ಡಿಕೆಶಿಗೂ ನನಗೂ ಹೋಲಿಕೆ ಮಾಡಬೇಡಿ : ನನಗೆ ಮಾತಿನ ಚಪಲ, ಅವರಿಗೆ ಲೂಟಿ ಚಪಲ – ಡಿಕೆ ಬ್ರದರ್ಸ್ ವಿರುದ್ಧ ಹೆಚ್ ಡಿಕೆ ಕೆಂಡ

ರಾಮನಗರವು ನನ್ನ ಕರ್ಮಭೂಮಿ, ರಾಜಕೀಯ ನೆಲೆ. ಇಲ್ಲಿನ ಜನರು ನನ್ನನ್ನು ಮನೆ ಮಗನಂತೆ ಸ್ವೀಕರಿಸಿ ನಾಲ್ಕು ಚುನಾವಣೆಗಳಲ್ಲಿ ಅ‍ವರೇ ಗೆಲ್ಲಿಸಿದ್ದಾರೆ. ನನ್ನ ಅಂತಿಮ ದಿನದ ರಾಜಕೀಯ ಜೀವನ ಹಾಗೂ ಹೋರಾಟಗಳು ರಾಮನಗರಲ್ಲಿಯೇ ಇರಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಎಚ್.ಡಿ.ಕುಮಾರಸ್ವಾಮಿ ಬಿಡದಿ ಹೋಬಳಿಯ ಬೈರಮಂಗಲ ಗ್ರಾಮದ ಭಕ್ತಾಂಜನೇಯ ದೇವಾಲಯದ ಆವರಣದಲ್ಲಿ ಬಿಡದಿ ಟೌನ್ ಶಿಪ್ ಯೋಜನೆಗೆ ಭೂ … Read more

ರಾಜ್ಯದಲ್ಲಿ ಘೋರ ದುರಂತ : ನೇಣುಬಿಗಿದುಕೊಂಡು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ.!

ರಾಜ್ಯದಲ್ಲಿ ಮತ್ತೊಂದು ಘೋರ ದುರಂತವೊಂದು ನಡೆದಿದ್ದು, ಡೆತ್ ನೋಟ್ ಬರೆದಿದ್ದು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಎಚ್.ಮಠದ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗಂಡ, ಅತ್ತೆ, ಮೈದುನ ಕಿರುಕುಳ ನೀಡುತ್ತಿದ್ದರು ಎಂದು ಡೆತ್ ನೋಟ್ ಬರೆದಿಟ್ಟು ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಚ್.ಮಠದ ಕೊಪ್ಪಲು ಗ್ರಾಮದ ನಿವಾಸಿ ಮಹದೇವ ಎಂಬುವರ ಪತ್ನಿ ಹೇಮಲತಾ (38), ಮಗಳು ಅನು (15) ಮಗ ಚೇತನ್ (13) ಮೃತಪಟ್ಟವರು. ಮನೆಯ ತಂಬಾಕು … Read more

ಅವರಪ್ಪರಾಣೆ ಸಿಎಂ ಆಗಲ್ಲ ಎಂದಿದ್ದ ಸಿದ್ದರಾಮಯ್ಯನವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು : ಎಚ್‌.ಡಿ ಕುಮಾರಸ್ವಾಮಿ

2018ರಲ್ಲಿ ಸಿದ್ದರಾಮಯ್ಯ ಅವರಪ್ಪರಾಣೆ ಹೆಚ್‌ಡಿಕೆ ಸಿಎಂ ಆಗಲ್ಲ ಎಂದಿದ್ದರು. ಆಮೇಲೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದರು. ಇನ್ನೂ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, 2018ರಲ್ಲಿ ಸಿದ್ದರಾಮಯ್ಯ ಅವರಪ್ಪರಾಣೆ ಹೆಚ್‌ಡಿಕೆ ಸಿಎಂ ಆಗಲ್ಲ ಎಂದಿದ್ದರು. ಆಮೇಲೆ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಈ ಸರ್ಕಾರದ ಆಯಸ್ಸು 2 ವರ್ಷ ಮಾತ್ರ, 2028ಕ್ಕೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ನನಗೆ ಸಿಎಂ ಆಗೋದು … Read more

