ಯಾರ ಮಾತು ಕೇಳಿ ಹಿಂದಿ ಭಾಷೆಯನ್ನು ತೆಗೆದ್ರಿ? : ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಹಿಂದಿ ಪರೀಕ್ಷೆ ಕಡ್ಡಾಯವಲ್ಲ ಎಂಬ ಸರ್ಕಾರದ ನಿರ್ಧಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಭಾಷೆ ಕಲಿಯುವಂತದ್ದು ಅದು ಹೇರಿಕೆ ಅಲ್ಲ. ಯಾರ ಮಾತು ಕೇಳಿ ಹಿಂದಿ ಭಾಷೆ ತೆಗೆದಿದ್ದೀರಿ ಎಂದು ಸರ್ಕಾರಕ್ಕೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದ್ದಾರೆ. ಮೊದಮೊದಲು ದೆಹಲಿಗೆ ಹೋದಾಗ ನನ್ನ ಭಾಷೆ ಕೇಳಿ ನಗುತ್ತಿದ್ದರು. ಯಾವ ಭಾಷೆ ಮಾತನಾಡುವುದು ನೀವು ಅಂತ ನಗುತ್ತಿದ್ದರು. ಹಿಂದಿ ಕಲಿಯುವುದರಿಂದ ಸಮಸ್ಯೆ ಏನಾಗುತ್ತದೆ? ರಾಜ್ಯ ಸರ್ಕಾರ ತ್ರೀ ಭಾಷಾ ನೀತಿಯ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ. ನಾವು ತ್ರೀ ಭಾಷಾ … Read more

ಮಕ್ಕಳ ಪಾಲಿಗೆ ಮೃತ್ಯು ಕೂಪವಾದ ಕೃಷಿ ಹೊಂಡ: ನಾಲ್ವರು ಪುಟ್ಟ ಕಂದಮ್ಮಗಳ ಬದುಕು ದಾರುಣ ಅಂತ್ಯ

ನಾಲ್ವರು ಪುಟ್ಟ ಮಕ್ಕಳ ಪಾಲಿಗೆ ಕೃಷಿಹೊಂಡ ಯಮನಾಗಿದೆ. ಕೃಷಿ ಹೊಂಡದಲ್ಲಿ ಈಜುಲು ಹೋದ ನಾಲ್ವರು ಮಕ್ಕಳು ದಾರುಣವಾಗಿ ಸಾವನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಇಂದು ಕೃಷಿ ಹೊಂಡದಲ್ಲಿ ನಾಲ್ವರು ಪುಟ್ಟ ಮಕ್ಕಳ ಬದುಕು ಅಂತ್ಯಗೊಂಡಿದೆ. ಇದರಿಂದ ಸಂಬಂಧಿಕರ ಆಕ್ರಂದನ ಮುಗಿಲ ಮುಟ್ಟಿದೆ. ಈಜಲು ಹೋದ ನಾಲ್ವರು ಪುಟ್ಟ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ದುರಂತದಿಂದ ಗ್ರಾಮದಲ್ಲಿ ತೀವ್ರ ಆಘಾತ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ. ಪೋಷಕರು … Read more

ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ಎದುರು ಮನೆಯವರಿಂದಲೇ ನಡೀತಾ ಭೀಕರ ಕೊಲೆ.?

