ದಿನಕ್ಕೆ ಎರಡು ಸಿಗರೇಟ್ ಮಾತ್ರ! ಈ ಸುಳ್ಳು ಎಷ್ಟು ಅಪಾಯಕಾರಿ ಗೊತ್ತಾ?

ದಿನಕ್ಕೆ ಒಂದು ಅಥವಾ ಎರಡು ಸಿಗರೇಟ್ ಮಾತ್ರ ಸೇದುತ್ತೇನೆ, ಅದರಿಂದ ಏನೂ ಆಗಲ್ಲ ಈ ವಾಕ್ಯವನ್ನು ನಾವು ಕಾರ್ಪೊರೇಟ್ ಕಚೇರಿಗಳಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ, ಸ್ನೇಹಿತರ ವಲಯದಲ್ಲಿ ಆಗಾಗ್ಗೆ ಕೇಳುತ್ತೇವೆ. ಅನೇಕರು ಇದನ್ನು ನಿಯಂತ್ರಿತ ಧೂಮಪಾನ ಅಥವಾ ಸಾಂದರ್ಭಿಕ ಅಭ್ಯಾಸ ಎಂದು ಸಮಾಧಾನ ಪಡಿಸಿಕೊಳ್ಳುತ್ತಾರೆ. ಆದರೆ ವೈದ್ಯಕೀಯ ತಜ್ಞರು ಎಚ್ಚರಿಸುವುದೇನೆಂದರೆ, ದಿನಕ್ಕೆ ಎರಡು ಸಿಗರೇಟ್ ಸೇದುವುದೂ ಸಹ ದೇಹಕ್ಕೆ ಅಪಾಯಕಾರಿಯೇ. ಶ್ವಾಸಕೋಶ ಮತ್ತು ಹೃದಯ ತಜ್ಞರ ಪ್ರಕಾರ, ಧೂಮಪಾನದ ಹಾನಿ ವರ್ಷಗಳ ನಂತರ ಮಾತ್ರ ಕಾಣಿಸುತ್ತದೆ ಎಂಬುದು ತಪ್ಪು … Read more

ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣ ಸೇರಿದ ಮಗಳು ಕೀರ್ತಿ!

ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಕೀರ್ತಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪತಿ ಗುರುಪ್ರಸಾದ್ ಮತ್ತು ಆತನ ಕುಟುಂಬದವರು ಮನೆ ಕಟ್ಟಲು ಹೆಚ್ಚುವರಿ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಮೃತಳ ಪೋಷಕರು ಆರೋಪಿಸಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರು (ಜ.26): ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ಕೇವಲ ಎರಡೇ ವರ್ಷಕ್ಕೆ ಕೀರ್ತಿ (24) ಎಂಬ ವಿವಾಹಿತೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ … Read more

ಮದುವೆಯಾಗಿ ಮಕ್ಕಳಿದ್ದರೂ ಅನೈತಿಕ ಸಂಬಂಧ- ದುರಂತ ಅಂತ್ಯ ಕಂಡ ಜೋಡಿ!

ಈಗಾಗಲೇ ಮದುವೆಯಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಹೌದು..ಸಲ್ಮಾಳನ್ನು ಚಾಕುವಿನಿಂದ ಇರಿದು ಕೊಂದು ಆಕೆಯ ಪ್ರಿಯತಮ ಬಾಬಾಜಾನ್ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಬಾಜಾನ್ ಈ ನಿರ್ಧಾರಕ್ಕೆ ಕಾರಣವೇನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ ಇವರಿಬ್ಬರ ಅನೈತಿಕ ಸಂಬಂಧ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಈ ಹಿಂದೆ ಗಲಾಟೆ ಆಗಿತ್ತು ಎನ್ನಲಾಗಿದೆ. ನಡೆದಿದ್ದೇನು..?: ಸಲ್ಮಾ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲೂಕಿನ ಗರಿಗಿರೆಡ್ಡಿಪಾಳ್ಯಾ … Read more

