Bigg Boss Kannada 11 : ನಮಸ್ಕಾರ ಸ್ನೇಹಿತರೇ, ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಎಂಟ್ರಿ ಪಡೆಯಲು ಈ ವಾರದ ಟಾಸ್ಕ್ಗಳು ನಡೆದಿವೆ. ಬಿಗ್ ಬಾಸ್ ಕೂಡ ಟಾಸ್ಕ್ನಲ್ಲಿ ಜಯ ಗಳಿಸುವ ಸ್ಪರ್ಧಿ ನೇರವಾಗಿ ಫಿನಾಲೆ ಓಟದಲ್ಲಿ ಟಿಕೆಟ್ ಪಡೆಯುತ್ತಾರೆ, ಸೋತವರು ಫಿನಾಲೆ ಟಿಕೆಟ್ ಪಡೆಯಲು ವಿಫಲರಾಗುತ್ತಾರೆ ಎಂದು ಹೇಳಿದ್ದಾರೆ.
ಹೀಗಾಗಿ ಟಾಸ್ಕ್ಗಳು ನಡೆದಿದ್ದು ಫಲಿತಾಂಶ ಕೂಡ ಹೊರಬಂದಿದೆ. ಇದರಲ್ಲಿ ಇಬ್ಬರು ಸ್ಪರ್ಧಿಗಳು ಫಿನಾಲೆಗೆ ಟಿಕೆಟ್ ಪಡೆದಿದ್ದಾರೆ. ಹಾಗಾದರೆ ಆ ಸ್ಪರ್ಧಿಗಳು ಯಾರು?
ತ್ರಿವಿಕ್ರಮ್ಗೆ ಫಿನಾಲೆ ಟಿಕೆಟ್ ಟಾಸ್ಕ್
ಚೈತ್ರಾ ಕುಂದಾಪುರ ಅವರು ಟಿಕೆಟ್ ಟು ಫಿನಾಲೆ ಓಟದಿಂದ ಹೊರಗಡೆ ಉಳಿದುಕೊಂಡಿದ್ದಾರೆ. ಇವರು ಫಿನಾಲೆಗೆ ನೇರವಾಗಿ ಎಂಟ್ರಿ ಪಡೆಯಲು ಆಗುವುದಿಲ್ಲ. ಎಲಿಮಿನೇಷನ್ ದಾಟಿ ಫಿನಾಲೆಗೆ ಎಂಟ್ರಿ ಕೊಡಬೇಕಾಗುತ್ತದೆ. ಇನ್ನು ತ್ರಿವಿಕ್ರಮ್ ಅವರಿಗೆ ಟಿಕೆಟ್ ಟು ಫಿನಾಲೆ ಓಟದಲ್ಲಿ ಮುಂದುವರೆಯುವ ಅವಕಾಶ ಸಿಕ್ಕಿದೆ. ಹೀಗಾಗಿ ತ್ರಿವಿಕ್ರಮ್ ಟಿಕೆಟ್ ಟು ಫಿನಾಲೆ ಓಟದಲ್ಲಿ ಜಯ ಸಾಧಿಸಿದ್ದರೆ, ಚೈತ್ರಾ ಕುಂದಾಪುರ ಅವರು ಇದರಿಂದ ಹೊರ ಉಳಿದಿದ್ದಾರೆ.
ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?
ಹೀಗಾಗಿ ಧನ್ರಾಜ್ ತಂಡದಿಂದ ಚೈತ್ರಾ ಆಟದಿಂದ ಹೊರಗಡೆ ಉಳಿದಿರುವುದರಿಂದ ಧನ್ರಾಜ್, ಗೌತಮಿ ಹಾಗೂ ಮಂಜು ಅವರು ಮಾತ್ರ ಮುಂದಿನ ಟಾಸ್ಕ್ ಆಡುತ್ತಾರೆ. ಇತ್ತ ತ್ರಿವಿಕ್ರಮ್ ಫಿನಾಲೆ ಟಿಕೆಟ್ ಪಡೆದುಕೊಳ್ಳುವ ಓಟದಲ್ಲಿ ಸೆಲೆಕ್ಟ್ ಆಗಿರುವುದರಿಂದ ಇವರ ತಂಡದಲ್ಲಿ ಉಳಿದ ಮೋಕ್ಷಿತಾ, ಹನುಮಂತು ಹಾಗೂ ಭವ್ಯಾ ಅವರು ಮುಂದಿನ ಆಟವನ್ನು ಆಡಿದರು.
