ತಾಂಡವ್ನನ್ನು ಬ್ಲಾಕ್ಮೇಲ್ ಮಾಡಿ ಮನೆಗೆ ಬಂದು ಸೇರಿಕೊಂಡಿರುವ ಶ್ರೇಷ್ಠಾ, ತಾನು ಅಧಿಕೃತವಾಗಿ ಆ ಮನೆ ಸೊಸೆ ಎನ್ನುವಂತೆ ವರ್ತಿಸುತ್ತಿದ್ದಾಳೆ. ಮನೆಯವರೆಲ್ಲಾ ನನ್ನನ್ನು ಇಲ್ಲಿಂದ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಆ ಭಾಗ್ಯಾಗಿಂತ ಕಡಿಮೆ ಎನಿಸಿಕೊಳ್ಳಬಾರದು ಎಂದು ಮನೆ ಕೆಲಸವನ್ನು ತಾನೇ ಮಾಡುತ್ತಿದ್ದಾಳೆ.
ಸತ್ಯನಾರಾಯಣಸ್ವಾಮಿಗೆ ಪ್ರಸಾದ ತಯಾರಿಸುತ್ತೇನೆ ಎಂದು ಹೇಳಿ ಶ್ರೇಷ್ಠಾ, ಉಪ್ಪಿಟ್ಟು ತಯಾರಿಸುತ್ತಾಳೆ. ಅದನ್ನು ನೋಡಿ ಅರ್ಚಕರು ಇಷ್ಟು ವರ್ಷಗಳ ಕಾಲ ಪೂಜೆ ಮಾಡಿದ್ದೇನೆ ಎಲ್ಲಿಯೂ ಈ ರೀತಿ ಪ್ರಮಾದ ಆಗಿಲ್ಲ, ಯಾರಾದರೂ ಸತ್ಯನಾರಾಯಣ ಪೂಜೆಗೆ ಉಪ್ಪಿಟ್ಟು ತಯಾರಿಸುತ್ತಾರಾ ಎಂದು ಕೇಳುತ್ತಾರೆ, ಅದರ ರುಚಿ ನೋಡುವ ಶ್ರೇಷ್ಠಾ ಚೆನಾಗಿದೆಯಲ್ಲಾ ಇದನ್ನು ಏಕೆ ಪ್ರಸಾದವಾಗಿ ಇಡುವುದಿಲ್ಲ ಎಂದು ಕೇಳುತ್ತಾಳೆ. ಶ್ರೇಷ್ಠಾ ವರ್ತನೆಗೆ ತಾಂಡವ್ ಬಿಟ್ಟು ಉಳಿದವರು ಸಿಟ್ಟಾಗುತ್ತಾರೆ. ನಾನು ಮನೆಯಲ್ಲಿ ಪೂಜೆ ಮಾಡುವುದಿಲ್ಲ ಎಂದು ಅರ್ಚಕರು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಅವರನ್ನು ಮನವಿ ಮಾಡುವ ಭಾಗ್ಯಾ ನಾನು ಇನ್ನು 5 ನಿಮಿಷದಲ್ಲಿ ದೇವರಿಗೆ ಪ್ರಸಾದ ಮಾಡಿಕೊಡುತ್ತೇನೆ ಎನ್ನುತ್ತಾಳೆ.
