ಆಸ್ತಿ ಮಾರಿ ಓದಿಸಿದ ಪತಿಗೇ ಕೈಕೊಟ್ಟ ಶಿಕ್ಷಕಿ; ಪತ್ನಿಯ ಅಕ್ರಮ ಸಂಬಂಧ ಹೊರಬರುತ್ತಿದ್ದಂತೆ ಗೋಳಾಡಿದ ಅಮಾಯಕನ ಸ್ಥಿತಿಗೆ ಮರುಗಿದ ಸ್ಥಳೀಯರು

ಪತಿಯ ಆರೋಪ ಮತ್ತು ಪೊಲೀಸರೊಂದಿಗೆ ನಡೆದ ಸಾರ್ವಜನಿಕ ವಾಗ್ವಾದದ ಹಿನ್ನೆಲೆಯಲ್ಲಿ, ಬಿಹಾರದ ಹಾಜಿಪುರದಲ್ಲಿ ಬಿಪಿಎಸ್‌ಸಿ (BPSC) ಮೂಲಕ ನೇಮಕಗೊಂಡ ಶಿಕ್ಷಕಿ ಗುಂಜನ್ ಕುಮಾರಿ ಇದೀಗ ಮಾಧ್ಯಮಗಳ ಕೇಂದ್ರಬಿಂದುವಾಗಿದ್ದಾಳೆ. ಪತಿ ಅಮನ್ ಕುಮಾರ್, ಪತ್ನಿಗೆ ವಿವಾಹೇತರ ಸಂಬಂಧ ಇರುವುದಾಗಿ ಗಂಭೀರ ಆರೋಪ ಹೊರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಂಜನ್ ಕುಮಾರಿ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. … Read more

ಹೊಸ ಮನೆಗೆ ಬಂದ ಒಂದೇ ತಿಂಗಳಲ್ಲಿ ದುರಂತ; ಯೋಧನ ಪತ್ನಿ ನೇಣಿಗೆ ಶರಣು!

ಕಾಸರಗೋಡು : ಕರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಮಂತೋಡಿ ಬಳಿಯ ಮೂಡಂಕುಲಂನಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಹೊಸದಾಗಿ ನಿರ್ಮಿಸಲಾದ ಸುಂದರ ಮನೆಗೆ ಗೃಹಪ್ರವೇಶ ಮಾಡಿ ಕೇವಲ ಒಂದು ತಿಂಗಳ ಹಿಂದಷ್ಟೇ ವಾಸಕ್ಕೆ ಬಂದಿದ್ದ ಯೋಧರೊಬ್ಬರ ಪತ್ನಿ ಅವರು ಶನಿವಾರ ಮುಂಜಾನೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಸೌಪರ್ಣಿಕಾ (41 ವರ್ಷ) ಎಂದು ಗುರುತಿಸಲಾಗಿದೆ. ನಾಗಾಲ್ಯಾಂಡ್‌ನಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೇಶ್ ಕುಮಾರ್ ಅವರ ಪತ್ನಿ ಸೌಪರ್ಣಿಕಾ ಶನಿವಾರ ಬೆಳಿಗ್ಗೆ ತಮ್ಮ ಮನೆಯ ಮೇಲಿನ … Read more

