Post office Scheme : ನಮಸ್ಕಾರ ಸ್ನೇಹಿತರೇ, ಗಳಿಸಿರುವ ಹಣಕ್ಕೆ ತಕ್ಕನಾದ ಬಡ್ಡಿದರದ ಜೊತೆಗೆ ಪ್ರತಿ ತಿಂಗಳೂ ಹಣವನ್ನು ಪಡೆದುಕೊಳ್ಳಲು ಯಾವ ಸ್ಕೀಮ್, ಯಾವ ಬ್ಯಾಂಕ್ ಬೆಸ್ಟ್ ಎನ್ನುವ ಯೋಚನೆಯಲ್ಲಿದ್ದೀರಾ? ಅತಿ ಹೆಚ್ಚು ಬಡ್ಡಿ ಪಡೆಯುವ ಜೊತೆಗೆ, ಅದೇ ರೀತಿಯ ವಿಶ್ವಾಸಾರ್ಹವಾಗಿರುವ ಜಾಗವನ್ನು ಹುಡುಕುತ್ತಿದ್ದೀರಾ?
ಹಾಗಿದ್ದರೆ ಬ್ಯಾಂಕ್ಗಳಿಗಿಂತಲೂ ಅತಿ ಹೆಚ್ಚು ಬಡ್ಡಿ ಸಿಗುವುದು ಎಂದು ಅದು ಅಂಚೆ ಕಚೇರಿ (Post office) ಮಾತ್ರ. ಕೆಲವು ಸಹಕಾರಿ ಸಂಸ್ಥೆಗಳು ಬಡ್ಡಿಯನ್ನು ಹೆಚ್ಚಿಗೆ ನೀಡಿದರೂ ಅದರಲ್ಲಿ ಹೂಡಿಕೆ ಮಾಡುವುದು ಅಷ್ಟೇ ತೊಂದರೆ ಇದೆ. ಮೋಸ, ವಂಚನೆಗಳ ಹೆಚ್ಚಾಗುತ್ತವೆ. ಯಾವಾಗ ಈ ಸಂಸ್ಥೆಗಳು ಜಾಗ ಖಾಲಿ ಮಾಡಿಕೊಂಡು ಹೋಗುತ್ತದೆ ಎನ್ನುವುದನ್ನು ಹೇಳುವುದೇ ಕಷ್ಟ. ಆದ್ದರಿಂದ ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿ ಇರಬೇಕು ಜೊತೆಗೆ ಹೆಚ್ಚಿಗೆ ಬಡ್ಡಿ ಸಿಗಬೇಕು ಎಂದರೆ, ಅಂಚೆ ಕಚೇರಿಗಿಂತಲೂ ಮತ್ತೊಂದು ಜಾಗವಿಲ್ಲ. ಅಷ್ಟಕ್ಕೂ ಕೆಲ ವರ್ಷಗಳಿಂದ ಅಂಚೆ ಕಚೇರಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ಜನಸಾಮಾನ್ಯರು ತಮ್ಮದೇ ಸ್ಥಳಗಳಲ್ಲಿ ಅಂಚೆ ಸೌಲಭ್ಯ ಪಡೆಯಬಹುದಾಗಿದ್ದರಿಂದ ಇದು ಕೂಡ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ.
ಕೇಂದ್ರ ಸರ್ಕಾರ, ಇದಾಗಲೇ ಪೋಸ್ಟ್ ಆಫೀಸ್ನಲ್ಲಿ ಹಲವಾರು ಸ್ಕೀಮ್ಗಳನ್ನು ಜಾರಿಗೆ ತಂದಿದೆ. ನಿಮಗೆ ಅಗತ್ಯವಾಗಿರುವ ಯೋಜನೆ ಕುರಿತು ಅಂಚೆ ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಬಹುದು. ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ… ಹೀಗೆ ವಿವಿಧ ಉಳಿತಾಯ ಸ್ಕೀಮ್ಗಳು ಇದಾಗಲೇ ಜಾರಿಯಾಗಿವೆ. ಇಲ್ಲಿ ಹೇಳ ಹೊರಟಿರುವುದು ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಗೆ ಕುರಿತು. ಕಳೆದ ವರ್ಷದ ಅಂದರೆ 2023ರ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆಯಾಗಿದ್ದರೂ ಇದರ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಮಾಸಿಕವಾಗಿ ಒಂದಿಷ್ಟು ಹಣ ಬರಬೇಕು ಎಂಬ ಯೋಚನೆ ನಿಮ್ಮಲ್ಲಿದ್ದರೆ ನೀವು ಪ್ರತಿ ತಿಂಗಳೂ ₹9,250 ರೂಪಾಯಿವರೆಗೆ ಹಣವನ್ನು ಪಡೆಯಲು ಇದು ಅವಕಾಶ ಮಾಡಿಕೊಡುತ್ತದೆ.