ಮಾಜಿ ಲವರ್ ಪತ್ನಿಗೆ ಅಪಘಾತ ಮಾಡಿಸಿ ಏಡ್ಸ್ ರಕ್ತ ಇಂಜೆಕ್ಟ್ ಮಾಡಿದ ಮಹಿಳಾ ನರ್ಸ್

ಬ್ರೇಕ್ ಅಪ್ ಆದ ಬಳಿಕ ಸೇಡು ತೀರಿಸಿಕೊಂಡ ಹಲವು ಘಟನೆಗಳು ನಡೆದಿದೆ. ಆದರೆ ಇದೀಗ ನಡೆದ ಘಟನೆ ಬೆಚ್ಚಿ ಬೀಳಿಸುವಂತಿದೆ. ಪ್ರೀತಿಯಲ್ಲಿದ್ದ ಜೋಡಿ ಬ್ರೇಕ್ ಅಪ್ ಆಗಿದೆ. ಗೆಳೆಯ ಬೇರೊಂದು ಮದುವೆಯಾಗಿದ್ದಾನೆ. ಆದರೆ ಈಕೆಗೆ ಸಹಿಸಲು ಸಾಧ್ಯವಾಗಿಲ್ಲ. ಸೇಡು ತೀರಿಸಲು ವರ್ಷಗಳ ಕಾಲ ಕಾದು ಕುಳಿತ ಈಕೆ, ಗೆಳೆಯನ ಪತ್ನಿಗೆ ಅಪಘಾತ ಮಾಡಿಸಿದ್ದಾರೆ. ಬಳಿಕ ಗೆಳೆಯನ ಪತ್ನಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಏಡ್ಸ್ ರಕ್ತವನ್ನು ಇಂಜೆಕ್ಟ್ ಮಾಡಿದ ಘಟನೆ ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಘಟನೆ ಸಂಬಂಧ … Read more

ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಹುಷಾರ್ – ಕಠಿಣ ಕ್ರಮಕ್ಕೆ ಮುಂದಾದ ಬೆಂಗಳೂರು ಪೊಲೀಸ್!

ಇತ್ತೀಚೆಗೆ ಟ್ರಾಫಿಕ್ ರೂಲ್ಸ್ (Traffic rules) ಬ್ರೇಕ್ ಮಾಡೋರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರು (Police) ರೂಲ್ಸ್ ಬ್ರೇಕ್ ಮಾಡೋ ಜನರಿಗೆ ತಕ್ಕ ಪಾಠ ಕಲಿಸೋಕೆ ಮುಂದಾಗಿದ್ದಾರೆ. ಬೆಂಗಳೂರಲ್ಲಿ ಕಠಿಣ ನಿಯಮವಳಿಗಳನ್ನ ಜಾರಿ ಮಾಡಿದರೂ ನಗರದ ಟ್ರಾಫಿಕ್ ಮಾತ್ರ ಹತೋಟಿಗೆ ಬರುತ್ತಿಲ್ಲ. ಈ ಈ ಸಮಸ್ಯೆಗೆ ಮುಕ್ತಿ ನೀಡಲು ಪ್ರಯತ್ನ ಮಾಡುತ್ತಿರುವ ಪೊಲೀಸರು ಈಗ RTO ಜೊತೆ ಸೇರಿ ಒನ್ ವೇ ಸವಾರರ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ. ಒನ್ ವೇ ಸವಾರರನ್ನ ಪತ್ತೆ ಹಚ್ಚಿ ಅವರ ಡಿಎಲ್‌ಗಳನ್ನ ನೇರವಾಗಿ … Read more

‘ಕೇವಲ 37 ಸಕೆಂಡ್ ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ: ಗವರ್ನರ್ ರಿಮೋಟ್ ಕಂಟ್ರೋಲ್ ಕೇಶವ ಕೃಪಾದಲ್ಲಿದೆಯೋ, ಜಗನ್ನಾಥ ಭವನದಲ್ಲಿದೆಯೋ?’