ಹೇಳಿದಂತೆ ಭಾಗ್ಯಾ 5 ನಿಮಿಷಕ್ಕೆ ಪ್ರಸಾದ ಮಾಡಿ ತರುತ್ತಾಳೆ. ಪೂಜೆಗೆ ಯಾರು ಕೂರುತ್ತಾರೆ ರಂದು ಅರ್ಚಕರು ಕೇಳುತ್ತಾರೆ. ಭಾಗ್ಯಾ ಹಾಗೂ ತಾಂಡವ್ ಕೂರುತ್ತಾರೆ ಎಂದು ಧರ್ಮರಾಜ್ ಹೇಳುತ್ತಾಳೆ. ಆದರೆ ಶ್ರೇಷ್ಠಾ ಅದಕ್ಕೆ ನಿರಾಕರಿಸುತ್ತಾಳೆ. ಡಿವೋರ್ಸ್ ಆಗಿರುವ ಭಾಗ್ಯಾ ಹೇಗೆ ತಾಂಡವ್ ಜೊತೆ ಪೂಜೆಗೆ ಕೂರುತ್ತಾಳೆ? ನಾನು ಕೂರುತ್ತೇನೆ ಎನ್ನುತ್ತಾಳೆ. ತಾಳಿ ಇಲ್ಲದೆ ನೀನು ಪೂಜೆಗೆ ಕೂರೋಕೆ ಆಗುವುದಿಲ್ಲ ಎಂದು ಸುನಂದಾ ಹೇಳುತ್ತಾಳೆ.ಹಾಗಾದರೆ ಈ ಪೂಜೆ ನಡೆಯುವುದಿಲ್ಲ, ಭಾಗ್ಯಾ ತನ್ನ ಸ್ವಾರ್ಥಕ್ಕಾಗಿ ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ನಿಲ್ಲಿಸುತ್ತಾಳೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಪೂಜೆ ನಿಲ್ಲುವುದಿಲ್ಲ, ಈ ಮನೆಯಲ್ಲಿ ಹಿರಿಯ ದಂಪತಿ ಇದ್ದಾರೆ, ನನ್ನ ಅತ್ತೆ ಮಾವ, ಅವರು ಪೂಜೆಗೆ ಕೂರುತ್ತಾರೆ ಎಂದು ಭಾಗ್ಯಾ ಹೇಳುತ್ತಾಳೆ.
ಕುಸುಮಾ, ಧರ್ಮರಾಜ್ ಇಬ್ಬರೂ ಪೂಜೆಗೆ ಕೂರುತ್ತಾರೆ. ಪೂಜೆ ಮುಗಿದ ನಂತರ ಎಲ್ಲರಿಗೂ ತಾಂಬೂಲ ಕೊಡುವಂತೆ ಅರ್ಚಕರು ಭಾಗ್ಯಾಗೆ ತಟ್ಟೆ ಕೊಡುತ್ತಾರೆ. ಅದನ್ನು ತೆಗೆದುಕೊಳ್ಳಲು ಭಾಗ್ಯಾ ಹೋದಾಗ, ಅವಳ ಕೈಯಿಂದ ಶ್ರೇಷ್ಠಾ ಕಸಿದುಕೊಂಡು ಎಲ್ಲರಿಗೂ ತಾಂಬೂಲ ಕೊಡಲು ಹೋಗುತ್ತಾಳೆ. ಆದರೆ ಅವಳ ಕೈಯಿಂದ ಯಾರೂ ತಾಂಬೂಲ ತೆಗೆದುಕೊಳ್ಳುವುದಿಲ್ಲ. ಈ ಮನೆಗೆ ತಕ್ಕ ಸೊಸೆ ಭಾಗ್ಯಾ, ಅವಳು ಕೊಟ್ಟರೆ ಮಾತ್ರ ನಾವು ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಪೂಜಾ ಬಂದು ಶ್ರೇಷ್ಠಾ ಕೈಯಿಂದ ತಾಂಬೂಲದ ತಟ್ಟೆ ಕಸಿದುಕೊಂಡು ಭಾಗ್ಯಾಗೆ ಕೊಡುತ್ತಾಳೆ.