ಸುಟ್ಟ ಸ್ಥಿತಿಯಲ್ಲಿ ಯುವಕನೊರ್ವನ ಶವ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಚಂದ್ರು ಕುರಿ (27) ಎಂದು ಗುರುತಿಸಲಾಗಿದ್ದು, ಮಂಗಳವಾರ ರಾತ್ರಿ ಮನೆಯಿಂದ ಹೊರ ಹೋದ ಚಂದ್ರು ಮೃತದೇಹ ಸೇತುವೆಯೊಂದರ ಕೆಳಭಾಗ ಕಂಡುಬಂದಿದೆ. ಕೊಲೆ ಅನುಮಾನ ವ್ಯಕ್ತವಾಗಿದ್ದು, ಮಗನನ್ನು ಸಾಯಿಸಿ ಬಳಿಕ ದೇಹವನ್ನು ಸುಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯ ಹೆಣ್ಣು ಮಕ್ಕಳನ್ನು ನೋಡ್ತಾನೆ ಎಂದು ಆರೋಪಿಸಿ ಎದುರಿನ ಮನೆ ಕುಟುಂಬಸ್ಥರು ಹಲವು ಬಾರಿ ಜಗಳ ತೆಗೆದಿದ್ದರು. ಮೈ ಮೇಲೆ ಬೈಕ್ ಹತ್ತಿಸಲೂ ಬಂದಿದ್ದರು. … Read more

ಟೆನ್ಷನ್ ಎಂದು ನೀವೇನಾದ್ರೂ ಮದ್ಯಪಾನ ಮಾಡೋ ಅಭ್ಯಾಸ ಶುರು ಮಾಡಿದ್ರೆ ಕ್ರಮೇಣ ಮೆದುಳು ದುರ್ಬಲವಾಗುತ್ತಂತೆ

ಒತ್ತಡಕ್ಕೆಂದು ಕುಡಿಯಲು ಆರಂಭಿಸಿದರೆ ಅದು ಕ್ರಮೇಣ ಮೆದುಳಿನ ಮೇಲೆ ಪರಿಣಾಮ ಬೀರುತ್ತೆ ಎನ್ನುತ್ತಾರೆ ತಜ್ಞರು. ದೀರ್ಘಕಾಲದ ಮದ್ಯಪಾನವು ಕ್ರಮೇಣ ಮೆದುಳಿನ ನರವನ್ನು ದುರ್ಬಲಗೊಳಿಸುವುದಲ್ಲದೆ, ಯೋಚಿಸುವ ಕ್ಷಮತೆ ಕುಂದುತ್ತದೆ. ಒತ್ತಡ, ಸ್ಟ್ರೆಸ್ ಅಥವಾ ಟೆನ್ಷನ್ ಹೆಚ್ಚಾದಾಗ ಅನೇಕರು ಕುಡಿಯೋದನ್ನು ನೀವು ನೋಡಿರಬಹುದು, ಕೇಳಿರಬಹುದು. ಕುಡಿಯೋದ್ರಿಂದ ಸ್ಪಲ್ಪ ರಿಲ್ಯಾಕ್ಸ್ ಆಗುತ್ತೆ ಎಂದು ಹೇಳುತ್ತಾರೆ. ಆದರೆ ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ಆಲ್ಕೋಹಾಲ್: ಕ್ಲಿನಿಕಲ್ ಮತ್ತು ಪ್ರಾಯೋಗಿಕ ಸಂಶೋಧನೆಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವೊಂದು ಒತ್ತಡವನ್ನು ನಿಭಾಯಿಸಲು ಆಲ್ಕೋಹಾಲ್ ಬಳಸುವುದರಿಂದ ಮೆದುಳು … Read more

ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಕೀಲುಗಳು ಬಿಗಿಯಾದಂತೆ ಅನಿಸುತ್ತದೆಯೇ..! ಹಾಗಾದ್ರೆ ಎಚ್ಚರ

ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಕೀಲುಗಳಲ್ಲಿ ಬಿಗಿತ (Stiffness) ಕಾಣಿಸಿಕೊಳ್ಳುವುದು ಅನೇಕರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಇದನ್ನು ಹೆಚ್ಚಿನವರು ನಿರ್ಲಕ್ಷಿಸುತ್ತಾರೆ, ಆದರೆ ಇದರ ಹಿಂದೆ ಗಂಭೀರ ಕಾರಣಗಳಿರಬಹುದು ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ಒಂದು ಅಧ್ಯಯನದ ಪ್ರಕಾರ, 45 ವರ್ಷ ಮೇಲ್ಪಟ್ಟವರಲ್ಲಿ ಸುಮಾರು 47% ಜನರು ಕೀಲು ನೋವು, 31% ಬೆನ್ನು ನೋವು ಮತ್ತು 20% ಕಾಲಿನ ಕೀಲು ನೋವುಗಳಿಂದ ಬಳಲುತ್ತಿದ್ದಾರೆ. ನಿದ್ರಿಸುವಾಗ ದೇಹವು ದೀರ್ಘಕಾಲ ಚಲನೆಯಿಲ್ಲದೆ ಇರುವುದರಿಂದ ಸ್ನಾಯುಗಳು ಬಿಗಿಗೊಳ್ಳುವುದು ಸಹಜ. ಆದರೆ, ಈ ಬಿಗಿತವು ಎಷ್ಟು … Read more

