ತಮಿಳುನಾಡಿನಲ್ಲಿ ಯಾರೂ ಬಹುಮತ ಪಡೆಯಲ್ಲ, ದಯವಿಟ್ಟು ಬಿಜೆಪಿ ಬಲಪಡಿಸಿ: 2 ವರ್ಷದ ಹಿಂದೆಯೇ ಅಣ್ಣಾಮಲೈ ನೀಡಿದ್ದ ಸಲಹೆ ಕಡೆಗಣಿಸಿ ಕೆಟ್ಟ ಬಿಜೆಪಿ

ತಮಿಳುನಾಡು ರಾಜಕಾರಣದಲ್ಲಿ ಸದ್ಯ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಎಲ್ಲರ ಚಿತ್ತ ಟಿವಿಕೆ ಯಾವಾಗ ಸ್ಪಷ್ಟ ಬಹುಮತ ಸಾಬೀತುಪಡಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನುವುದರತ್ತ ಇದೆ. WhatsApp Group Join Now ಫಲಿತಾಂಶ ಹೊರಬಿದ್ದು ಮೂರು ದಿನಗಳಾದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆಗೆ ಇನ್ನೂ ಸಹ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಇದ್ದು, ಭಾರೀ ಕುತೂಹಲ ಮೂಡಿಸಿದೆ. ಇನ್ನು ಟಿವಿಕೆಗೆ 5 ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಬೆಂಬಲ ಸೂಚಿಸಿ ಕೈ ಜೋಡಿಸಿದ್ದು, ಉಳಿದ ಸ್ಥಾನಗಳಿಗೆ ಸಣ್ಣ ಪಕ್ಷಗಳ ಮೊರೆ ಹೋಗಬೇಕಿದೆ. … Read more

ಒಂದೇ ಒಂದು ವಾಟ್ಸಾಪ್ ಮೆಸೇಜ್; ವಿಜಯ್ ನಡೆಗೆ ದಂಗಾದ ಎಡರಂಗ: ಉಲ್ಟಾ ಹೊಡೆಯುತ್ತಾ ರಾಜಕೀಯ ಲೆಕ್ಕಾಚಾರ?

ತಮಿಳುನಾಡಿನಲ್ಲಿ ಸರ್ಕಾರ ರಚನೆಯ ರಾಜಕೀಯ ಹೋರಾಟ ಈಗ ವಾಟ್ಸಾಪ್ ರಾಜಕೀಯದತ್ತ ತಿರುಗಿದೆ. ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ, ಸರ್ಕಾರ ರಚಿಸಲು ಅಗತ್ಯವಿರುವ ಬೆಂಬಲಕ್ಕಾಗಿ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಪಕ್ಷಗಳನ್ನು ನೇರ ಸಭೆಗಳಿಗೆ ಕರೆಯುವುದಕ್ಕಿಂತ ವಾಟ್ಸಾಪ್ ಸಂದೇಶಗಳ ಮೂಲಕ ಸಂಪರ್ಕಿಸಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. WhatsApp Group Join Now ಇದೀಗ ಸರ್ಕಾರ ರಚನೆಗೂ ವಾಟ್ಸಾಪ್ ಸಾಕೇ? ಇದಕ್ಕೆ ಎಡಪಂಥೀಯ ನಾಯಕರು ಅಸಮಾಧಾನ ವ್ಯಕ್ತ ಪಡಿಸಿರುವಾದದರೂ ಏಕೆ ಎನ್ನುವುದನ್ನು … Read more

BIG BREAKING : ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ : ಸಂಪುಟ ವಜಾಗೊಳಿಸಿದ ರಾಜ್ಯಪಾಲರು