ಕೋಪಗೊಂಡ ಶ್ರೇಷ್ಠಾ ರೂಮ್ಗೆ ಹೋಗುತ್ತಾಳೆ. ನಾನು ಭಾಗ್ಯಾ ಆಗಿ ಇದ್ದರೆ ಇವರನ್ನೆಲ್ಲಾ ಬಗ್ಗಿಸಲು ಸಾಧ್ಯವಿಲ್ಲ. ನಾನು ಶ್ರೇಷ್ಠಾ ಆಗೇ ಇವರಿಗೆ ಬುದ್ಧಿ ಕಲಿಸುತ್ತೇನೆ ಎಂದುಕೊಳ್ಳುತ್ತಾಳೆ. ಮರುದಿನ ಆಫೀಸಿಗೆ ಹೋಗಲು ರೆಡಿ ಆಗುತ್ತಾಳೆ. ನೀನು ಆಫೀಸಿಗೆ ಹೋದರೆ ಮನೆ ಕೆಲಸ ಯಾರು ಮಾಡುತ್ತಾರೆ ಎಂದು ಕುಸುಮಾ ಕೇಳುತ್ತಾಳೆ. ಅದಕ್ಕೆ ನಾನು ಎಲ್ಲಾ ರೆಡಿ ಮಾಡಿದ್ದೇನೆ ಎಂದು ಹೇಳುವ ಶ್ರೇಷ್ಠಾ, ಮನೆ ಕೆಲಸದವಳನ್ನು ಕರೆಯುತ್ತಾಳೆ.
ಮನೆ ಕೆಲಸದವಳನ್ನು ಕುಸುಮಾ ಒಪ್ಪುತ್ತಾಳಾ.? ಶ್ರೇಷ್ಠಾ ಮತ್ತೇನು ಅವಾಂತರ ಮಾಡುತ್ತಾಳೆ.? ಮುಂದಿನ ಎಪಿಸೋಡ್ಗಳಲ್ಲಿ ಉತ್ತರ ದೊರೆಯಲಿದೆ.
- ಬೆಳಗ್ಗೆ ನಿದ್ರೆಯಿಂದ ಎದ್ದಾಗ ತಲೆ ತಿರುಗಿದಂತೆ ಅನ್ನಿಸುತ್ತಾ ? ನಿಮ್ಮ ದೇಹ ನೀಡುತ್ತಿದೆ ಈ ‘ಡೇಂಜರ್ ಸಿಗ್ನಲ್’.!
- Horoscope Today : 15 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಅದಾನಿ ಕಂಪನಿಯಲ್ಲಿ ಯಾರೊಬ್ಬರೂ ದಲಿತರು ಮೇಲಧಿಕಾರಿಗಳು ಸಿಗಲ್ಲ: ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ
- ಕಾಂಗ್ರೆಸ್ ಭಾರತ ವಿರೋಧಿಗಳ ಕೈಗೊಂಬೆ, ಜನರಲ್ಲಿ ಭಯ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ
- ‘ವಿದ್ಯುತ್ ಬಿಲ್’ನಲ್ಲಿ ಹೆಸರು ಬದಲಾವಣೆ ಬಹಳ ಸುಲಭ ; ಮೊಬೈಲ್’ನಲ್ಲೇ ಜಸ್ಟ್ ಹೀಗೆ ಮಾಡಿ.!
- ಈ ಒಂದೇ ಎಲೆ 100 ರೋಗಗಳಿಗೆ ಔಷಧಿ ; ಮನೆಯಲ್ಲಿದ್ರೆ ವೈದ್ಯರೇ ಬೇಕಾಗಿಲ್ಲ!
- Horoscope Today : 14 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಮದುವೆಯಾದ ಎರಡೇ ತಿಂಗಳಲ್ಲಿ ಹ*ತ್ಯೆ – ಪತ್ನಿ, ಪ್ರಿಯಕರನ ಸಂಚು ಬಯಲು.!
- Horoscope Today : 13 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ರಸ್ತೆಯಲ್ಲಿ ಹಾಕಿದ ರಾಗಿಗೆ ಬಲಿಯಾದ್ರು ಅಜ್ಜ ಮೊಮ್ಮಗಳು : ಬೈಕ್ನಿಂದ ಬಿದ್ದವರ ಮೇಲೆ ಹರಿದ ಲಾರಿ
- ಗ್ಯಾಸ್ ಬಿಕ್ಕಟ್ಟಿಗೆ ಯಾರು ಕಾರಣ.? ಅನಗತ್ಯ ಭಯ ಹುಟ್ಟಿಸಿದ್ದೇ ಕೇಂದ್ರ ಎಂದ ಖರ್ಗೆ! ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ಬಿಜೆಪಿ ಶಾಸಕರು ಹೇಳಿದ್ದೀಷ್ಟೆ!
- ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಿಯಕರನನ್ನು ವರಿಸಿದ ಕುಂಭಮೇಳದ ‘ವೈರಲ್ ಸುಂದರಿ’..!: VIDEO
- ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗಿರೋದಿಲ್ವಾ ಹಕ್ಕು.? ಉತ್ತರಾಧಿಕಾರ ಕಾಯ್ದೆಯ ಬಗ್ಗೆ ಹೈಕೋರ್ಟ್ ನಿಲುವೇನು?
- ಅತಿಯಾಗಿ ‘ಪೋರ್ನ್ ವೀಡಿಯೋ’ ನೋಡುವವರೇ ಎಚ್ಚರ .! ಇಲ್ಲಿದೆ ಶಾಕಿಂಗ್ ನ್ಯೂಸ್
- ಒಂದೇ ಕಿಡ್ನಿಯಲ್ಲಿ ಬದುಕುವುದು ಸಾಧ್ಯವೇ.? ಎಷ್ಟು ವರ್ಷ ಜೀವನ ನಡೆಸಬಹುದು.? ಇಲ್ಲಿದೆ ಉತ್ತರ.!
- ಹೃದಯಾಘಾತಕ್ಕೂ 1 ತಿಂಗಳ ಮೊದಲು ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ನಿರ್ಲಕ್ಯ ಬೇಡ.!
- ಅರ್ಚಕನ ಸಾವು ಕೇಸ್ಗೆ ಬಿಗ್ ಟ್ವಿಸ್ಟ್; ತನ್ನ ಕಾಮದಾಟಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆಗೂಡಿ ಮುಗಿಸಿದ ಪತ್ನಿ!
- ಹೊಸ ಬಟ್ಟೆ ತರಲು ಹೋಗಿದ್ದ ವಿದ್ಯಾರ್ಥಿ ದುರಂತ ಅಂತ್ಯ: ಚೀಲದಲ್ಲಿ ತುಂಬಿ ಕೆರೆಗೆಸೆದ ಸ್ನೇಹಿತರು
- Horoscope Today : 11 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಅನ್ಯಧರ್ಮದವನೊಂದಿಗೆ ಮೊಮ್ಮಗಳು ವಿವಾಹ: ಇದೇ ಸಿಟ್ಟಿನಲ್ಲಿ ಮರಿಮೊಮ್ಮಗನನ್ನ ಕೊಂದ ಅಜ್ಜಿ
- ಮೂರು ಬಾರಿ ವಿಷ ಕೊಟ್ಟರೂ ಸಾಯದ ಪತ್ನಿ : ನಾಲ್ಕನೇ ಬಾರಿ ಪ್ಲಾನ್ ಬದಲಿಸಿದ ಗಂಡನಿಗೆ ಕಾದಿತ್ತು ಶಾಕ್.!
- ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ.. ಕೇಂದ್ರದ ಮೌನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಗರಂ
- ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
- ಹಿರಿಯ ನಟ ದ್ವಾರಕೀಶ್ ಸೊಸೆಯಿಂದ ಸರಣಿ ವಂಚನೆ, ರಸ್ತೆಯಲ್ಲೇ ಪೊರಕೆ ಹಿಡಿದು ವ್ಯಕ್ತಿ ಮೇಲೆ ಹಲ್ಲೆ!
- Horoscope Today : 10 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ದಂಪತಿ ಮೇಲೆ ಬಿದ್ದ ಕಾಂಕ್ರೀಟ್ ಮೆಟ್ಟಿಲು: ಹೊಸ ಮನೆ ಕನಸು ನನಸಾಗುವ ಮೊದಲೇ ಇಬ್ಬರೂ ಸಾವು
- ಸ್ನೇಹಿತೆಯ ಲವ್ನಲ್ಲಿ ಮಧ್ಯಸ್ಥಿಕೆ : ಗಂಡ ಹೆಂಡ್ತಿ ಗಲಾಟೆ ಸಾವಿನಲ್ಲಿ ಅಂತ್ಯ
- ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷ ಪಾಪು



























