ಅನೈತಿಕ ಸಂಬಂಧಕ್ಕೆ ಪತಿ ಬಲಿ : ಪ್ರಿಯಕರನೊಂದಿಗೆ ಜೈಲು ಸೇರಿದ ಪತ್ನಿ.!

ಶಿವಮೊಗ್ಗ : ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದ್ದ ನಿಗೂಢ ಕೊ# ಪ್ರಕರಣವನ್ನು ಭೇದಿಸುವಲ್ಲಿ ಸಾಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕೌಟಂಬಿಕ ಕಲಹ ಎಂದು ಬಿಂಬಿಸಿ ಮುಚ್ಚಿಹಾಕಲು ಯತ್ನಿಸಲಾಗಿದ್ದ ಈ ಕೊಲೆಯ ಹಿಂದೆ ಅನೈತಿಕ ಸಂಬಂಧದ ಕರಾಳ ಮುಖ ಬಯಲಾಗಿದ್ದು, ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರದ ಜೆ.ಪಿ. ನಗರದ ನಿವಾಸಿ ಪರಶುರಾಮ್ (40) ಕೊಲೆಯಾದ ದುರ್ದೈವಿ. ಈತನ ಪತ್ನಿ ಚೈತ್ರಾ ಹಾಗೂ ಆಕೆಯ ಪ್ರಿಯಕರ ಮಂಜು (ಯಾನೆ ಟೀಪುಡಿ ಮಂಜು) ಸದ್ಯ ಕಂಬಿ … Read more

ಮಧುಮೇಹ ಕೇವಲ ರಕ್ತಕ್ಕೆ ಮಾತ್ರವಲ್ಲ, ಬೆಡ್‌ರೂಮ್‌ಗೂ ಶತ್ರು! ಲೈಂಗಿಕ ಜೀವನದ ಮೇಲಾಗುವ ಸದ್ದಿಲ್ಲದ ದಾಳಿ

ಮಧುಮೇಹ ಅಥವಾ ಡಯಾಬಿಟಿಸ್ (Diabetes) ಎಂದ ತಕ್ಷಣ ನಮ್ಮ ಗಮನಕ್ಕೆ ಬರುವುದು ಕಿಡ್ನಿ ಸಮಸ್ಯೆ, ಹೃದಯಾಘಾತ, ಕಣ್ಣಿನ ದೃಷ್ಟಿ ಮಂದವಾಗುವುದು ಅಥವಾ ಹಾರ್ಮೋನ್ ಏರುಪೇರುಗಳು. ಆದರೆ, ಮಧುಮೇಹವು ದಂಪತಿಗಳ ಅತ್ಯಂತ ವೈಯಕ್ತಿಕವಾದ ಲೈಂಗಿಕ ಜೀವನವನ್ನು (Sex Life) ಸದ್ದಿಲ್ಲದೆ ಹೇಗೆ ನಾಶಪಡಿಸುತ್ತಿದೆ ಎಂಬ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡುವುದಿಲ್ಲ.ಭಾರತವು ಇಂದು ‘ವಿಶ್ವದ ಮಧುಮೇಹದ ರಾಜಧಾನಿ’ ಎಂದು ಕರೆಸಿಕೊಳ್ಳುತ್ತಿದೆ, ಇದರ ಜೊತೆಯಲ್ಲೇ ಲಕ್ಷಾಂತರ ದಂಪತಿಗಳ ಲೈಂಗಿಕ ಆರೋಗ್ಯವೂ ಈ ಕಾಯಿಲೆಯಿಂದಾಗಿ ಹದಗೆಡುತ್ತಿದೆ. ಸಾಮಾನ್ಯವಾಗಿ ಪುರುಷರು ತಮಗೆ ಎದುರಾಗುವ ಲೈಂಗಿಕ … Read more

ಪುರುಷರಲ್ಲಿ ಮೂಗು ಹಾಗೂ ಕಿವಿಗಳಲ್ಲಿ ಕೂದಲು ಬೆಳೆಯಲು ಕಾರಣವೇನು? ಇದನ್ನು ತೆಗೆಯಬಹುದೇ.?

