Farmer RTC : ನಮಸ್ಕಾರ ಸ್ನೇಹಿತರೇ, ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ಜಮೀನುಗಳ ಮಾಲೀಕರಿಗೆ ರಾಜ್ಯದ ಕಂದಾಯ ಇಲಾಖೆ ಮತ್ತು ರಾಜ್ಯ ಸರ್ಕಾರದಿಂದ ಹೊಸ ನಿಯಮ ಜಾರಿಗೊಳಿಸಿದ್ದು, ಇಡೀ ದೇಶದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಹೊಸ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಜಮೀನಿನ ಮಾಲೀಕರು ತಪ್ಪದೇ ಕಡ್ಡಾಯವಾಗಿ ಈ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಇಲ್ಲಾಂದ್ರೆ ನಿಮ್ಮ ಜಮೀನು, ನಿಮ್ಮ ಆಸ್ತಿಗೆ ಸರ್ಕಾರ ಜವಾಬ್ದಾರಿಯಾಗಿ ಇರುವುದಿಲ್ಲ ಎನ್ನುವುದನ್ನ ರಾಜ್ಯ ಕಂದಾಯ ಇಲಾಖೆ ಮತ್ತು ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಅಂದ್ರೆ ಸರ್ವೆ ಡಿಪಾರ್ಟ್ಮೆಂಟ್ ಕೂಡ ರಾಜ್ಯದ ಎಲ್ಲ ರೈತರಿಗೆ ಸ್ಪಷ್ಟಪಡಿಸಿದೆ.
ಇದನ್ನೂ ಕೂಡ ಓದಿ : ರೈತರ ಸಾಲದ ಮೇಲಿನ ಬಡ್ಡಿ ಮನ್ನಾ.! ಯಾರೆಲ್ಲಾ ಅರ್ಹರು.? ಬೇಕಾಗುವ ದಾಖಲೆಗಳೇನು.? ಹೇಗೆ ಅರ್ಜಿ ಸಲ್ಲಿಸುವುದು.?
ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಪಹಣಿ ಹೊಂದಿರುವ ರೈತರು ಕಡ್ಡಾಯವಾಗಿ ಇದೇ ಜುಲೈ 31 ರ ಒಳಗಾಗಿ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ. ಇಲ್ಲಾಂದ್ರೆ ಸರ್ಕಾರದಿಂದ ದೊರೆಯುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣ ಇನ್ನು ಮುಂದೆ ನಿಮಗೆ ಸಿಗುವುದಿಲ್ಲ. ಸಬ್ಸಿಡಿ ಕೃಷಿ ಯಂತ್ರೋಪಕರಣಗಳು ಕೂಡ ನಿಮಗೆ ಲಭ್ಯವಿರುವುದಿಲ್ಲ. ಹನಿ ನೀರಾವರಿ ಮತ್ತು ತುಂತುರು ನೀರಾವರಿ ಸಬ್ಸಿಡಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ. ಸಬ್ಸಿಡಿ ಬೀಜಗಳು ಸೇರಿದಂತೆ ಗಂಗಾ ಕಲ್ಯಾಣ ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಯಾವುದೇ ಯೋಜನೆಗಳ ಲಾಭಗಳು ಇನ್ನು ಮುಂದೆ ನಿಮಗೆ ಸಿಗುವುದಿಲ್ಲ.
