ಬಿಎಂಟಿಸಿ ಬಸ್‌ ನಲ್ಲಿ ಸಚಿವ ಬೈರತಿ ಸುರೇಶ್ ದಿಢೀರ್ ರಿಯಾಲಿಟಿ ಚೆಕ್ : ಚಿಲ್ಲರೆ ಇಲ್ಲದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್

ರಾಜ್ಯ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಸಾರ್ವಜನಿಕರಂತೆ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಪ್ರಯಾಣ ಕೈಗೊಳ್ಳುವ ಮೂಲಕ ಬಿಗ್ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಮಾಸ್ಕ್ ಧರಿಸಿ ಯಾರಿಗೂ ಗುರುತು ಸಿಗದಂತೆ ಸಂಚರಿಸಿದ ಸಚಿವರಿಗೆ ಬಿಎಂಟಿಸಿ ಸಿಬ್ಬಂದಿಯ ಅಸಲಿ ದರ್ಶನವಾಗಿದ್ದು, ನಿಯಮ ಉಲ್ಲಂಘಿಸಿದ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ತಕ್ಷಣದ ಕ್ರಮಕ್ಕೆ ಸೂಚಿಸಿದ್ದಾರೆ. ರಾತ್ರಿ 7.10 ರಿಂದ 9.10 ರವರೆಗೆ ಕೇವಲ 2 ಗಂಟೆಗಳ ಅವಧಿಯಲ್ಲಿ ಜಯಮಹಲ್, ಆರ್.ಟಿ. ನಗರ, ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್, … Read more

RSS ಸಭೆ ನಂತರ ರಾಜ್ಯದಲ್ಲಿ ಅನಾಹುತ ಸಾಧ್ಯತೆ, ಮೀಟಿಂಗ್ ಬಗ್ಗೆ ಹಲವು ಡೌಟ್ ಎಂದ ಹರಿಪ್ರಸಾದ್!

ಬೆಳಗಾವಿಯಲ್ಲಿ ಇಂದಿನಿಂದ (ಶುಕ್ರವಾರ) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಮುಖ ವಾರ್ಷಿಕ ಸಭೆ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (BK Hariprasad) ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ಗಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಈ ಸಭೆಯ ಮುಕ್ತಾಯದ ನಂತರ ರಾಜ್ಯದಲ್ಲಿ ಅನಾಹುತಗಳು ಅಥವಾ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿಯುವ ಮೂಲಕ ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ. ಸಂಘದ ಇತಿಹಾಸ … Read more

SBI Bank Update : ನಿಮ್ಮ ಎಸ್ ಬಿಐ ಖಾತೆಯಿಂದ ₹236/- ಕಟ್ ಆಗಿದ್ಯಾ.?  ಯಾಕೆ ಕಟ್ ಆಗಿದೆ ಗೊತ್ತಾ.?

SBI Bank Update : ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಉಳಿತಾಯ ಬ್ಯಾಂಕ್ ಖಾತೆದಾರರೇ ಎಚ್ಚರ! ನೀವು ಎಂದಾದರೂ ನಿಮ್ಮ SBI ಪಾಸ್‌ಬುಕ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೀರಾ? ನಿಮ್ಮ ಪಾಸ್‌ಬುಕ್‌ನಲ್ಲಿರುವ (PassBook) ನಮೂದುಗಳನ್ನು ಪರಿಶೀಲಿಸಿದಾಗ ಅಥವಾ ಕಾಲಕಾಲಕ್ಕೆ ಬ್ಯಾಂಕಿನಿಂದ (Bank) ಬಂದ ಸಂದೇಶವನ್ನು ಪರಿಶೀಲಿಸಿದಾಗ, ನೀವು ಅಂತಹ ಯಾವುದೇ ವಹಿವಾಟು ನಡೆಸದೆಯೇ ಬ್ಯಾಂಕ್ ನಿಮ್ಮ ಬ್ಯಾಂಕ್ ಖಾತೆಯಿಂದ ₹236/- ಡೆಬಿಟ್ (Debit) ಮಾಡಿರುವುದನ್ನು ನೀವು ಗಮನಿಸಿರುತ್ತೀರಿ. ಅದು ಏಕೆ? ಎಂದು ಇಲ್ಲಿ ತಿಳಿಯಿರಿ. ಸಾಲಕ್ಕಾಗಿ ಇನ್ನು ಅಲೆಯಬೇಕಿಲ್ಲ, … Read more