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಇಂದು ಮಹತ್ವದ ಬೆಳವಣಿಗೆಯಾಗಿದೆ. ತೃಣಮೂಲ ಕಾಂಗ್ರೆಸ್ ಸರ್ಕಾರದ ಪಟ್ಟು ಸಡಿಲಿಸಿರುವ ರಾಜ್ಯಪಾಲ ಆರ್.ಎನ್. ರವಿ, ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಮೂಲಕ ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಡಳಿತಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. WhatsApp Group Join Now ಘಟನೆಯ ಪ್ರಮುಖ ಮುಖ್ಯಾಂಶಗಳು: ಸಂಪುಟ ವಜಾ: ಸಂವಿಧಾನದ ದತ್ತ ಅಧಿಕಾರವನ್ನು ಬಳಸಿ ರಾಜ್ಯಪಾಲರು ಮಮತಾ ಬ್ಯಾನರ್ಜಿ ಅವರ ಸಚಿವ ಸಂಪುಟವನ್ನು ವಜಾಗೊಳಿಸಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲಿ ಅತ್ಯಂತ ಅನಿರೀಕ್ಷಿತ ಬೆಳವಣಿಗೆಯಾಗಿದೆ. ಪ್ರಮುಖ ಕಾರಣಗಳು: ಮೂಲಗಳ … Read more

Horoscope Today : 08 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ನಿಮ್ಮ ಕುಟುಂಬ ಮತ್ತು ಅವರ ನೆಮ್ಮದಿಯು ಇಂದು ನಿಮ್ಮ ಮೊದಲ ಆದ್ಯತೆಯಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ.ನಿಮ್ಮ ಮನೆಗೆ ಹೊಸ ರೂಪು ಕೊಡಲು, ಮನೆಯನ್ನು ಅಲಂಕರಿಸುವ ಕುರಿತಂತೆ ನೀವು ಯೋಚಿಸಬಹುದು. ಇಂದು ನೀವು ಅಧಿಕ ಸಮಯವನ್ನು ಮನೆಯಲ್ಲೇ ಕಳೆಯುವುದರಿಂದ ಅತ್ಯಂತ ಗಮನಹರಿಸಬೇಕಾಗಿರುವ ವಿವಿಧ ಕುಟುಂಬ ವಿಚಾರಗಳು ಹಾಗೂ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಾಗುತ್ತದೆ. ಮತ್ತು ಒಮ್ಮೆ ನೀವು ಅದನ್ನು ಬಗೆಹರಿಸಲು ಪ್ರಾರಂಭಿಸಿದಲ್ಲಿ, ನೀವು ವಿಶ್ರಾಂತ ಹಾಗೂ ತೃಪ್ತಿಯ ಮನೋಭಾವವನ್ನು ಹೊಂದುತ್ತೀರಿ. … Read more

SHOCKING : ನಿನ್ನ ರೇಟ್ ಎಷ್ಟು? ಬರ್ತೀಯ? : ಕಾಮುಕ ಮಾತು ಕೇಳಿ ಬೆಚ್ಚಿದ ಮಹಿಳಾ IPS ಅಧಿಕಾರಿ – Video Viral

ಮಹಿಳಾ ಸುರಕ್ಷತೆ ಬಗ್ಗೆ ಮಹಿಳಾ ಅಧಿಕಾರಿಯೊಬ್ಬರು ಮಾರು ವೇಷದಲ್ಲಿ ಬೀದಿಯಲ್ಲಿ ನಿಂತು ಪರಿಶೀಲನೆ ನಡೆಸಿದಾಗ ಅಘಾತಕಾರಿ ಘಟನೆ ನಡೆದಿದ್ದು, ಕೇವಲ ಮೂರು ಗಂಟೆಗಳಲ್ಲಿ ಸುಮಾರು 40 ಮಂದಿ ಅವರಿಗೆ ಕಿರುಕುಳ ನೀಡಿದ್ದಾರೆ. ಈ ಘಟನೆ ನಡೆದಿರುವುದು ಹೈದ್ರಾಬಾದ್ ನಲ್ಲಿ. WhatsApp Group Join Now ತೆಲಂಗಾಣದ ಮಹಿಳಾ ಐಪಿಎಸ್ ಅಧಿಕಾರಿ ಸುಮತಿ ಅವರು ಮೇ 1 ರಂದು ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು. ಅಂದೇ ಮಧ್ಯರಾತ್ರಿ, ಅವರು ಮಹಿಳಾ ಸುರಕ್ಷತೆಯನ್ನು ಪರೀಕ್ಷಿಸಲು ಮುಂದಾದರು. ಹೈದರಾಬಾದ್‌ನ … Read more