ರಜತ್ಗೆ ಫಿನಾಲೆ ಟಿಕೆಟ್
ಇನ್ನೂ ರಜತ್ ಈ ವಾರದ ಕ್ಯಾಪ್ಟನ್ ಆಗಿರುವುದರಿಂದ ಉಸ್ತುವಾರಿಯನ್ನೇ ಮಾಡಬೇಕಾಗುತ್ತದೆ. ಯಾವುದೇ ಟಾಸ್ಕ್ನಲ್ಲಿ ಭಾಗವಹಿಸಲು ಅವರಿಗೆ ಅವಕಾಶವನ್ನು ಬಿಗ್ಭಾಸ್ ನೀಡಿಲ್ಲ. ಹೀಗಾಗಿ ಇವರನ್ನು ನೇರವಾಗಿ ಟಿಕೆಟ್ ಟು ಫಿನಾಲೆಗೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗೆ ಎಲ್ಲಾ ಟಾಸ್ಕ್ ಮುಗಿದ ಬಳಿಕ ಒಬ್ಬರು ಸೆಲೆಕ್ಟ್ ಆಗುತ್ತಾರೆ ಇನ್ನೊಬ್ಬರು ರಿಜೆಕ್ಟ್ ಆಗುತ್ತಾರೆ.
ಹೀಗೆ ಎಲ್ಲಾ ಟಾಸ್ಕ್ನಲ್ಲಿ ವಿನ್ ಆದವರು ಫಿನಾಲೆ ಟಾಸ್ಕ್ ಅನ್ನು ಆಡುತ್ತಾರೆ. ಆಗ ರಜತ್ ಟಾಸ್ಕ್ನಲ್ಲಿ ಭಾಗವಹಿಸುತ್ತಾರೆ. ಅಲ್ಲಿಯವರೆಗೂ ಅವರು ಉಸ್ತುವಾರಿಯಾಗಿಯೇ ಇರಲಿದ್ದಾರೆ. ಹೀಗಾಗಿ ಫಿನಾಲೆ ಟಿಕೆಟ್ ಪಡೆಯಲು ಅರ್ಹರಾಗಿರುವುದರಿಂದ ತ್ರಿವಿಕ್ರಮ್ ಹಾಗೂ ರಜತ್ ಅವರು ಕೈಗೆ ನೀಲಿ ಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಧನ್ರಾಜ್ ಅವರನ್ನು ಬಕ್ರಾ ಮಾಡಿದ ಮಂಜು ಗೌತಮಿ
ಇನ್ನೂ ಮುಂದಿನ ಆಟದಲ್ಲಿ ಫಿನಾಲೆ ಟಿಕೆಟ್ ಪಡೆಯಲು ಅರ್ಹರಲ್ಲದ ಸ್ಪರ್ಧಿಯ ಹೆಸರನ್ನು ಸೂಚಿಸುವಂತೆ ಬಿಗ್ಬಾಸ್ ಸೂಚಿಸುತ್ತಾರೆ. ಈ ವೇಳೆ ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಇಬ್ಬರು ಸೇರಿಕೊಂಡು ತಮ್ಮ ತಂಡದ ಧನ್ರಾಜ್ ಅವರನ್ನು ಫಿನಾಲೆ ಟಿಕೆಟ್ ಟಾಸ್ಕ್ಯಿಂದ ಹೊರಗುಳುಯುವಂತೆ ಮನವೊಲಿಸುತ್ತಾರೆ. ಇದಕ್ಕೆ ಧನ್ರಾಜ್ ಕೂಡ ಒಪ್ಪಿ ಬಕ್ರಾ ಆಗುತ್ತಾರೆ.
