e-Shram Card 2024 : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಈ ಯೋಜನೆಯಡಿ ಅರ್ಹ ಕಾರ್ಮಿಕರಿಗೆ ಉಚಿತ ಇ-ಶ್ರಮ್ ಕಾರ್ಡ್(e-Shram Card) ನೀಡಲಾಗುತ್ತದೆ. ಇದು ಅರ್ಹ ಫಲಾನುಭವಿ ಕಾರ್ಮಿಕರಿಗೆ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಇ-ಶ್ರಮ್ ಕಾರ್ಡ್(e-Shram Card) ಯೋಜನೆಯ ಉದ್ದೇಶಗಳೇನು.? ಅರ್ಹತಾ ಮಾನದಂಡ, ನೋಂದಣಿ ಪ್ರಕ್ರಿಯೆ ಹೇಗೆ.? ಲಭ್ಯವಿರುವ ಪ್ರಯೋಜನಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇ-ಶ್ರಮ್ ಕಾರ್ಡ್(e-Shram Card) ಯೋಜನೆಯ ಉದ್ದೇಶಗಳೇನು.?
- ಸಾಮಾಜಿಕ ಭದ್ರತೆ : ಈ ಯೋಜನೆಯಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ದುರ್ಘಟನೆ, ಅನಾರೋಗ್ಯ, ವೃದ್ಧಾಪ್ಯ ಮತ್ತು ಮರಣದಂತಹ ಸಂದರ್ಭಗಳಲ್ಲಿ ಆರ್ಥಿಕ ನೆರವು ಒದಗಿಸುವುದು.
- ವಿಮಾ ರಕ್ಷಣೆ : ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿ ಕಾರ್ಮಿಕರಿಗೆ ಅಪಘಾತ ವಿಮೆ ಮತ್ತು ಜೀವ ವಿಮೆಯನ್ನು ಒದಗಿಸಲಾಗುವುದು.
- ಕೌಶಲ್ಯ ಅಭಿವೃದ್ಧಿ : ಅರ್ಹ ಫಲಾನುಭವಿ ಕಾರ್ಮಿಕರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು.
- ಸರ್ಕಾರಿ ಯೋಜನೆಗಳಿಗೆ ಪ್ರವೇಶ : ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಕಾರ್ಮಿಕರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಜನ್ ಧನ ಯೋಜನೆ ಮತ್ತು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಗಳಂತಹ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಇ-ಶ್ರಮ್ ಕಾರ್ಡ್(e-Shram Card) ಯೋಜನೆಯ ಬಗ್ಗೆ ಮಾಹಿತಿ :-
- ಇ-ಶ್ರಮ್ ಕಾರ್ಡ್(e-Shram Card) ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರದಿಂದ ಒದಗಿಸಲಾದ ಒಂದು ಯೋಜನೆಯಾಗಿದೆ. ಈ ಕಾರ್ಡ್ ಹೊಂದಿರುವವರು ಹಲವಾರು ಸೌಲಭ್ಯಗಳ ಪ್ರಯೋಜನವನ್ನ ಪಡೆದುಕೊಳ್ಳಬಹುದು.
- ಅಪಘಾತ ವಿಮೆ : ಯಾವುದೇ ಅಪಘಾತದ ಸಂದರ್ಭದಲ್ಲಿ, ಇ-ಶ್ರಮ್ ಕಾರ್ಡ್(e-Shram Card) ಹೊಂದಿರುವವರಿಗೆ ₹2 ಲಕ್ಷದವರೆಗೆ ವಿಮೆ ಲಭ್ಯವಿದೆ.
- ಮರಣೋತ್ತರ ಪರಿಹಾರ : ಕಾರ್ಮಿಕ ಮೃತಪಟ್ಟರೆ, ಅವರ ಕುಟುಂಬಕ್ಕೆ ₹3,000 ಪರಿಹಾರ ನೀಡಲಾಗುತ್ತದೆ.
- ವೃದ್ಧಾಪ್ಯ ಪಿಂಚಣಿ : 60 ವರ್ಷಕ್ಕೆ ತಲುಪಿದ ನಂತರ ಅರ್ಹ ಫಲಾನುಭವಿ ಕಾರ್ಮಿಕರಿಗೆ ತಿಂಗಳಿಗೆ ₹3,000 ರೂಪಾಯಿ ವೃದ್ಧಾಪ್ಯ ಪಿಂಚಣಿ ಸಿಗುತ್ತದೆ.
