ಚಾಮರಾಜನಗರ : ಇಲ್ಲಿನ ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರಲ್ಲಿ ನಂಬಲಸಾಧ್ಯವಾದ ಕ್ರೂರ ಘಟನೆಯೊಂದು ಬೆಳಕಿಗೆ ಬಂದಿದೆ. ಗುಪ್ತನಿಧಿಯ ಆಸೆಗೆ ಬಿದ್ದ ಮಗ ಕೊಂಡಯ್ಯನ ಮಾದಶೆಟ್ಟಿ ತನ್ನನ್ನು ಹೆತ್ತು ಹೊತ್ತು ಸಲಹಿದ 80 ವರ್ಷದ ವಯೋವೃದ್ಧ ತಾಯಿ ಮಾದಮ್ಮಶೆಟ್ಟಿಯನ್ನು ಬಲಿಕೊಡಲು ಮುಂದಾದ ಕೃತ್ಯ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.
ಅತೀವ ದುರಾಸೆ ಮನುಷ್ಯನನ್ನು ಯಾವ ಮಟ್ಟಕ್ಕೆ ಕೆಡವಬಲ್ಲದು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.
ಈ ಆರೋಪಿ ಮನೆಯಲ್ಲಿ ಗುಪ್ತನಿಧಿ ಇದೆ ಎಂಬ ಮೂಢನಂಬಿಕೆಗೆ ಒಳಗಾಗಿದ್ದ ಎನ್ನಲಾಗಿದೆ. ಹೀಗಾಗಿ ನಿಧಿಯನ್ನು ಪಡೆಯಲು ಮಾಂತ್ರಿಕರ ಸಲಹೆಯಂತೆ ಸ್ವಂತ ತಾಯಿಯನ್ನು ಬಲಿ ನೀಡಿದರೆ ಐಶ್ವರ್ಯ ಒಲಿಯುತ್ತದೆ ಎಂದು ನಂಬಿದ್ದನು. ಈ ಉದ್ದೇಶದಿಂದ ತಾಯಿಯ ಮೇಲೆ ಹಲ್ಲೆ ನಡೆಸಿ, ಪೂಜಾ ವಿಧಿವಿಧಾನಗಳ ಹೆಸರಿನಲ್ಲಿ ಹಿಂಸೆ ನೀಡಲು ಪ್ರಾರಂಭಿಸಿದ್ದನು. ತಾಯಿಯ ಚೀರಾಟ ಕೇಳಿ ಸ್ಥಳೀಯರು ಧಾವಿಸಿದಾಗ ಈ ಭೀಕರ ಸತ್ಯ ಹೊರಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವೃದ್ಧೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಮಗನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಇತರೆ ವ್ಯಕ್ತಿಗಳ ಬಗ್ಗೆಯೂ ತನಿಖೆ ಚುರುಕುಗೊಂಡಿದೆ.
ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಬಲಿ ಕೊಡಲು ಹೊರಟ ಪುತ್ರ: ಮಾಟಗಾರ ಎಸ್ಕೇಪ್, ಓರ್ವನ ಬಂಧನ
WhatsApp Group
Join Now