ಹೃದಯದ ಆರೋಗ್ಯಕ್ಕೂ ಮಲಗುವ ಭಂಗಿಗೂ ಇದೆ ನಿಕಟ ಸಂಬಂಧ! ರಕ್ತ ಪರಿಚಲನೆ ಹೆಚ್ಚಿಸಲು ಮತ್ತು ಹಾರ್ಟ್ ಅಟ್ಯಾಕ್ ತಡೆಯಲು ಇಲ್ಲಿದೆ ಸರಳ ಸೂತ್ರ

ಅಮೆರಿಕದ ಕಾರ್ಡಿಯಾಕ್ ಐಸಿಯುನಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಅನುಭವಿ ನರ್ಸ್ ಪೆಟ್ರೀಷಿಯಾ ಮೂರ್ ಅವರ ಪ್ರಕಾರ, ನಾವು ಮಲಗುವ ರೀತಿ ನಮ್ಮ ಹೃದಯದ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸುಮಾರು 3,000ಕ್ಕೂ ಹೆಚ್ಚು ಹೃದಯಾಘಾತದಿಂದ ಬದುಕುಳಿದವರನ್ನು ಗಮನಿಸಿದ ಅವರು, ರಾತ್ರಿಯ ಸಮಯದಲ್ಲಿ ಹೃದಯದ ಮೇಲಿನ ಯಾಂತ್ರಿಕ ಒತ್ತಡವನ್ನು ಕಡಿಮೆ ಮಾಡಲು ನಿರ್ದಿಷ್ಟ ಸಲಹೆಗಳನ್ನು ನೀಡಿದ್ದಾರೆ. ಹೃದಯದ ಆರೋಗ್ಯಕ್ಕೆ ಯಾವ ಭಂಗಿ ಉತ್ತಮ? ಪೆಟ್ರೀಷಿಯಾ ಅವರ ಪ್ರಕಾರ, ಎಡಭಾಗಕ್ಕೆ ತಿರುಗಿ ಮಲಗುವುದು (Left-side … Read more

ಚಾಲಕನ ನಿರ್ಲಕ್ಷ್ಯದಿಂದ ಶಾಲಾ ಬಸ್ ಕಾಲುವೆಗೆ ಬಿದ್ದು 40 ವಿದ್ಯಾರ್ಥಿಗಳಿಗೆ ಗಾಯ

ತೆಲಂಗಾಣದ ಖಮ್ಮಂ ಜಿಲ್ಲೆಯ ಪೆನುಬಳ್ಳಿ ಮಂಡಲದ ಗಣೇಶಪಾಡು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸುಮಾರು 100 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಕಾಲುವೆಗೆ ಉರುಳಿದೆ. ಮದ್ದುಲಗುಡೆಮ್ (ವೆಮ್ಸೂರ್ ಮಂಡಲ) ದ ವಿವೇಕಾನಂದ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಹೊರಟಿದ್ದ ಶಾಲಾ ಬಸ್ ಶುಕ್ರವಾರ ನಿನ್ನೆ ಸಂಜೆ ಅಪಘಾತಕ್ಕೆ ಒಳಗಾಗಿದೆ. ಸ್ಕೂಲ್‌ ಮುಗಿದ ಬಳಿಕ ಗಣೇಶಪಾಡು, ಎಲ್.ಎಸ್. ಬಂಜಾರ್, ಕೆ.ಎಂ. ಬಂಜಾರ್, ಮರ್ಲಕುಂಟ ಮತ್ತು ಮುತ್ತುಗುಡೆಮ್ ನಿಂದ ವಿದ್ಯಾರ್ಥಿಗಳು ಬಸ್ಸಿನ ಮೂಲಕ ಮನೆಗಳಿಗೆ ತೆರಳುತ್ತಿದ್ದರು. … Read more

ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಸಾವು: Viral Video ಬಳಿಕ ಪ್ರೊಫೆಸರ್ ಸೇರಿ ನಾಲ್ವರ ವಿರುದ್ಧ ಪ್ರಕರಣ!