ಯಾರದ್ದೋ ಜಮೀನನ್ನ ಮತ್ತೊಬ್ಬರು ಲಪಟಾಯಿಸಿದನ್ನ ತಡೆಯುವುದಕ್ಕೆ, ಬೆಳೆನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಅಂತ ತಿಳಿಸಲಾಗಿದೆ. ರಾಜ್ಯದಾದ್ಯಂತ ನಾಲ್ಕು ಕೋಟಿಗೂ ಅಧಿಕ ಆರ್ ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.75 ಕೋಟಿ ಆರ್ ಟಿಸಿಗಳನ್ನ ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಲ್ಲದೆ 1.20 ಕೋಟಿ ಆರ್ಟಿಸಿಗಳನ್ನು ಒಟಿಪಿ ಮೂಲಕ ಈ-ಕೆವೈಸಿ ಮಾಡಲಾಗಿದೆ. ಕಲಬುರ್ಗಿ ವಿಭಾಗದಲ್ಲಿ 45 ಲಕ್ಷ ಆಸ್ತಿ ಮಾಲೀಕರಿದ್ದು, ಈ ಪೈಕಿ 18 ಲಕ್ಷ ಅರ್ಜಿಗಳನ್ನು ಮಾತ್ರ ಆಧಾರ್ಗೆ ಜೋಡಣೆ ಮಾಡಲಾಗಿದೆ. ಇನ್ನು ಶೇಕಡಾ 90% ರಷ್ಟು ಪ್ರಗತಿ ಸಾಧಿಸಬೇಕು ಅಂತ ಈ ವಿಚಾರದಲ್ಲಿ ತಾಕೀತು ಕೂಡ ಮಾಡಲಾಗಿದೆ.
ಇದನ್ನೂ ಕೂಡ ಓದಿ : SBI Bank Recruitment : ಎಸ್ ಬಿಐ ಬ್ಯಾಂಕಿನಲ್ಲಿ ಉದ್ಯೋಗವಕಾಶ.! ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್
ಇನ್ನು ಆರ್ ಟಿಸಿಗಳನ್ನ ಆಧಾರ್ ಗೆ ಲಿಂಕ್ ಮಾಡುವ ಮೂಲಕ ಯಾರದ್ದೋ ಜಮೀನನ್ನ ಬೇರೆ ಯಾರಾದರೂ ಮಾರಾಟ ಮಾಡುವಂತಹ ವಂಚನೆಗಳನ್ನು ಇದರಿಂದ ತಡೆಯಬಹುದಾಗಿದೆ. ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರವನ್ನ ತಲುಪಿಸುವುದಕ್ಕೆ ಹಾಗೂ ಸಬ್ಸಿಡಿ ನೀಡುವುದಕ್ಕೂ ಕೂಡ ಇದು ಸಹಕಾರಿಯಾಗುತ್ತೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್ ಜೋಡಣೆ ಮಾಡಬೇಕು. ಆಧಾರ್ ಜೋಡಣೆಯಿಂದ ಜನರಿಗೆ ಆಗುವ ಅನುಕೂಲ ಏನು.? ಎನ್ನುವ ಕುರಿತು ಕ್ಯಾಂಪೇನ್ ಮಾಡಿ, ಇದರಿಂದ ಒಳ್ಳೆಯ ಆಡಳಿತ ನೀಡಬಹುದು. ಅಧಿಕಾರಿಗಳ ಕೆಲಸದ ಒತ್ತಡವು ಕಡಿಮೆ ಆಗುತ್ತೆ ಅಂತ ತಿಳಿಸಲಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Instant Loan App : ಆನ್ಲೈನ್ ಲೋನ್ ಪಡೆಯುವ ಮುನ್ನ ಈ ಸತ್ಯ ತಿಳ್ಕೊಳ್ಳಿ – ಯುವಕರೇ ಎಚ್ಚರ.!
- ನನ್ನ ತಾಯಿ ತೀರಿಕೊಂಡಿದ್ದಾರೆ. ತಾಯಿಯ ತವರು ಮನೆಯಲ್ಲಿ ಆಸ್ತಿ ಭಾಗ ಕೇಳಬಹುದ.? ಎಷ್ಟು ಆಸ್ತಿ ಸಿಗುತ್ತೆ.? ಸಂಪೂರ್ಣ ಮಾಹಿತಿ
- ಸಾಲಕ್ಕಾಗಿ ಇನ್ನು ಅಲೆಯಬೇಕಿಲ್ಲ, ಆಧಾರ್ ಕಾರ್ಡ್ ಇದ್ದರೆ ಸಾಕು 2.5 ಲಕ್ಷ ರೂ ಲೋನ್ ಸಿಗುತ್ತೆ – PM SVANidhi
- PM Vishwakarma Yojana : ಕಡಿಮೆ ಬಡ್ಡಿದರದಲ್ಲಿ 5 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ.! ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು.?