Horoscope Today : 29 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ನೀವು ಅತ್ಯಂತ ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಇಂದು ನೀವು ಬೌದ್ಧಿಕ ಚರ್ಚೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ಏನೇ ಆದರೂ, ಇವುಗಳು ತ್ವರಿತವಾಗಿ ಬಿಸಿ ಚರ್ಚೆಯಾಗಿ ಮಾರ್ಪಡಾಗುತ್ತದೆ. ಆದ್ದರಿಂದ ಅವುಗಳಿಂದ ದೂರವಿರಿ. ಜೊತೆಗೆ, ಚಿಂತೆಯು ನಿಮ್ಮನ್ನು ಕಾಡಲಾರಂಬಿಸುತ್ತದೆ ಮತ್ತು ನಿದ್ದೆಗೆಡಿಸುತ್ತದೆ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯ ದುರ್ಬಲತೆಗೆ ಕಾರಣವಾಗುತ್ತದೆ. ಪ್ರಯಾಣ ಯೋಜನೆಗಳೇನಾದರೂ ಇದ್ದಲ್ಲಿ, ಅದನ್ನು ಬೇರೊಂದು ದಿನಕ್ಕೆ ಮುಂದೂಡಿ. ನೆಮ್ಮದಿಯನ್ನು ಕಾಣಲು ಯೋಗ ಮತ್ತು ಧ್ಯಾನ … Read more

ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಸುಖವಾಗಿದ್ದ ಸಂಸಾರಕ್ಕೆ ‘ಸೈತಾನ’ನಂತೆ ಎಂಟ್ರಿ ಕೊಟ್ಟ ಪರಪುರುಷನ ಮೋಹಕ್ಕೆ ಬಿದ್ದ ಪತ್ನಿಯೊಬ್ಬಳು, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಭೀಕರ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳ ಕರಾಳ ಕೃತ್ಯ ಈಗ ಬಯಲಾಗಿದೆ. ಯಾದಗಿರಿ ತಾಲೂಕಿನ ಚಾಮನಹಳ್ಳಿ ತಾಂಡದ ನಿವಾಸಿ, ಆಟೋ ಚಾಲಕ ಸಾಗರ್ ರಾಠೋಡ್ (35) ಕೊಲೆಯಾದ ದುರ್ದೈವಿ. ಸಾಗರ್ ಪತ್ನಿ ಪೂಜಾ ಹಾಗೂ ಅದೇ ಊರಿನ ರೆಡ್ಡಿ … Read more

ನಾಯಿ ಕಚ್ಚೋದ್ರಿಂದ ಮಾತ್ರವಲ್ಲ, ನೆಕ್ಕೋದ್ರಿಂದಲೂ ಸೋಂಕು ಹರಡುತ್ತಂತೆ.! ನಾಯಿ ನೆಕ್ಕಿದಾಗ ಏನಾಗುತ್ತದೆ.?

