ಬಂಗಾಳದ ಮಾಜಿ ಚುನಾವಣಾಧಿಕಾರಿ ಈಗ ರಾಜ್ಯದ ‘ಮುಖ್ಯ ಕಾರ್ಯದರ್ಶಿ’: ಇದು ‘ನಾಚಿಕೆಗೇಡು’ ಎಂದ ತೃಣಮೂಲ ಕಾಂಗ್ರೆಸ್!

ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು, ರಾಜ್ಯದ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಮನೋಜ್ ಅಗರ್ವಾಲ್ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ. ಈ ಬೆನ್ನಲ್ಲೇ ವಿರೋಧ ಪಕ್ಷವಾದ ತೃಣಮೂಲ ಕಾಂಗ್ರೆಸ್ (TMC), ಇತ್ತೀಚೆಗೆ ನಡೆದ ಚುನಾವಣೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಅಷ್ಟೇ ಅಲ್ಲದೆ, ನಿವೃತ್ತ ಐಎಎಸ್ ಅಧಿಕಾರಿ ಸುಬ್ರತಾ ಗುಪ್ತ ಅವರನ್ನು ಮುಖ್ಯಮಂತ್ರಿಯವರ ಸಲಹೆಗಾರರನ್ನಾಗಿ ನೇಮಿಸಿರುವುದು ವಿವಾದಕ್ಕೆ ತುಪ್ಪ ಸುರಿದಿದೆ. ಆದರೆ ಬಿಜೆಪಿ ಈ ನೇಮಕಾತಿಗಳನ್ನು ಸಮರ್ಥಿಸಿಕೊಂಡಿದ್ದು, ಇವು … Read more

‘ಮಳೆಗಾಲದಲ್ಲಿ ಪ್ರವಾಹ ಉಂಟಾದ್ರೆ ಸೂಟ್ ಧರಿಸಿ ಜನರ ಸೇವೆ ಹೇಗೆ ಮಾಡ್ತೀರಿ’; ಸಿಎಂ ವಿಜಯ್ ಗೆ ಅಣ್ಣಾಮಲೈ ಟಾಂಗ್

ಮೇ.10ರಂದು ಟಿವಿಕೆ ಮುಖ್ಯಸ್ಥ ವಿಜಯ್ ಅವರು ಬ್ಲಾಕ್ ಸೂಟ್ಗೆ ಬಿಳಿ ಬಣ್ಣದ ಶರ್ಟ್ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಡೀ ದಕ್ಷಿಣ ಭಾರತದಲ್ಲೇ ತಲ್ಲಣವನ್ನು ಸೃಷ್ಟಿಸಿತ್ತು. ಇದು ಪೆರಿಯಾರ್ ಮತ್ತು ಇ.ವಿ. ರಾಮಸ್ವಾಮಿ ಅವರ ವಿಚಾರಧಾರೆಯನ್ನು ಬಿತ್ತರಿಸುವ ಪರಿಕಲ್ಪನೆ ಎನ್ನಲಾಗಿತ್ತು. ಆದರೆ, ಸಿಎಂ ವಿಜಯ್ ಅವರ ಈ ನಡೆ ಮತ್ತು ಕರುಣಾನಿಧಿ ಮತ್ತು ಎಂಕೆ ಸ್ಟಾಲಿನ್ರ ಪಂಚೆ ರಾಜಕೀಯದ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ನಾಯಕ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ತಮಿಳುನಾಡಿನಲ್ಲಿ … Read more

ಗುಡುಗು-ಸಿಡಿಲಿನ ಆರ್ಭಟಕ್ಕೆ ಭೂಮಿ ತಲ್ಲಣ: ಕೋಡಿಶ್ರೀಗಳ ಸ್ಪೋಟಕ ಭವಿಷ್ಯವಾಣಿ

ಸೊರಬ: ಪ್ರಕೃತಿಯಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯ ಹಾಗೂ ಏರುಪೇರುಗಳಿಂದಾಗಿ ಮುಂದಿನ ದಿನಗಳಲ್ಲಿ ಜಲ ಕಂಟಕ ಎದುರಾಗಲಿದ್ದು, ಭೂಮಿ ತಲ್ಲಣಗೊಳ್ಳಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಸೋಮವಾರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿನ ಅನಿರೀಕ್ಷಿತ ಬದಲಾವಣೆಗಳ ಬಗ್ಗೆ ಎಚ್ಚರಿಸಿದರು.ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಜಲ ಕಂಟಕ ಎದುರಾಗುವ ಸಾಧ್ಯತೆ ಇದೆ. ಗುಡುಗು, ಸಿಡಿಲು, ಗಾಳಿ ಮತ್ತು ಮಳೆಯ ಆರ್ಭಟ ಹೆಚ್ಚಾಗಲಿದ್ದು, ಇದರಿಂದ ಭೂಮಿ … Read more

PWD ಇಂಜಿನಿಯರ್ ದುರಂತ ಅಂತ್ಯ, ತಾಯಿ ಇಲ್ಲದ ನೋವಲ್ಲಿ ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಪ್ರಾಣಬಿಟ್ಟ!!

ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ಇಂಜಿನಿಯರ್‌ ಒಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುಮಕೂರಿನಲ್ಲಿ ಸಂಭವಿಸಿದೆ. ದೇವರಾಯನದುರ್ಗ ಬೆಟ್ಟದಿಂದ ಜಿಗಿದು 33 ವರ್ಷದ ಮಂಜು ಪ್ರಸಾದ್ ಎಂಬವರು ಸಾವಿಗೆ ಶರಣಾಗಿದ್ದಾರೆ. ಪಾವಗಡದ ಪಿಡಬ್ಲ್ಯೂಡಿ ಇಲಾಖೆಯಲ್ಲಿ AEE ಮಂಜು ಪ್ರಸಾದ್ ಅವರು ಪಾವಗಡದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ (AEE) ಆಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ತುಮಕೂರು ನಗರದ ಸತ್ಯಮಂಗಲ ಪ್ರದೇಶದ ನಿವಾಸಿಯಾಗಿದ್ದ ಅವರು ಕಳೆದ ಕೆಲವು ತಿಂಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಸುಮಾರು … Read more

Horoscope Today : 12 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಈ ದಿನವು ಅತ್ಯಂತ ಉಲ್ಲಾಸಕರ ದಿನವಾಗಲಿದೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಸಾಮಾಜಿಕ ಸಮಾರಂಭಗಳಲ್ಲಿ/ಆಚರಣೆಗಳಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಭಾಗಿಯಾಗುವಿರಿ. ಸ್ನೇಹಿತರಿಂದ ಸಹಾಯ ಮತ್ತು ಲಾಭವನ್ನು ನಿರೀಕ್ಷಿಸಿ. ಅವರನ್ನು ಮನರಂಜಿಸಲು ನೀವು ಖರ್ಚುಮಾಡಬೇಕಾಗಿ ಬರಬಹುದು. ಹಿರಿಯರು ವಿಶೇಷ ಪ್ರೀತಿ ಮತ್ತು ಅಕ್ಕರೆಯನ್ನು ತೋರುತ್ತಾರೆ. ನಿಮ್ಮ ಆತ್ಮೀಯತೆಯು ಉನ್ನತ ಮಟ್ಟಕ್ಕೆ ಸಾಗುವ ನಿರೀಕ್ಷೆಯಿದೆ. ಸುಂದರ ಪ್ರದೇಶಗಳಿಗೆ ಭೇಟಿ ನೀಡಲಿರುವಿರಿ. ಅನಿರೀಕ್ಷಿತ ಧನಲಾಭ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಮಕ್ಕಳಿಂದ ಪ್ರಯೋಜನ ಉಂಟಾಗಬಹುದು. ವೃಷಭ :- … Read more

ಹುಟ್ಟುಹಬ್ಬದ ದಿನವೇ ದುರಂತ ಅಂತ್ಯ : ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ..

ಬೆಳಗಾವಿ : ಸಂಭ್ರಮಿಸಬೇಕಾದ ಜನ್ಮದಿನದಂದೇ ಯುವತಿಯೊಬ್ಬಳು ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ಬೆಳಗಾವಿಯ ಅಜಂ ನಗರದಲ್ಲಿ ನಡೆದಿದೆ. ಪೊಲೀಸ್ ಕಾನ್ಸ್‌ಟೇಬಲ್ ಜೊತೆ ನಿಶ್ಚಿತಾರ್ಥವಾಗಿದ್ದ ಯುವತಿ, ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ವಿವರ: ಟಾಬಳ್ಳಿ ಗ್ರಾಮದ ಕಾವೇರಿ ಉಮೇಶ್ ನಾಯಕ‌ (21) ಎಂದು ಗುರುತಿಸಲಾಗಿದೆ. ಈಕೆ ಬೆಳಗಾವಿಯ ಅಜಂ ನಗರದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಉಳಿದುಕೊಂಡು, ಬಿಎಸ್‌ಸಿ ಅಂತಿಮ ವರ್ಷದ ವ್ಯಾಸಾಂಗ ಮಾಡುತ್ತಿದ್ದಳು. ನಡೆದಿದ್ದೇನು? ಮೂರು ತಿಂಗಳ … Read more

ತನ್ನ ಎಲೆ ಮೇಲೆ ಆನೆ ಬಿದ್ದಿದ್ದರೂ ನೊಣ ಹುಡುಕುವ ಢೋಂಗಿ ಬುದ್ಧಿ : ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಪ್ರಧಾನಿ ಮೋದಿ ಪ್ರಧಾನಿ ಅವರು ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ? ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷರೋ? ಇಲ್ಲವೇ ರಾಜ್ಯದ ವಿರೋಧ ಪಕ್ಷದ ನಾಯಕರಾಗಿಯೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬೆಂಗಳೂರಿನಲ್ಲಿ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಮಂತ್ರಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರೂ ಅವರ ಮಾತಿನಲ್ಲಿ ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವೈಫಲ್ಯ ಮತ್ತು … Read more

ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲೇ ದುರಂತ ಅಂತ್ಯ ಕಂಡ ನವದಂಪತಿ! ಅನುಮಾನ ತಂದ ಆಪತ್ತು.!