ಒಂದು ಲಕ್ಷ ಠೇವಣಿಗೆ 50 ಸಾವಿರ ರೂ. ಬಡ್ಡಿ: ಎಲ್ಲಕ್ಕಿಂತ ಬೆಸ್ಟ್ ಅಂಚೆ ಇಲಾಖೆಯ ಎಫ್ಡಿ!
ಇಲ್ಲಿಯವರೆಗೆ ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವವರು ಗರಿಷ್ಠ 4.5ಲಕ್ಷದವರೆಗೆ ಹೂಡಿಕೆ ಮಾಡಬಹುದಿತ್ತು. ಆದರೆ ಈಗ ಈ ಮಿತಿ 9 ಲಕ್ಷದವರೆಗೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಮಾಸಿಕ ಲಾಭ ಪಡೆದುಕೊಳ್ಳಬಹುದಾಗಿದೆ. ಮನೆಯ ಒಬ್ಬರೇ ಸದಸ್ಯರು ಬಯಸಿದರೆ, 9 ಲಕ್ಷದ ವರೆಗೆ ಹೂಡಿಕೆ ಮಾಡಬಹುದು, ಜಂಟಿಯಾಗಿದ್ದರೆ 15 ಲಕ್ಷದವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಕನಿಷ್ಠ 1 ಸಾವಿರ ರೂಪಾಯಿಯಿಂದ ಗರಿಷ್ಠ 15 ಲಕ್ಷ ರೂಪಾಯಿವರೆಗೆ (ಜಂಟಿಯಾಗಿದ್ದರೆ) ಹೂಡಿಕೆ ಮಾಡಲು ಅವಕಾಶವಿದೆ. ಸದ್ಯದ ಬಡ್ಡಿ ದರವು ಶೇಕಡಾ ಶೇ 7.4ರಷ್ಟು ಇದೆ. ಬಡ್ಡಿ ಪ್ರತಿ ತಿಂಗಳ ಕೊನೆಗೆ ನಿಮಗೆ ಲಭಿಸುತ್ತದೆ.
ಒಂದು ವೇಳೆ ಪ್ರತಿ ತಿಂಗಳ ಬಡ್ಡಿಯನ್ನು ಹಾಗೆಯೇ ಇಟ್ಟು ಒಟ್ಟಿಗೇ ತೆಗೆದುಕೊಳ್ಳೋಣ ಎಂದುಕೊಂಡದ್ದೇ ಆದರೆ, ನೀವು ಹಾಗೆ ಮಾಡಬಹುದು. ಆದರೆ ಹೆಚ್ಚುವರಿ ಬಡ್ಡಿ ಲಾಭ ನಿಮಗೆ ಸಿಗುವುದಿಲ್ಲವಷ್ಟೇ. ಈ ಯೋಜನೆಯ ಅಡಿ ಹೂಡಿಕೆ ಐದು ವರ್ಷಗಳದ್ದು. ಯೋಜನೆ ಆರಂಭ ಮಾಡಿದ ಮೊದಲ ವರ್ಷ ನಿಮಗೆ ಹೂಡಿಕೆ ಮೊತ್ತವನ್ನು ತೆಗೆಯಲು ಅವಕಾಶ ಇಲ್ಲ. ಒಂದು ವೇಳೆ ಮೂರು ವರ್ಷಗಳ ಒಳಗೆ ಅಂದ್ರೆ ಒಂದು ವರ್ಷದಿಂದ 3 ವರ್ಷದ ಒಳಗೆ ಠೇವಣಿ ನೀವು ಹಿಂದಕ್ಕೆ ಪಡೆದುಕೊಂಡರೆ ಒಟ್ಟು ಅಸಲಿನ ಮೊತ್ತದಲ್ಲಿ ಶೇ 2ರಷ್ಟು ದಂಡ ವಿಧಿಸಲಾಗುತ್ತದೆ. 3-5 ವರ್ಷದ ಒಳಗಾದರೆ ಒಟ್ಟು ಅಸಲಿನ ಮೊತ್ತದಲ್ಲಿ ಶೇ 1ರಷ್ಟು ದಂಡ ಕಟ್ಟಬೇಕಾಗುತ್ತದೆ.