ಇದರಿಂದ ಮನೆಯ ಎಲ್ಲಾ ಸ್ಪರ್ಧಿಗಳು ‘ಮಾರಿ ಹಬ್ಬದಲ್ಲಿ ಬಲಿ ಕೊಟ್ಟಂಗೆ ಆಯ್ತು ಇವನ್ ಕತೆ’ ಎಂದು ಧನ್ರಾಜ್ ಅವರನ್ನು ರೇಗಿಸುತ್ತಾರೆ. ಇದರಿಂದ ಕೋಪಗೊಂಡ ರಜತ್ ಸಾರ್ಥಕ ಆಯ್ತು ಬಿಡ್ರೋ ನಿಮ್ ಜೀವನ ಅಂತ ಸಿಳ್ಳೆ ಹೊಡೆದಿದ್ದಾರೆ. ಗೌತಮಿಗಿಂತ ಕಡಿಮೆನಾ ಧನ್ರಾಜ್ ಎಂದು ರಜತ್ ಮಂಜಣ್ಣನಿಗೆ ಉಗಿಯುತ್ತಾರೆ.
ಇಷ್ಟಾದರೂ ಬುದ್ಧಿ ಕಲಿಯದ ಮಂಜಣ್ಣ ಮೋಕ್ಷಿತಾ ಬಳಿ ಹೇಳಿಕೊಳ್ತಾರೆ. ‘ಇಲ್ಲಿ ಯಾರನ್ನೂ ನಂಬುಕೊಂಡು ಆಡ್ತಾಯಿಲ್ಲ’ ಎಂದು ಹೇಳ್ತಾರೆ. ಹಾಗಾದರೆ ನೀವಿಬ್ಬರು ಯಾಕೆ ಒಬ್ಬರಿಗೊಬ್ಬರು ಸೇಫ್ ಮಾಡು ಅನ್ನೋ ಥರ ಜೊತೆಯಾಗಿದ್ರಿ ಅನ್ನೋದು ಇಲ್ಲಿ ಪ್ರಶ್ನೆ?
Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಧನ್ರಾಜ್ಗೆ ಉಗಿದ ಹನುಮಂತ
ಧನ್ರಾಜ್ ಬಕ್ರಾ ಆಗಿದ್ದಕ್ಕೆ ಹನುಮಂತ ಉಗಿದಿದ್ದಾರೆ. ಮಂಜಣ್ಣನ್ನು ನಂಬಿ ನೀನು ಮೋಸ ಹೋದೆ ದೋಸ್ತಾ ಅಂತ ಹನುಮಂತ ಬೇಸರ ವ್ಯಕ್ತಪಡಿಸಿದ್ದಾರೆ. ಮೋಸ ಹೋದ ಮೇಲೆ ಬುದ್ಧಿ ಬಂತು ಅಂತ ಧನ್ರಾಜ್ ಈಗ ಪಶ್ಚಾತ್ತಾಪ ಪಡುವಂತಾಗಿದೆ. ಆದರೆ ಇನ್ನೂ ಕಾಲ ಮಿಂಚಿಲ್ಲ. ಎಲಿಮಿನೇಷನ್ನಿಂದ ಬಚಾವ್ ಆದರೆ ನೇರವಾಗಿ ಫಿನಾಲೆ ರೇಸ್ನಲ್ಲಿ ಧನ್ರಾಜ್ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ.
