ಕನ್ನಡ ನ್ಯೂಸ್ ಟೈಮ್ : ಸಾಮಾನ್ಯವಾಗಿ ಮದುವೆ ಆಗುತ್ತಾರೆ ಎಂದರೆ ವಂಶ ಬೆಳೆಸಲು ಹಾಗೂ ಲೈಂಗಿಕ ಆಸೆಯನ್ನು ಈಡೇರಿಸಿಕೊಳ್ಳಲು ಎಂದು ಅರ್ಥ. ಆದರೆ, ಇಲ್ಲೋರ್ವ ಮದುವೆಯನ್ನೇನೋ ಆಗಿದ್ದಾನೆ. ಆದರೆ ಈತ ಮಾಡಬಾರದ ಕೃತ್ಯ ಮಾಡಿ ತನ್ನ ಹೆಂಡತಿ ಸಾಯುವಂತೆ ಮಾಡಿದ್ದಾನೆ.
ಹೌದು, ವಿಶಾಖಪಟ್ಟಣದ ಗೋಪಾಲಪಟ್ಟಣದ ವೆಂಕಟಪುರಂ ನಂದಮೂರಿ ನಗರದಲ್ಲಿ 23 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ವಿಶಾಖಪಟ್ಟಣಂನ ಗಜುವಾಕ ಮೂಲದ ಚಿಕ್ಕಲ ವಸಂತ ಅವರು 2024 ರಲ್ಲಿ ನಾಗೇಂದ್ರ ಬಾಬು ಅವರನ್ನು ವಿವಾಹ ಆಗಿದ್ದರು. ಅವರು ಪತಿಯಿಂದ ಲೈಂಗಿಕ ಕಿರುಕುಳದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನಾಗೇಂದ್ರ ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ ಮತ್ತು ಮದುವೆಯಾದ ಸ್ವಲ್ಪ ಸಮಯದ ನಂತರ ಔಷಧಿ ತೆಗೆದುಕೊಳ್ಳುತ್ತಿದ್ದನಂತೆ. ಆತ ಪ್ರತಿ ತಿಂಗಳು 60 ಮಾತ್ರೆಗಳನ್ನು ಒಳಗೊಂಡಿರುವ ಒಂದುಬಾಟಲಿಯನ್ನು ಖರೀದಿಸುತ್ತಿದ್ದನಂತೆ ಮತ್ತು ಪ್ರೋಟೀನ್ ಮತ್ತು ವಿಟಮಿನ್ ಮಾತ್ರೆಗಳು ಎಂದು ಹೇಳಿಕೊಂಡು ದಿನಕ್ಕೆ ಎರಡು ಮಾತ್ರೆಗಳನ್ನು ಸೇವಿಸುತ್ತಿದ್ದ ಎಂದು ವರದಿಯಾಗಿದೆ. ಆದಾಗ್ಯೂ, ಸಂಬಂಧಿಕರು ಅವರು ತಮ್ಮ ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅವುಗಳನ್ನು ಬಳಸುತ್ತಿದ್ದರು ಎಂದು ಹೇಳುತ್ತಾರೆ.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಯಾವಾಗಲೂ ಲೈಂಗಿಕತೆ ಬಯಸುತ್ತಿದ್ದ ಗಂಡ
ವಸಂತಾಳ ಋತುಚಕ್ರದ ಸಮಯದಲ್ಲಿಯೂ ಸಹ ನಾಗೇಂದ್ರ ಆಕೆಯ ಮೇಲೆ ಬಲವಂತವಾಗಿ ಸಂಪರ್ಕ ಮಾಡಲು ಮುಂದಾಗುತ್ತಿದ್ದನಂತೆ. ಇದಾದ ನಂತರ ಆಕೆ ಪ್ರಜ್ಞೆ ಕಳೆದುಕೊಳ್ಳಲು ಕಾರಣನಾದ ಎಂದು ಕುಟುಂಬ ಸದಸ್ಯರು ಬಹಿರಂಗಪಡಿಸಿದ್ದಾರೆ.ಇನ್ನು ನಾಗೇಂದ್ರ ಅಶ್ಲೀಲತೆಗೆ ವ್ಯಸನಿಯಾಗಿದ್ದ ಮತ್ತು ತನ್ನ ಪತ್ನಿ ಆ ವಿಡಿಯೋದಲ್ಲಿ ಕಾಣುವಂತೆ ನೀನು ಸಹ ಇರು ಎನ್ನುತ್ತಿದ್ದ ಅಲ್ಲದೆ ಅದನ್ನು ಅನುಕರಿಸುವಂತೆ ಒತ್ತಾಯಿಸಿದ್ದ ಎಂದು ಆಕೆ ಹೇಳಿಕೊಂಡಿದ್ದಳಂತೆ.
ಮಕ್ಕಳಾಗಿರಲಿಲ್ಲ..
ವಸಂತನ ವೀರ್ಯ ಸಂಖ್ಯೆ ಕಡಿಮೆ ಇದ್ದ ಕಾರಣ, ಗರ್ಭಧರಿಸಲು ಸಾಧ್ಯವಾಗಲಿಲ್ಲವಂತೆ, ಇದು ಅವರ ದಾಂಪತ್ಯದಲ್ಲಿ ಒತ್ತಡವನ್ನು ಹೆಚ್ಚಿಗೆ ಮಾಡಿತ್ತು ಎನ್ನಲಾಗಿದೆ. ದೈಹಿಕ ಮತ್ತು ಭಾವನಾತ್ಮಕ ಹಿಂಸೆಯನ್ನು ಸಹಿಸಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
ಈ ನಡುವೆ ಬಲಿಪಶುವಿನ ತಾಯಿ ತನ್ನ ಮಗಳ ಅತ್ತೆಯಂದಿರ ಮೇಲೆ ಕೆಟ್ಟ ಕೃತ್ಯ ಎಸಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅವರು ವಸಂತಾಳನ್ನು ಕೊಲೆ ಮಾಡಿ ಅದನ್ನು ಆತ್ಮಹತ್ಯೆಯಂತೆ ಬಿಂಬಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇನ್ನು ನಾಗೇಂದ್ರನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗೋಪಾಲಪಟ್ಟಣಂ ಪೊಲೀಸರು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರ ತಂಡವನ್ನು ಕೋರಿದ್ದಾರೆ.

ವಿಡಿಯೋ ತೋರಿಸಿ ಅನುಕರಿಸುವಂತೆ ಟಾರ್ಚರ್! ದಿನಕ್ಕೆ ಎರಡು ಮಾತ್ರೆ ಸೇವಿಸುತ್ತಿದ್ದನಂತೆ.. ಪ್ರಾಣಬಿಟ್ಟ ಹೆಂಡತಿ
WhatsApp Group
Join Now