ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ! SIR ಪರಿಣಾಮ ಏನೆಂದು ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳದ ಫಲಿತಾಂಶದಲ್ಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ಎಸ್‌ಐಆರ್ ನಡೆಯುತ್ತಿರುವುದು ಇದು ಮೊದಲ ಬಾರಿಯಲ್ಲ, 1950ರಲ್ಲಿ ಚುನಾವಣಾ ಆಯೋಗ ರಚನೆಯಾಗಿ, 1952 ರಲ್ಲಿ ಪ್ರಥಮ ಚುನಾವಣೆ ನಡೆಯಿತು. ಆಗಿಂದ್ದಾಗ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಾ ಬಂದಿದೆ, ಆದರೆ ಅರ್ಹ ಮತದಾರರನ್ನು ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲ. ಆಯೋಗ ಸಂವಿಧಾನಬದ್ಧವಾಗಿಯೇ ಕೆಲಸ ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಅಂದರೆ 2014ರ ನಂತರ “ಮತ ದ್ರೋಹ” ಮಾಡಲಾಗುತ್ತಿದೆ, ಜನರ ಬಹುಮತದ ಮೂಲಕ ಗೆದ್ದವರು ಮಾತ್ರ ಅಧಿಕಾರ ನಡೆಸಲು ಯೋಗ್ಯರು. ಮೋಸ ಮಾಡಿದವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. … Read more

ಕಾರಿನಲ್ಲಿ ನಾಡಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸ್ಪೋಟಕ ವಿಚಾರ ಬಿಚ್ಚಿಟ್ಟ ಸಂತ್ರಸ್ತೆ.!

ತುಮಕೂರು ಜಿಲ್ಲೆಯ (Tumkur) ಶಿರಾ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿಯೇ ನಾಡಬಾಂಬ್ ಸ್ಫೋಟಿಸಿಕೊಂಡು (Bomb Blast) ಪಾಗಲ್ ಪ್ರೇಮಿ ನಾಗೇಂದ್ರ ಆತ್ಮಹತ್ಯೆ (Crime) ಮಾಡಿಕೊಂಡ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ನೊಂದ ಯುವತಿ ರಮ್ಯಾ ಪೊಲೀಸರಿಗೆ ಒಂದೊಂದೇ ಆಘಾತಕಾರಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾಳೆ. ಆಸ್ಪತ್ರೆಯ ಚಿಕಿತ್ಸೆ ನಡುವೆಯೇ ಕಳ್ಳಂಬೆಳ್ಳ ಪೊಲೀಸ್ ಠಾಣೆಗೆ ಬರೋಬ್ಬರಿ ನಾಲ್ಕು ಪುಟಗಳ ಸುದೀರ್ಘ ದೂರು ನೀಡಿರುವ ರಮ್ಯಾ, ಮೃತರಾಗಿದ್ದ ನಾಗೇಂದ್ರ ತನಗೆ ನೀಡುತ್ತಿದ್ದ ನರಕಯಾತನೆಯನ್ನು ಎಳೆಎಳೆಯಾಗಿ ವಿವರಿಸಿದ್ದಾಳೆ. ಈ ದೂರಿನ ಆಧಾರದ ಮೇಲೆ ಸದ್ಯ ಪೊಲೀಸರು … Read more

ಹರ್ನಿಯಾ : ಹೊಟ್ಟೆ ಭಾಗದಲ್ಲಿ ನೋವು, ತೊಡೆಸಂಧಿಯ ಉಬ್ಬು, ಹರ್ನಿಯಾ ನಡುವಿನ ವ್ಯತ್ಯಾಸ ತಿಳಿಯಿರಿ

