Labour Board Facilities : ನಮಸ್ಕಾರ ಸ್ನೇಹಿತರೇ, ಇಂತಹ ಕಾರ್ಮಿಕರಿಗೆ 19 ಬಗೆಯ ಸಹಾಯಧನ ಸೌಲಭ್ಯವನ್ನು ಸರಕಾರ ನೀಡುತ್ತದೆ. ಈ ಸಹಾಯಧನ ಪಡೆಯಲು ಕಾರ್ಮಿಕರು ಹೊಂದಿರಬೇಕಾದ
ಅರ್ಹತೆಗಳೇನು.? ಹಾಗು ಬೇಕಾಗುವ ದಾಖಲೆಗಳೇನು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಸುಧಾರಣೆಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಲವು ಸೌಲಭ್ಯಗಳನ್ನು ಜಾರಿಗೆ ತಂದಿದೆ. ಕಾರ್ಮಿಕ ಇಲಾಖೆಯಲ್ಲಿ ಅರ್ಹ ಫಲಾನುಭವಿಗಳು ಹೆಸರು ನೋಂದಾಯಿಸುವ ಮೂಲಕ ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಇದನ್ನೂ ಕೂಡ ಓದಿ : Crop Insurance : ಮುಂಗಾರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಅವಕಾಶ.! ಹೇಗೆ ಅರ್ಜಿ ಸಲ್ಲಿಸುವುದು.? ಡೈರೆಕ್ಟ್ ಲಿಂಕ್
ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳೇನು.?
ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಮದುವೆ, ಹೆರಿಗೆ, ವೈದ್ಯಕೀಯ ಸಹಾಯಧನ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಅಂತ್ಯ ಸಂಸ್ಕಾರಕ್ಕೆ ಸಹಾಯಧನ ಸೇರಿ ಒಟ್ಟು 19 ರೀತಿಯ ಸೌಲಭ್ಯಗಳು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಅರ್ಹ ಕಾರ್ಮಿಕರಿಗೆ ಸಿಗುತ್ತದೆ.
ಈ ಸೌಲಭ್ಯ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು.?
ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ಈ ಸೌಲಭ್ಯಗಳನ್ನು ಪಡೆಯಲು ಸುಮಾರು 51 ಬಗೆಯ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಅರ್ಹರಾಗಿರುತ್ತಾರೆ. ವರ್ಷದ ಹನ್ನೆರಡು ತಿಂಗಳ ಅವಧಿಯಲ್ಲಿ ಕಟ್ಟಡ ಅಥವಾ ಇತರ ನಿರ್ಮಾಣ ಕೆಲಸಗಳಲ್ಲಿ ಕನಿಷ್ಠ 90 ದಿನ ತೊಡಗಿಸಿಕೊಂಡಿರುವ 18 ರಿಂದ 60 ವಯೋಮಿತಿಯವರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಇದನ್ನೂ ಕೂಡ ಓದಿ : Subsidy Loan : ರೈತರಿಗೆ ಹೈನುಗಾರಿಕೆ ಮಾಡಲು ಸಬ್ಸಿಡಿ ಸಹಿತ 2 ಲಕ್ಷ ರೂಪಾಯಿ ಸಾಲ – ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?
ಕಾರ್ಮಿಕ ಇಲಾಖೆಯಲ್ಲಿ ಹೇಗೆ ನೋಂದಣಿ ಮಾಡಿಕೊಳ್ಳುವುದು.?
ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ನೋಂದಣಿಗೆ ನಮೂನೆ 5-1ರ ಅರ್ಜಿಯಲ್ಲಿ ಉದ್ಯೋಗ ದೃಢೀಕರಣ ಪತ್ರ / ಸ್ವಯಂ ದೃಢೀಕರಣ ಪತ್ರ, ಭಾವಚಿತ್ರ, ವಯಸ್ಸಿನ ದಾಖಲೆ, ತನ್ನ ಹಾಗೂ ಅವಲಂಬಿತ ಕುಟುಂಬದವರ ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿ ಸಲ್ಲಿಸಿದರೆ ನೋಂದಣಿಯಾಗಲಿದೆ. ಬಳಿಕ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಿಸಿಕೊಳ್ಳಬೇಕು.
ಕಾರ್ಮಿಕರು ಮಕ್ಕಳ ಮದುವೆಗೆ ಸಹಾಯಧನ ಸೌಲಭ್ಯ ಪಡೆಯಬಹುದಾ.?
ಕಾರ್ಮಿಕರ ಮದುವೆ ಅಥವಾ ಅವರ ಎರಡು ಮಕ್ಕಳ ಮದುವೆಗೆ ಕಟ್ಟಡ ಕಾರ್ಮಿಕ ಮಂಡಳಿಯು 60,000/- ಸಹಾಯಧನವನ್ನ ನೀಡುತ್ತದೆ. ಹಾಗು ಮಂಡಳಿಯ ವತಿಯಿಂದ ನೋಂದಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರು ತಮಗೂ ಹಾಗೂ ತಮ್ಮ ಮಕ್ಕಳ ಮದುವೆಗಾಗಿ ಸಹಾಯಧನ ಪಡೆಯಬಹುದು.