‘ಅವನಿಗೆ ತಕ್ಕ ಶಾಸ್ತಿಯಾಗಿದೆ, ಮಗನಾದರೂ ಅವನ ಹೆಣವೂ ಬೇಡ! – ಅತ್ಯಾಚಾರ, ಕೊಲೆ ಆರೋಪಿಯ ಶವ ಪಡೆಯಲು ನಿರಾಕರಿಸಿದ ಹೆತ್ತ ತಾಯಿ!

ಮಾನವೀಯತೆಯನ್ನೇ ಮುಜುಗರಕ್ಕೀಡುಮಾಡುವ ಘಟನೆಗಳು ನಡೆದಾಗ, ತಾಯ್ತನದ ಮಮತೆಗಿಂತ ನ್ಯಾಯವೇ ದೊಡ್ಡದು ಎಂಬುದನ್ನು ಪಶ್ಚಿಮ ಬಂಗಾಳದ ತಾಯಿಯೊಬ್ಬರು ಸಾಬೀತುಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದ 12 ವರ್ಷದ ಬಾಲಕಿಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಷ್  ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಆದರೆ, ಈ ಸುದ್ದಿ ತಿಳಿಯುತ್ತಿದ್ದಂತೆ ಆತನ ಹೆತ್ತ ತಾಯಿ ಆಡಿದ ಮಾತುಗಳು ಈಗ ಇಡೀ ದೇಶದ ಗಮನ ಸೆಳೆದಿದೆ. ತಾಯಿ ಹೇಳಿದ್ದೇನು.? “ಅವನು ಮಾಡಿದ್ದು ಮಹಾ ಅಪರಾಧ, ಅದಕ್ಕೆ ತಕ್ಕ ಶಿಕ್ಷೆಯೇ ಅವನಿಗೆ … Read more

ಬೆಂಗಳೂರಲ್ಲಿ ಘೋರ ದುರಂತ ; ಶಾಲಾ ವಾಹನಕ್ಕೆ ಸಿಲುಕಿ ತಾಯಿ ಎದುರೇ 4 ವರ್ಷದ ಬಾಲಕಿ ಸಾವು.!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಸನಪುರದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಶಾಲಾ ಬಸ್ ರಿವರ್ಸ್ ತೆಗೆದುಕೊಳ್ಳುತ್ತಿದ್ದ ವೇಳೆ ನಾಲ್ಕು ವರ್ಷದ ತನುಷಾ ಬಸ್’ನ ಮುಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿಯ ಕಣ್ಣೆದುರೇ ನಡೆದ ಈ ದುರಂತದಿಂದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ..ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಸನಪುರ ಸಮೀಪ ಈ ಘಟನೆ ನಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಬಾಲಕಿ ತನುಷಾ … Read more

1 ವರ್ಷದ ಬಳಿಕ ಶಿವಮೊಗ್ಗ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಶವ ಸೂಟ್‌ಕೇಸ್‌ಲ್ಲಿಟ್ಟು ಪ್ರಪಾತಕ್ಕೆ ತಳ್ಳಿದ ಪಿಜಿ ಓನರ್ಸ್!

