Kisan Credit Card Scheme : ನಮಸ್ಕಾರ ಸ್ನೇಹಿತರೇ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ದೇಶದಲ್ಲಿ ರೈತರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಸರ್ಕಾರವು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆ ಜಾರಿಗೆ ತಂದಿದೆ. ಇದರಿಂದಾಗಿ ಜಾನುವಾರುಗಳನ್ನು ಸಾಕಾಣಿಕೆ ಮಾಡುವವರಿಗೆ ಆರ್ಥಿಕ ನೆರವು ನೀಡಿದಂತಾಗುತ್ತದೆ. ಸ್ನೇಹಿತರೇ, ಏನಿದು ಪಶು ಕಿಸಾನ್ ಕಾರ್ಡ್ ಯೋಜನೆ.? ಇದರಿಂದ ರೈತರಿಗೆ ಏನೆಲ್ಲಾ ಉಪಯೋಗಗಳಿವೆ.? ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆಯುವುದು ಹೇಗೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card)
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ, ನೀವು ಹಸು ಮತ್ತು ಎಮ್ಮೆಗಳ ಸಾಕಾಣಿಕೆಯನ್ನು ಮಾಡಲು ಈ ಕ್ರೆಡಿಟ್ ಕಾರ್ಡ್ ಮೂಲಕ ಸರ್ಕಾರದಿಂದ ಸಾಲವನ್ನು ಪಡೆಯಬಹುದು. ನೀವು ಬ್ಯಾಂಕುಗಳಲ್ಲಿ ಅರ್ಜಿಯನ್ನು ಸಲ್ಲಿಸಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ನೀವು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಪಶು ಕ್ರೆಡಿಟ್ ಕಾರ್ಡ್ ಮೂಲಕ ಪಶುಗಳ ನಿರ್ವಹಣೆಗೆ ಬೇಕಾದ ಎರಡರಿಂದ ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಪಡೆದ ಸಾಲಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ.
ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್
ಪಶು ಕಿಸಾನ್ ಕಾರ್ಡ್ ನಿಂದ ಎಷ್ಟು ಸಾಲ ಸಿಗುತ್ತದೆ.?
ಈ ಪಶು ಕಿಸಾನ್ ಕಾರ್ಡ್ ನಿಂದ ಒಂದು ಎಮ್ಮೆ ಸಾಕಾಣಿಕೆ ಮಾಡಲು ₹60,249/- ರೂಪಾಯಿ ಸಾಲ ಸಿಗಲಿದೆ, ಹಾಗೆಯೇ ಒಂದು ಆಕಳನ್ನು ನಿರ್ವಹಣೆ ಮಾಡಲು ₹40,783/- ರೂಪಾಯಿ ಸಾಲಗಳನ್ನು ನೀಡಲಾಗುತ್ತದೆ. ನಿಮ್ಮ ಬಳಿ ಎಷ್ಟು ಎಮ್ಮೆ ಮತ್ತು ಎಷ್ಟು ಹಸು ಇದೆಯೋ ಅಷ್ಟಕ್ಕೆ ಮಾತ್ರ ನೀವು ಈ ಪಶು ಕಿಸಾನ್ ಕಾರ್ಡ್ ನಿಂದ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 1.6 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನೀವು ಪಶು ಸಾಕಾಣಿಕೆ ಮಾಡಲು ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲದೆ ಸಾಲ ಪಡೆದರೆ 7% ಬಡ್ಡಿ ಕಟ್ಟಬೇಕಾಗುತ್ತದೆ, ಆದರೆ ಪಶು ಕಿಸಾನ್ ಕಾರ್ಡ್ ಮೂಲಕ ಪಡೆದಂತಹ ಸಾಲಕ್ಕೆ ನೀವು ಕೇವಲ 4% ಬಡ್ಡಿದರ ಕಟ್ಟಬೇಕಾಗುತ್ತದೆ.
ಯಾವ ಬ್ಯಾಂಕ್ ಗಳಲ್ಲಿ ನೀವು ಸಾಲ ಪಡೆದುಕೊಳ್ಳಬಹುದು.?
ದೇಶದ ಬಹುತೇಕ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರಿಗೆ ಸಾಲ ಸಿಗುತ್ತದೆ. ಆಕ್ಸಿಸ್ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ(Kisan Credit Card) ಮೂಲಕ ಪಶುಗಳ ನಿರ್ವಹಣೆಗೆ ಬೇಕಾದ ಸಾಲವನ್ನು ರೈತರಿಗೆ ನೀಡಲಾಗುತ್ತದೆ .