ಹೊಟ್ಟೆಯ ಭಾಗ ಅಥವಾ ತೊಡೆಸಂಧಿ ಪ್ರದೇಶದಲ್ಲಿ ಕಂಡುಬರುವ ಉಬ್ಬುಗಳು, ನೋವಿನ ವಿಧಗಳು ಮತ್ತು ತೀವ್ರತೆಯ ಬಗ್ಗೆ ಬಹುತೇಕ ಮಂದಿ ತಿಳಿವಳಿಕೆ ಹೊಂದಿರುವುದು ತೀರಾ ಕಡಿಮೆ. ಪ್ರತಿಯೊಬ್ಬರು ಕೂಡ ವಿವಿಧ ರೀತಿಯ ಊತಗಳಿಗೆ ಸಂಬಂಧಿಸಿ ಬೇರೆ ಬೇರೆ ಅಭಿಪ್ರಾಯ ಹೊಂದಿರುತ್ತಾರೆ. ಹರ್ನಿಯಾಗಳು ನೋವುರಹಿತವಾಗಿರುವುದರಿಂದಾಗಿ ಬಹುತೇಕ ರೋಗಿಗಳು ತೀರಾ ತಡವಾಗಿ ವೈದ್ಯರ ಬಳಿಗೆ ಬರುತ್ತಾರೆ. ಹಾಗಾದರೆ ಹೊಟ್ಟೆಯ ಮತ್ತು ತೊಡೆಸಂಧಿ ಭಾಗದ ಊತಗಳು, ವಿಶೇಷವಾಗಿ ಹರ್ನಿಯಾಗಳನ್ನು ಗುರುತಿಸುವುದು ಹೇಗೆ? ಇದಕ್ಕೆ ಕೆಲವು ಸಾಮಾನ್ಯ ಲಕ್ಷಣಗಳು ಮತ್ತು ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು … Read more

ಅಂಬಾನಿ ನೀಡಿದ ₹900 ಕೋಟಿ ದೇಣಿಗೆಯ ಲೆಕ್ಕ ನೀಡಿ: ರಾಮಮಂದಿರ ಟ್ರಸ್ಟ್ʼಗೆ ಬಿ.ಕೆ. ಹರಿಪ್ರಸಾದ್ ಪ್ರಶ್ನೆ

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ನೀಡಿದ್ದರೆಂದು ಹೇಳಲಾಗುತ್ತಿರುವ ₹900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ ಎಂದು ಆರೋಪಿಸಿದ ಅವರು, ರಾಮ ಮಂದಿರ ದೇಣಿಗೆ ಪ್ರಕರಣದ ಬಗ್ಗೆ ಪಾರದರ್ಶಕತೆ ಇರಬೇಕು ಎಂದು ಆಗ್ರಹಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರಿಪ್ರಸಾದ್, ರಾಮ ಮಂದಿರ ದೇಣಿಗೆ ವಿವಾದದ ಕುರಿತು ಶಿವಸೇನೆ ನಾಯಕ ಸಂಜಯ್ ರಾವತ್ ಎತ್ತಿರುವ … Read more

ಭಾಮೈದುನ ಮೇಲಿನ ದಾಳಿ ಸತ್ಯಾಂಶ ತಿಳಿಯಲು 6 ತಿಂಗಳು ಬೇಕು : ಸಚಿವ ಸತೀಶ್‌ ಜಾರಕಿಹೊಳಿ

ರಾಜ್ಯ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ್ ಮೇಲಿನ ಜಾರಿ ನಿರ್ದೇಶನಾಲಯದ ದಾಳಿ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಪ್ರೇರಿತ ಎಂದು ಹೇಳಲು ಸಾಧ್ಯವಿಲ್ಲ. ಇದರ ಸತ್ಯಾಂಶ 6 ತಿಂಗಳ ಬಳಿಕ ಹೊರಬರಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಮಾನ್ಯವಾಗಿ 2028ರ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಇ.ಡಿ. ದಾಳಿಗಳು ಆರಂಭವಾಗುತ್ತವೆ. ಇದು ತಮ್ಮ ರಾಜಕೀಯ ಅನುಭವ ಎಂದರು. ಭ್ರಷ್ಟಾಚಾರದ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಇಷ್ಟು ದೊಡ್ಡ … Read more

ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ

ಜಗತ್ತಿನಾದ್ಯಂತ ಸಂಭವಿಸುತ್ತಿರುವ ಸರಣಿ ನೈಸರ್ಗಿಕ ವಿಕೋಪಗಳು ಮತ್ತು ಮಳೆಯಿಲ್ಲದೆ ಕಂಗಾಲಾಗಿರುವ ರೈತ ಸಮುದಾಯದ ಪರಿಸ್ಥಿತಿಯನ್ನು ಗಮನಿಸಿದರೆ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವಾಣಿ ಅಕ್ಷರಶಃ ನಿಜವಾಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಹವಾಮಾನ ವೈಪರೀತ್ಯ ಮತ್ತು ಜಾಗತಿಕ ಸಂಕಷ್ಟಗಳ ಬಗ್ಗೆ ಶ್ರೀಗಳು ನೀಡಿದ್ದ ಎಚ್ಚರಿಕೆಗಳು ಈಗಿನ ಘಟನೆಗಳಿಗೆ ಕನ್ನಡಿ ಹಿಡಿಯುತ್ತಿವೆ. ಕೈಕೊಟ್ಟ ಮುಂಗಾರು ಸಾಮಾನ್ಯವಾಗಿ ಜೂನ್ ಆರಂಭದಲ್ಲೇ ಅಬ್ಬರಿಸಬೇಕಿದ್ದ ಮುಂಗಾರು ಮಳೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. … Read more

ಮಗುವಿನ ಅಳುವಿಗೆ ಬೇಸತ್ತು ಕತ್ತು ಸೀಳಿ ಹೆತ್ತ ಕಂದನನ್ನೇ ಹತ್ಯೆಗೈದ ತಾಯಿ! ಬಳಿಕ ತನ್ನ ಗಂಟಲು ಸೀಳಿ ಆತ್ಮಹತ್ಯೆಗೆ ಯತ್ನ

ಮಗುವಿನ ನಿರಂತರ ಅಳುವಿನಿಂದ ಸಿಟ್ಟುಗೊಂಡು ತಾಯಿಯೊಬ್ಬಳು ತನ್ನ ಆರು ತಿಂಗಳ ಹೆಣ್ಣು ಮಗುವಿನ ಕತ್ತನ್ನು ಕತ್ತಿಯಿಂದ ಸೀಳಿ ಹತ್ಯೆ ಮಾಡಿರುವ ಅತ್ಯಂತ ಭೀಕರ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಗೋಪಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಕಾ ಗ್ರಾಮದಲ್ಲಿ ಗುರುವಾರ (ಜೂ.26) ರಾತ್ರಿ ನಡೆದಿದೆ. ಮಗುವನ್ನು ಕೊಲೆ ಮಾಡಿದ ಬಳಿಕ ಆರೋಪಿ ತಾಯಿ ಕೂಡ ಅದೇ ಆಯುಧದಿಂದ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪೂಜಾ ಕುಮಾರಿ ಹತ್ಯೆಯಾದ ಆರು ತಿಂಗಳ ದುರ್ದೈವಿ ಮಗು ಎಂದು ಗುರುತಿಸಲಾಗಿದೆ. … Read more

27 ಎಕರೆ ಜಮೀನಿಗಾಗಿ ಹೆತ್ತ ತಂದೆಯ ಸಾವು ಸಸ್ಪೆನ್ಸ್! ಅಣ್ಣನೇ ಕೊಲೆಗಾರ ಎಂದ ತಂಗಿಯರು, ತಂಗಿಯರೇ ಹಂತಕರು ಎಂದ ಅಣ್ಣ!

