ಮಗು ಬೆಳ್ಳಗಿದೆ, ತಾಯಿ ಕಪ್ಪಗಿದ್ದಾಳೆಂದು ಕಿಡ್ನ್ಯಾಪ್ ಆರೋಪ; ದಾಖಲೆ ತೋರಿಸಿ ಪಾರಾದ ಮಹಿಳೆ!

ಉತ್ತರ ಪ್ರದೇಶದ ಆಗ್ರಾದ ಸರಾಫಾ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರ ಮಗುವಿನ ಬಣ್ಣವನ್ನು ನೋಡಿ ಸಾರ್ವಜನಿಕರು ಮಗು ಅಪಹರಣವಾಗಿರಬಹುದು ಎಂದು ಶಂಕಿಸಿದ ಘಟನೆ ನಡೆದಿದೆ. ಮಾರುಕಟ್ಟೆಯ ನಮಕ್ ಕಿ ಮಂಡಿ ಪ್ರದೇಶದಲ್ಲಿ ನಡೆದ ಈ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು. WhatsApp Group Join Now ಗುರುವಾರ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಮಾರುಕಟ್ಟೆಯಲ್ಲಿ ತಿನ್ನಲು ಆಹಾರ ನೀಡುವಂತೆ ಕೇಳುತ್ತಿದ್ದರು. ಆದರೆ, … Read more

ಸತ್ರೂ ನನ್ನ ಬಾಡಿ ಆರ್ ಎಸ್‌ಎಸ್ ಗೆ ಹೋಗಲ್ಲ ಎಂದ ಬಿಕೆ ಹರಿಪ್ರಸಾದ್ : ನೆಟ್ಟಿಗರ ಪ್ರತಿಕ್ರಿಯೆ ನೋಡಿ

ಸತ್ರೂ ನನ್ನ ಬಾಡಿ ಆರ್ ಎಸ್‌ಎಸ್ ಗೆ ಹೋಗಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ನೆಟ್ಟಿಗರೊಬ್ಬರು ವ್ಯಂಗ್ಯ ಮಾಡಿದ್ದು ಇಲ್ಲಿ ಕಸ ಹಾಕಬಾರದು ಎಂದು ಆರ್ ಎಸ್‌ಎಸ್ ನಲ್ಲಿ ಬೋರ್ಡ್ ಇದೆ ಎಂದಿದ್ದಾರೆ. WhatsApp Group Join Now ವಿಧಾನಪರಿಷತ್ ನಲ್ಲಿ ಆರ್ ಎಸ್‌ಎಸ್ ಬಗ್ಗೆ ಬಿಜೆಪಿ ಸದಸ್ಯ ಶಾಂತಾರಾಮ್ ಸಿದ್ದಿ ಮಾತನಾಡುವಾಗ ಬಿಕೆ ಹರಿಪ್ರಸಾದ್ ಕಾಲೆಳೆದರು. ಬಿಕೆ ಹರಿಪ್ರಸಾದ್ ಸದಾ ಆರ್ ಎಸ್‌ಎಸ್ ಸಂಘಟನೆ ವಿರುದ್ಧ ಕಿಡಿ … Read more

ರೌಡಿ ಚಟುವಟಿಕೆ ಹಿನ್ನಲೆಯುಳ್ಳ ವ್ಯಕ್ತಿ ಜೊತೆಗೆ ಬರ್ತ್ ಡೇ ಪಾರ್ಟಿ: ಎಸ್‌ಐ ನಾಗರಾಜ್‌ಗೆ ಸಸ್ಪೆಂಡ್ ನೋಟೀಸ್