ಖಾಸಗಿ ವಿಡಿಯೋ ಇಡ್ಕೊಂಡು ಬ್ಲಾಕ್‌ಮೇಲ್, ಹಣ ಹೊಂದಿಸಲು ಅತ್ತಿಗೆಯನ್ನೇ ಕೊಂದ ನಾದಿನಿ

ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅಂತಾರಲ್ಲ.. ಆ ಮಾತು ಅಕ್ಷರಶಃ ಸತ್ಯ ಬಿಡಿ.. ತಾವು ಮಾಡೋ ತಪ್ಪು ಮುಚ್ಚಿಕೊಳ್ಳೋದಕ್ಕೆ ಕೆಲವ್ರು ಏನ್‌ ಬೇಕಾದ್ರೂ ಮಾಡ್ಬಿಡ್ತಾರೆ.. ಸ್ನೇಹ, ಸಂಬಂಧ ಅನ್ನೋದನ್ನೂ ನೋಡದೇ ರಕ್ತ ಕುಡಿದು ರಣಕೇಕೆ ಹಾಕ್ಬಿಡ್ತಾರೆ.. ಚಿಕ್ಕಬಳ್ಳಾಪುರದಲ್ಲಿ ಇಂಥದ್ದೇ ಘಟನೆ ನಡೆದಿದೆ. ಸಹೋದರ ಸಂಬಂಧಿ ಜೊತೆ ಸೇರಿ ಅತ್ತಿಗೆಯನ್ನೇ ನಾದಿನಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಹತ್ಯೆ ಹಿಂದಿದೆ ಹಸಿಬಿಸಿ ವಿಡಿಯೋ ಕಹಾನಿ! ಅತ್ತಿಗೆಯ ನೆತ್ತರು ಕುಡಿದ ಕಿರಾತಕಿಯ ಹೆಸ್ರು ಭವ್ಯಾ. ಚಿಕ್ಕಬಳ್ಳಾಪುರ ನಗರದ ಕಂದವಾರದ ಬಾಪೂಜಿ ನಗರ … Read more

ನಾಪತ್ತೆಯಾಗಿದ್ದ ವೃದ್ದೆಯ ಮೃತದೇಹ ಪಾಳು ಕೊಳವೆ ಭಾವಿಯಲ್ಲಿ ಪತ್ತೆ.! ಚಿನ್ನಾಭರಣಕ್ಕಾಗಿ ಕೃತ್ಯವೆಸಗಿದ ಹಂತಕರು ಅಂದರ್

ನಂಜನಗೂಡು : ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ದೆ ಶವವಾಗಿ ಪತ್ತೆಯಾಗಿದ್ದಾರೆ. ನಂಜನಗೂಡು ತಾಲೂಕು ಕಸುವಿನಹಳ್ಳಿ ಗ್ರಾಮದ ಜಮೀನೊಂದರ ಪಾಳು ಕೊಳವೆಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಚಿನ್ನಾಭರಣಕ್ಕಾಗಿ ಕೊಲೆ ನಡೆದಿದ್ದು, ಕೃತ್ಯವೆಸಗಿದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಕಸುವಿನಹಳ್ಳಿ ಗ್ರಾಮದ ಶಿವರುದ್ರಮ್ಮ (63) ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ನಾಪತ್ತೆಯಾದ ಸ್ಥಳದಲ್ಲಿ ವೃದ್ದೆಯ ಚಪ್ಪಿಲಿಗಳು ಕಂಡುಬಂದಿತ್ತು. ಅಲ್ಲದೆ ಕೃತಕವಾಗಿ ಸೃಷ್ಟಿಸಿದ್ದ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿತ್ತು. ಅನುಮಾನಾಸ್ಪದವಾಗಿದ್ದ ಪ್ರಕರಣವನ್ನ … Read more

ಮನೆ ಮಗಳ ಕಾಮಾದಾಟಕ್ಕೆ ಸೊಸೆ ಹತ್ಯೆ, ದರೋಡೆಯ ಕಥೆ ಕಟ್ಟಿದ ಅತ್ತೆ, ನಾದಿನಿ, ಅಜ್ಜಿ, 24 ಗಂಟೆಯಲ್ಲೇ ಕೊಲೆ ಆರೋಪಿಗಳ ಬಂಧನ 

ಚಿಕ್ಕಬಳ್ಳಾಪುರ : ಕುಟುಂಬ ಕಲಹದಿಂದಾಗಿ ಸೊಸೆಯನ್ನ ಕೊಲೆ ಮಾಡಿಸಿದ ಅತ್ತೆ,ನಾದಿನಿ, ಅಜ್ಜಿ ದರೋಡೆ ಕಥೆ ಕಟ್ಟಿದ್ರು, ಕೊಲೆಯಾದ 24 ಗಂಟೆಯಲ್ಲೇ ಕೊಲೆ ಪ್ರಕರಣವನ್ನ ಭೇಧಿಸಿದ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ಬಳಿಯ ಬಾಪೂಜಿ ನಗರದಲ್ಲಿ ವಿವಾಹಿತ ಮಹಿಳೆಯ ಹತ್ಯೆ ಮಾಡಲಾಗಿತ್ತು, ಮೇಸ್ತ್ರೀ ನರಸಿಂಹಮೂರ್ತಿಯವರ ಸೊಸೆಯ ಕತ್ತು ಸಿಳಿ ಬರ್ಬರ ಕೊಲೆ ಮಾಡಲಾಗಿದ್ದು, ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಮತ್ತು ಕಿವಿಯೊಲೆ ದೋಚಿದ ಕೊಲೆಗಡುಕರು ಪರಾರಿಯಾಗಿದ್ದರು. ಮೇ 28 ರಾತ್ರಿ ನಡೆದ ಘಟನೆಯಿಂದ … Read more