ಸೆಕ್ಸ್ ಗೆ ಅಡ್ಡಿಯಾಗುತ್ತಿದ್ದಾನೆ ಅಂತ 1 ವರ್ಷದ ಮಗನನ್ನೇ ಹೊಡೆದು ಕೊಂದ ಪಾಪಿ ತಂದೆ

ಸೆಕ್ಸ್ ಗೆ ಅಡ್ಡಿಯಾಗುತ್ತಿದ್ದಾನೆ ಎನ್ನುವ ಕಾರಣಕ್ಕಾಗಿ ತನ್ನ 1 ವರ್ಷದ ಮಗನನ್ನೇ ಕೊಂದು ಹಾಕಿರುವಂತ ಘಟನೆ ತಿರುವನಂತಪುರಂನ ನೆಯ್ಯಟ್ಟಿಂಕರದಲ್ಲಿ ನಡೆದಿದೆ. ಕಳೆದ ಜನವರಿ.16ರಂದು ಐಕಾರವಿಳಕ್ಕಂನ ಕವಲಕುಲಂನಲ್ಲಿ ಬಾಡಿಗೆಗಿದ್ದ ಶಿಜಿಲ್ ಮತ್ತು ಕೃಷ್ಣಪ್ರಿಯಾ ದಂಪತಿಗಳು ತಮ್ಮ 1 ವರ್ಷದ ಮಗ ಇಹಾನ್(ಅಪ್ಪು) ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆತ ಬಿಸ್ಕೆಟ್, ದ್ರಾಕ್ಷಿ ತಿಂದಿದ್ದರಿಂದ ಕುಸಿದು ಬಿದ್ದು ಅಸ್ಪಸ್ಥನಾಗಿದ್ದಾನೆ ಎಂಬುದಾಗಿ ಹೇಳಿದ್ದರು. ಪುಟಾಣಿ ಮಗುವನ್ನು ಆಸ್ಪತ್ರೆಯ ವೈದ್ಯರು ಐಸಿಯುನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರು. ಈ ವೇಳೆಯಲ್ಲಿ ಪುಟ್ಟ ಮಗುವಿನ ಹೊಟ್ಟೆಯ ಭಾಗದಲ್ಲಿ … Read more

ನೀವು ಇವುಗಳನ್ನು 7 ದಿನಗಳವರೆಗೆ ತಿಂದರೆ, ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ನಂಬೋದೇ ಇಲ್ಲ

ನಮ್ಮ ಅಡುಗೆಮನೆಯಲ್ಲಿ ಎಳ್ಳನ್ನು ಸಿಹಿತಿಂಡಿಗಾಗಿ ಅಥವಾ ಹಬ್ಬಗಳ ಸಮಯದಲ್ಲಿ ಅಲಂಕಾರಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದು ಭಾವಿಸುವುದು ತಪ್ಪು. ವಾಸ್ತವವಾಗಿ, ಈ ಸಣ್ಣ ಬಿಳಿ ಬೀಜಗಳು ಪ್ರಕೃತಿ ನೀಡಿದ ಅಮೃತ ಬೀಜ. ಈ ಬೀಜಗಳ ಪೌಷ್ಟಿಕಾಂಶದ ಮೌಲ್ಯವು ಅಪಾರವಾಗಿದೆ. ತಜ್ಞರ ಪ್ರಕಾರ, ನೀವು ಎಳ್ಳನ್ನು ಕೇವಲ 7 ದಿನಗಳವರೆಗೆ ಸರಿಯಾದ ರೀತಿಯಲ್ಲಿ ಸೇವಿಸಿದರೆ, ನಿಮ್ಮ ದೇಹದಲ್ಲಿ ಅದ್ಭುತ ಬದಲಾವಣೆಗಳು ಸಂಭವಿಸಬಹುದು. ಎಳ್ಳು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ತಾಮ್ರ, ಮ್ಯಾಂಗನೀಸ್, ವಿಟಮಿನ್ ಬಿ 1, ವಿಟಮಿನ್ ಇ, ಫೈಬರ್ ಮತ್ತು … Read more