ಬೆಂಗಳೂರಿನ ಯಲಹಂಕ ನ್ಯೂಟೌನ್ ಪಿಎಸ್‌ಐ ನಾಗರಾಜ್ ಅವರನ್ನು, ಕ್ರಿಮಿನಲ್ ಹಿನ್ನೆಲೆಯುಳ್ಳ ‘ದಾಸ’ ಎಂಬಾತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. WhatsApp Group Join Now ಸಮಾಜ ಘಾತುಕ ಶಕ್ತಿಗಳು ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (PSI) ನಾಗರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಪಿಎಸ್‌ಐ ನಾಗರಾಜ್ ಅವರು ಕ್ರಿಮಿನಲ್ ಹಿನ್ನೆಲೆಯುಳ್ಳ ‘ದಾಸ’ ಎಂಬ ವ್ಯಕ್ತಿಯ ಮನೆಯಲ್ಲಿ … Read more

ಭಾರತದ ಗಡಿಯತ್ತ ನುಗ್ಗಿದ ಮೂಲಭೂತವಾದಿ ಪ್ರತಿಭಟನಾಕಾರರು, ಹೈ ಅಲರ್ಟ್‌;‌ ನಿಯಂತ್ರಣ ತಪ್ಪುತ್ತಿದೆ ಬಾಂಗ್ಲಾದೇಶ!

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್‌ ಹಾದಿ ಹತ್ಯೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ, ಅಕ್ಷರಶಃ ನಿಯಂತ್ರಣ ತಪ್ಪುತ್ತಿದೆ. ಇಂಕ್ವಿಲಾಬ್ ಫೋರಂ ಮತ್ತು ಜಮಾತ್‌ ಉಗ್ರಗಾಮಿಗಳು ನಿನ್ನೆ (ಡಿ.19-ಶುಕ್ರವಾರ) ಬಾಂಗ್ಲಾದೇಶದ ಬೆನಪೋಲ್‌ನಿಂದ ಭಾರತದ ಗಡಿಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದ್ದಾರೆ. WhatsApp Group Join Now ಪ್ರತಿಭಟನಾಕಾರರು ಗಡಿ ಭಾಗಕ್ಕೆ ನುಗ್ಗುತ್ತಿರುವುದರಿಂದ, ಸೇನೆ ಹೈ ಅಲರ್ಟ್‌ ಘೋಷಣೆ ಮಾಡಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಭಾರತವನ್ನು ಒತ್ತಾಯಿಸಿದ ಪ್ರತಿಭಟನಾಕಾರರು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಏತನ್ಮಧ್ಯೆ, … Read more

ಡ್ರಗ್ಸ್ ನೀಡಿ ಅತ್ಯಾಚಾರ, ತೀವ್ರ ರಕ್ತಸ್ರಾವದಿಂದ ಯುವತಿ ಸಾವು.! ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ.!

ಮೆಹಬೂಬ್‌ನಗರ ಜಿಲ್ಲೆಯ ಮೂಸಾಪೇಟ್ ಮಂಡಲದ ವೇಮುಲಾ ಗ್ರಾಮದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಬುಧವಾರ ರಾತ್ರಿ ಗ್ರಾಮದಲ್ಲಿ ಸರ್ಪಂಚ್ ಚುನಾವಣಾ ವಿಜಯೋತ್ಸವ ಆಚರಣೆ ನಡೆಯುತ್ತಿದ್ದಾಗ, ಯುವತಿಯೊಬ್ಬಳ ಜೀವನವನ್ನು ಕತ್ತಲೆಗೆ ತಳ್ಳಿದ ಭಯಾನಕ ಅಪರಾಧ ಬೆಳಕಿಗೆ ಬಂದಿದೆ. WhatsApp Group Join Now ಗ್ರಾಮದ 22 ವರ್ಷದ ಯುವತಿಯನ್ನು ಅವಳಿಗೆ ಪರಿಚಿತ ಯುವಕನೊಬ್ಬ ರೈತ ಮಾರುಕಟ್ಟೆಗೆ ಕರೆದೊಯ್ದಿದ್ದಾನೆ ಎಂದು ವರದಿಯಾಗಿದೆ. ಅಲ್ಲಿ, ಆಕೆಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಅತ್ಯಾಚಾರದ ನಂತರ, ಬಾಲಕಿ ತೀವ್ರ … Read more

ಕೆಲಸದಾಳು ಜೊತೆಗೇ ಯಜಮಾನಿಯ ಕುಚ್ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲಾಗಿದ್ದೇ ರೋಚಕ!