ಪಶು ಕಿಸಾನ್ ಕ್ರೆಡಿಟ್ ಕಾರ್ಡ ಪಡೆಯಲು ನೀವು ರಾಷ್ಟ್ರೀಕೃತ ಬ್ಯಾಂಕ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಫಾರ್ಮ್ ಪಡೆದು, ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ, ಕೆವೈಸಿಗೆ ಬೇಕಾಗಿರುವ ದಾಖಲೆಗಳನ್ನು ನೀಡಿ ನೀವು ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ನೀವು ನೀಡಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಕೊಂಡು, ನೀವು ನೀಡಿದಂತಹ ದಾಖಲೆಗಳು ಸರಿಯಾಗಿದ್ದರೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನ್ನು ನಿಮಗೆ ನೀಡುತ್ತಾರೆ.
ಇದನ್ನೂ ಕೂಡ ಓದಿ : Scholarship : ಶಾಲಾ ವಿಧ್ಯಾರ್ಥಿಗಳಿಗೆ ದೊರೆಯಲಿದೆ 10 ಸಾವಿರ ಪ್ರೋತ್ಸಾಹ ಧನ! ಇಲ್ಲಿದೆ ಅರ್ಜಿ ಹಾಕುವ ವಿವರ
ಬೇಕಾಗುವ ದಾಖಲೆಗಳೇನು.?
- ಭೂಮಿಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ
- ಜಾನುವಾರಗಳ ಆರೋಗ್ಯದ ಬಗ್ಗೆ ಸರ್ಟಿಫಿಕೇಟ್
- ಬ್ಯಾಂಕ್ ಖಾತೆಯ ವಿವರ
- ಪಾಸ್ಪೋರ್ಟ್ ಸೈಜ್ ಫೋಟೋ
ಮೇಲೆ ತಿಳಿಸಿದಂತಹ ಎಲ್ಲಾ ಪ್ರಮುಖ ದಾಖಲೆಗಳನ್ನು ಸರಿಪಡಿಸಿಕೊಂಡು, ಹತ್ತಿರವಿರುವ ಬ್ಯಾಂಕ್ ಗೆ ಭೇಟಿ ನೀಡಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಫಾರ್ಮ್ ಪಡೆದು ಅರ್ಜಿಯನ್ನು ಸಲ್ಲಿಸಿ, ಹೈನುಗಾರಿಕೆಗೆ ಬೇಕಾದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- GOOD NEWS: ‘ಮಹಿಳಾ ಉದ್ಯೋಗಿ’ಗಳಿಗೆ ಗುಡ್ ನ್ಯೂಸ್: ಮಾಸಿಕ 1 ದಿನ ‘ಋತುಚಕ್ರ ರಜೆ’ ಮಂಜೂರು, ಸರ್ಕಾರ ಆದೇಶ.!
- ಬೆಂಗಳೂರು ಫ್ಲ್ಯಾಟ್ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ
- ಬೆಂಗಳೂರಿನ ಹೃದಯಭಾಗದಲ್ಲೇ ಇದೆ ಪಾಕಿಸ್ತಾನ, ಚೀನಾ ಪ್ರಜೆಗಳ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ.!
- ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ 1 ಲಕ್ಷ ರೂ. ಆರ್ಥಿಕ ನೆರವು – ಶೇ.20ರಷ್ಟು ಸಬ್ಸಿಡಿ.!
- ರಾಜ್ಯದ ರೈತರಿಗೆ ಸಿಹಿಸುದ್ಧಿ : ಮೃತರ ಹೆಸರಲ್ಲಿನ ಜಮೀನು ವಾರಸುದಾರರಿಗೆ ಬದಲಿಸಲು ಪೌತಿ ಖಾತೆ, ಪೋಡಿಗೆ ಡಿಸೆಂಬರ್ ಗಡುವು
- ರಜೆ ಬಳಿಕ ಇದೀಗ 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್.! ಏನಿದು ಹೊಸ ನಿಯಮ!