- Atal Pension Yojana : ಈ ಯೋಜನೆಯಡಿ ಪ್ರತಿ ತಿಂಗಳಿಗೆ ₹5,000/- ಪಿಂಚಣಿ ಪಡೆಯಲು ಅರ್ಜಿ ಆಹ್ವಾನ.! ಬೇಕಾಗುವ ದಾಖಲೆಗಳೇನು.?
- Kisan Credit Card Scheme : ಇನ್ನು ಮುಂದೆ ಎಲ್ಲ ರೈತರಿಗೂ ಪಶು ಕಿಸಾನ್ ಕಾರ್ಡ್ ನಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ.! ಅರ್ಜಿ ಸಲ್ಲಿಸುವುದು ಹೇಗೆ.?
- CJP ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
- ದಿನ ಭವಿಷ್ಯ – ಈ ರಾಶಿಯವರಿಗಿಂದು ಬಂಪರ್ ಲಾಟ್ರಿ! ಕೆಲಸದಲ್ಲಿ ಬಡ್ತಿ, ಹೊಸ ಕಾರು ಖರೀದಿಸುವ ಯೋಗ.!
- ದಿನ ಭವಿಷ್ಯ (24-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- 30 ನಿಮಿಷಕ್ಕಿಂತ ಹೆಚ್ಚು ಹೊತ್ತು ಎದ್ದೇಳದೆ ಕುಳಿತುಕೊಳ್ಳುತ್ತೀರಾ ? ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು ಎಚ್ಚರ.!
- ಮಹಿಳೆಯರಿಗಿಂತ ಪುರುಷರಲ್ಲೇ ಹೃದಯ ರೋಗದ ಅಪಾಯ ಹೆಚ್ಚು ; ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ..!
- ‘ಬ್ರೈನ್ ಸ್ಟ್ರೋಕ್’ ಬರುವ 24 ಗಂಟೆ ಮುನ್ನವೇ ದೇಹ ನೀಡುತ್ತೆ ಈ 6 ಎಚ್ಚರಿಕೆ ಸಂಕೇತಗಳು.!
- ದಿನ ಭವಿಷ್ಯ (21-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- 40ರಲ್ಲೂ 25ರವರಂತೆ ಕಾಣಬೇಕೇ? ಆರೋಗ್ಯ ತಜ್ಞರು ಹೇಳಿದ ಈ 4 ಆಹಾರ ಪದ್ಧತಿ ನಿಮ್ಮನ್ನು ಸದಾ ಯಂಗ್ ಆಗಿ ಇಡುತ್ತೆ!
- ಲೈಂಗಿಕ ಸಾಮರ್ಥ್ಯದ ಕೊರತೆಯ ಆತಂಕವೇ.? ಹೀಗ್ ಮಾಡಿದ್ರೆ ನಿಮ್ಮೆಲ್ಲಾ ಸಮಸ್ಯೆಗಳು ಮಾಯ..!
- ಯಾರಿಗೂ ಗೊತ್ತಾಗಲ್ಲ ಅಂತ ‘ಪೋರ್ನ್ ವಿಡಿಯೋ’ ನೋಡುವವರೇ ಇತ್ತ ಗಮನಿಸಿ!
- 110-210 ರೂ.ಗೆ ಪೆಟ್ರೋಲ್ ಹಾಕಿಸುವ ಟ್ರಿಕ್ಸ್ ಹಳೇದಾಯ್ತು : 2 ‘ಗೋಲ್ಡನ್ ಟಿಪ್ಸ್’ ಕೊಟ್ಟ ಪೆಟ್ರೋಲ್ ಬಂಕ್ ಉದ್ಯೋಗಿ
- ದಿನ ಭವಿಷ್ಯ (20-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..? ಸಂಪೂರ್ಣ ಮಾಹಿತಿ
- ದಿನ ಭವಿಷ್ಯ (19-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- Dina Bhavishya : ದಿನ ಭವಿಷ್ಯ (18-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?



