ವಿಜಯಪುರದಲ್ಲಿ ಕೆಲಸದಾಳುವೊಬ್ಬನ ಕೊಲೆ ನಡೆದು ಆರು ತಿಂಗಳಾದರೂ ಸುಳಿವಿರಲಿಲ್ಲ. ತಾಯಿಯ ಅಕ್ರಮ ಸಂಬಂಧಕ್ಕೆ ಕೋಪಗೊಂಡು ಮಗನೇ ಹತ್ಯೆ ಮಾಡಿ, ‘ದೃಶ್ಯಂ’ ಸಿನಿಮಾ ಮಾದರಿಯಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ. ಅಂತಿಮವಾಗಿ, ವೈಜ್ಞಾನಿಕ ತನಿಖೆಯಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. WhatsApp Group Join Now ಅವನೊಬ್ಬ ಕೆಲಸದಾಳು. ಊರಿನ ಗೌಡ್ತಿ ಮನೆಯಲ್ಲಿ ಕೆಲಸಕ್ಕಿದ್ದ. ಅವರು ಕೊಡೋ ಪುಡಿಗಾಸಿನಲ್ಲೇ ಜೀವನ ಮಾಡ್ತಿದ್ದ. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆತ ನಾಪತ್ತೆಯಾಗಿಬಿಟ್ಟ. ಮಕ್ಕಳು ಹೋಗಿ ಗೌಡ್ತಿಯನ್ನ ಕೇಳಿದ್ರೆ ಆತ ಕೆಲಸಕ್ಕೇ ಬಂದಿಲ್ಲ ಅಂದ್ರು. … Read more

Fatty Liver : ಡ್ರಿಂಕ್ಸ್ ಮಾಡಿದ್ರೆ ಮಾತ್ರ ಫ್ಯಾಟಿ ಲಿವರ್ ಬರೋದಲ್ಲ! ಈ ಅಭ್ಯಾಸಗಳಿಂದಲೂ ಬರುತ್ತೆ ಹುಷಾರ್

Fatty Liver : ದೇಹದಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸುವ ಯಕೃತ್ ಅಥವಾ ಲಿವರ್, ನಮ್ಮ ಆರೋಗ್ಯದ ರಕ್ಷಣಾಕಾರಿಯಂತೆ ಕೆಲಸ ಮಾಡುತ್ತದೆ. ಪ್ರೋಟೀನ್ ಉತ್ಪಾದನೆ, ಜೀರ್ಣಕ್ರಿಯೆ, ಪಿತ್ತರಸ ಉತ್ಪಾದನೆ ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುವ ಯಕೃತ್‌ ಮೇಲೆ ಸ್ವಲ್ಪ ಅಜಾಗರೂಕತೆಯೂ ಅಪಾಯವನ್ನು ಉಂಟುಮಾಡಬಹುದು. WhatsApp Group Join Now ಆದರೆ ಕೊಬ್ಬು ಸಂಗ್ರಹದಿಂದ ಸಂಭವಿಸುವ ಫ್ಯಾಟಿ ಲಿವರ್‌ನ ಬಗ್ಗೆ ಅರಿವು ಹೊಂದಿದರೆ, ದೇಹವನ್ನು ಸುರಕ್ಷಿತವಾಗಿಡಬಹುದು. ಫ್ಯಾಟಿ ಲಿವರ್ ಏಕೆ ಉಂಟಾಗುತ್ತದೆ? ಅಧಿಕ ಕೊಬ್ಬಿನ ಶೇಖರಣೆ, ಬೊಜ್ಜು, ಅತಿಯಾದ ಮದ್ಯಪಾನ.ಕಳಪೆ … Read more