ಒಟ್ಟಿನಲ್ಲಿ ಬಿಗ್ಬಾಸ್ ಮನೆಯಲ್ಲಿ ಮೋಸದಿಂದಲೇ ಆಟ ಆಡಿ ಗೆಲ್ಲುವುದು ಹೆಚ್ಚಾಗಿದೆ. ರಜತ್- ಹನುಮಂತ ಅವರನ್ನು ಮೋಸದಿಂದ ಸೋಲಿಸಿದರು, ಧನ್ರಾಜ್ ಅವರನ್ನು ಮಂಜು ಮತ್ತು ಗೌತಮಿ ಬಕ್ರಾ ಮಾಡುವ ಮೂಲಕ ಸೋಲಿಸಿದರು. ಚೈತ್ರಾ ಕುಂದಪೂರ ಅವರನ್ನು ನೇರವಾಗಿ ಆಟದಿಂದು ಮನೆ ಎಲ್ಲಾ ಸ್ಪರ್ಧಿಗಳು ಹೊರಗಿಟ್ಟರು. ಇದೆಲ್ಲದಕ್ಕು ಕಿಚ್ಚನ ಪಂಚಾಯಿತಿಯಲ್ಲಿ ಸರಿಯಾಗೇ ತರಾಟೆ ತೆಗೆದುಕೊಳ್ಳಲಾಗುತ್ತೆ ಅದು ಮಾತ್ರ ಪಕ್ಕಾ. ಆದರೆ ಇದೆಲ್ಲದರ ನಡುವೆ ಗ್ರ್ಯಾಂಡ್ ಫಿನಾಲೆಗೆ ಯಾವ ಟಾಪ್ 5 ಸ್ಪರ್ಧಿ ಇರಲಿದ್ದಾರೆ ಅನ್ನೋ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
- ನಾನು ದೇವಸ್ಥಾನಕ್ಕೆ ಹೋಗೋದು ದೇವರನ್ನು ನೋಡೋಕೂ ಅಲ್ಲ; ಪ್ರಾರ್ಥಿಸೋಕೂ ಅಲ್ಲ : ISRO ಮಾಜಿ ಅಧ್ಯಕ್ಷ ಸೋಮನಾಥ್
- ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಲಿವರ್ ಊದಿಕೊಂಡಿದೆ ಎಂದರ್ಥ..!
- ಹೈ ಬ್ಲಡ್ ಪ್ರೆಶರ್ ನಿರ್ಲಕ್ಷ್ಯ ಬೇಡ: ಹೃದಯಾಘಾತಕ್ಕೆ ಕಾರಣವಾಗುವ ಎಚ್ಚರಿಕೆ ಸೂಚನೆಗಳು!
- ಈ ಹಣ್ಣು ಸಿಕ್ರೆ ಬಿಡಬೇಡಿ, ಪಟ್ ಅಂತ ಬಾಯಿಗೆ ಹಾಕ್ಕೊಂಡು ಬಿಡಿ..! ಮಧುಮೇಹ – ಕಿಡ್ನಿಗೆ ಸಮಸ್ಯೆ ರಾಮಬಾಣ
- ಗ್ಯಾಸ್ಟ್ರಿಕ್, ಅಸಿಡಿಟಿಯಿಂದ ದಿನಪೂರ್ತಿ ಹಿಂಸೆ ಪಡುತ್ತಿದ್ದೀರಾ? ಹಾಗಿದ್ರೆ ತಪ್ಪದೆ ಈ ಅಭ್ಯಾಸಗಳನ್ನು ಮಾಡಿ
- Uric Acid : ಯೂರಿಕ್ ಆಮ್ಲದ ಮಟ್ಟ ಹೆಚ್ಚಾದರೆ ನಮ್ಮ ದೇಹ ಏನಾಗುತ್ತೆ ಗೊತ್ತೆ..? ಸಮಯ ಮೀರುವ ಮುನ್ನ ಎಚ್ಚೆತ್ತುಕೊಳ್ಳಿ
- ಈ ಚಿಕ್ಕ ಲಕ್ಷಣಗಳನ್ನು ಲೈಟಾಗಿ ತೆಗೆದುಕೊಳ್ಳಬೇಡಿ : ಪಾರ್ಶ್ವವಾಯು ದಾಳಿಯ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ…
- ಈ ಆಹಾರಗಳೇ ಕಿಡ್ನಿಗೆ ತುಂಬಾ ಡೇಂಜರ್! ಈ ಫುಡ್ ಹ್ಯಾಬಿಟ್ನಿಂದಲೇ ಕಿಡ್ನಿ ಸ್ಟೋನ್ ಆಗುತ್ತೆ!