ಶಿಕಾರಿಪುರದಲ್ಲಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ಸತ್ಯ ತನಿಖೆಯಿಂದ ಬಯಲಾಗಿದೆ. ಪಿಜಿಗೆ ಕೆಟ್ಟ ಹೆಸರು ಬರುತ್ತದೆಂಬ ಭಯದಿಂದ, ಮಾಲೀಕರು ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪ್ರಪಾತಕ್ಕೆ ಎಸೆದಿದ್ದರು. ಒಂದು ವರ್ಷದ ಹಿಂದೆ ಶಿಕಾರಿಪುರದಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ನಿಗೂಢ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಬೆಚ್ಚಿಬೀಳಿಸುವ ಸತ್ಯಾಂಶ ಬೆಳಕಿಗೆ ಬಂದಿದೆ. ಪಿಜಿಯಲ್ಲಿ ಕೆಲಸಕ್ಕಿದ್ದ ಬಾಲಕಿ ಆತ್ಮHತ್ಯೆ ಮಾಡಿಕೊಂಡಾಗ, ಅದರಿಂದ ತಮಗೆ ಕೆಟ್ಟ ಹೆಸರು ಬರುತ್ತದೆ ಎಂಬ ಭಯದಿಂದ ಶವವನ್ನು … Read more

ಬೆಳಗಾವಿಯ ಆರ್‌ಎಸ್‌‍ಎಸ್‌‍ ಸಮಾವೇಶ ಖಾಸಗಿ ಕಾರ್ಯಕ್ರಮ, ಅನುಮತಿ ಅಗತ್ಯವಿಲ್ಲ : ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ಬೆಳಗಾವಿಯಲ್ಲಿ ಆರ್‌ಎಸ್‌‍ಎಸ್‌‍ ರಾಷ್ಟ್ರೀಯ ಪ್ರಾಂತ ಪ್ರಚಾರಕರ ಸಮಾವೇಶ ಖಾಸಗಿ ಕಾರ್ಯಕ್ರಮವಾಗಿದ್ದು, ಅದಕ್ಕೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಬೀದಿಗಿಳಿದು ಬೃಹತ್‌ ಮೆರವಣಿಗೆ ನಡೆಸುತ್ತೇವೆ ಎಂದಾದರೆ, ಆಗ ಅನುಮತಿ ಬೇಕಾಗುತ್ತದೆ. ಅವರು ಮನವಿ ಸಲ್ಲಿಸಬಹುದು, ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಆಧರಿಸಿ ಅನುಮತಿ ನೀಡಬೇಕೋ ಅಥವಾ ಕಾರ್ಯಕ್ರಮ ಮುಂದೂಡಿ ಎಂದು ಸಲಹೆ ನೀಡಬೇಕೋ ಎಂಬುದನ್ನು ನಿರ್ಧರಿಸುತ್ತೇವೆ ಎಂದರು. ಎಸ್‌‍ಐಆರ್‌ ಪ್ರಕ್ರಿಯೆ ಸರಿಯಿಲ್ಲ ಎಂದು ನಾವು ಕೂಡ … Read more

‘ಬಾಡಿಗೆದಾರರು ಆತಂಕಪಡಬೇಡಿ..’ ಗೃಹಜ್ಯೋತಿ ಬಗ್ಗೆ ಇಲಾಖೆಯಿಂದ ಸಿಹಿ ಸುದ್ದಿ

ಗೃಹ ಜ್ಯೋತಿ ಯೋಜನೆಯಡಿ (gruha jyoti scheme) ಉಚಿತ ವಿದ್ಯುತ್ ಪಡೆಯುತ್ತಿರುವ ರಾಜ್ಯದ ಸಾವಿರಾರು ಬಾಡಿಗೆದಾರರಲ್ಲಿ ಮೂಡಿದ್ದ ಆತಂಕ ಮತ್ತು ಗೊಂದಲಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತೆರೆ ಎಳೆದಿದೆ. ಜುಲೈ 1ರಿಂದ ರಾಜ್ಯಾದ್ಯಂತ ಆರಂಭವಾಗಿರುವ ಮನೆ-ಮನೆ ತಪಾಸಣೆಯಿಂದಾಗಿ ತಮಗೆ ದೊರೆಯುತ್ತಿರುವ ಉಚಿತ ವಿದ್ಯುತ್ ಸೌಲಭ್ಯ ಎಲ್ಲಿ ಕೈತಪ್ಪಿ ಹೋಗುತ್ತದೆಯೋ ಎಂದು ಆತಂಕಗೊಂಡಿದ್ದ ಬಾಡಿಗೆದಾರರಿಗೆ ಬೆಸ್ಕಾಂ ಬಿಗ್ ರಿಲೀಫ್ ನೀಡಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವ ನಾಗರಿಕರು ಯಾವುದೇ ಕಾರಣಕ್ಕೂ ಭೀತಿ ಪಡಬೇಕಾಗಿಲ್ಲ ಮತ್ತು ತಮ್ಮ ದಾಖಲೆಗಳ … Read more