- ಶಿಕ್ಷಣ ಸಹಾಯ : ಇ-ಶ್ರಮ್ ಕಾರ್ಡ್(e-Shram Card) ಯೋಜನೆಯಡಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನ ನೀಡಲಾಗುವುದು.
- ಆರೋಗ್ಯ ವಿಮೆ : ಈ ಯೋಜನೆಯಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಆರೋಗ್ಯ ವಿಮೆಯನ್ನ ಪಡೆಯಬಹುದು.
ಇ-ಶ್ರಮ್ ಕಾರ್ಡ್(e-Shram Card) ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು.?
- ಭಾರತೀಯ ನಾಗರಿಕರಾಗಿರಬೇಕು.
- 16 ರಿಂದ 59 ವರ್ಷ ವಯಸ್ಸಿನವರಾಗಿರಬೇಕು.
- ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರಬೇಕು. (ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಮನೆಗೆಲಸದವರು, ಕೃಷಿ ಕಾರ್ಮಿಕರು ಇತ್ಯಾದಿ)
ಇ-ಶ್ರಮ್ ಕಾರ್ಡ್(e-Shram Card)ಗೆ ಬೇಕಾದ ಅಗತ್ಯ ದಾಖಲೆಗಳೇನು.?
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ
- ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಗಾತ್ರದ ಫೋಟೋ
ಆನ್ಲೈನ್ ಹೇಗೆ ನೋಂದಣಿ ಮಾಡಿಸುವುದು :-
Ministry of Labour & Employment Government of India ವೆಬ್ ಸೈಟ್ ಗೆ ಭೇಟಿ ನೀಡಿ.“ರೆಜಿಸ್ಟರ್ ಆನ್ಲೈನ್” ಮೇಲೆ ಕ್ಲಿಕ್ ಮಾಡಿ.ನಂತರ ಅರ್ಜಿದಾರರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಎಂಟರ್ ಮಾಡಿ ಮತ್ತು “OTP ಯನ್ನು ನಮೂದಿಸಿ ಕ್ಲಿಕ್ ಮಾಡಿ.ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ, ಕೆಲಸದ ವಿವರಗಳು ಇತ್ಯಾದಿಗಳನ್ನು ಭರ್ತಿ ಮಾಡಿ. ಅಲ್ಲಿ ಕೇಳಿರುವಅಗತ್ಯವಿರುವ ದಾಖಲೆಗಳನ್ನು (ಆಧಾರ್ ಕಾರ್ಡ್, ಫೋಟೋ) ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಹಬ್ಬ ಮುಗಿಸಿ ಬೆಂಗಳೂರಿಗೆ ಬರ್ತಿದ್ದವರ ಬೈಕ್ಗೆ ವಾಹನ ಡಿಕ್ಕಿ, 8 ವರ್ಷದ ಮಗಳು ಸೇರಿ ಮೂವರ ದುರ್ಮರಣ
- ಗಣೇಶನ ಚೌತಿಯಂದೇ ಘೋರ ದುರಂತ – ಫ್ರಿಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರ ಸಜೀವ ದಹನ!
- 16 ಸೆಪ್ಟೆಂಬರ್ 2026: ಮಿಥುನ ಧನು ರಾಶಿಯವರಿಗೆ ವಿಘ್ನಗಳು ಮಾಯ: 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?
- ಸೈಲೆಂಟ್ ಕಿಲ್ಲರ್ ‘ಲಂಗ್ ಕ್ಯಾನ್ಸರ್’: ಈ ದೈನಂದಿನ ಅಭ್ಯಾಸಗಳಿಂದ ಇಂದೇ ದೂರವಿರಿ!
- ಫ್ರಿಡ್ಜ್ ಸ್ಪೋಟಕ್ಕೆ ಹೋಯ್ತಾ ಒಂದೇ ಕುಟುಂಬದ ನಾಲ್ವರ ಪ್ರಾಣ.? ಭೀಕರ ಅಗ್ನಿ ಅವಘಡಕ್ಕೆ ಅಸಲಿ ಕಾರಣ ಏನು.?