ಒಂದು ವೇಳೆ, ಠೇವಣಿದಾರರು ಮೆಚ್ಯೂರಿಟಿ ಅವಧಿಗೂ ಮುನ್ನ ಮೃತಪಟ್ಟರೆ ಖಾತೆಯನ್ನು ಮುಚ್ಚಿ ನಾಮಿನಿಗೆ ಅಸಲು ಹೂಡಿಕೆ ಮೊತ್ತ ಮತ್ತು ಬಡ್ಡಿಯನ್ನು ನೀ ಡಲಾಗುತ್ತದೆ. ನೀವು ಈ ಯೋಜನೆ ಅಡಿ, 9 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,550 ರೂಪಾಯಿ ಲಭಿಸುತ್ತದೆ. ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 9,250 ರೂಪಾಯಿಗಳ ಬಡ್ಡಿ ಲಾಭ ಸಿಗುತ್ತದೆ. ಇದರ ಬಡ್ಡಿದರ ಈ ರೀತಿ ಇದೆ.
- ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದುದನ್ನು ನೋಡಿದ ಮಗುವಿನ ಕೊಲೆ – ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
- ಸಾಲ ತೀರಿಸಲು ಒಂಟಿ ಮಹಿಳೆ ಕೊಲೆ ಮಾಡಿ ಕರಿಮಣಿ ಸರ ಕದ್ದಿದ್ದ ಆರೋಪಿ ಅರೆಸ್ಟ್
- ವಾಹನ ಸವಾರರಿಗೆ ಬಿಗ್ ಶಾಕ್ ; ಶೀಘ್ರ ‘ಪೆಟ್ರೋಲ್, ಡೀಸೆಲ್’ ಬೆಲೆಯಲ್ಲಿ ಭಾರಿ ಏರಿಕೆ ಸಾಧ್ಯತೆ!
- ಪ್ರತಿದಿನ ಈ ನೀರು ಕುಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುತ್ತಂತೆ.!
- ಮಗನನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಅಪಘಾತ – ತಾಯಿ, ಮಗು ಸಾವು!
- ಬೆಟ್ಟಿಂಗ್ ಕಟ್ಟಿ 19 ‘ಬಿಯರ್’ ಕುಡಿದ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳು ಸಾವು.!
- ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು
- ನಿಮ್ಮ ‘ಇನ್ವರ್ಟರ್ ಬ್ಯಾಟರಿ’ಗೆ ನೀರು ಯಾವಾಗ ಸೇರಿಸ್ಬೇಕು.? 90% ಜನರಿಗೆ ಸರಿಯಾದ ಸಮಯ ತಿಳಿದಿಲ್ಲ!
- Horoscope Today : 19 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಒಂದೆರಡು ಬಾರಿ ಡ್ರಿಂಕ್ಸ್ ಮಾಡಿದರೂ, ಲಿವರ್ ಗೆ ಸಮಸ್ಯೆ ಆಗುತ್ತಾ.?
