾಗ್ ಡಿಆರ್ಡಿಎಯಲ್ಲಿ ಗುತ್ತಿಗೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಗುರುಮೂರ್ತಿ ಕೆಲ ಸಮಯದಿಂದ ತಮ್ಮ ಹತ್ತಿರದ ಸಂಬಂಧಿಯಾಗಿರುವ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತದೆ. ಈ ವಿಷಯ ಪತ್ನಿ ಮಾಧವಿಗೆ ತಿಳಿದು ಇಬ್ಬರ ನಡುವೆ ಅನೇಕ ಬಾರಿ ಜಗಳಗಳು ನಡೆದಿದ್ದವು. ತಮ್ಮ ಅನೈತಿಕ ಸಂಬಂಧಕ್ಕೆ ಇರುವ ಅಡಚಣೆಯನ್ನು ತೊಡೆದು ಹಾಕಲು ಪತ್ನಿಯನ್ನೇ ಕೊಲ್ಲಲು ಗುರುಮೂರ್ತಿ ಪ್ಲಾನ್ ಮಾಡಿದನು.
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಗುರುಮೂರ್ತಿ ತನ್ನಿಬ್ಬರು ಮಕ್ಕಳನ್ನು ನಗರದಲ್ಲಿನ ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ಹೋಗಿದ್ದ. ಜ. 13 ಮತ್ತು 14 ರಂದು ಗುರುಮೂರ್ತಿ ಮತ್ತು ಮಾಧವಿ ಬೆಳಗ್ಗೆ ತಮ್ಮ ಸಹೋದರಿಯ ಮನೆಗೆ ಹೋಗಿ ಸಂಜೆ ಹಿಂತಿರುಗಿದರು. ಜ. 15 ರಂದು ಬೆಳಗ್ಗೆ ಗುರುಮೂರ್ತಿ ಮತ್ತು ಮಾಧವಿ ಜಗಳವಾಡಲು ಶುರು ಮಾಡಿದರು. ಕಾರಣ ಏನೆಂದರೆ, ಗಂಡ ಇನ್ನೊಬ್ಬ ಮಹಿಳೆಯೊಂದಿಗೆ ಇರುವ ಕೆಲ ಫೋಟೋಗಳನ್ನು ಮಾಧವಿ ನೋಡಿದಳು. ಜಗಳ ನಡೆಯುತ್ತಿದ್ದಂತೆ ಮೊದಲೇ ಕೊಲೆಗೆ ಪ್ಲಾನ್ ಮಾಡಿದ್ದ ಗುರುಮೂರ್ತಿ, ಪತ್ನಿಯ ತಲೆಗೆ ಬಲವಾದ ಆಯುಧದಿಂದ ಹೊಡೆದನು. ಏಟು ತಾಳಲಾರದೇ ಮಾಧವಿ ಕೆಳಗೆ ಬಿದ್ದರು ಮತ್ತು ಸ್ಥಳದಲ್ಲೇ ಆಕೆ ಮೃತಪಟ್ಟಳು. ಬಳಿಕ ಆರು ತಿಂಗಳ ಹಿಂದೆ ಒಟಿಟಿಯಲ್ಲಿ ನೋಡಿದ ವೆಬ್ ಸರಣಿಯ ಪಾತ್ರಗಳಂತೆ ದೇಹವನ್ನು ವಿಲೇವಾರಿ ಮಾಡಲು ಗುರುಮೂರ್ತಿ ಮುಂದಾದನು. ಇದರ ಭಾಗವಾಗಿ, ದೇಹವನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗಿ ತುಂಡುಗಳಾಗಿ ಕತ್ತರಿಸಿದನು.
ನಂತರ ಹೀಟರ್ ಬಳಸಿ ಬಕೆಟ್ ನೀರನ್ನು ಬಿಸಿ ಮಾಡಿ ಮಾಂಸದ ತುಂಡುಗಳನ್ನು ಅದರೊಳಗೆ ಹಾಕಿದ್ದಾನೆ. ತುಂಡುಗಳನ್ನು ಮಾಡಿದ ನಂತರ, ಮಾಂಸವನ್ನು ಮೂಳೆಗಳಿಂದ ಬೇರ್ಪಡಿಸಿದ್ದಾರೆ. ಮಾಂಸ ಮತ್ತು ಮೂಳೆಗಳನ್ನು ಒಂದು ದೊಡ್ಡ ಕುಕ್ಕರ್ನಲ್ಲಿ ಬೇಯಿಸಿದ್ದಾನೆ. ಚೆನ್ನಾಗಿ ಬೇಯಿಸಿದ ಬಳಿಕ ಒಣಗಿಸಿ, ಮಾಂಸವನ್ನು ಸುಟ್ಟು ಹಾಕಿದ್ದಾನೆ. ಅಲ್ಲದೆ, ಮೂಳೆಗಳನ್ನು ಚೆನ್ನಾಗಿ ಪುಡಿ ಮಾಡಿದ್ದಾನೆ. ಇದಾದ ಬಳಿಕ ಬೂದಿಯನ್ನು ಒಳಚರಂಡಿ ಮ್ಯಾನ್ಹೋಲ್ನಲ್ಲಿ ಬೆರೆಸಿ ಉಳಿದ ಮೂಳೆಯ ಪುಡಿಯನ್ನು ಹತ್ತಿರದ ಜಿಲ್ಲಲಾಗುಡದ ಕೊಳಕ್ಕೆ ಎಸೆದಿದ್ದಾನೆ.
