ಮದುವೆಯಾಗುವಂತೆ ಲಿವ್ ಇನ್ ಸಂಗಾತಿಯಿಂದ ಕಾಟ.! ಕೆರೆ ಬಳಿ ಕರೆಸಿಕೊಂಡು ಆರೋಪಿ ಮಾಡಿದ್ದೇನು ಗೊತ್ತಾ.?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊಲೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಕ್ರೈಂ (Crime) ಸಿಟಿ ಆಗಿದ್ಯಾ ಅನ್ನೋ ಪ್ರಶ್ನೆ ಕಾಡ್ತಿದೆ. ಈ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರೇಯಸಿಯನ್ನು ಕೊಂದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಏನಿದು ಪ್ರಕರಣ? ಇದೇ ತಿಂಗಳು 8ನೇ ತಾರೀಖಿನಂದು ಬೆಂಗಳೂರಿನಲ್ಲಿ ಹೆಬ್ಬಗೋಡಿ ಸಮೀಪದ ತಿರುಪಾಳ್ಯ ಕೆರೆಯಲ್ಲಿ ಮಹಿಳೆಯ … Read more

ಎಐಎಡಿಎಂಕೆಯನ್ನು ಸರ್ಕಾರಕ್ಕೆ ಸೇರಿಸಿಕೊಂಡರೆ ನಿಮ್ಮ ಇಮೇಜ್‌ಗೆ ಧಕ್ಕೆ!..ಸಿಎಂ ವಿಜಯ್‌ಗೆ ಕಾರ್ತಿ ಚಿದಂಬರಂ ಎಚ್ಚರಿಕೆ

ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರಕ್ಕೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಬಂಡಾಯ ಬಣವನ್ನು ಸೇರಿಸಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಪಿ. ಚಿದಂಬರಂ (Karti Chidambaram) ಎಚ್ಚರಿಕೆ ನೀಡಿದ್ದಾರೆ. ಈ ರೀತಿಯಾಗಿ ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಸರ್ಕಾರವನ್ನು ರಾಜಕೀಯವಾಗಿ ದುರ್ಬಲಗೊಳಿಸಿದಂತಾಗುತ್ತದೆ ಮತ್ತು ಮುಖ್ಯಮಂತ್ರಿಯ ಸಾರ್ವಜನಿಕ ಇಮೇಜ್‌ಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್, ಎಡಪಕ್ಷಗಳು, ಐಯುಎಂಎಲ್ ಮತ್ತು ಎಐಎಡಿಎಂಕೆಯ ಬಂಡಾಯ ಶಾಸಕರ ಬೆಂಬಲದೊಂದಿಗೆ ವಿಶ್ವಾಸಮತ … Read more

‘ಪೀರಿಯಡ್ಸ್’ ಮುಂದೂಡುವ ಮಾತ್ರೆ ನುಂಗುವ ಮಹಿಳೆಯರು ತಪ್ಪದೇ ಇದನ್ನೊಮ್ಮೆ ಓದಲೇಬೇಕು.!

ಮನೆಯಲ್ಲಿ ಏನಾದರೂ ಶುಭಕಾರ್ಯ, ದೇವಸ್ಥಾನದ ಪೂಜೆ, ಮದುವೆ ಅಥವಾ ದೂರದ ಪ್ರಯಾಣ ಇಷ್ಟಿದ್ದರೆ ಸಾಕು, ಮಹಿಳೆಯರಿಗೆ ಮೊದಲಿಗೆ ಕಾಡುವ ಚಿಂತೆ ಅಂದರೆ ಅದು ಪೀರಿಯಡ್ಸ್ (ಋತುಸ್ರಾವ). ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಲು ಹಲವರು ತಕ್ಷಣ ಮೆಡಿಕಲ್ ಶಾಪ್ಗೆ ಹೋಗಿ ಪೀರಿಯಡ್ಸ್ ಮುಂದೂಡುವ (Periods Postponement Pills) ಮಾತ್ರೆಗಳನ್ನು ಕೊಂಡು ನುಂಗಿಬಿಡುತ್ತಾರೆ. ಆದರೆ, ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಮಾಡುವ ಈ ಸಣ್ಣ ಕೆಲಸ ದೇಹಕ್ಕೆ ಎಷ್ಟು ದೊಡ್ಡ ಮಟ್ಟದ ಹಾನಿ ಉಂಟುಮಾಡುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ವೈದ್ಯರ ಸಲಹೆ … Read more

ಕೇವಲ 2,000 ರೂ. ಬಾಡಿಗೆ ಬಾಕಿಗಾಗಿ ಹೆಂಡತಿ, ಅಪ್ರಾಪ್ತ ಮಗಳನ್ನು ಮಾಲೀಕನ ಮಂಚಕ್ಕೆ ಹತ್ತಿಸಿದ ಪಾಪಿ ಪತಿ.!