- ರಶ್ ಇದ್ದ ಬಸ್ ನಲ್ಲಿ ಲೈಂಗಿಕ ದೌರ್ಜನ್ಯ ಎಂದು ವಿಡಿಯೋ ವೈರಲ್ ಮಾಡಿದ ಯುವತಿ : ಯುವಕ ಆತ್ಮಹತ್ಯೆಗೆ ಶರಣು
- ಒಪಿಎಸ್ ಪಡೆದೇ ತೀರುತ್ತೇವೆ – ಕರ್ನಾಟಕ ಬಂದ್ಗೆ ರೆಡಿ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೌಕರರ ಸಂಘದ ಸಿಎಸ್ ಷಡಕ್ಷರಿ
- ಅಪ್ಪ ದಾನ ಮಾಡಿದ ಜಾಗದಲ್ಲಿ ಕಟ್ಟಿದ್ದ ಆಸ್ಪತ್ರೇಲಿ ಚಿಕಿತ್ಸೆ ಸಿಗದೆ ಮಗ ಸಾವು.!
- ಮನೆಗೆ ಬೀಗ ಜಡಿದ ಖಾಸಗಿ ಫೈನಾನ್ಸ್: ವಾರದಿಂದ ಬೀದಿ ಬದಿಯೇ ವೃದ್ಧ ದಂಪತಿ ವಾಸ!
- ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬಳಿಗೆ ಗಾಳ : ವ್ಯಕ್ತಿ ವಂಚನೆ ಕಂಡು ಯುವತಿ ಕಕ್ಕಾಬಿಕ್ಕಿ
- ಐದೇ ನಿಮಿಷದಲ್ಲಿ ಹೊಟ್ಟೆಯನ್ನು ಸುಲಭವಾಗಿ ಕ್ಲೀನ್ ಮಾಡುವ ಅದ್ಭುತ ಟಿಪ್ಸ್!
- ಕಾಲಿನಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಹೃದಯ, ಕಿಡ್ನಿ ಡೇಂಜರ್ನಲ್ಲಿವೆ ಎಂದರ್ಥ…
- ರಾಜ್ಯದಲ್ಲಿ ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಸಚಿವ ಪರಮೇಶ್ವರ್ ಸೂಚನೆ
- ಕೇವಲ 40 ನಿಮಿಷದಲ್ಲೇ ಕೂದಲು ಉದುರುವ ಸಮಸ್ಯೆಗೆ ಮುಕ್ತಿ ನೀಡುತ್ತೆ ಈ ಎಲೆ..! ಇಂದೇ ಟ್ರೈ ಮಾಡಿ
- Horoscope Today : 18 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಡ್ರಗ್ಸ್ ದಂಧೆ ಮಾಡುವ ವಿದೇಶಿಯರನ್ನು ಮುಲಾಜಿಲ್ಲದೆ ಅವರ ದೇಶಕ್ಕೆ ಕಳಿಸಿ : ಸಿಎಂ ಸಿದ್ದರಾಮಯ್ಯ ಸೂಚನೆ
- ಇ-ಆಫೀಸ್ ಬಳಕೆಯಲ್ಲಿ ರಾಜ್ಯದಲ್ಲಿಯೇ ಕಲಬುರಗಿ ನಂಬರ್ ವನ್ : ಸಚಿವ ಪ್ರಿಯಾಂಕ್ ಖರ್ಗೆ
- ಮೂತ್ರ ಮಾಡುವ ಸಂದರ್ಭದಲ್ಲಿ ಉರಿ ಹಾಗೂ ದುರ್ವಾಸನೆ ಬರಲು ಕಾರಣ ಹಾಗೂ ಆಯುರ್ವೇದ ಪರಿಹಾರಗಳು
- ನಿಮ್ಮ ಮನೆಯ ವಿದ್ಯುತ್ ‘ಮೀಟರ್ ಬೋರ್ಡ್ ‘ನಲ್ಲಿ ‘ಕೆಂಪು ಲೈಟ್’ ಉರಿಯೋದು ಯಾಕೆ..? ಕಾರಣ ತಿಳಿಯಿರಿ
- ಜನ್ಮ ಕೊಟ್ಟ ತಂದೆಯನ್ನೇ ಕೊಂದು ಮೃತ ದೇಹವನ್ನು ಆಯಂಬುಲೆನ್ಸ್ನಲ್ಲಿ ಕಳಿಸಿದ ಮಗಳು
