ಕೊಲೆಯಾದ ನಂತರ ಸುಮಾರು ಎರಡು ದಿನಗಳ ಕಾಲ ನಿದ್ದೆ ಮಾಡದೆ ಇದನ್ನೆಲ್ಲ ಮಾಡಿದೆ ಎಂದು ಆರೋಪಿ ಗುರುಮೂರ್ತಿ ಪೊಲೀಸರಿಗೆ ಹೇಳಿದ್ದಾನೆ. ದೇಹವನ್ನು ಕತ್ತರಿಸಿದ ಬಳಿಕ ಕೋಣೆಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾನೆ. 17ನೇ ತಾರೀಖಿನಂದು ಸಂಜೆ, ಮಾಧವಿಯ ಪಾಲಕರಿಗೆ ಕರೆ ಮಾಡಿ, ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ಹೇಳಿದ್ದಾನೆ. ಸಣ್ಣ ಜಗಳದಿಂದಾಗಿ ಆಕೆ ಮನೆ ಬಿಟ್ಟು ಹೋದಳು ಎಂದು ಕತೆ ಕಟ್ಟಿದ್ದಾನೆ. ಮಾಧವಿ ಪಾಲಕರ ಜತೆಗೆ ತೆರಳಿ ದೂರು ಸಹ ದಾಖಲಿಸಿದ್ದ.
ಪ್ರಕರಣದ ತನಿಖೆ ನಡೆಸುತ್ತಿದ್ದಾಗ, ಪೊಲೀಸರಿಗೆ ಗುರುಮೂರ್ತಿಯ ಮೇಲೆ ಅನುಮಾನ ಮೂಡಿತು. ಮಾಧವಿ ಮನೆಗೆ ಪ್ರವೇಶಿಸುವುದನ್ನು ಹೊರತುಪಡಿಸಿ, ಆಕೆ ಹೊರಗೆ ಬರುವ ಯಾವುದೇ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿರಲಿಲ್ಲ. ಇದರಿಂದ ಅನುಮಾನ ಮತ್ತಷ್ಟು ಬಲವಾಯಿತು. ಬಳಿಕ ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನಿಜವಾದ ಕತೆ ಬೆಳಕಿಗೆ ಬಂದಿತು. ಬುಧವಾರ ಮತ್ತು ಗುರುವಾರ ಆರೋಪಿಯ ನಿವಾಸವನ್ನು ಪರಿಶೀಲಿಸಿದ್ದ ತನಿಖಾ ತಂಡ ಮತ್ತು ವಿಧಿವಿಜ್ಞಾನ ತಂಡಗಳು, ಮನೆಯಿಂದ ನೀರಿನ ಬಕೆಟ್, ವಾಟರ್ ಹೀಟರ್ ಮತ್ತು ಕೆಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಅವುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದೇಹವನ್ನು ತುಂಡು ಮಾಡಿ ಕುಕ್ಕರ್ನಲ್ಲಿ ಹಾಕಿ ಬೇಯಿಸಲಾಗಿದೆ ಎಂಬುದಕ್ಕೆ ಕೆಲವು ಪುರಾವೆಗಳು ಕಂಡುಬಂದಿವೆ.