ಇತ್ತೀಚೆಗಷ್ಟೇ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿ (19) ಸಾವಿನ ಪ್ರಕರಣದಲ್ಲಿ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. ಹಿಮಾಚಲ ಪ್ರದೇಶ ಪೊಲೀಸರು ಕಾಲೇಜಿನ ಪ್ರಾಧ್ಯಾಪಕ ಮತ್ತು ಮೂವರು ವಿದ್ಯಾರ್ಥಿನಿಯರ ವಿರುದ್ಧ ರ‍್ಯಾಗಿಂಗ್, ದೈಹಿಕ ಹಲ್ಲೆ ಮತ್ತು ಲೈಂಗಿಕ ಕಿರುಕುಳದ ಆರೋಪದಡಿ ಪ್ರಕರಣ ದಾಖಲಿಸಿ, ತನಿಖೆಗೆ ಒಳಪಡಿಸಿದ್ದಾರೆ. ಮೃತ ಪಲ್ಲವಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಳು. ಕಳೆದ ವರ್ಷ ಸೆಪ್ಟೆಂಬರ್ 18ರಂದು ಅದೇ ಕಾಲೇಜಿನ ಮೂವರು ವಿದ್ಯಾರ್ಥಿಗಳಾದ ಹರ್ಷಿತಾ, ಆಕೃತಿ ಮತ್ತು ಕೊಮೊಲಿಕಾ … Read more

ಮಹಿಳೆಯರೇ, ಎಚ್ಚರ.! ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಗರ್ಭಕಂಠದ ಕ್ಯಾನ್ಸರ್‌ ಬಂದಿದೆ ಎಂದರ್ಥ!

ಗರ್ಭಕಂಠದ ಕ್ಯಾನ್ಸರ್ ಬೇಗ ಪತ್ತೆಯಾದಷ್ಟೂ ಅದು ನಿಮ್ಮ ಆರೋಗ್ಯಕ್ಕೆ ಕಡಿಮೆ ಹಾನಿ ಉಂಟುಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್ ವಿಷಯದಲ್ಲಿ ವಿಳಂಬ ಮಾಡಿದ್ರೆ ನಂತರ ನೀವು ವಿಷಾದಿಸಬೇಕಾಗುತ್ತದೆ. ಇಂದು ಗರ್ಭಕಂಠದ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯನ್ನ ಸೂಚಿಸುವ ಕೆಲವು ಲಕ್ಷಣಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಒಂದು ವೇಳೆ ನೀವು ಈ ಲಕ್ಷಣಗಳನ್ನ ಏಕಕಾಲದಲ್ಲಿ ಅನುಭವಿಸಿದರೆ, ತಕ್ಷಣವೇ ವೈದ್ಯರನ್ನ ಸಂಪರ್ಕಿಸಬೇಕು. ಜಾಗರೂಕರಾಗಿರಿ: ನಿಮ್ಮ ಋತುಚಕ್ರವು ದೀರ್ಘಕಾಲದವರೆಗೆ ಇದ್ದರೆ, ಈ ಲಕ್ಷಣವನ್ನ ನೀವು ಸಣ್ಣದು ಎಂದು ಅಪ್ಪಿತಪ್ಪಿಯೂ ಭಾವಿಸಬಾರದು. ಇದಲ್ಲದೆ ಯೋನಿಯಿಂದ ನೀರಿನಂಶದ, … Read more

ಮದ್ಯದ ನಶೆಯಲ್ಲಿ ಅಪ್ರಾಪ್ತೆ ಅಪಹರಣಕ್ಕೆ ಯತ್ನ: ಯೂಟ್ಯೂಬರ್ ಸೇರಿ ಇಬ್ಬರು ಅರೆಸ್ಟ್, ಮತ್ತಿಬ್ಬರಿಗೆ ಧರ್ಮದೇಟು

ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ನಸುಕಿನಲ್ಲಿ ಮನೆಗೆ ಹೋಗುತ್ತಿದ್ದ 17 ವರ್ಷದ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ, ಮಾಗಡಿ ಠಾಣೆ ಪೊಲೀಸರು ಯುಟ್ಯೂಬ್ ನ್ಯೂಸ್‌ ಚಾನೆಲ್‌ ನಡೆಸುತ್ತಿರುವ ವ್ಯಕ್ತಿ ಸೇರಿದಂತೆ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಆರ್‌ಜೆ ಡಿಜಿಟಲ್ ನ್ಯೂಸ್‌ ಯೂಟ್ಯೂಬ್ ಚಾನೆಲ್‌ನ ರವಿ ಜಮುನಾ ಬಂಧಿತ. ಇನ್ನಿಬ್ಬರು ಆರೋಪಿಗಳಾದ ರವಿ ಸ್ನೇಹಿತ ಹಾಗೂ ಮಾಗಡಿಯ ವೆಂಕಟೇಶ್‌ ಕೃತ್ಯದಲ್ಲಿ ವಹಿಸಿರುವ ಪಾತ್ರದ … Read more

ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ : ವೈನ್ ಶಾಪ್ ಎದುರೇ ರಾಡ್ನಿಂದ ಹೊಡೆದು ಕೊಲೆ

ಶಿವಮೊಗ್ಗದ ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಇರುವ ಶ್ರೀನಿಧಿ ವೈನ್ ಶಾಪ್ ಮುಂದೆ ಒಂದು ಭೀಕರ ಕೊಲೆ ನಡೆದಿದೆ. ಅರುಣ ಎನ್ನುವ ವ್ಯಕ್ತಿಯು ವೈನ್ ಶಾಪ್ ಮುಂದೆ ನಿಂತಿದ್ದಾಗ ಹಠಾತ್ ಆಗಿ ಅಲ್ಲಿಗೆ ಎಂಟ್ರಿ ಕೊಟ್ಟ ಇಬ್ಬರು ವ್ಯಕ್ತಿಗಳು ಕೆಲವೇ ಕ್ಷಣದಲ್ಲಿ ಅರುಣ ಮೇಲೆ ರಾಡ್ನಿಂದ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಅರುಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅರುಣನನ್ನು ಕೊಲೆ ಮಾಡಿದ್ದು ಮತ್ಯಾರೂ ಅಲ್ಲ, ಆತನಿಗೆ ಹೆಣ್ಣು ಕೊಟ್ಟ ಮಾವ ತಿಪ್ಪೇಶ್ ಮತ್ತು ಹೆಂಡತಿಯ ಸೋದರ … Read more

ತಾಯಿ ಹೇಳಿದ ‘ಬುದ್ಧಿ ಮಾತು’ ಮಗನ ಸಾವಿಗೆ ಕಾರಣವಾಯ್ತು.? ಹೊಸ ವರ್ಷದ ದಿನ ವಿಷ ಸೇವಿಸಿದ್ದ ಯುವಕ ಸಾವು.!

‘ಹೊಸ ವರ್ಷ ಬಂದಿದೆ, ಇನ್ಮುಂದೆಯಾದರೂ ಸರಿಯಾಗಿ ಕೆಲಸ ಮಾಡು’ ಎಂದು ತಾಯಿ ಹೇಳಿದ ಬುದ್ಧಿಮಾತನ್ನೇ ಅವಮಾನವಾಗಿ ಭಾವಿಸಿದ ಯುವಕನೊಬ್ಬ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದಲ್ಲಿ ನಡೆದಿದೆ. ಹೊಸ ವರ್ಷದ ಆರಂಭದ ದಿನವೇ ಬೆಳಗಾವಿ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ನಿನ್ನೆಯೂ ಕೂಡ ಬೆಂಗಳೂರಿನಲ್ಲಿ 17 ವರ್ಷದ ಬಾಲಕಿಯೊಬ್ಬಳು ಅಪ್ಪ-ಅಮ್ಮ ನನಗೆ ಪ್ರೀತಿ ತೋರಿಸುತ್ತಿಲ್ಲ. ಅವರಿಬ್ಬರೂ ಬೇರೆ ಬೇರೆ ಆಗಿದ್ದಾರೆ. ನಾನು ಎಸ್‌ಎಸ್‌ಎಲ್‌ಸಿ ಫೇಲ್ ಆದರೂ ನನ್ನ ಮೇಲೆ ಒಂಚೂರು ಪ್ರೀತಿ … Read more

ವೈದ್ಯಲೋಕಕ್ಕೆ ಶಾಕ್ ; ಪ್ರಖ್ಯಾತ ನ್ಯೂರೋಸರ್ಜನ್ ಹೃದಯಾಘಾತಕ್ಕೆ ಬಲಿ : 3 ದಿನದ ಹಿಂದಷ್ಟೇ ECG ನಾರ್ಮಲ್ ಬಂದಿತ್ತು!