ಕುಡಿದ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ; ಮರಕ್ಕೆ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

ಕುಡಿದ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಸಂದ್ರದಲ್ಲಿ ನಡೆದಿದೆ. ಹೆಬ್ಬಗೋಡಿ ನಿವಾಸಿ ಪ್ರಶಾಂತ್ (28) ಮೃತಪಟ್ಟ ಯುವಕ. ಅಪಘಾತದಲ್ಲಿ ರೋಶನ್ ಹೆಗ್ಗಡೆ (27) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಕ್ರಿಕೆಟ್ ಪಂದ್ಯ ಮುಗಿಸಿದ ಬಳಿಕ ಇಬ್ಬರೂ ಸೇರಿ ಸಂಜೆ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ … Read more

ಬೆಳಗ್ಗೆ ಎದ್ದ ಕೂಡಲೇ ಈ ಎಲೆಯನ್ನು ತಿಂದ್ರೆ ಸಾಕು ನೋವಿಲ್ಲದೇ ಪುಡಿಯಾಗಿ ಹೊರಬರುತ್ತೆ ಕಿಡ್ನಿ ಸ್ಟೋನ್..!

ಮೂತ್ರಪಿಂಡ ಅಥವಾ ಮೂತ್ರನಾಳದಲ್ಲಿ ರೂಪುಗೊಳ್ಳುವ ಕಿಡ್ನಿ ಸ್ಟೋನ್‌ಗಳು ತೀವ್ರವಾದ ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತವೆ. ಇಂತಹ ಸಂದರ್ಭದಲ್ಲಿ ಜನರು ನೈಸರ್ಗಿಕ ಪರಿಹಾರಗಳತ್ತ ತಿರುಗುತ್ತಾರೆ. ಶತಮಾನಗಳಿಂದ ಮನೆಮದ್ದುಗಳಾಗಿ ಬಳಸಲಾಗುತ್ತಿರುವ ತುಳಸಿ ರಸವು ಮೂತ್ರಪಿಂಡದ ಕಲ್ಲುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಸಹಾಯಕ ಎಂಬ ನಂಬಿಕೆ ವ್ಯಾಪಕವಾಗಿದೆ. ತುಳಸಿಯಲ್ಲಿರುವ ಸಕ್ರಿಯ ಸಂಯುಕ್ತಗಳು ಪ್ರಯೋಜನಕಾರಿ ತುಳಸಿಯಲ್ಲಿ ಅಸಿಟಿಕ್ ಆಮ್ಲ, ಸಿಟ್ರಿಕ್ ಆಮ್ಲ ಮತ್ತು ಮೆಗ್ನೀಸಿಯಂ ಸೇರಿದಂತೆ ಮೂತ್ರಪಿಂಡದ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಕ್ರಿಯ ಸಂಯುಕ್ತಗಳು ಅಡಕವಾಗಿವೆ. ಇವು ಮೂತ್ರದಲ್ಲಿನ ಕ್ಯಾಲ್ಸಿಯಂ ಪ್ರಮಾಣವನ್ನು ಕಡಿಮೆ … Read more