ಪೊಲೀಸರ ತನಿಖೆಗೆ ಟ್ವಿಸ್ಟ್
ಆರೋಪಿ ಹೇಳಿರುವ ವಿಷಯಗಳನ್ನು ಆಧರಿಸಿ ತನಿಖಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೂ ಹೊಸ ಟ್ವಿಸ್ಟ್ ತಲೆನೋವಾಗಿ ಪರಿಣಮಿಸಿದೆ. ಮೂಳೆಗಳನ್ನು ಕೆರೆಗೆ ಎಸೆದಿರುವುದಾಗಿ ಹೇಳಿದ್ದರೂ ಅಲ್ಲಿ ಇನ್ನೂ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಶವದ ಕುರುಹುಗಳೇನಾದರೂ ಕಂಡುಬಂದರೆ, ಅದನ್ನು ಮಾಧವಿಯ ಮಕ್ಕಳ ಡಿಎನ್ಎ ಜೊತೆ ಹೋಲಿಸುವ ಸಾಧ್ಯತೆಯಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಇಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಿರ್ಣಾಯಕವಾಗಿರುತ್ತದೆ. ಮಾಧವಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಅವರು ಮನೆಯೊಳಗೆ ಹೋಗುತ್ತಿರುವ ದೃಶ್ಯಗಳು ಮಾತ್ರ ಪತ್ತೆಯಾಗಿವೆ ಎಂದು ಎಲ್ಬಿ ನಗರ ಡಿಸಿಪಿ ಪ್ರವೀಣ್ ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
- ಪತ್ನಿ ಬಾಯಿಗೆ ಫೆವಿಕ್ವಿಕ್ ಹಾಕಿ ಕೊಲೆಗೆ ಪತಿ ಯತ್ನ – ಅನೈತಿಕ ಸಂಬಂಧದ ಶಂಕೆ.! ರಾಜ್ಯದಲ್ಲೊಂದು ಅಮಾನುಷ ಕೃತ್ಯ
- Gruhalakshmi : ಗೃಹಲಕ್ಷ್ಮಿ ಹಣ ಜಮೆ ಆಗುತ್ತಿಲ್ಲ ಯಾಕೆ ಇಲ್ಲಿದೆ ಕಾರಣ – ಮಹಿಳೆಯರು ತಪ್ಪದೇ ನೋಡಿ
- ಭಾರೀ ಇಳಿಕೆ ಕಂಡ ಚಿನ್ನ.! ಇನ್ನೂ ಇಳಿಕೆ ಕಾಣುತ್ತಾ ಬಂಗಾರ.! ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Udyogini Yojana : ಉದ್ಯೋಗಿನಿ ಯೋಜನೆ ಅಡಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ – ಅರ್ಹತೆ ಹಾಗು ಬೇಕಾಗುವ ದಾಖಲೆಗಳೇನು.?
- Ration Card Updates : ಹೊಸ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಕೆ ಆರಂಭ! ಏನೆಲ್ಲಾ ಅರ್ಹತೆಗಳಿರಬೇಕು.?
- SBI Bank Updates : ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ | ಖಾತೆ ಹೊಂದಿರುವ ಗ್ರಾಹಕರು ತಪ್ಪದೆ ನೋಡಿ | ಬ್ಯಾಂಕ್ ನಿಂದ ಬಂಪರ್ ಗಿಫ್ಟ್
- Gold Rate Today : ಇಳಿಕೆಯ ಹಾದಿ ಮರೆತ ಬಂಗಾರ.? ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- ಚಾಕೊಲೇಟ್ ಆಸೆ ತೋರಿಸಿ 11ರ ಬಾಲಕಿ ಮೇಲೆ ಅತ್ಯಾಚಾರ – ಆರೋಪಿ ಬಂಧನ
- Driving Licence : ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಹೊಸ ಆದೇಶ ಜಾರಿಗೊಳಿಸಿದ ಸಂಚಾರ ಸಾರಿಗೆ ಇಲಾಖೆ! ಸಂಪೂರ್ಣ ಮಾಹಿತಿ
- ಮುಡಾ ಹಗರಣ ಕಾನೂನು ಹೋರಾಟದಲ್ಲಿ ಬಿಗ್ ಟ್ವಿಸ್ಟ್.! ಮೇಲ್ಮನವಿಯಿಂದ ಹಿಂದೆ ಸರಿದ ಸ್ನೇಹಮಯಿ ಕೃಷ್ಣ.!
- Gold Rate : ಬಂಗಾರ ಖರೀದಿಸುವವರಿಗೆ ಗುಡ್ ನ್ಯೂಸ್ ಇದೆಯಾ.? ಇಂದಿನ ಬೆಲೆ ಎಷ್ಟಾಗಿದೆ ಗೊತ್ತಾ.?