ನಾಗಪುರದ ಪ್ರಮುಖ ನ್ಯೂರೋಸರ್ಜನ್ ಡಾ. ಚಂದ್ರಶೇಖರ್ ಪಾಖಮೋಡೆ (53) ಅವರು ಡಿಸೆಂಬರ್ 31ರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಫಿಟ್ನೆಸ್ ಪ್ರಿಯರಾಗಿದ್ದ ಅವರು ಕೇವಲ ಮೂರು ದಿನಗಳ ಹಿಂದೆ ಇಸಿಜಿ ಪರೀಕ್ಷೆ ಮಾಡಿಸಿಕೊಂಡಿದ್ದು, ಅದು ಸಂಪೂರ್ಣ ಸಾಮಾನ್ಯವೆಂದು ತೋರಿಸಿತ್ತು. ಈ ಆಕಸ್ಮಿಕ ಮರಣ ವೈದ್ಯಕೀಯ ವಲಯದಲ್ಲಿ ಆಘಾತ ಮೂಡಿಸಿದ್ದು, ಹೃದಯ ಸಂಬಂಧಿತ ಅಪಾಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಡಿಸೆಂಬರ್ 30ರ ರಾತ್ರಿ ಸ್ನೇಹಿತರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಮರುದಿನ ಬೆಳಗ್ಗೆ ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದರು. ಅವರ ಪತ್ನಿ … Read more

ಐದು ತಿಂಗಳ ಮಗುವಿನ ಜೀವತೆಗೆದ ಹನಿ ನೀರು : ವಿವಾಹವಾಗಿ 10 ವರ್ಷದ ನಂತರ ಜನಿಸಿದ್ದ ಕಂದಮ್ಮ!

ಮಗುವಿಗೆ ಕುಡಿಸುವ ಹಾಲಿಗೆ ಬೆರೆಸಿದ್ದ ನಲ್ಲಿ ನೀರು ಮಗುವಿನ ಜೀವವನ್ನೇ ತೆಗೆದಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ. ಕಲುಷಿತ ನೀರು ಸೇವಿಸಿ ಐದೂವರೆ ತಿಂಗಳ ಅಯಾನ್ ಎಂಬ ಮಗು ಸಹ ಸಾವನ್ನಪ್ಪಿದೆ. ಅವ್ಯಾನ್ ಅವರ ತಂದೆ ಸುನಿಲ್ ಸಾಹು ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ವರ್ಷಗಳ ಪ್ರಾರ್ಥನೆ ಮತ್ತು ಕಾಯುವಿಕೆಯ ನಂತರ ಅವರಿಗೆ ಜುಲೈನಲ್ಲಿ ಮಗು ಜನಿಸಿತ್ತು. 10 ವರ್ಷಗಳ ನಂತರ ದೇವರು ನಮಗೆ ಖುಷಿ ನೀಡಿದ್ದನು. ಬಳಿಕ, ದೇವರೇ ಅದನ್ನು ಕಸಿದಿದ್ದಾನೆ ಎಂದು ಇಂದೋರ್‌ನ ಮನೆಯ … Read more

ವಿಜಯ್ ಯಾಕಪ್ಪಾ ಸರ್ಕಸ್ ಮಾಡ್ತಿಯಾ? ತಮಿಳುನಾಡಲ್ಲಿ ಇಂಡಿ ಕೂಟವೇ ಗೆಲ್ಲೋದು : ಪಿ. ಚಿದಂಬರಂ

ಕರೂರು ಕಾಲ್ತುಳಿತದ ಬೆನ್ನಲ್ಲೇ ಪೊಲಿಟಿಕಲ್‌ ಪಿಕ್ಚರ್‌ ಬದಲಾಗಿದೆ. ಸ್ಟಾರ್‌ ನಟನಿಗೆ ಬಿಜೆಪಿ ದಾಳ ಹಾಕಿದೆ. ವಿಜಯ್‌ರನ್ನು ತಮ್ಮನ್ನ ಸೆಳೆಯುವ ಕಾರ್ಯತಂತ್ರ ಜೋರಾಗಿದೆ. ಈ ಪೊಲಿಟಿಕಲ್‌ ಗೇಮ್‌ನಲ್ಲಿ ಕಾಂಗ್ರೆಸ್‌ ಕೂಡ ಒಂದು ಹೆಜ್ಜೆ ಮುಂದಿಟ್ಟಿದೆ. ನಟ ವಿಜಯ್ ಏನೇ ಸರ್ಕಸ್ ಮಾಡಿದರೂ ತಮಿಳುನಾಡಲ್ಲಿ ಇಂಡಿ ಕೂಟವೇ ಗೆಲ್ಲೋದು ಎಂದು ಪಿ. ಚಿದಂಬರಂ ಹೇಳುತ್ತಿದ್ದಾರೆ. 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ನಟ ವಿಜಯ್‌ ಭರಪೂರ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನದ ಹಿಂದೆ ಶ್ರೀಲಂಕಾ ಸಂಸದ ನಮಲ್‌ ರಾಜಪಕ್ಸೆ … Read more