ಕೊಪ್ಪಳ ಹೋಟೆಲ್ ನಲ್ಲಿ ಅಪ್ರಾಪ್ತೆಯೊಂದಿಗೆ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ, ಭುಗಿಲೆದ್ದ ವಿವಾದ

ಕೊಪ್ಪಳದಲ್ಲಿ ಮತ್ತೊಂದು ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಅಪ್ರಾಪ್ತ ಹಿಂದೂ ಯುವತಿಯ ಜೊತೆ ಮುಸ್ಲಿಂ ಯುವಕ ಹರ್ಷಾ ಹೋಟೆಲ್ ನಲ್ಲಿ ಪತ್ತೆಯಾಗಿದ್ದು, ಪ್ರಶ್ನೆ ಮಾಡಿದ ಭಜರಂಗ ದಳದ ಕಾರ್ಯಕರ್ತರ ಮೇಲೆ ಎಫ್ ಐ ಆರ್ ದಾಖಲು ಮಾಡಿರುವ ಆರೋಪ ಕೇಳಿಬಂದಿದೆ. WhatsApp Group Join Now ಶಮೀರ್ ಎಂಬಾತನ ಜೊತೆ ಅಪ್ರಾಪ್ತ ಹಿಂದೂ ಯುವತಿ ಪತ್ತೆಯಾದಳು. ಅಪ್ರಾಪ್ತೆಯನ್ನ ಕರೆತಂದಿರೋ ಬಗ್ಗೆ ಭಜರಂಗದಳದ ಕಾರ್ಯಕರ್ಯರು ಪ್ರಶ್ನೆ ಮಾಡಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಭಜರಂಗದಳದ 8 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಈ … Read more

BIG NEWS: ‘ಪತಿ ನಿರುದ್ಯೋಗಿ’ಯಾದರೂ ‘ಪತ್ನಿಗೆ ಜೀವನಾಂಶ’ ನೀಡಬೇಕು: ಹೈಕೋರ್ಟ್ ಮಹತ್ವದ ತೀರ್ಪು

“ದುಡಿಯುವ ಸಾಮರ್ಥ್ಯವಿರುವ ಪತಿಯು ತಾನು ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಪತ್ನಿಯು ಉದ್ಯೋಗದಲ್ಲಿದ್ದು ಸಂಬಳ ಪಡೆಯುತ್ತಿದ್ದರೂ ಸಹ, ವಿವಾಹದ ನಂತರ ಪತಿಯ ಮನೆಯಲ್ಲಿ ಆಕೆ ಅನುಭವಿಸುತ್ತಿದ್ದ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ” ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. WhatsApp Group Join Now ಪ್ರಕರಣದ ಹಿನ್ನೆಲೆ: ಅರ್ಜಿದಾರ ಪತಿ ಮತ್ತು ಪತ್ನಿ ಇಬ್ಬರೂ ಈ ಮೊದಲೇ ವಿಚ್ಛೇದನ ಪಡೆದವರಾಗಿದ್ದು, 2021ರಲ್ಲಿ ಮರು ವಿವಾಹವಾಗಿದ್ದರು. ಆದರೆ, … Read more

BREAKING: ಬಿಜೆಪಿ ಶಾಸಕಿ ರತ್ನ ದೇಬನಾಥ್ ನಿವಾಸದ ಬಳಿ ಬಾಂಬ್ ಸ್ಫೋಟ; ಐವರು ಬಿಜೆಪಿ ಕಾರ್ಯಕರ್ತರಿಗೆ ಗಂಭೀರ ಗಾಯ