- ಸ್ನೇಹಿತರ ಕಣ್ಣೆದುರಲ್ಲೇ ನೀರುಪಾಲಾದ ಮತ್ತಿಬ್ಬರು ಸ್ನೇಹಿತರು – ಘಟನೆ ವಿಡಿಯೋ ಮೊಬೈಲ್ ಕ್ಯಾಮೆರದಲ್ಲಿ ಸೆರೆ
- ಅನ್ಯ ಜಾತಿಯ ಯುವಕನೊಂದಿಗೆ ಮದುವೆಗೆ ಹಠ – ರೊಚ್ಚಿಗೆದ್ದು ಮಗಳನ್ನೇ ಕೊಲೆಗೈದ ಪರಾರಿಯಾದ ತಂದೆ
- ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹೊರತೆಗೆದು ಬಾಲಕನ ಜೀವ ಉಳಿಸಿದ ವೆನ್ಲಾಕ್ ಆಸ್ಪತ್ರೆಯ ವೈದ್ಯರು
- ಶಾಲೆಯಿಂದ ಮನೆಗೆ ತಡವಾಗಿ ಬಂದಿದ್ದಕ್ಕೆ ಬಾಲಕನನ್ನು ಹೊಡೆದು ಕೊಂದ ತಂದೆ.!
- ವಯಸ್ಸಾಗದಂತೆ ಕಾಣಲು ಬಿಸಿ ನೀರಿಗೆ ಇದನ್ನು ಮಿಶ್ರಣ ಮಾಡಿ ಸ್ನಾನ ಮಾಡಿ – Health Tips
- ರೈಲಿನಲ್ಲಿ ಗರ್ಭಿಣಿ ಮೇಲೆ ಅತ್ಯಾಚಾರ, ಮಹಿಳೆಗೆ ಗರ್ಭಪಾತ.! ಕೈಮುಗಿದು ಬೇಡಿಕೊಂಡರೂ ಬಿಡದ ಪಾಪಿ
- PM Kisan Samman Yojana : ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ.!
- Gruhalakshmi : ಗೃಹಲಕ್ಷ್ಮಿಯರಿಗೆ ಸಿಕ್ತು ಗುಡ್ ನ್ಯೂಸ್.! ಇನ್ನೂ ನಿಮ್ಮ ಖಾತೆಗೆ ಹಣ ಬಂದಿಲ್ವಾ! ಚಿಂತೆ ಬಿಡಿ ಈ ಸುದ್ದಿ ನೋಡಿ!
- ರೈತರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್! ಇನ್ಮುಂದೆ ರೈತರಿಗೆ ₹7,600/- ರೂಪಾಯಿ ಅಲ್ಲ, ಜಾಸ್ತಿನೇ ಸಿಗುತ್ತೆ!
- Gold Rate Today : ಆಭರಣ ಪ್ರಿಯರೇ ಎಚ್ಚರ.! ಚಿನ್ನದ ಬೆಲೆ ನೋಡಿ ಖರೀದಿ ಮಾಡಿ – ಎಷ್ಟಿದೆ ಚಿನ್ನದ ಬೆಲೆ.?
- Bank Rules : ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇರಬೇಕು? ತಪ್ಪಿದರೆ ಯಾವ್ಯಾವ ಬ್ಯಾಂಕಿನಿಂದ ಎಷ್ಟೆಷ್ಟು ದಂಡ ಬೀಳುತ್ತೆ?
- Gold Rate : ಬ್ರೇಕಿಂಗ್ ನ್ಯೂಸ್.! ಎಷ್ಟಾಗಿದೆ ನೋಡಿ ಇಂದಿನ ಗೋಲ್ಡ್ ರೇಟ್.?
- PM Kisan Samman : ಪಿಎಂ ಕಿಸಾನ್ ಸಮ್ಮಾನ್ ಯೋಜನೆ’ಗೆ ಇನ್ನು ಮುಂದೆ ಕೃಷಿಕರ ಗುರುತಿನ ಚೀಟಿ ಕಡ್ಡಾಯ.!
- ನನ್ನ ತಾಯಿ ತೀರಿಕೊಂಡಿದ್ದಾರೆ. ತಾಯಿಯ ತವರು ಮನೆಯಲ್ಲಿ ಆಸ್ತಿ ಭಾಗ ಕೇಳಬಹುದ.? ಎಷ್ಟು ಆಸ್ತಿ ಸಿಗುತ್ತೆ.? ಸಂಪೂರ್ಣ ಮಾಹಿತಿ
- SBI ಬ್ಯಾಂಕ್ ನಲ್ಲಿ ಖಾತೆ ಇದ್ದರೆ ತಿಂಗಳಿಗೆ ಮನೆಯಲ್ಲೇ ಕಳಿತು 30 ರಿಂದ 50 ಸಾವಿರ ಹಣ ಗಳಿಸುವ ಸುವರ್ಣಾವಕಾಶ.!
- Gold Rate : ಕುಸಿತ ಕಂಡಿತಾ ಬಂಗಾರ.! ಇಂದಿನ ಗೋಲ್ಡ್ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.?