ಅನೇಕರು ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಅದರಲ್ಲೂ ನಾಯಿ ಜೊತೆ ತುಂಬಾನೇ ಒಡನಾಟವನ್ನು ಹೊಂದಿರುತ್ತಾರೆ. ನಾಯಿ ಕೆಲವರ ಮುಖ, ಮೈ ಕೈ ನಕ್ಕೋದನ್ನು ನೀವು ನೋಡಿರುವಿರಿ. ಅನೇಕರಿಗೆ ನಾಯಿ ನೆಕ್ಕುವುದು ತುಂಬಾನೇ ಸಾಮಾನ್ಯ. ಆದರೆ ಬರೀ ನಾಯಿ ಕಚ್ಚೋದ್ರಿಂದ ಮಾತ್ರವಲ್ಲ, ನಾಯಿ ನಿಮ್ಮ ಚರ್ಮವನ್ನು ನಕ್ಕೋದರಿಂದಲೂ ರೇಬಿಸ್ ಬರುತ್ತೆ ಎನ್ನುವುದು ಗೊತ್ತಿರೋದಿಲ್ಲ. ಇತ್ತೀಚೆಗೆ, ಲಂಡನ್‌ನಲ್ಲಿ ಒಬ್ಬ ಮಹಿಳೆಯ ಕೈ ಮತ್ತು ಕಾಲುಗಳ ಗಾಯವಿದ್ದ ಜಾಗದಲ್ಲಿ ನಾಯಿ ನೆಕ್ಕಿದ್ದರಿಂದ ಸೆಪ್ಸಿಸ್ ಉಂಟಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಆದ್ದರಿಂದ ನೆಕ್ಕಿದ್ರೆ ಏನಾಗೋದಿಲ್ಲ … Read more

ನೀವು SBI ನಲ್ಲಿ ಖಾತೆ ಹೊಂದಿದ್ದೀರಾ.? ‘SBI’ ಖಾತೆದಾರರಿಗೆ ಸರ್ಕಾರ ಗಂಭೀರ ಎಚ್ಚರಿಕೆ ; ಯಾಕೆ.?

ನೀವು SBIನಲ್ಲಿ ಖಾತೆ ಹೊಂದಿದ್ದೀರಾ.? ಆದ್ರೆ, ನೀವು ಇದನ್ನು ತಿಳಿದುಕೊಳ್ಳಬೇಕು. ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ, ಅನುಕೂಲತೆಯ ಜೊತೆಗೆ, ಅಪಾಯಗಳೂ ಇವೆ. ಪ್ರಸ್ತುತ, ಸೈಬರ್ ಅಪರಾಧಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರನ್ನು ಗುರಿಯಾಗಿಸಿಕೊಂಡು ಹೊಸ ಬಲೆಯನ್ನು ಹಾಕಿದ್ದಾರೆ. ನಿಮ್ಮ YONO ಖಾತೆಯನ್ನ ನಿರ್ಬಂಧಿಸಲಾಗುತ್ತದೆ ಎಂಬ ಭಯವನ್ನ ಸೃಷ್ಟಿಸುವ ಮೂಲಕ ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನ ದೋಚಲು ಅವರು ಸಿದ್ಧರಾಗಿದ್ದಾರೆ. WhatsApp ಮತ್ತು SMS ಮೂಲಕ ಬರುವ ನಕಲಿ ಸಂದೇಶವು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುತ್ತಿದೆ. … Read more

ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ

ಮಹಾರಾಷ್ಟ್ರದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ ಸ್ವತಃ ಮಗಳೇ ವಿಷದ ಮಿಲ್ಕ್‌ಶೇಕ್ ನೀಡಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ನಡೆದ ಮೂರು ವರ್ಷಗಳ ನಂತರ ಪೊಲೀಸರು ಆರೋಪಿ ಪುತ್ರಿ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ. 2023ರ ಏಪ್ರಿಲ್ 25ರಂದು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಜಯಂತ್ ಬಲ್ಲಾವರ್ (45) ಎಂದಿನಂತೆ ಕೆಲಸಕ್ಕೆ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ಅವರ ಪುತ್ರಿ ಆರ್ಯ (ಈಕೆಯೂ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಳು) ತಂದೆಗೆ ಮಿಲ್ಕ್‌ಶೇಕ್ ನೀಡಿದ್ದಳು. ಅದನ್ನು ಕುಡಿದು … Read more