ಬಿಜೆಪಿ ಮತ್ತು ರಾಜ್ಯಪಾಲರು ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ, ಕೇವಲ 37 ಸಕೆಂಡ್ ಗಳಲ್ಲಿ ರಾಜ್ಯಪಾಲರು ಎಸಗಿದ ಅಪಚಾರ ಒಂದೆರಡಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ರಾಜ್ಯಪಾಲು ಕೇವಲ 37 ಸೆಕೆಂಡುಗಳಲ್ಲಿ ರಾಷ್ಟ್ರಗೀತೆಗೆ ಅಪಚಾರ, ಸಂವಿಧಾನಕ್ಕೆ ದ್ರೋಹ, ಕರ್ನಾಟಕಕ್ಕೆ ಅಗೌರವ, ಕನ್ನಡಿಗರಿಗೆ ಅಪಮಾನ,ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯಪಾಲರಿಂದ ಇಷ್ಟೆಲ್ಲ ಅಪಚಾರವಾದರೂ ಬಿಜೆಪಿಯವರ ಸಮರ್ಥನೆ ನೋಡುತ್ತಿದ್ದರೆ ರಾಜ್ಯಪಾಲರ ರಿಮೋಟ್ ಕಂಟ್ರೋಲ್ ಕೇಶವ … Read more

ಮೂಗಿನ ಕೂದಲನ್ನು ಕತ್ತರಿಸುವವರೇ ಎಚ್ಚರ : ತಪ್ಪದೇ ಇದನ್ನೊಮ್ಮೆ ಓದಿ.!

ಮೂಗು ಕಶೇರುಕಗಳಲ್ಲಿ ಕಂಡುಬರುವ ರಂಧ್ರವಾಗಿದೆ. ಇದರ ಮೂಲಕ, ಉಸಿರಾಟದಲ್ಲಿ ಬಳಸುವ ಗಾಳಿಯು ದೇಹವನ್ನು ಪ್ರವೇಶಿಸುತ್ತದೆ. ನಮ್ಮ ದೇಹದ ವಿವಿಧ ಭಾಗಗಳಲ್ಲಿ ಬೆಳೆಯುವ ಕೂದಲು ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತದೆ. ಹಾಗೆಯೇ ನಮ್ಮ ಮೂಗಿನಲ್ಲಿಯೂ ಕೂದಲು ಇರುತ್ತದೆ. ಇಂದಿನ ಕಾಲದಲ್ಲಿ ತಲೆ, ಗಡ್ಡ, ಕಣ್ಣು, ಹುಬ್ಬು, ಮೀಸೆ ಬಿಟ್ಟರೆ ದೇಹದ ಎಲ್ಲೆಲ್ಲೂ ಕೂದಲು ಇಷ್ಟವಾಗುವುದಿಲ್ಲ. ಆದರೆ ಈ ಕೂದಲುಗಳು ನಮ್ಮ ರಕ್ಷಣೆಗೆ ಮಾತ್ರ ಎಂದು ಅವರಿಗೆ ತಿಳಿದಿಲ್ಲ. ಸಾಮಾನ್ಯವಾಗಿ, ಸುಂದರವಾಗಿ ಕಾಣಲು, ಮಹಿಳೆಯರು ವ್ಯಾಕ್ಸಿಂಗ್ ಮೂಲಕ ತಮ್ಮ ದೇಹದ ಎಲ್ಲಾ … Read more

ಅಪ್ಪ ಮಗನ ಗಲಾಟೆ ದುರಂತ ಅಂತ್ಯ – ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಮಗನ ಶವ ಪತ್ತೆ

ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ರಾಮಕುಂಜದ ವಸಂತ್ ಅಮೀನ್ ಪುತ್ರ ಮೋಕ್ಷ (17) ಗುರುತಿಸಲಾಗಿದೆ. ಬಾಲಕನ ತಂದೆಯೂ ಚೂರಿಯಿಂದ ಇರಿದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯ ಬಗ್ಗೆ ಹಲವು ಅನುಮಾನಗಳು ಮೂಡಿದೆ. ಕೌಟುಂಬಿಕ ಕಲಹದಲ್ಲಿ ಮನೆಯಲ್ಲಿ ಸಂಘರ್ಷ ನಡೆದ ಬಗ್ಗೆ ಅನುಮಾನ ಇದ್ದು, ತಂದೆ ಮತ್ತು ಮಗನ ಮಧ್ಯೆ ಮನೆಯಲ್ಲಿ ಪರಸ್ಪರ ಜಗಳ ನಡೆದಿರುವ ಸಾಧ್ಯತೆ ಇದೆ. ಈ … Read more