- ಬೆಳೆ ಸಮೀಕ್ಷೆ 2025 : AI ತಂತ್ರಜ್ಞಾನದೊಂದಿಗೆ ರೈತರಿಗೆ ಬಂಗಾರದ ಅವಕಾಶ! ನೀವು ಇನ್ನೂ ಮಾಡದೇ ಇದ್ದರೆ ಈ ಕ್ಷಣವೇ ಆರಂಭಿಸಿ!
- Gruhalakshmi Loan Scheme – ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಗುಡ್ ನ್ಯೂಸ್.! ಸೊಸೈಟಿಯಿಂದ ₹3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ.!
- ಬಡ ಜನರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು 2.5 ಲಕ್ಷ ಸರ್ಕಾರದಿಂದ ಸಹಾಯಧನ! Rajiv Gandhi Vasati Yojana
- Bele Parihara : ಬೆಳೆ ಪರಿಹಾರ ಹಣ – ಪರಿಹಾರ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ
- ದೇಶದ ಎಲ್ಲಾ ಬ್ಯಾಂಕ್ ನೌಕರರಿಗೆ ಇದೀಗ ಹೊಸ ರೂಲ್ಸ್ | ಸ್ಥಳೀಯ ಭಾಷೆ ಬಳಕೆ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ.!
- ಬ್ಯಾಂಕ್ FD ಗಿಂತ ಹೆಚ್ಚು ಬಡ್ಡಿ ಸಿಗುತ್ತೆ ಈ ಆರು ಯೋಜನೆಗಳಲ್ಲಿ.! ಯಾವ ಯೋಜನೆ.? ಸಂಪೂರ್ಣ ಮಾಹಿತಿ
- ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಮನೆ ಕಟ್ಟಡ ನಿರ್ಮಿಸಿದವರಿಗೆ ಭರ್ಜರಿ ಗುಡ್ ನ್ಯೂಸ್ – ಸಕ್ರಮ ಮಾಡಿಕೊಳ್ಳಲು ಅರ್ಜಿ ಆಹ್ವಾನ
- ಮನೆ ಬಾಡಿಗೆದಾರ `ಮನೆಯ ಮಾಲೀಕತ್ವ’ ಹೊಂದುವುದು ಅಸಾಧ್ಯ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು
- ‘PM ಆವಾಸ್ ಯೋಜನೆ’ಯಡಿ ಮನೆ ಕಟ್ಟಲು ಸಿಗಲಿದೆ 25 ಲಕ್ಷ ರೂ. ಸಾಲ.! ಅರ್ಜಿ ಹೇಗೆ ಸಲ್ಲಿಸುವುದು.?
- ಅಡಿಕೆ ತೋಟ ಮಾಡಲು ಸಬ್ಸಿಡಿ ಯೋಜನೆ – ಸಿಗಲಿದೆ ಎಕರೆಗೆ ಇಷ್ಟು ಸಹಾಯ ಧನ.!
- 10 ವರ್ಷದ ಬ್ಯಾಂಕ್ ಖಾತೆ ಇದ್ದವರಿಗೆ ದೊಡ್ಡ ಗುಡ್ ನ್ಯೂಸ್ | ಬ್ಯಾಂಕ್ ಖಾತೆ ಹೊಂದಿರುವವರು ತಪ್ಪದೇ ನೋಡಿ
- ಅಡಿಕೆ ನಿಷೇಧ ಚರ್ಚೆಗಳಿಂದ ಆತಂಕದಲ್ಲಿದ್ದ ಬೆಳೆಗಾರರಿಗೆ ಗುಡ್ ನ್ಯೂಸ್ : ಅಡಕೆಯಲ್ಲಿದೆ ಕ್ಯಾನ್ಸರ್ ಪ್ರತಿಬಂಧಕ ಗುಣ
- ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆಯ ಮೇಲೆ ಅತ್ಯಾಚಾರ : ಹೊಟ್ಟೆಗೆ ಒದ್ದು ಭ್ರೂಣ ಹೊರ ತೆಗೆದು ಬಾಲಕನಿಂದ ಭೀಕರ ಕೃತ್ಯ!
- ರಾಜ್ಯದ ಮಹಿಳೆಯರಿಗೆ ಇನ್ನೊಂದು ಭಾಗ್ಯ, ನ. 19 ರಂದು ರಾಜ್ಯದ ಹೊಸ ಯೋಜನೆ ಜಾರಿ



