ಇದನ್ನೂ ಕೂಡ ಓದಿ : PM Awas Yojana : ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಕುಟುಂಬಗಳಿಗೆ ಸ್ವಂತ ಮನೆ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್
ಮದುವೆ ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ವಿಧಾನ :-
ಕಟ್ಟಡ ಕಾರ್ಮಿಕ ಮಂಡಳಿಯ ಸೌಲಭ್ಯಗಳಲ್ಲಿ ಕಾರ್ಮಿಕರು ಅಥವಾ ಅವರ ಇಬ್ಬರೂ ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡುವ ಸಲುವಾಗಿ ಕಟ್ಟಡ ಕಾರ್ಮಿಕ ಮಂಡಳಿಯು ಸಹಾಯಧನವನ್ನು ಘೋಷಿಸಿದೆ. ಕಟ್ಟಡ ಕಾರ್ಮಿಕ ಮಂಡಳಿ ನೀಡುವ ಮದುವೆ ಸಹಾಯಧನವನ್ನು ಸರಕಾರದಿಂದ ಪಡೆಯಲು ಕಾರ್ಮಿಕರು ಈ ಕೆಳಗೆ ನೀಡಿರುವ ಅರ್ಹತೆ ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
- ಅರ್ಹ ಫಲಾನುಭವಿಗಳು ನೋಂದಣಿ ದಿನಾಂಕದಿಂದ ಮದುವೆ ದಿನಾಂಕದವರೆಗೆ ಕಾರ್ಮಿಕ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
- ಒಂದು ನೋಂದಾಯಿತ ಕಾರ್ಮಿಕ ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯ ಪಡೆಯಲು ಅವಕಾಶವಿದೆ.
- ಮದುವೆ ಸಹಾಯಧನವನ್ನು ಪಡೆಯಲು ಅರ್ಹ ಫಲಾನುಭವಿಗಳು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
ಕಟ್ಟಡ ಕಾರ್ಮಿಕ ಮಂಡಳಿಯ ಅರ್ಹ ಫಲಾನುಭವಿಗಳು ಮದುವೆಯ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಿ ಈ ಸಹಾಯಧನ ಸೌಲಭ್ಯ ಪಡೆದುಕೊಳ್ಳಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಾರ್ಮಿಕ ಇಲಾಖೆ ಕಚೇರಿ ವಿಳಾಸ ಮತ್ತು ಸಂಪರ್ಕ ಸಂಖ್ಯೆಗೆ ಇಲ್ಲಿ ನೀಡಿರುವ ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿ ಪ್ರಯೋಜನವನ್ನ ಪಡೆದುಕೊಳ್ಳಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- State Bank Updates : ಸ್ಟೇಟ್ ಬ್ಯಾಂಕಿನಲ್ಲಿ ಅತಿ ಹೆಚ್ಚು ಬಡ್ಡಿ ನೀಡುವ ಎಫ್ಡಿ ಯೋಜನೆ ಶುರು! ಸಂಪೂರ್ಣ ಮಾಹಿತಿ ಇಲ್ಲಿದೆ
- Post Office Scheme : ಅಂಚೆ ಇಲಾಖೆಯ ಈ ಯೋಜನೆಯಡಿ ರಿಸ್ಕ್ ಇಲ್ಲದೇ 12 ಲಕ್ಷ ರೂ. ಗಳಿಸಿ.!
- PM Shram Yogi Mandhan : ರೈತರಿಗೆ ಸಿಹಿಸುದ್ಧಿ.! ಈ ಯೋಜನೆಯಡಿ ಕೇಂದ್ರದಿಂದ ಸಿಗಲಿದೆ ಪ್ರತೀ ತಿಂಗಳು ₹3,000/- ರೂಪಾಯಿ ಪಿಂಚಣಿ – ಸಂಪೂರ್ಣ ಮಾಹಿತಿ
- Subsidy Scheme : ಕೇಂದ್ರ ಸರ್ಕಾರದ ಈ ಯೋಜನೆಗಳಡಿ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಿಗಲಿವೆ ಸಾಲ ಸೌಲಭ್ಯಗಳು.!
- SBI ಬ್ಯಾಂಕ್ ನಲ್ಲಿ ಖಾತೆ ಇದ್ದರೆ ತಿಂಗಳಿಗೆ ಮನೆಯಲ್ಲೇ ಕಳಿತು 30 ರಿಂದ 50 ಸಾವಿರ ಹಣ ಗಳಿಸುವ ಸುವರ್ಣಾವಕಾಶ.!