Horoscope Today : 25 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಮೇಷ ರಾಶಿಯವರಿಗೆ ಸಾಮಾನ್ಯ ದಿನವು ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಏಕಾಗ್ರತೆ ಮತ್ತು ಲಕ್ಷ್ಯದ ಕೊರತೆಯು ನೀವು ಎಷ್ಟೇ ಕಷ್ಟವಾದರೂ ಎದುರಿಸಲೇಬೇಕಾದ ಸಮಸ್ಯೆಗಳಾಗಿವೆ. ಧ್ಯಾನ ಮತ್ತು ಯೋಗದ ಮೂಲಕ ಇವುಗಳಿಂದ ಮುಕ್ತಿ ಪಡೆಯಬಹುದು.ಈ ದಿನವು ಫಲಪ್ರದವಾಗಿರುವ ಸಾಧ್ಯತೆಯಿರದ ಕಾರಣ, ಹೂಡಿಕೆದಾರರು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಇಂದು ಕಾನೂನು ದಾಖಲೆ ಪತ್ರಗಳಿಗೆ ಸಹಿ ಹಾಕುವಾಗ ಎಚ್ಚರವಹಿಸಿ. ಸಂಜೆಯ ವೇಳೆಗೆ, ಪರಿಸ್ಥಿತಿಗಳು ಸುಲಭ ಹಾಗೂ ಸಂತಸದಿಂದ ಕೂಡಿರುತ್ತದೆ. ಮನೆಯಲ್ಲಿನ ಪ್ರಕ್ಷುಬ್ಧತೆಯು ತಿಳಿಗೊಂಡು … Read more

ರಕ್ತನಾಳಗಳ ಉಬ್ಬುವಿಕೆ ಏಕೆ ಆಗುತ್ತದೆ.? ಯಾವ ಕಾರಣಗಳಿಂದ ಈ ಸಮಸ್ಯೆ ಹೆಚ್ಚಾಗುತ್ತದೆ.? ಇದಕ್ಕಿರುವ ಚಿಕಿತ್ಸೆ ಏನು.?

ಮನುಷ್ಯನ ದೇಹದ ಪ್ರತಿಯೊಂದು ಭಾಗಕ್ಕೂ ಬಹಳ ಪ್ರಾಮುಖ್ಯತೆ ಇದೆ. ದೇಹದ ದೊಡ್ಡ ಅಂಗಾಂಗದಿಂದ ಬಹಳ ಚಿಕ್ಕ ಅಂಗಾಂಗದವರೆಗೂ ಪ್ರತಿಯೊಂದು ಅಂಗದ ಕಾರ್ಯವೂ ಮಹತ್ವದ್ದಾಗಿದೆ. ಯಾವುದೇ ಅಂಗಾಂಗವನ್ನು ಕಡೆಗಣಿಸುವಂತಿಲ್ಲ. ನಮ್ಮ ದೇಹದ ಆರೋಗ್ಯಕರ ಕ್ರಿಯೆಯನ್ನು ಕಾಪಾಡುವುದರಲ್ಲಿ ರಕ್ತನಾಳಗಳು ನಮ್ಮ ದೇಹದ ಪ್ರತಿಯೊಂದು ಅಂಗಾಂಗಳಿಗೆ ರಕ್ತ ಸರಬರಾಜಿನ ಕೆಲಸ ಮಾಡುವುದು. ಆದರೆ ಕೆಲವೊಂದು ಸಲ ರಕ್ತನಾಳಗಳು ಉಬ್ಬಿಕೊಂಡು, ಗಂಟು ಕಟ್ಟಿಕೊಂಡಿರುವುದು. ಇಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಕಾಲಿನಲ್ಲಿ. ನಿಂತುಕೊಂಡೇ ಕೆಲಸ ಮಾಡುವುದು ಉಬ್ಬಿಕೊಂಡಿರುವ ರಕ್ತನಾಳಗಳ ಮೇಲೆ ಪರಿಣಾಮ ಬೀರುವುದು. ಉಬ್ಬಿರುವ … Read more