- ಹುಟ್ಟಿದ ಮನೆಯಲ್ಲಿಯೇ ಕೊನೆದಿನಗಳನ್ನು ಕಳೆಯಲು ಬಂದ ತಾಯಿಗೆ ಬಾಗಿಲು ತೆಗೆಯದ ಮಗಳು, ಅಮ್ಮ ಸಾವು
- ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ಬಿಂಬಿಸಿದ ನಾರ್ವೆ – ಜನಾಂಗೀಯ ನಿಂದನೆ ವಿರುದ್ಧ ಆಕ್ರೋಶ!
- ಅಮ್ಮ-ಅಪ್ಪ ಸಾರಿ. ನಾವು ದೂರ ಹೋಗಿ ಸತ್ತಿದ್ದೇವೆ’; ತಾಯಿ ಬೈದಿದ್ದಕ್ಕೆ ಮನೆಬಿಟ್ಟು ನಾಪತ್ತೆಯಾದ ಅಪ್ರಾಪ್ತ ಸಹೋದರಿಯರು
- ಮೂತ್ರದ ಸೋಂಕು ಮತ್ತೆ ಮತ್ತೆ ಬರ್ತಿದ್ಯಾ.? ಕಾರಣ, ಲಕ್ಷಣ, ತಿನ್ನಲು ಆಹಾರ ಸೇರಿ ತಡೆಗಟ್ಟುವ ವಿಧಾನ ಇಲ್ಲಿದೆ.!
- Health : ನಿಮಗೆ ಕ್ಯಾನ್ಸರ್ ಉಂಟು ಮಾಡುವ ಅಡುಗೆ ಮನೆಯಲ್ಲಿರುವ ಈ ವಸ್ತುಗಳ ಬಗ್ಗೆ ಎಚ್ಚರವಿರಲಿ!
- ‘ಗಂಡನ ಬಿಟ್ಟು ಇರಲಾರೆ, ತವರಿನಲ್ಲೂ ಉಳಿಯಲಾರೆ..’ ಅತ್ತೆಯ ಕಿರುಕುಳಕ್ಕೆ ಬೇಸತ್ತು ಸಾವು ಕಂಡ ಗೃಹಿಣಿ
- Headache : ತಲೆ ನೋವು ಬಂದಾಗ ವಾಂತಿ ಆಗುತ್ತಿದೆಯೇ…? ಈ ಸಿಂಪಲ್ ಸಲಹೆ ಫಾಲೋ ಮಾಡಿ, ಗುಣಮುಖರಾಗಿ…
- ಎಣ್ಣೆ ಹೊಡೆದು ಡ್ಯಾಮೆಜ್ ಆಗಿರುವ ಲಿವರ್ಗೆ ಮರುಜೀವ ನೀಡುವ ಹಣ್ಣು! ವಾರಕ್ಕೊಮ್ಮೆ ತಿನ್ನಿ..
- ALERT : ‘ಕಿಡ್ನಿ’ ಕೈಕೊಟ್ಟರೆ ಬೆಳ್ಳಂಬೆಳಗ್ಗೆಯೇ ಕಾಣಿಸಿಕೊಳ್ಳುವ ಲಕ್ಷಣಗಳಿವು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ.!
- ದುಬಾರೆ ದುರಂತದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಆನೆ ಸ್ನಾನ ವೀಕ್ಷಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ
- Gruha Lakshmi : ಗೃಹಲಕ್ಷ್ಮಿ ಹೊಸ ನಿಯಮ… ಇನ್ಮುಂದೆ ಎಲ್ಲ ಮಹಿಳೆಯರಿಗೂ ಸಿಗಲ್ಲ ₹2,000 ರೂಪಾಯಿ ಹಣ!
