Horoscope Today : 01 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಗೃಹಕಾರ್ಯಗಳಿಗೆ ನಿಮಗೆ ಇದು ಶುಭದಿನ. ವೈವಾಹಿಕ ಜೀವನಕ್ಕೆ ಇದು ಬಹಳ ಮಹತ್ವದ ಕಾಲ ಎ೦ದು ಗಣೇಶ ಹೇಳುತ್ತಾರೆ. ನಿಮ್ಮ ಬಾಳ ಸ೦ಗಾತಿಯೊ೦ದಿಗೆ ಈ ಸಮಯವನ್ನು ಕಳೆಯುವುದರೊ೦ದಿಗೆ ನಿಮ್ಮ ದಿನವನ್ನು ಸು೦ದರವಾಗಿಸುವುದು. ಆರ್ಥಿಕ ಸ್ಥಿತಿಯು ಲಾಭದಾಯಕವಾಗಿಯೂ ಹಾಗೂ ಆನ೦ದಭರಿತವಾದ ಪ್ರಯಾಣ ನಿಮ್ಮದಾಗುವುದು. ನಿಮ್ಮ ಭಾವನಾತ್ಮಕ ಚಿ೦ತನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಜಾಗ್ರತೆವಹಿಸಿರಿ. ಇಲ್ಲದಿದ್ದಲ್ಲಿ ನಿಮ್ಮ ಸ೦ಗಾತಿಯ ಮುನಿಸಿಗೆ ಒಳಗಾಗುವಿರಿ. ನೀವು ಮಾಡಿದ ಕೆಲಸಕ್ಕೆ ಪ್ರಶ೦ಸೆಯನ್ನು ಪಡೆಯಲಿದ್ದೀರಿ. ಆದಷ್ಟು ದಿನವನ್ನು ವಾದ ವಿವಾದದಿ೦ದ … Read more

ಭೂ ಪರಿವರ್ತನೆಗಾಗಿ ಅಲೆದು ಸುಸ್ತಾದ ರೈತ: ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

ಜಮೀನು ಭೂ ಪರಿವರ್ತನೆ  ಮಾಡಿಸಿಕೊಳ್ಳಲು ಅಧಿಕಾರಿಗಳ ಸುತ್ತ ಅಲೆದು ಬೇಸತ್ತ ರೈತಯೊಬ್ಬರು, ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ. WhatsApp Group Join Now ಕಚೇರಿಗಳ ಅಲೆದಾಟಕ್ಕೆ ಬೇಸತ್ತ ರುದ್ರಯ್ಯ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ರುದ್ರಯ್ಯ ಅಮ್ಮಿನಬಾವಿಮಠ (50) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿ. ಇವರು ತಮ್ಮ ಎರಡು ಎಕರೆ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ (ಎನ್‌ಎ) ಭೂ ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿ ಹಲವು ದಿನಗಳಿಂದ ಕಚೇರಿಗಳಿಗೆ … Read more

ಇನ್ಮುಂದೆ ಫುಟ್‌ಪಾತ್‌ ಮೇಲೆ ವ್ಯಾಪಾರ ನಡೆಸುವಂತಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ 29ರಂದು ಕೇವಲ ಒಂದು ಗಂಟೆ ಸುರಿದ ಮರಣ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಅನಾಹುತಗಳ ಮೇಲೆ ಅನಾಹುತಗಳನ್ನು ಸೃಷ್ಟಿಸಿದೆ. ಬೌರಿಂಗ್ ಆಸ್ಪತ್ರೆಯ ಕೌಂಪೌಂಡ್ ಗೋಡೆ ಕುಸಿದು ಬಿದ್ದು 7 ಜನರು ಮೃತಪಟ್ಟಿದ್ದು 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. WhatsApp Group Join Now ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದಿದ್ದ ಅಮಾಯಕರು ಹೆಣವಾಗಿ ಹೋಗಿದ್ದಾರೆ. ಬೆಂಗಳೂರಿನ, ಉತ್ತರ ಪ್ರದೇಶ ಮೂಲದ, ಕೇರಳ ಹಾಗೂ ಅಸ್ಸಾಂ ಮೂಲದ ಒಟ್ಟು 7 … Read more

ಹೃದಯವಿದ್ರಾವಕ ಘಟನೆ : ಮದುವೆಗೆ 10 ದಿನ ಬಾಕಿ, ಪ್ರಿವೆಡ್ಡಿಂಗ್ ಶೂಟ್ ಗೆ ತೆರಳಿದ್ದಾಗ ಅಪಘಾತದಲ್ಲಿ ವರ ದುರ್ಮರಣ!

ಹಾಸನದಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು ಪ್ರೀವೆಡ್ಡಿಂಗ್ ಶೂಟ್ ಗೆ ಕಾರಿನಲ್ಲಿ ವರ ತೆರಳುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. WhatsApp Group Join Now ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಯುವಕನನ್ನು ಮನು.ಎಲ್‌.ಎನ್. (29) ಎಂದು ಗುರುತಿಸಲಾಗಿದೆ. ಇವರು ಬೇಲೂರು ತಾಲ್ಲೂಕಿನ, ಲಕ್ಕುಂದ ಗ್ರಾಮದ, … Read more

ಗಂಗಾವತಿಯಲ್ಲಿ ಬಿಜೆಪಿ ಮುಖಂಡನ ಕೊಲೆ ಕೇಸ್ : 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್‌ಎನ್ ವೆಂಕಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. WhatsApp Group Join Now ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ಇಂದು ಶಿಕ್ಷೆ ತೀರ್ಪು ಪ್ರಕಟಿಸಿದರು. ರವಿ, ಮೈಲಾರಿ, ಧನರಾಜ್, ಭೀಮಾ, ಸಲೀಂ ಮತ್ತು ಗಂಗಾಧರ ಗೌಳಿ ಶಿಕ್ಷೆಗೊಳಗಾದ ಅಪರಾಧಿಗಳು. ಕಳೆದ … Read more

ಬೌರಿಂಗ್ ಆಸ್ಪತ್ರೆ ದುರಂತ, ಪ್ರಧಾನಿ ನರೇಂದ್ರ ಮೋದಿ ವಿಷಾದ, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ಬೆಂಗಳೂರಿನಲ್ಲಿ ನಿನ್ನೆ (ಏಪ್ರಿಲ್ 29) ಸಂಜೆ ಸುರಿದ ಅಲಿಕಲ್ಲು ಸಹಿತ ಧಾರಾಕಾರ ಮಳೆಗೆ ಭಾರೀ ಅನಾಹುತಗಳು ಸಂಭವಿಸಿದೆ. ಮಳೆಯಿಂದಾಗಿ ಶಿವಾಜಿನಗರ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಏಳು ಜನ ಸಾವನ್ನಪ್ಪಿದ್ದು. WhatsApp Group Join Now ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಹಾಗೇ ಕೇಂದ್ರ ಸರ್ಕಾರದಿಂದ ಮೃತರು ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿ ಕಾಂಪೌಂಡ್ ಕುಸಿದ ಪರಿಣಾಮ ಬೀದಿಬದಿ … Read more

Horoscope Today : 30 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಉದ್ಯಮಿಗಳಿಗೆ ಈ ದಿನವು ಲಾಭದಾಯಕವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮನೆಯಲ್ಲಿನ ಸಂತಸಭರಿತ ವಾತಾವರಣವು ನಿಮ್ಮ ಮನಸ್ಸನ್ನು ಖುಷಿಯಲ್ಲಿರಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ಸಂಭ್ರಮದ ಸಮಾರಂಭವು ನಡೆಯುವ ಸಾಧ್ಯತೆಯಿದೆ. ನಿಮ್ಮ ದೈಹಿಕ ಆರೋಗ್ಯವೂ ವೃದ್ಧಿಗೊಳ್ಳಬಹುದು. ನಿಮ್ಮ ಉಪಕಾರಿಗಳಿಂದ ನಿಮಗೆ ಯೋಗ್ಯ ಸಹಾಯ ದೊರೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸುವಿರಿ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸಂತಸದಿಂದ ಕೂಡಿರುತ್ತದೆ. ನಿಮ್ಮ ಅರ್ಧಾಂಗಿಯೊಂದಿಗಿನ ಆತ್ಮೀಯತೆಯು ಇಂದು ಇನ್ನಷ್ಟು ವರ್ಧಿಸಲಿದೆ. ವೃಷಭ :- … Read more