ತ್ರಿಕೋನ ಪ್ರೇಮ ಕಥೆ.! ನನಗೆ ಸಿಗದವಳು ಯಾರಿಗೂ ಸಿಗಬಾರದು’ ಎಂದ ಪ್ರೇಮಿ… ಮುಂದೆ ನಡೆದಿದ್ದು ಶಾಕಿಂಗ್!

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ 19 ವರ್ಷದ ಹರೆಯದ ಯುವಕನ ನಾಪತ್ತೆ ಪ್ರಕರಣ ಇದೀಗ ರಕ್ತಸಿಕ್ತ ಅಂತ್ಯ ಕಂಡಿದೆ. ತನ್ನ ಪ್ರೇಯಸಿ ತನಗೆ ಮಾತ್ರ ದಕ್ಕಬೇಕೆಂಬ ಹಠಕ್ಕೆ ಬಿದ್ದ ಮತ್ತೊಬ್ಬ ಪ್ರೇಮಿ ಆಕೆಯ ಸ್ವಂತ ಸಹೋದರನನ್ನೇ ಎತ್ತಿಕಟ್ಟಿ ಭೀಕರ ಹತ್ಯೆ ಮಾಡಿದ್ದಾರೆ. 19 ವರ್ಷದ ವಿಕಾಸ್ ದಳವಾಯಿ ಎಂಬಾತ ತ್ರಿಕೋನ ಪ್ರೇಮಕಥೆಗೆ ಬಲಿಯಾಗಿದ್ದಾನೆ. ವಿಕಾಸ್ ಪ್ರೀತಿಸುತ್ತಿದ್ದ ಯುವತಿಯ ಇನ್ನೊಬ್ಬ ಪ್ರೇಮಿ ಕೃಷ್ಣಾ ಹಾಗೂ ಆಕೆಯ ಸಹೋದರ … Read more

ಅನೈತಿಕ ಸಂಬಂಧಕ್ಕೆ ಪತಿ ಬಲಿ : ಪ್ರಿಯಕರನೊಂದಿಗೆ ಜೈಲು ಸೇರಿದ ಪತ್ನಿ.!

ಶಿವಮೊಗ್ಗ : ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದ್ದ ನಿಗೂಢ ಕೊ# ಪ್ರಕರಣವನ್ನು ಭೇದಿಸುವಲ್ಲಿ ಸಾಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕೌಟಂಬಿಕ ಕಲಹ ಎಂದು ಬಿಂಬಿಸಿ ಮುಚ್ಚಿಹಾಕಲು ಯತ್ನಿಸಲಾಗಿದ್ದ ಈ ಕೊಲೆಯ ಹಿಂದೆ ಅನೈತಿಕ ಸಂಬಂಧದ ಕರಾಳ ಮುಖ ಬಯಲಾಗಿದ್ದು, ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರದ ಜೆ.ಪಿ. ನಗರದ ನಿವಾಸಿ ಪರಶುರಾಮ್ (40) ಕೊಲೆಯಾದ ದುರ್ದೈವಿ. ಈತನ ಪತ್ನಿ ಚೈತ್ರಾ ಹಾಗೂ ಆಕೆಯ ಪ್ರಿಯಕರ ಮಂಜು (ಯಾನೆ ಟೀಪುಡಿ ಮಂಜು) ಸದ್ಯ ಕಂಬಿ … Read more

ಕ್ರೈಮ್ ಶೋ ನೋಡಿ ತಂದೆ ಸೇರಿ ನಾಲ್ವರನ್ನು ಕೊಲೆ ಮಾಡಿ ಸುಟ್ಟ ಅಪ್ರಾಪ್ತ ಮಗ!