ಪ್ರಿಯಕರನಿಗೆ ಬೆತ್ತಲೆ ಫೋಟೋ ಕಳಿಸಿದ 19 ರ ಯುವತಿಗೆ ಬ್ಲಾಕ್ ಮೇಲರ್ ಕಾಟ – ಹಣಕ್ಕೆ ಬೇಡಿಕೆ

ಬಾಯ್‌ಫ್ರೆಂಡ್‌ಗೆ ಖಾಸಗಿ ಫೋಟೋಗಳನ್ನು ಕಳಿಸಿದ ಯುವತಿ ಪೇಚೆಗೆ ಸಿಲುಕಿದ್ದು, ಪೊಲೀಸರ ಮೊರೆಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿನಿ ತನ್ನ ಪ್ರೇಮಿಗೆ ಕಳಿಸಿದ್ದು, ಅದೇ ಫೋಟೋಗಳನ್ನಿಟ್ಟುಕೊಂಡು ಅಪರಿಚಿತ ನಂಬರ್ನಿಂದ ಬ್ಲಾಕ್ಮೇಲ್ ಕರೆ ಬಂದಿದೆ. ಈ ಸಂಬಂಧ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. 1 ಲಕ್ಷ ರೂ. ನೀಡಿದರೂ ಹೆಚ್ಚು ಹಣಕ್ಕೆ ಬೇಡಿಕೆ ಯುವತಿ ಕೆಲ ಸಮಯದ ಹಿಂದೆ ತನ್ನ ಬಾಯ್‌ಫ್ರೆಂಡ್‌ಗೆ ಖಾಸಗಿ … Read more

ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು : ಸ್ವಿಮ್ಮಿಂಗ್ ಪೂಲ್ನಲ್ಲಿ ತೇಲುತ್ತಿತ್ತು ಮೃತದೇಹ

ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯೋರ್ವರು ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬೆಟ್ಟೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ(32) ಮೃತ ದುರ್ದೈವಿಯಾಗಿದ್ದು, ಮನೆಯ ಸ್ವಿಮ್ಮಿಂಗ್ ಪೂಲ್ನಲ್ಲಿ ಮೃತದೇಹ ಪತ್ತೆಯಾಗಿದೆ. ಪತಿ ನಂಜೇಗೌಡನೇ ಆಕೆಯನ್ನು ಕೊಲೆ ಮಾಡಿರೋದಾಗಿ ಪ್ರತಿಭಾ ಕುಟುಂಬಸ್ಥರು ಆರೋಪಿಸಿದ್ದರೆ, ಅನಾರೋಗ್ಯದ ಹಿನ್ನೆಲೆ ಆಕೆಯೇ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ನಂಜೇಗೌಡ ತಿಳಿಸಿದ್ದಾರೆ. ಪರಸ್ಪರ ಪ್ರೀತಿಸಿದ್ದ ನಂಜೇಗೌಡ ಮತ್ತು ಪ್ರತಿಭಾ ಹದಿನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ರು. ಇಬ್ಬರಿಗೂ ಮುದ್ದಾದ ಎರಡು ಗಂಡು ಮಕ್ಕಳು ಕೂಡ ಇದ್ದಾರೆ. ಇನ್ನು ನಂಜೇಗೌಡ ಕೋಡಿಗಳ್ಳಿ … Read more

Horoscope Today : 26 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಇಂದು ನಿಮ್ಮ ಗ್ರಹಗತಿಗಳು ಮಿನುಗುತ್ತಿರುತ್ತವೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮನಸ್ಥಿತಿಯು ಉಲ್ಲಾಸದಿಂದಿರುತ್ತದೆ ಮತ್ತು ಇಂದು ನೀವು ನಿಮ್ಮ ಆಪ್ತರೊಂದಿಗೆ ಸಾಮಾಜಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಧನಲಾಭದ ಯೋಗವೂ ಇದೆ. ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಲಿರುವುದರಿಂದ ಅತೀ ಸಂಭ್ರಮ ಮತ್ತು ಉತ್ಸಾಹದಿಂದಿರುತ್ತೀರಿ. ಏನೇ ಆದರೂ, ಅತೀ ಉತ್ಸಾಹದಿಂದಾಗಿ ನೀವು ಕೈಗೊಳ್ಳುವ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಗುವುದಿಲ್ಲ. ಆದ್ದರಿಂದ ಎಚ್ಚರಿಕೆಯಿಂದಿರಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರಲು ನೀವು ಕೈಗೊಳ್ಳುವ ಕ್ರಮಗಳು ನಿಮ್ಮ ದಿನವನ್ನು ಇನ್ನಷ್ಟು ಶಾಂತಿಯಿಂದಿರಿಸಬಹುದು. ವೃಷಭ … Read more