ತಮಿಳುನಾಡಲ್ಲಿ TVK ಪಕ್ಷದ ನಾಯಕ ಹಾಗು ನಟ ವಿಜಯ್ ಭರ್ಜರಿ ಜಯ ಸಾಧಿಸಿದ್ದು, ಡಿಎಂಕೆ, ಹಾಗು ಎಐಡಿಎಂಕೆಗೆ ಶಾಕ್ ನೀಡಿದ್ದಾರೆ. ಇದೀಗ ತಮಿಳುನಾಡಲ್ಲಿ ಮುಖ್ಯಮಂತ್ರಿ ಎ..ಕೆ ಸ್ಟಾಲಿನ್ ಗೆ ಸೋಲಾಗಿದೆ.ಕೊಳತ್ತೂರು ಕ್ಷೇತ್ರದಲ್ಲಿ TVK ಅಭ್ಯರ್ಥಿ ವಿ.ಎಸ್ ಬಾಬು ವಿರುದ್ಧ ಸ್ಟಾಲಿನ್ ಗೆ ಸೋಲಾಗಿದೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಗೆ ಶಾಕ್: ಕೊಳತ್ತೂರಿನಲ್ಲಿ ಸೋಲು
ಈ ಚುನಾವಣೆಯ ಅತಿ ದೊಡ್ಡ ಆಘಾತಕಾರಿ ಫಲಿತಾಂಶವೆಂದರೆ ಅದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸೋಲು. ಕಳೆದ ಹಲವು ಅವಧಿಗಳಿಂದ ಡಿಎಂಕೆಯ ಭದ್ರಕೋಟೆಯಾಗಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಸ್ವತಃ ಸ್ಟಾಲಿನ್ ಅವರು ಪರಾಜಯಗೊಂಡಿದ್ದಾರೆ. ಅಚ್ಚರಿಯ ಫಲಿತಾಂಶದಲ್ಲಿ TVK ಅಭ್ಯರ್ಥಿ ವಿ.ಎಸ್. ಬಾಬು ಅವರು ಸ್ಟಾಲಿನ್ ವಿರುದ್ಧ ಐತಿಹಾಸಿಕ ಜಯ ದಾಖಲಿಸುವ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ.
ಧೂಳೀಪಟವಾದ ದ್ರಾವಿಡ ಕೋಟೆಗಳು
ವರ್ಷಗಳಿಂದ ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಡಿಎಂಕೆ ಪಕ್ಷಗಳ ಅಧಿಪತ್ಯಕ್ಕೆ ವಿಜಯ್ ಅವರ TVK ಪಕ್ಷವು ಬ್ರೇಕ್ ಹಾಕಿದೆ. ಯುವ ಸಮೂಹ ಮತ್ತು ಬದಲಾವಣೆ ಬಯಸಿದ್ದ ಮತದಾರರು ವಿಜಯ್ ಕೈಹಿಡಿದಿರುವುದು ಫಲಿತಾಂಶದಲ್ಲಿ ಎದ್ದು ಕಾಣುತ್ತಿದೆ. ಸ್ಟಾಲಿನ್ ಅವರಂತಹ ಪ್ರಭಾವಿ ನಾಯಕನೇ ತಮ್ಮ ಸ್ವಕ್ಷೇತ್ರದಲ್ಲಿ ಸೋತಿರುವುದು ಡಿಎಂಕೆ ಪಾಳಯದಲ್ಲಿ ಮೌನ ಆವರಿಸುವಂತೆ ಮಾಡಿದೆ, ಇತ್ತ ವಿಜಯ್ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.
ಹೊಸ ನಾಯಕನ ಉದಯ
ಈ ಗೆಲುವಿನ ಮೂಲಕ ನಟ ವಿಜಯ್ ಕೇವಲ ಸಿನಿಮಾ ಪರದೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದ ರಾಜಕೀಯ ರಂಗದಲ್ಲೂ ತಾನು ‘ದಳಪತಿ’ ಎಂಬುದನ್ನು ಸಾಬೀತುಪಡಿಸಿದ್ದಾರೆ. “ಬದಲಾವಣೆ ಈಗ ಅನಿವಾರ್ಯ” ಎಂಬ ಅವರ ಘೋಷಣೆಗೆ ಜನರು ಮನ್ನಣೆ ನೀಡಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಪಕ್ಷದ ಪ್ರಾಬಲ್ಯ ಹೆಚ್ಚಿರುವುದು, ಮುಂದಿನ ದಿನಗಳಲ್ಲಿ ರಾಜ್ಯದ ಆಡಳಿತ ನೀತಿಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತರುವ ಮುನ್ಸೂಚನೆ ನೀಡಿದೆ.
‘TVK’ ಪಕ್ಷದ ಅಭ್ಯರ್ಥಿ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಗೆ ಹೀನಾಯ ಸೋಲು!
WhatsApp Group
Join Now