Labour Card Benefits : ಲೇಬರ್ ಕಾರ್ಡ್ ಅಥವಾ ಕಾರ್ಮಿಕ ಕಾರ್ಡ್ ಇದ್ದವರಿಗೆ ₹60,000/- ಸಿಗಲಿದೆ. ಹೌದು. ಪ್ರತಿಯೊಬ್ಬರಿಗೂ ಕೂಡ ರಾಜ್ಯ ಕಾರ್ಮಿಕ ಇಲಾಖೆಯಿಂದ ಸಂಪೂರ್ಣ ಉಚಿತವಾಗಿ ನೀಡಲಾಗ್ತಿದೆ.
ಈಗಾಗಲೇ ಕರ್ನಾಟಕದಲ್ಲಿ ಬಹಳಷ್ಟು ಜನ ಕಾರ್ಮಿಕ ಕಾರ್ಡ್ ಇದ್ದವರು ಅಥವಾ ಲೇಬರ್ ಕಾರ್ಡ್ ಮಾಡಿಕೊಂಡಿರುತ್ತಾರೆ. ಆದರೆ ಸರ್ಕಾರವು ನೀಡುತ್ತಿರುವ ₹60,000/- ರೂಪಾಯಿಗಳನ್ನು ಎಲ್ಲಿ ಮತ್ತು ಹೇಗೆ.? ಯಾವಾಗ ಪಡೆದುಕೊಳ್ಳಬೇಕು.? ಯಾವ ಉದ್ದೇಶಕ್ಕಾಗಿ ಹಣ ನೀಡಲಾಗ್ತಿದೆ? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಜಮೀನಿಗೆ ಹೋಗುವ ದಾರಿಗೆ ಹೊಸ ನಿಯಮ.! ಪ್ರತಿಯೊಬ್ಬ ರೈತರು ತಪ್ಪದೇ ನೋಡಿ
ರಾಜ್ಯ ಹಾಗು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನ ಜಾರಿಗೆ ತಂದಿವೆ. ಈ ಎಲ್ಲ ಯೋಜನೆಗಳ ಮೂಲಕ ಜನರಿಗೆ ಸಾಲ ಸೌಲಭ್ಯ, ಶೈಕ್ಷಣಿಕ ನೆರವು, ಮನೆ ನಿರ್ಮಾಣಕ್ಕಾಗಿ ಸಹಾಯ, ಮಹಿಳೆಯರಿಗೆ ಸ್ವಂತ ದುಡಿಮೆಗಾಗಿ ಸಾಲ ಸೌಲಭ್ಯ ದೊರೆಯುತ್ತದೆ. ಸರ್ಕಾರದಿಂದ ಜಾರಿಯಾಗುವ ಯೋಜನೆಗಳು ಬಡ ಜನರಿಗೆ ಬಹಳಷ್ಟು ಸಹಾಯವಾಗಿದೆ. ಹಾಗೇನೇ ಈಗ ಸರ್ಕಾರದಿಂದ ಕಾರ್ಮಿಕರಿಗೆ ಒಳ್ಳೆಯ ಸುದ್ದಿ ಕೂಡ ಬಂದಿದೆ. ಸರ್ಕಾರವು ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು, ಅಸಂಘಟಿತ ಕಾರ್ಮಿಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಯೋಜನೆಯನ್ನ ಜಾರಿಗೆ ತರಲಾಗಿದೆ.
ಈ ಎಲ್ಲಾ ಯೋಜನೆಯ ಮುಖ್ಯ ಉದ್ದೇಶ ಶ್ರಮ ಜೀವಿಗಳಾದ ಕಾರ್ಮಿಕರ ಜೀವನ ಉತ್ತಮ ರೀತಿಯಲ್ಲಿ ಸಾಗಬೇಕು ಮತ್ತು ಅವರು ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬುದಾಗಿದೆ. ಈ ಯೋಜನೆಗಳ ಮೂಲಕ ಹಲವಾರು ಸವಲತ್ತುಗಳು ಕಾರ್ಮಿಕರಿಗೆ ದೊರೆಯಲಿದ್ದು, ಕಾರ್ಮಿಕರ ಕುಟುಂಬದಲ್ಲಿ ಜನನದಿಂದ ಹಿಡಿದು ಮರಣದವರೆಗೆ ಹಲವು ಯೋಜನೆಗಳಿದ್ದು, ಅದರ ಬಗ್ಗೆ ಮಾಹಿತಿಯನ್ನ ಪಡೆದು ಅನುದಾನ ಪಡೆದುಕೊಳ್ಳಬೇಕು.
ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಅಕ್ಕಿ ಹಣ ಬಿಡುಗಡೆ – ಇಂದು ಮಧ್ಯಾಹ್ನ 3 ಗಂಟೆಗೆ ಜಮಾ.!
ಮದುವೆಗೆ ₹60,000 ಸಹಾಯಧನ :-
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೋಂದಾಯಿತ ಕಾರ್ಮಿಕರಿಗೆ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ ₹60,000/- ಸಹಾಯ ಧನವನ್ನು ನೀಡಲಾಗುತ್ತದೆ. ಈ ಯೋಜನೆಯ ಮೂಲಕ ಉದ್ದೇಶ ಕಾರ್ಮಿಕ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡಿ ಅವರ ಜೀವನ ಮಟ್ಟವನ್ನು ಸುಧಾರಿಸುವುದಾಗಿದೆ. ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಿ ಈ ಸೌಲಭ್ಯವನ್ನ ಪಡೆದುಕೊಳ್ಳಬಹುದು. ನೋಂದಾಯಿತ ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ಮಂಡಳಿಯ ಸಹಾಯಧನವನ್ನು ನೀಡುತ್ತಿದೆ.
ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಅರ್ಹತೆಗಳು :-
- ಮದುವೆ ದಿನಾಂಕದವರೆಗೆ ಕನಿಷ್ಠ 1 ವರ್ಷ ಮಂಡಳಿಯ ಸದಸ್ಯತ್ವವನ್ನ ಪೂರೈಸಿರಬೇಕು.
- ಒಂದು ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯವನ್ನ ಪಡೆಯಲು ಅರ್ಹರಾಗಿರುತ್ತಾರೆ.
- ಸಹಾಯ ಧನ ಪಡೆಯಲು ವಿವಾಹ ನಿಯಮದ ಅಡಿ ಸೂಚಿಸಿರುವ ವಯಸ್ಸಿನ ತಲುಪಿರಬೇಕು.
- ವಿವಾಹದ ದಿನಾಂಕದಿಂದ ಆರು ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿಯೊಂದಿಗೆ ವಿವಾಹ ನೋಂದಣಿ ಅಧಿಕಾರಿಯಿಂದ ಪಡೆದ ವಿವಾಹ ನೋಂದಣಿ ಪ್ರಮಾಣ ಪತ್ರವನ್ನ ಹಾಜರುಪಡಿಸಬೇಕು.
ಇತರ ಸಹಾಯಕ ದಾಖಲೆಗಳು :-
- ಅರ್ಜಿಯನ್ನು ಸಲ್ಲಿಸಲು ನಿಮ್ಮ ಬಳಿ ಕಾರ್ಮಿಕರ ನೋಂದಣಿ ಪ್ರಮಾಣ ಪತ್ರ ಇರಬೇಕು.
- ಮದುವೆಯಾದ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
- ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು.
- ಅರ್ಜಿದಾರರ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು.
- ಇದರ ಜೊತೆಗೆ ಮಂಡಳಿಯಿಂದ ನೀಡಲಾದ ಫಲಾನುಭವಿ ಅಥವಾ ಮೂಲ ಗುರುತಿನ ಚೀಟಿ, ಉದ್ಯೋಗ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ವಿವಾಹ ನೋಂದಣಿ ಅಧಿಕಾರಿಯಿಂದ ವಿವಾಹ ಪತ್ರ, ಮದುವೆ ಆಮಂತ್ರಣ ಪತ್ರ, ಕರ್ನಾಟಕ ರಾಜ್ಯದ ಹೊರಗೆ ಮದುವೆಯಾಗಿದ್ರೆ ಅಫಿದವಿತ್ ಮತ್ತು ಪಡಿತರ ಚೀಟಿಯಂತಹ ಇತರೆ ಸಹಾಯಕ ದಾಖಲಾತಿಗಳನ್ನು ಹೊಂದಿರಬೇಕು.