Arecanut Rate : ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ?: ಇಲ್ಲಿದೆ ಡಿಸೆಂಬರ್ 20ರ ದರಪಟ್ಟಿ

Arecanut Rate : ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತಷ್ಟು ಕುಸಿತ ಕಂಡಿದೆ. ಇದರಿಂದ ಬೆಳೆಗಾರರಲ್ಲಿ ಆತಂಕ ಉಂಟಾಗಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಇಂದು (ಡಿಸೆಂಬರ್ 20) ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. WhatsApp Group Join Now ಅಡಿಕೆ ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇಂದು (ಡಿಸೆಂಬರ್ 20) ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 55,700 … Read more

ಹೆಂಡ್ತಿ ಮರ್ಯಾದೆ ಕೊಡ್ತಿಲ್ಲ ಎಂದು ಹತ್ಯೆಗೆ 5 ಲಕ್ಷ ಸುಪಾರಿ ಕೊಟ್ಟ ಪಾಪಿ ಪತಿ!

ಮೈಸೂರಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಪತ್ನಿ ಮರ್ಯಾದೆ ಕೊಡ್ಲಿಲ್ಲ ಅಂತ ಕೊಲೆಗೆ ಯತ್ನ ನಡೆದಿರುವ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ. WhatsApp Group Join Now ಹೆಂಡತಿ ಹತ್ಯೆಗೆ ಪಾಪಿ ಪತಿ ಸುಪಾರಿ ನೀಡಿದ್ದಾನೆ. ಮೈಸೂರಿನ ಬಿಎಂಶ್ರೀ ನಗರದಲ್ಲಿ ಪತಿ ಮಹೇಶ್ ಈ ಒಂದು ಕೃತ್ಯ ಎಸಗಿದ್ದು, ಪತ್ನಿ ನಾಗರತ್ನ ಕೊಲೆಗೆ 5 ಲಕ್ಷ ಸುಪಾರಿ ಕೊಟ್ಟಿದ್ದಾನೆ. ಪತ್ನಿ ನಾಗರತ್ನ ವರ್ತನೆಯಿಂದ ಬೇಸತ್ತಿದ್ದ ಪತಿ ಮಹೇಶ್ ಪತ್ನಿಯನ್ನ ಕೊಲ್ಲಲು ವಿರಾಜಪೇಟೆ ಮೂಲದ ಭಾಸ್ಕರ್, ಅಭಿಷೇಕ್ ಎಂಬುವರಿಗೆ … Read more

ಮಗನ ಜೊತೆಗೆ ಜಗಳವಾಡ್ತಿದ್ದ ಯುವಕರ ಗುಂಪು, ಬಿಡಿಸಲು ಹೋದ ತಂದೆಯನ್ನೇ ಕೊಲೆಗೈದ ಗ್ಯಾಂಗ್!

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಕಾರಿಗನೂರು ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಯುವಕರ ಜಗಳವು ಹೃದಯವಿದ್ರಾವಕ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಗನೊಂದಿಗೆ ಜಗಳವಾಡುತ್ತಿದ್ದ ಯುವಕರ ಗುಂಪನ್ನು ಬಿಡಿಸಲು ಹೋಗಿದ್ದ ತಂದೆಯೇ ಯುವಕರ ಹಲ್ಲೆಗೆ ಬಲಿಯಾಗಿದ್ದಾರೆ. WhatsApp Group Join Now ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳಾದ ಭಂಗಿ ಹನುಮಂತ, ಚರಣ, ಹುಲಿಗೆಮ್ಮ ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಾಘವೇಂದ್ರ, ದರ್ಶನ, ಚಂದ್ರ, ಗುರಯ್ಯ ಎಂಬ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಕಾರಿಗನೂರು … Read more