ಸ್ಪಷ್ಟವಾಗಿ ಹೇಳ್ತೀನಿ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ ಬರಲ್ಲ; ಕೇಸ್ ಹಾಕುವ ಬೆದರಿಕೆಗೆ ಅಮಿತ್ ಶಾ ಕೌಂಟರ್
ಟಿಎಂಸಿ ಕಾರ್ಯಕರ್ತರಿಗೆ ಬೆದರಿಕೆ ಆರೋಪ ಸಂಬಂಧ ಪ್ರಕರಣ ದಾಖಲಿಸುವುದಾಗಿ ಹೇಳಿರುವ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕೌಂಟರ್ ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಸ್ಪಷ್ಟವಾಗಿ ಹೇಳ್ತೀನಿ ಬಂಗಾಳದಲ್ಲಿ ಮತ್ತೆ ಮಮತಾ ಜೀ ಸರ್ಕಾರ ಬರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಎರಡನೇ ಹಂತದ ಚುನಾವಣೆ ಪ್ರಚಾರದ ಭಾಗವಾಗಿ ಟಾಲಿಗಂಜ್ನಲ್ಲಿ ನಡೆದ ರೋಡ್ಶೋ ವೇಳೆ ಎಎನ್ಐ ಜೊತೆ ಮಾತನಾಡಿರುವ ಅವರು, ಮಮತಾ ಬ್ಯಾನರ್ಜಿ ಏನು ಹೇಳಲು ಬಯಸುತ್ತಾರೆ? ಗೂಂಡಾಗಳನ್ನು ಗೌರವಿಸಬೇಕೇ? ಸಾರ್ವಜನಿಕರಿಗೆ ತೊಂದರೆ ನೀಡುವವರನ್ನು ಅವರು ಗೌರವಿಸಬಹುದು, ನಾವಲ್ಲ. … Read more