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮುಂದುವರೆದಿದೆ. ಬಿಜೆಪಿ ಸಿಎಂ ಅಭ್ಯರ್ಥಿ ಸುವೆಂದು ಅಧಿಕಾರಿ ಪಿಎ ಚಂದ್ರನಾಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಬೆನ್ನಲ್ಲೇ ಹಲವೆಡೆ ಹಿಂಸಾಚಾರ ತೀವ್ರಗೊಳ್ಳುತ್ತಿದೆ. WhatsApp Group Join Now ಬಿಜೆಪಿ ಶಾಸಕಿ ರತ್ನ ದೇಬನಾಥ್ ಅವರ ನಿವಾಸದ ಬಳಿ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಐವರು ಬಿಜೆಪಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪಾನಿಹಾಟಿ ಕ್ಷೇತ್ರದ ಬಿಜೆಪಿ ನೂತನ ಶಾಸಕಿಯಾಗಿರುವ ರತ್ನ ದೇಬನಾಥ್ ಅವರ ಮನೆ ಬಳಿ ಬಾಂಬ್ ಸ್ಫೋಟಗೊಂಡಿದ್ದು, ಐವರು … Read more

ತಮಿಳುನಾಡು ರಾಜಕೀಯದಲ್ಲಿ ರೋಚಕ ಟ್ವಿಸ್ಟ್‌, ಚಾಣಕ್ಯನಂತಹ ತಂತ್ರ ಹೆಣೆದ ಬಿಜೆಪಿ, ಮುಂದೇನಾಗುತ್ತೆ.?

ತಮಿಳುನಾಡು ರಾಜಕೀಯದಲ್ಲಿ ಗಮನಾರ್ಹ ತಿರುವು ಸಿಕ್ಕಿದೆ. ದಳಪತಿ ವಿಜಯ್ ಅವರ ಟಿವಿಕೆ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದೆ. ಆದರೀಗ ಆ ಪಕ್ಷಕ್ಕೆ ಬಹುಮತವಿಲ್ಲ. ಆದ್ದರಿಂದ, ನಟ ವಿಜಯ್ ಅವರ ಪಕ್ಷವಾದ ಟಿವಿಕೆಗೆ ಇತರ ಮಿತ್ರಪಕ್ಷಗಳ ಅಗತ್ಯವಿದೆ. WhatsApp Group Join Now ವಿಜಯ್ ಸರ್ಕಾರ ರಚಿಸಲು ಒಟ್ಟು 118 ಶಾಸಕರು ಬೇಕು, ಆದರೆ ಟಿವಿಕೆ ಬಳಿ ಕೇವಲ 108 ಶಾಸಕರಿದ್ದಾರೆ. 118 ಅಂಕಗಳನ್ನು ತಲುಪುವುದು ಹೇಗೆ ಎಂಬುದರ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ, ಬಿಜೆಪಿ ಇದ್ದಕ್ಕಿದ್ದಂತೆ ತಮಿಳುನಾಡು … Read more

ಲೋಕವನ್ನೇ ಬಿಡೋ ಕಾಲ ಬಂದಾಗ ಅಧಿಕಾರ ಏತಕೆ..? ದೀದಿಗೆ ಮೃತ್ಯು, ಸತ್ಯದ ಪಾಠ ಮಾಡಿದ ಬಿಜೆಪಿ ನಾಯಕ ದಿಲೀಪ್ ಘೋಷ್!

ಪಶ್ಚಿಮ ಬಂಗಾಳದ ರಾಜಕೀಯ ಸಮರವು ಚುನಾವಣಾ ಫಲಿತಾಂಶದ ನಂತರವೂ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡದಿರುವ ನಿರ್ಧಾರದ ಕುರಿತು ಬಿಜೆಪಿ ಮತ್ತು ಟಿಎಂಸಿ ನಡುವೆ ತೀವ್ರ ವಾಕ್ಸಮರ ಮುಂದುವರೆದಿದೆ. ಅಧಿಕಾರದಿಂದ ಕೆಳಗಿಳಿಯಲು ದೀದಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಬುಧವಾರ ಹಿರಿಯ ಬಿಜೆಪಿ ನಾಯಕ ದಿಲೀಪ್ ಘೋಷ್ ಟಿಎಂಸಿ ಮುಖ್ಯಸ್ಥರ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದಾರೆ. WhatsApp Group Join Now ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದಿಲೀಪ್ ಘೋಷ್, ಈ ಸಿಂಹಾಸನವು ಕೇವಲ ಎರಡು ದಿನಗಳವರೆಗೆ ಮಾತ್ರ ಇರುತ್ತದೆ. … Read more