ಪ್ರೀತಿಸಿ, ಹಿರಿಯರನ್ನು ಒಪ್ಪಿಸಿ ಹಸೆಮಣೆ ಏರಿದ್ದ ಆ ಜೋಡಿಯ ಸಂಸಾರ ನೂರು ಕಾಲ ಸುಖವಾಗಿರಬೇಕಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು. ಮದುವೆಯಾದ ಕೇವಲ ಒಂದು ತಿಂಗಳ ಸಂಭ್ರಮ ಮುಗಿಯುವ ಮೊದಲೇ ನವದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸಿದ್ಧಪೇಟೆ ಜಿಲ್ಲೆಯ ಕೊಂಡಪಾಕದಲ್ಲಿ ನಡೆದಿದೆ. ಪ್ರೀತಿ ಪವಿತ್ರವಾಗಿತ್ತು, ಆದರೆ… ಅಂಜಲಿ (21) ವೃತ್ತಿಯಲ್ಲಿ ದರ್ಜಿಯಾಗಿದ್ದಳು. ವಿನಯ್ (23) ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು, ಇಬ್ಬರ ಮನೆಯವರನ್ನು ಒಪ್ಪಿಸಿ ಕಳೆದ ಏಪ್ರಿಲ್ 9 … Read more

ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಇಬ್ಬರು ಮಕ್ಕಳ ತಾಯಿ : ಪ್ರೇಮಿ ಕೈಕೊಟ್ಟನೆಂದು ಮರಳಿ ಗಂಡನ ಬಳಿ ಬಂದ ಮಹಿಳೆ

ತನ್ನ ಮಡದಿ, ಇಬ್ಬರು ಮುದ್ದಾದ ಮಕ್ಕಳನ್ನು ತೊರೆದು ಪ್ರೇಮಿಯೊಂದಿಗೆ ಪರಾರಿಯಾಗಿದ್ದಾಳೆ ಎಂಬ ಸುದ್ದಿ ತಿಳಿದು ಗಂಡ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದನು. ಆ ಮಹಿಳೆ ಸುಮಾರು 4 ತಿಂಗಳು ತನ್ನ ಪ್ರೇಮಿಯ ಜೊತೆ ಇದ್ದಳು. ಆದರೆ ಇದೀಗ ಮತ್ತೆ ಗಂಡನ ಮನೆಗೆ ಮರಳಿದ್ದಾಳೆ. ಆಕೆಯ ಹೇಳಿಕೆಯ ಪ್ರಕಾರ, ಯಾರಿಗಾಗಿ ಮನೆ ಬಿಟ್ಟು ಹೋಗಿದ್ದಳೋ ಆ ವ್ಯಕ್ತಿಯೇ ಈಗ ಆಕೆಯನ್ನು ಬಿಟ್ಟು ಬೇರೆಡೆ ಹೋಗಿದ್ದಾನೆ. ಹೀಗಾಗಿ ತನ್ನ ಬಳಿ ಬೇರೆ ದಾರಿ ಉಳಿದಿರಲಿಲ್ಲ, ಅದಕ್ಕಾಗಿಯೇ ವಾಪಸ್ ಬರಬೇಕಾಯಿತು ಎಂದು ಆಕೆ … Read more

ಓದುವ ಆಸೆಯಿದ್ದ ವಿದ್ಯಾರ್ಥಿನಿ ಮದುವೆ ಭಯಕ್ಕೆ ಬಲಿ: ವಿಷ ಸೇವಿಸಿ ದುರಂತ ಅಂತ್ಯ.! ಅಸಲಿಗೆ ನಡೆದಿದ್ದೇನು?

ಶಿಕ್ಷಣದ ಮೇಲೆ ಅತೀವ ಆಸೆ ಹೊಂದಿದ್ದ 17 ವರ್ಷದ ಬಾಲಕಿಯೊಬ್ಬಳು, ಮದುವೆಯಾಗಬಹುದೆಂಬ ಕೇವಲ ಒಂದು ಸಣ್ಣ ಭಯಕ್ಕೆ ತನ್ನ ಬದುಕನ್ನೇ ಅಂತ್ಯಗೊಳಿಸಿಕೊಂಡಿರುವ ಮನಕಲಕುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಅಸಲಿಗೆ ನಡೆದಿದ್ದೇನು? ಮೃತ ವಿದ್ಯಾರ್ಥಿನಿಯನ್ನು ರೂಪಕೀರ್ತನ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ್ದ ಈಕೆಯ ಮನೆಯಲ್ಲಿ, ಪೋಷಕರು “ಒಳ್ಳೆಯ ಸಂಬಂಧ ಬಂದರೆ ಮದುವೆ ಮಾಡೋಣ” ಎಂದು ಮಾತಾಡಿಕೊಂಡಿದ್ದರು. ಪೋಷಕರ ಈ ಮಾತು ಮಗಳ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿತು. “ನನಗೆ ಓದುವ ಆಸೆಯಿದೆ…” ಮನೆಯಲ್ಲಿ ಮದುವೆ ಮಾತು … Read more