- ದುಬಾರೆ ಸಾಕಾನೆ ಶಿಬಿರದಲ್ಲಿ ಕಾಳಗದ ಆನೆಗಳ ಕಾಲಿಗೆ ಸಿಲುಕಿ ಮಹಿಳೆ ಸಾವು; 20 ಲಕ್ಷ ಪರಿಹಾರ, ಮೃತಳ ಕಣ್ಣು ದಾನ!
- ಫಾರ್ಚುನರ್ ಕಾರು, 1 ಕೋಟಿ ರೂ ವರದಕ್ಷಿಣೆ ಕೊಟ್ಟರೂ ಕಿರುಕುಳ, ದುರಂತ ಅಂತ್ಯ ಕಂಡ 24ರ ಯುವತಿ
- ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ – ದೇವೇಗೌಡರ ಬರ್ತಡೇ, ಸಿಎಂ ಸಿದ್ದರಾಮಯ್ಯ ಹಾರೈಕೆ!
- ‘ನಮಾಜ್ ಮಾಡೋಕೆ ಸಮಸ್ಯೆ ಇಲ್ಲ, ಆದ್ರೆ ರಸ್ತೆಯಲ್ಲಿ ಮಾಡ್ಬೇಡಿ..’ ಯುಪಿ ಸಿಎಂ ಯೋಗಿ ಅದಿತ್ಯನಾಥ್ ಖಡಕ್ ವಾರ್ನಿಂಗ್
- 51 ಭೀಕರ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೆಯಬಲ್ಲದು ಈ ರಹಸ್ಯ ಆಯುರ್ವೇದ ಸಸ್ಯ.!
- Karnataka Free Electricity: ಗೃಹಜ್ಯೋತಿ ಹೊಸ ನಿಯಮ.. ಇನ್ನು ಎಲ್ಲರಿಗೂ ಸಿಗಲ್ಲ ಉಚಿತ 200 ಯುನಿಟ್ ವಿದ್ಯುತ್
- ಪ್ರೀತಿಸುತ್ತಿದ್ದಾಳೆ ಎಂದು ಹೆತ್ತ ಮಗಳನ್ನೇ ಕೊಂದು ಶವ ಹೂತಿಟ್ಟ ಕಟುಕ ತಂದೆ: ತುಮಕೂರಿನಲ್ಲಿ ಮೈ ಜುಂ ಎನಿಸುವ ಘಟನೆ ಬಯಲು!
- ಮನೆಯಲ್ಲಿ ‘ಏರ್ ಕೂಲರ್’ ಬಳಸುವವರೇ ಎಚ್ಚರ : ನೀರು ಹಾಕುವಾಗ `ವಿದ್ಯುತ್ ಶಾಕ್’ನಿಂದ ವ್ಯಕ್ತಿ ಸಾವು.!
- ಒಬ್ಬ ಮಂತ್ರಿ ಮೆಟ್ರೋ ಹತ್ತೋದು, ಮತ್ತೊಬ್ಬ ಬೈಕ್ ಹತ್ತೋದು ಬಿಜೆಪಿಯವರದ್ದು ಒಂದು ದಿನದ ನಾಟಕ ಅಷ್ಟೇ; ಪ್ರಿಯಾಂಕ್ ಖರ್ಗೆ
- ಮದುವೆಯಾಗುವಂತೆ ಲಿವ್ ಇನ್ ಸಂಗಾತಿಯಿಂದ ಕಾಟ.! ಕೆರೆ ಬಳಿ ಕರೆಸಿಕೊಂಡು ಆರೋಪಿ ಮಾಡಿದ್ದೇನು ಗೊತ್ತಾ.?




