ವಾರದ ಬಳಿಕ ಸಮಾಧಿಯಿಂದ ಹೊರಬಂತು ಶವ! ಆಸ್ತಿ ದುರಾಸೆಗೆ ಮಣ್ಣಾಯ್ತು ಅಣ್ಣ-ತಂಗಿಯರ ಬಾಂಧವ್ಯ! ಹಾವೇರಿಯಲ್ಲಿ ಹೆತ್ತ ತಂದೆಯ ಸಾವಿನಲ್ಲೇ ಹೆಣ್ಣುಮಕ್ಕಳು-ಮಗನ ಮಹಾಕಾಳಗ ಬಟಾಬಯಲಾಗುತ್ತಾ ಆಸ್ತಿ ಕೊಲೆ ರಹಸ್ಯ? “ಆಸ್ತಿ ಅಂತ ಬಂದರೆ ಅಣ್ಣ-ತಂಗಿಯರ ಪ್ರೀತಿ, ರಕ್ತಸಂಬಂಧ ಎಲ್ಲವೂ ಮಣ್ಣಾಗಿ ಹೋಗುತ್ತೆ” ಅನ್ನೋದಕ್ಕೆ ಹಾವೇರಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಕಣ್ಣೆದುರಿಗಿರೋ ಸಾಕ್ಷಿ. ತಂದೆಯನ್ನೇ ಆಸ್ತಿಗಾಗಿ ಅಣ್ಣ ಕೊಲೆ ಮಾಡಿದ್ದಾನೆ ಅಂತ ತಂಗಿಯರು ಆರೋಪ ಮಾಡ್ತಿದ್ದರೆ, ಇಲ್ಲ.. ಆಸ್ತಿಗಾಗಿ ತಂಗಿಯರೇ ತಂದೆಯನ್ನ ಕಟುಕನಂತೆ ಕೊಂದಿದ್ದಾರೆ ಅಂತ ಅಣ್ಣ ಪ್ರತಿದೂರು … Read more

ಅತ್ತಿಗೆಯ ಜೊತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಅಣ್ಣನನ್ನೇ ಕೊಂದ ತಮ್ಮ.! ಉತ್ತರ ಕನ್ನಡದಲ್ಲಿ ಬೆಚ್ಚಿಬೀಳಿಸುವ ಕೊಲೆ

ಕಾಮದ ಅಮಲೇರಿದ ಹುಚ್ಚುತನಕ್ಕೆ ಸ್ವಂತ ಅಣ್ಣನಂತಿದ್ದ ವ್ಯಕ್ತಿಯನ್ನೇ ತಮ್ಮನೇ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಗ್ರಾಮದ ಇಡ್ತಳ್ಳಿಯಲ್ಲಿ ನಡೆದಿದೆ. ಅತ್ತಿಗೆಯ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದೇ ಈ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಪರಮೇಶ್ವರ ಬಾಬು ನಾಯ್ಕ್ (35) ಕೊಲೆಯಾದ ದುರ್ದೈವಿ. ಕೊಲೆ ಮಾಡಿ ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿಯನ್ನು ಪರಮೇಶ್ವರ ತಿಮ್ಮಾ ನಾಯ್ಕ್ (27) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಂಬಂಧದಲ್ಲಿ ಚಿಕ್ಕಮ್ಮ–ದೊಡ್ಡಮ್ಮನ ಮಕ್ಕಳಾಗಿದ್ದು, ಒಂದೇ ಸೂರಿನಡಿ ಅಣ್ಣ–ತಮ್ಮಂದಿರಂತೆ … Read more

ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪತಿ ; ಶೀಲ ಶಂಕೆಯೇ ಯುವತಿಯ ಜೀವ ಬಲಿ!

ಹಾಸನ: ಹೆಂಡತಿಯ ಶೀಲ ಶಂಕಿಸಿ, ಆಕೆಯ ಮೇಲೆ ಸದಾ ಕ್ರೌ*ರ್ಯ ಮೆರೆಯುತ್ತಿದ್ದ ಪತಿಯೊಬ್ಬ ಕೊನೆಗೂ ಆಕೆಯನ್ನು ಬರ್ಬರವಾಗಿ ಕೊ* ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ. ಹುಲ್ಲೇನಹಳ್ಳಿ ಗ್ರಾಮದ ಯಶೋಧ (23) ಕೊ*ಯಾದ ದುರ್ದೈ*ವಿ. ಪತ್ನಿಯನ್ನೇ ಕಟುಕನಂತೆ ಕೊ*ದ ಪಾಪಿ ಪತಿ ಪುನೀತ್ (28) ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಓದುತ್ತಿರುವಾಗಲೇ ಅರಳಿದ್ದ ಪ್ರೇಮ; ದುರ*ತ ಅಂತ್ಯ ಕಳೆದ ಏಳು ವರ್ಷಗಳ ಹಿಂದೆ ಯಶೋಧ ಅವರು ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾಗ, ಪುನೀತ್‌ನೊಂದಿಗೆ ಪರಿಚಯವಾಗಿ ಅದು ಪ್ರೀತಿಯಾಗಿ … Read more