ಮೇಲ್ನೋಟಕ್ಕೆ ಅದು ಕಾರು ಅಪಘಾತದಂತೆ (Crime) ಕಾಣಿಸಿತ್ತು. ಬೆಂಕಿ ಬಿದ್ದ ಕಾರಿನೊಳಗೆ ನಾಲ್ಕು ಹೆಣಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಇಡೀ ರಾಜಸ್ಥಾನವೇ (Rajasthan) ನಡುಗುವಂತಹ ಭೀಕರ ಕೊಲೆ ಕಥೆ ಹೊರಬಂದಿದೆ. ಕೇವಲ 17 ವರ್ಷದ ಮಗನೇ ತನ್ನ ತಂದೆ ಸೇರಿದಂತೆ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಅಜ್ಮೀರ್ ಜಿಲ್ಲೆಯ ಶ್ರೀರಾಮಪುರ ಗ್ರಾಮದ ಮಾಜಿ ಸರ್ಪಂಚ್ ರಾಮ್ ಸಿಂಗ್ ಚೌಧರಿ, ಅವರ ಎರಡನೇ ಪತ್ನಿ ಸುಗ್ಯಾನ್, ತಾಯಿ ಪುಸಿ ದೇವಿ ಮತ್ತು ಸೊಸೆ … Read more

ಮುಸ್ಲಿಂ ಮಹಿಳೆಯಿಂದ ದಸರಾ ಉದ್ಘಾಟನೆ ಮಾಡಿಸಿದ್ದಕ್ಕೆ ಸಿದ್ದು ಮೇಲೆ ಚಾಮುಂಡೇಶ್ವರಿಯ ಸೇಡು: ಅದಕ್ಕೆ ಸಿಎಂ ಪೋಸ್ಟ್ ಹೊಗೆಯಂತೆ!

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಮಹತ್ವದ ದಿನವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಬಿರುಗಾಳಿಯೇ ಬೀಸಿತು. ಹಲವು ದಿನಗಳಿಂದ ವದಂತಿ ಎಂದೇ ಕರೆಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರ ಸತ್ಯವಾಗಿದ್ದು, ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ್ಯವನ್ನು ದೇವರಾಜು ಅರಸು ಬಳಿಕ ಅತಿಹೆಚ್ಚು ಕಾಲ ಆಳಿದ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆ ಎಂದು ಘೋಷಣೆ ಮಾಡಿದರು. ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಅವರ ಸಿದ್ಧಾಂತ ಹಾಗೂ ತತ್ವಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡ ಸಾಮಾನ್ಯ ಜನರು ಕೋಮುಗಲಭೆ … Read more

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು : ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಹೊರಹಾಕಿರುವ ಮಾತುಗಳು ಕೇವಲ ರಾಜಕೀಯ ಹೇಳಿಕೆಗಳಲ್ಲ, ಅವು ಹತ್ತಾರು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಒಬ್ಬ ನಾಯಕನ ಅಂತರಾತ್ಮದ ಆಕ್ರೋಶ ಮತ್ತು ನೋವಿನ ಸಂಕೇತಗಳಾಗಿವೆ. ಕುಟುಂಬದ ಮೇಲಿನ ದಾಳಿಗೆ ಸಿದ್ದರಾಮಯ್ಯ ಕಣ್ಣೀರು ನಾನು ಮಾತ್ರವಲ್ಲ, ನನ್ನ ಕುಟುಂಬ ಕೂಡ ರಾಜಕೀಯ ದ್ವೇಷಕ್ಕೆ ಬಲಿಯಾಗಿದೆ ಎಂದು ಸಿದ್ದರಾಮಯ್ಯ ಅತ್ಯಂತ ಬೇಸರದಿಂದ ಹೇಳಿಕೊಂಡಿದ್ದಾರೆ. ರಾಜಕೀಯದ ಗಂಧ ಗಾಳಿಯೇ ಇಲ್ಲದ, ಕೇವಲ ಸಂಸಾರ ಮತ್ತು ಕುಟುಂಬದ ಪೋಷಣೆಯಲ್ಲಿ ತೊಡಗಿದ್ದ ತಮ್ಮ ಪತ್ನಿಯ … Read more