- ಬಿಪಿಎಲ್ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ರೇಷನ್ ಪಡೆಯಲು ಇನ್ನುಮುಂದೆ ಬೆರಳಚ್ಚು ಕೊಡುವುದು ಕಡ್ಡಾಯವಿಲ್ಲ!
- ದಿನ ಭವಿಷ್ಯ, ಇಂದು ಈ ರಾಶಿಗೆ ಆಂಜನೇಯನ ಬಲದಿಂದ ಅದೃಷ್ಟವೇ ಬದಲು.. ಹಣ-ಅದೃಷ್ಟ ಹೆಚ್ಚಳ!
- ಬೈಕ್ನಿಂದ ರಸ್ತೆಗೆ ಬಿದ್ದ ಇಬ್ಬರ ಮೇಲೆ ಹರಿದ ಸಾರಿಗೆ ಬಸ್ – ಯುವಕರು ಸ್ಥಳದಲ್ಲೇ ಸಾ*ವು!
- ರಾಜ್ಯದ ಈ 9 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
- ದಿನ ಭವಿಷ್ಯ, ಇಂದು ಗಣೇಶ ಚತುರ್ಥಿ! ಈ ರಾಶಿಯವರ ಜೀವನದಲ್ಲಿ ಮುಖ್ಯ ಬದಲಾವಣೆ ಸಾಧ್ಯ
- ಬ್ರಿಕ್ಸ್ ಔತಣಕೂಟದ ಸಸ್ಯಾಹಾರಿ ಮೆನು ವಿವಾದ : ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ.!
- ಹೃದಯವಿದ್ರಾವಕ ಘಟನೆ : ರೈಲಿನ ತುರ್ತು ಕಿಟಕಿಯಿಂದ ಬಿದ್ದು 9 ತಿಂಗಳ ಮಗು ಸಾ*ವು.!
- ರಾಜ್ಯದ ಜನತೆಗೆ ಗುಡ್ ನ್ಯೂಸ್ : ಹೊಲಿಗೆ ಯಂತ್ರ, ಗಂಗಾ ಕಲ್ಯಾಣ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
- ಬಸ್ ಓಡಿಸುತ್ತಿದ್ದ ಬಾಳೇಶ್ಗೆ ಹೃದಯಾಘಾತ; ತಾನು ಓಡಿಸಿದ ಬಸ್ನಲ್ಲೇ ಅಂತಿಮಯಾತ್ರೆ ಮಾಡಿಸಿದ ಸಾರಿಗೆ ಇಲಾಖೆ
- ತಲೆನೋವು ಎಂದು ಸುಮ್ಮನಾಗಬೇಡಿ! ಬ್ರೈನ್ ಟ್ಯೂಮರ್ನ ಈ ಲಕ್ಷಣಗಳು ಕಂಡ್ರೆ ಹುಷಾರ್
- 21 ವರ್ಷದ ಯುವಕನಿಗೆ ಆಂಟಿ ಮೇಲೆ ಲವ್ ; ವಿರೋಧಿಸಿದ್ದಕ್ಕೆ ಒಂದೇ ನೇಣಿಗೆ ಕೊರಳೊಡ್ಡಿ ಇಬ್ಬರೂ ಆತ್ಮಹತ್ಯೆ.!
- ದಿನ ಭವಿಷ್ಯ (13-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ತಂಗಿ ಜೊತೆ ಅನೈತಿಕ ಸಂಬಂಧ ಶಂಕೆಗೆ ಹಂತಕನಾದ ಅಣ್ಣ : ಊಟ ಮಾಡ್ತಿದ್ದಾಗಲೇ ಯುವಕನ ಕೊಲೆ
- ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಹುಷಾರ್ ಎಂದ ಪೊಲೀಸ್ ಅಧಿಕಾರಿ, ಠಾಣೆಗೆ ನುಗ್ಗೋದಾಗಿ ಪ್ರತಾಪ್ ಸಿಂಹ ಎಚ್ಚರಿಕೆ!
- ಬಿಜೆಪಿಗೆ ಬರುವಂತೆ ಯಾರೂ ಆಫರ್ ಮಾಡಿಲ್ಲ : ಸತೀಶ್ ಜಾರಕಿಹೊಳಿ



