ಕೇವಲ 2,000 ರೂಪಾಯಿ ಮನೆ ಬಾಡಿಗೆಯನ್ನು ನೀಡಲಾಗದೆ, ಹೆತ್ತ ಮಗಳು ಮತ್ತು ಹೆಂಡತಿಯನ್ನು ಪತಿಯೇ ಖುದ್ದಾಗಿ ಮನೆ ಮಾಲೀಕನ ಲೈಂಗಿಕ ದೌರ್ಜನ್ಯಕ್ಕೆ ಒಪ್ಪಿಸಿರುವ ಅಮಾನುಷ ಘಟನೆ ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ ಕಾಮುಕ ಮನೆ ಮಾಲೀಕ ಹಾಗೂ ಅದಕ್ಕೆ ಸಹಕರಿಸಿದ ಪಾಪಿ ತಂದೆಯನ್ನು (ಕೂಲಿ ಕಾರ್ಮಿಕ) ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಬಡ ಕೂಲಿ ಕಾರ್ಮಿಕನ ಕುಟುಂಬವು ಕೆಲಸ ಹುಡುಕಿಕೊಂಡು ಸುಮಾರು ಆರು ತಿಂಗಳ … Read more

ಎಸ್‌ಐಆರ್ ಬಗ್ಗೆ ಎಲ್ಲರೂ ಎಚ್ಚರದಿಂದಿರಬೇಕು: ಪ್ರಧಾನಿ ಮೋದಿ ಬಗ್ಗೆ ಡಿಕೆಶಿ ಸ್ಫೋಟಕ ಹೇಳಿಕೆ!

ಅಂತಾರಾಷ್ಟ್ರೀಯ ಬಿಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದು, ಅದಕ್ಕಾಗಿ ದೇಶಕ್ಕೆ ಬೆಲೆ ಏರಿಕೆ ಕೊಡುಗೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರು ಬೇರೆ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕಾಗಿ ವಿದ್ಯುತ್‌ ಉಳಿಸಿ, ಪೆಟ್ರೋಲ್‌ ವಾಹನ ಬಳಸಬೇಡಿ ಎಂದು ಹೇಳುತ್ತಿದ್ದಾರೆ. ಇಂಧನ ಬಳಸದೇ ನಿತ್ಯ ಜೀವನ ಮಾಡುವುದು ಹೇಗೆ? ಅನೇಕರು ತಮ್ಮ ಬೆಂಗಾವಲು ಪಡೆ ವಾಹನಗಳನ್ನು ಕಡಿತಗೊಳಿಸಿದ್ದಾರೆ. ಆದರೆ, … Read more

ಪಿಂಚಣಿ ಕೊಡುವ ಯೋಗ್ಯತೆ ಇಲ್ಲ, ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..? : ಪ್ರತಿಪಕ್ಷ ನಾಯಕ ಆರ್‌.ಅಶೋಕ್‌

ಹಿರಿಯ ನಾಗರಿಕರಿಗೆ ಪಿಂಚಣಿ ಕೊಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್‌‍ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌‍ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷವನ್ನು ಇದೇ ತಿಂಗಳ 20ಕ್ಕೆ ಪೂರೈಸುತ್ತದೆ. ತುಮಕೂರಿನಲ್ಲಿ ಸಾಧನಾ ಸಮಾವೇಶವನ್ನು ನಡೆಸುತ್ತಿದ್ದಾರೆ. ಪಿಂಚಣಿ ಕೊಡಲು ಸಾಧ್ಯವಾಗದ ಈ ಸರ್ಕಾರ ಯಾವ ಪುರುಷಾರ್ಥಕ್ಕೆ ಸಮಾವೇಶ ನಡೆಸಬೇಕು ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಂಚಣಿ ಕೊಡಲು ಆಗದಿರುವುದಕ್ಕೆ ಬದುಕಿರುವವರನ್ನೇ ಸಾಯಿಸುವ … Read more

ಪ್ರೀತಿಗೆ ಅಡ್ಡ ಬಂದ ಜಾತಿ – ಅಂಬೇಡ್ಕರ್ ಪ್ರತಿಮೆಯೆದುರು ಕೈಹಿಡಿದ ಜೋಡಿ!