- 10 ಲಕ್ಷದವರೆಗೂ ಸಾಲ ಪಡೆದುಕೊಳ್ಳುವ ಭಾಗ್ಯ..! ಮುದ್ರಾ ಯೋಜನೆಯಲ್ಲಿ ನೀವು ಸ್ವಂತ ಉದ್ಯೋಗಕ್ಕಾಗಿ ಸಾಲ ಪಡೆದುಕೊಳ್ಳಿ.!
- Dina bhavishya : ಇಂದಿನ 12 ರಾಶಿಗಳ ಭವಿಷ್ಯ : ಅದೃಷ್ಟ, ಹಣ, ಆರೋಗ್ಯದ ಸಂಪೂರ್ಣ ಮಾಹಿತಿ
- ಮದುವೆ ಮಾಡಿಕೊಟ್ಟ ಬಳಿಕ ಎಷ್ಟು ವರ್ಷದೊಳಗೆ ಹೆಣ್ಣು ಆಸ್ತಿ ಕೇಳಬಹುದು.? ಇಲ್ಲಿದೆ ಹೊಸ ಬದಲಾವಣೆ – Property Rules
- ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದು ಹೇಗೆ.? ಮಕ್ಕಳಿಗೆ ಹಕ್ಕು ಬರುವುದು ಹೇಗೆ.? ಮಹತ್ವದ ಕೋರ್ಟ್ ತೀರ್ಪಿನ ಮಾಹಿತಿ ಇಲ್ಲಿದೆ
- 1 ಎಕರೆಗೆ ಎಷ್ಟು ಗುಂಟೆ.? ಜಮೀನು ಅಳೆಯುವ ಮುನ್ನ ಇಲ್ಲಿದೆ ಪಕ್ಕಾ ಲೆಕ್ಕಾಚಾರ.!
- ತಾತನಿಂದ ತಂದೆಗೆ ಬಂದ ಆಸ್ತಿಯೆಲ್ಲವೂ ಪಿತ್ರಾರ್ಜಿತವಲ್ಲ; ಮಕ್ಕಳಿಗೆ ಜನ್ಮಸಿದ್ಧ ಹಕ್ಕಿಲ್ಲ ಎಂದ ಹೈಕೋರ್ಟ್
- ದಿನ ಭವಿಷ್ಯ (01-08-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಇಂದಿನ ರಾಶಿಭವಿಷ್ಯ : ಉದ್ಯೋಗ, ವ್ಯವಹಾರ, ಕುಟುಂಬ ಜೀವನ ಹೇಗಿರಲಿದೆ.?
- ಧಾರ್ಮಿಕ ವಿಧಿವಿಧಾನವಿಲ್ಲದ ವಿವಾಹ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು.!
- ಆಧಾರ್, PAN, Voter ID ಇದ್ದರೂ ಭಾರತೀಯ ಪ್ರಜೆ ಎಂದು ಸಾಬೀತಾಗಲ್ಲ! ಹೈಕೋರ್ಟ್ ಶಾಕಿಂಗ್ ತೀರ್ಪು
- ಇಂದಿನ ಅಡಿಕೆ ಬೆಲೆ (31 ಜುಲೈ 2026): ಶಿವಮೊಗ್ಗ, ಕುಂದಾಪುರ, ಪುತ್ತೂರು ಸೇರಿ ಕರ್ನಾಟಕದ ಎಲ್ಲಾ ಪ್ರಮುಖ ಮಾರುಕಟ್ಟೆಗಳ ಸಂಪೂರ್ಣ ದರ
- ಕಿಡ್ನಿ ಫೇಲ್ಯೂರ್ಗೆ ಮುನ್ನ ದೇಹ ನೀಡುವ ಕೊನೆಯ ಎಚ್ಚರಿಕೆ ಇದು! ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!
- ಗೃಹಜ್ಯೋತಿ ಫಲಾನುಭವಿಗಳೇ ಎಚ್ಚರ: ಜುಲೈ ವಿದ್ಯುತ್ ಬಿಲ್ ಬಗ್ಗೆ ಬೆಸ್ಕಾಂನಿಂದ ಹೊಸ ಪ್ರಕಟಣೆ!
- Gold Loan New Rules : ಚಿನ್ನದ ಸಾಲಗಾರರಿಗೆ ಬಿಗ್ ಅಲರ್ಟ್! ಬುಲೆಟ್ ಪಾವತಿ ಬಂದ್? EMI ಕಡ್ಡಾಯಕ್ಕೆ ಹೊಸ ನಿಯಮ ಸಾಧ್ಯತೆ
- ಹೊಸ ರೇಷನ್ ಕಾರ್ಡ್ ಪಡೆಯುವವರಿಗೆ ಗುಡ್ ನ್ಯೂಸ್! ಪ್ರತ್ಯೇಕ ಕಾರ್ಡ್ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ



