ಶ್ರೀ ಸಾಯಿ ಸಿಲ್ಕ್ಸ್ ಮಾಲಕಿ ಭೀಕರ ಕೊಲೆ: ಪತ್ನಿ ಕೊಂದು ಪತಿ ಆತ್ಮಹತ್ಯೆ; ನಾಗಲಕ್ಷ್ಮಿ ಪೋಸ್ಟ್ ಮಾಡಿದ್ದ ಕೊನೆಯ ವಿಡಿಯೋ ವೈರಲ್!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚೆನ್ನೈ ಶ್ರೀ ಸಾಯಿ ಸಿಲ್ಕ್ಸ್ ಓನರ್ ನಾಗಲಕ್ಷ್ಮಿಯನ್ನು ಆಕೆಯ ಪತಿಯೇ ಭೀಕರವಾಗಿ ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. WhatsApp Group Join Now ಸುಬ್ರಮಣಿಯನ್ (52) ಮತ್ತು ಅವರ ಪತ್ನಿ ನಾಗಲಕ್ಷ್ಮಿ (42) ನಂಗನಲ್ಲೂರಿನ ತಿಳ್ಳೈಗಂಗಾ ನಗರದಲ್ಲಿ ವಾಸವಿದ್ದರು. ನಿರುದ್ಯೋಗಿಯಾಗಿದ್ದ ಆತ ಪ್ರತಿದಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಮೊದಲ ಮಗ ಹರೀಶ್ ಭಾರದ್ವಾಜ್ ರಷ್ಯಾದಲ್ಲಿ ಎರಡನೇ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ … Read more

ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಶಾಸಕತ್ವ ರದ್ದು: ಸ್ವೀಕರ್ ಯು.ಟಿ ಖಾದರ್

ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಈಗಾಗಲೇ ತಾಂತ್ರಿಕವಾಗಿ ರದ್ದಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. WhatsApp Group Join Now ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸಭಾಧ್ಯಕ್ಷರ ಪಾತ್ರ ಮತ್ತು ನಿಯಮಗಳ ಕುರಿತು ಎದ್ದಿರುವ ಗೊಂದಲಗಳಿಗೆ ತೆರೆ ಎಳೆದರು. ನಿಯಮದಂತೆ ರದ್ಧತಿ ಸ್ವಯಂಚಾಲಿತ “ಯಾವುದೇ ಒಬ್ಬ ಜನಪ್ರತಿನಿಧಿಯು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ತಕ್ಷಣ, ನಿಯಮಗಳ ಪ್ರಕಾರ ಅವರ … Read more

ನನ್ನ ನಾಯಕತ್ವದಲ್ಲೇ ಜನರು 136 ಕ್ಷೇತ್ರ ಗೆಲ್ಲಿಸಿದ್ದಾರೆ.! ಕಾಂಗ್ರೆಸ್ ಪಾಳಯದಲ್ಲಿ ಕಿಚ್ಚು ಹಚ್ಚಿಸಿದ ಡಿಸಿಎಂ ಡಿಕೆಶಿ ಮಾತು

ನನ್ನ ನಾಯಕತ್ವದಲ್ಲೇ ರಾಜ್ಯದ ಜನರು ಕಾಂಗ್ರೆಸ್‌ ಪಕ್ಷದ 136 ಶಾಸಕರನ್ನು ಗೆಲ್ಲಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದ ಡಿಕೆ ಶಿವಕುಮಾರ್ ನೀಡಿರುವ ಈ ಹೇಳಿಕೆ ಕೈ ಪಾಳಯದಲ್ಲಿ ಕಿಚ್ಚು ಹಚ್ಚಿಸಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ನಡುವೆಯೇ ಡಿಕೆ ಶಿವಕುಮಾರ್ ಈ ಮಾತನ್ನು ಆಡಿದ್ದಾರೆ. ಇದಕ್ಕೆ ಕೆಲವು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಸಂಘಟನೆ ಚತುರತೆ ಹಾಗೂ ಸಿದ್ದರಾಮಯ್ಯ ವರ್ಚಸ್ಸು ಇದಕ್ಕೆ ಕಾರಣ ಎಂದು ಎಂಬಿ ಪಾಟೀಲ್ … Read more