ಹಾಸನದಲ್ಲಿ (Hassan ) ಹೆತ್ತವರ ತೀವ್ರ ವಿರೋಧದ ನಡುವೆಯೂ ಅಂತರ್ಜಾತಿ ಪ್ರೇಮಿಗಳಿಬ್ಬರು (Lovers )ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಸಾಕ್ಷಿಯಾಗಿ ವಿವಾಹವಾಗಿರುವ (Marriage ) ಅಪರೂಪದ ಘಟನೆ ನಡೆದಿದೆ. ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯ ಮನೋಜ್ ಹಾಗೂ ಮೂಕಲಿ ಗ್ರಾಮದ ಯುವತಿ ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಜಾತಿಯ ಗೋಡೆ ಎದುರಾಗಿದ್ದು, ಎರಡು ಕುಟುಂಬಗಳ ಪೋಷಕರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪೋಷಕರನ್ನು ಒಪ್ಪಿಸಲು ಸಾಧ್ಯವಾಗದಿದ್ದಾಗ ಧೃತಿಗೆಡದ ಯುವ ಜೋಡಿ, ಹಾಸನದ … Read more

ಪ್ರೇಮಿಯನ್ನು ಕೊಂದು ಡ್ರಮ್‌ನಲ್ಲಿ ತುಂಬಿ ಚರಂಡಿಗೆ ಎಸೆದ ದಂಪತಿ; ಕೊಲೆ ರಹಸ್ಯ ಬೆಳಕಿಗೆ ಬಂದಿದ್ದೇ ರೋಚಕ

ಮಹಾರಾಷ್ಟ್ರ (Maharashtra)ದ ಮುಂಬ್ರಾ (Mumbra) ಪ್ರದೇಶದಿಂದ ಕಳೆದ ಒಂದು ತಿಂಗಳ ಹಿಂದೆ ದಿಢೀರನೆ ನಾಪತ್ತೆಯಾಗಿದ್ದ 24 ವರ್ಷದ ಯುವಕನೊಬ್ಬನ ಕೊಳೆತ ಶವವು ಚರಂಡಿಯೊಂದರಲ್ಲಿ ಹಸಿರು ಬಣ್ಣದ ಪ್ಲಾಸ್ಟಿಕ್ ಡ್ರಮ್‌ (green drum)ನೊಳಗೆ ಪತ್ತೆಯಾಗುವ ಮೂಲಕ, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ನಿಗೂಢ ನಾಪತ್ತೆ ಪ್ರಕರಣವನ್ನು ಮುಂಬ್ರಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಭೀಕರ ಘಟನೆಯು ಮಾರ್ಚ್ 2025 ರಲ್ಲಿ ಮೀರತ್‌ (Meerut)ನಲ್ಲಿ ನಡೆದಿದ್ದ ಪ್ರಸಿದ್ಧ ‘ಬ್ಲೂ ಡ್ರಮ್’ ಕೊಲೆ ಪ್ರಕರಣದ ಭೀಕರ … Read more

ಕಾಮದ ಅಮಲೇರಿದ ಪತ್ನಿಯ ಕ್ರೌರ್ಯ: ಆರ್ಮಿ ಜವಾನ ಮತ್ತು ಮಾವನನ್ನೇ ಕೊಂದು ಸುಟ್ಟು ಹಾಕಿದ ಕಿರಾತಕಿ!

ದೇಶ ಕಾಯುವ ಯೋಧನೊಬ್ಬ ತನ್ನ ಮನೆಯವರಿಂದಲೇ ದಾರುಣವಾಗಿ ಹತ್ಯೆಯಾದ ಘಟನೆಯೊಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬೆಲ್ಲಾರಂಪಳ್ಳಿಯಲ್ಲಿ ನಡೆದಿದೆ.

ಪ್ರೀತಿಸಿದ ಯುವಕನಿಗಾಗಿ ಕ್ರಿಶ್ಚಿಯನ್‌ ಧರ್ಮದಿಂದ ಹಿಂದೂ ಧರ್ಮಕ್ಕೆ ಯುವತಿ ಘರ್‌ವಾಪ್ಸಿ

ಭವಿಷ್ಯದ ಬಗ್ಗೆ ಚಿಂತಿಸಿ ಪ್ರೀತಿಸಿದ ಯುವಕನಿಗಾಗಿ ಕ್ರಿಶ್ಚಿಯನ್‌ ಧರ್ಮದ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ ಮತ್ತೆ ವಾಪಸಾದ ಘಟನೆ ಇಲ್ಲಿ ನಡೆದಿದೆ.