ಶಿಕ್ಷಕ ವೃತ್ತಿಗೆ ಮಸಿ ಬಳಿದ ರವಿಕಿರಣ್ ಲೆಕ್ಚರ್; ಪಿಯು ವಿದ್ಯಾರ್ಥಿನಿಗೆ ಮೋಸ ಮಾಡಿ ಪೊಲೀಸರಿಗೆ ಅಂದರ್!

ವಿದ್ಯಾ ದೇಗುಲದಲ್ಲಿ ಪಾಠ ಹೇಳಿಕೊಡಬೇಕಾದ ಗುರುವೊಬ್ಬ ತನ್ನ ವಿದ್ಯಾರ್ಥಿನಿಯನ್ನೇ ಪ್ರೀತಿಯ ಜಾಲಕ್ಕೆ ಬೀಳಿಸಿ, ನಂಬಿಕೆ ದ್ರೋಹ ಎಸಗಿದ ಘಟನೆ ಗಣಿ ನಾಡು ಬಳ್ಳಾರಿಯಲ್ಲಿ ಸಂಚಲನ ಮೂಡಿಸಿದೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸುಮ್ಮನಿರದ ಈ ಕಾಮುಕ ಉಪನ್ಯಾಸಕ, ತನ್ನ ಶಿಷ್ಯೆಯನ್ನೇ ದೈಹಿಕವಾಗಿ ಬಳಸಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾನೆ. ನಂಬಿಕೆ ದ್ರೋಹ! ಬಳ್ಳಾರಿಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ಸಸ್ಯಶಾಸ್ತ್ರ (Botany) ವಿಭಾಗದ ಉಪನ್ಯಾಸಕ ರವಿಕಿರಣ್ (45) ಬಂಧಿತ ಆರೋಪಿ. ಈತ ಕಾಲೇಜಿನಲ್ಲಿ ಸಭ್ಯನಂತೆ ನಟಿಸುತ್ತಾ ವಿದ್ಯಾರ್ಥಿನಿಯರ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. … Read more

ಪತಿಯನ್ನು ಕೊಂದು ಬಾತ್‌ರೂಂ ನೆಲದಡಿ ಹೂತ ಪಾಪಿ ಪತ್ನಿ..! 45 ದಿನಗಳ ಬಳಿಕ ಭೀಕರ ಸತ್ಯ ಬಯಲು

ಉತ್ತರ ಪ್ರದೇಶದ ಆಗ್ರಾದಲ್ಲಿ ಪತಿಯನ್ನು ಕೊಲೆ ಮಾಡಿ, ಮನೆಯ ಬಾತ್‌ರೂಂ ನೆಲದಡಿ ಶವವನ್ನು ಹೂತು ಮುಚ್ಚಿಟ್ಟಿದ್ದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಇನ್ನೂ ಯಾರಾದರೂ ಸಹಕರಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಅವರು ಕಳೆದ ಸುಮಾರು 45 ದಿನಗಳಿಂದ ನಾಪತ್ತೆಯಾಗಿದ್ದರು. ಹೊಸ ಸುಳಿವುಗಳ ಆಧಾರದ ಮೇಲೆ ಪೊಲೀಸರು ಮನೆಯ ಬಾತ್‌ರೂಂ ನೆಲವನ್ನು ಅಗೆದು ನೋಡಿದಾಗ, ಸಿಮೆಂಟ್ ಮತ್ತು ಪ್ಲಾಸ್ಟರ್ ಪದರದ ಕೆಳಗೆ ಹೂತಿದ್ದ ಶವ … Read more