ಅನೇಕ ಪುರುಷರು ತಮ್ಮ ಮೂಗು ಮತ್ತು ಕಿವಿಗಳಲ್ಲಿ ಅತಿಯಾದ ಕೂದಲು ಬೆಳವಣಿಗೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಪರಿಣಾಮವಾಗಿ, ಪುರುಷರು ಆಗಾಗ್ಗೆ ಈ ಕೂದಲನ್ನು ತೆಗೆದುಹಾಕಲು ನಿರಂತರವಾಗಿ ಪ್ರಯತ್ನಿಸುತ್ತಾರೆ. ಅನೇಕ ಪುರುಷರಲ್ಲಿ ಮೂಗು ಹಾಗೂ ಕಿವಿಯಲ್ಲಿ ಕೂದಲಿನ ಬೆಳವಣಿಗೆಯಾಗಿರುತ್ತದೆ. ಇದು ಅಸಹ್ಯ ಕಾಣೋದ್ರಿಂದ ಅವರು ಹೆಚ್ಚಾಗಿ ಅದನ್ನು ಕೀಳಲು ಪ್ರಯತ್ನಿಸುತ್ತಾರೆ. ಆದರೆ ಪುರುಷರ ಮೂಗು ಮತ್ತು ಕಿವಿಗಳಲ್ಲಿ ಕೂದಲು ಏಕೆ ಬೆಳೆಯುತ್ತದೆ ಎನ್ನುವುದು ನಿಮಗೆ ಗೊತ್ತಾ?. ಮೂಗು ಮತ್ತು ಕಿವಿಯ ಕೂದಲು ಮಾನವ ದೇಹದಲ್ಲಿ ಪ್ರಮುಖ ರಕ್ಷಣಾತ್ಮಕ ಪಾತ್ರವನ್ನು ವಹಿಸುತ್ತದೆ … Read more

ಕ್ರೈಮ್ ಶೋ ನೋಡಿ ತಂದೆ ಸೇರಿ ನಾಲ್ವರನ್ನು ಕೊಲೆ ಮಾಡಿ ಸುಟ್ಟ ಅಪ್ರಾಪ್ತ ಮಗ!

ಮೇಲ್ನೋಟಕ್ಕೆ ಅದು ಕಾರು ಅಪಘಾತದಂತೆ (Crime) ಕಾಣಿಸಿತ್ತು. ಬೆಂಕಿ ಬಿದ್ದ ಕಾರಿನೊಳಗೆ ನಾಲ್ಕು ಹೆಣಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಇಡೀ ರಾಜಸ್ಥಾನವೇ (Rajasthan) ನಡುಗುವಂತಹ ಭೀಕರ ಕೊಲೆ ಕಥೆ ಹೊರಬಂದಿದೆ. ಕೇವಲ 17 ವರ್ಷದ ಮಗನೇ ತನ್ನ ತಂದೆ ಸೇರಿದಂತೆ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಅಜ್ಮೀರ್ ಜಿಲ್ಲೆಯ ಶ್ರೀರಾಮಪುರ ಗ್ರಾಮದ ಮಾಜಿ ಸರ್ಪಂಚ್ ರಾಮ್ ಸಿಂಗ್ ಚೌಧರಿ, ಅವರ ಎರಡನೇ ಪತ್ನಿ ಸುಗ್ಯಾನ್, ತಾಯಿ ಪುಸಿ ದೇವಿ ಮತ್ತು ಸೊಸೆ … Read more

ಅತಿಯಾದ ಲೈಂಗಿಕ ಕ್ರಿಯೆಯಿಂದ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗುತ್ತಾ.? ತಜ್ಞರ ಮಾಹಿತಿ ಇಲ್ಲಿದೆ

ಇಂದಿನ ಆಧುನಿಕ ಜೀವನಶೈಲಿ, ತಡವಾದ ಮದುವೆ, ಒತ್ತಡದ ಉದ್ಯೋಗ ಹಾಗೂ ಬದಲಾದ ಆಹಾರ ಪದ್ಧತಿಯಿಂದಾಗಿ ಯುವ ಪೀಳಿಗೆಯಲ್ಲಿ (Millennials) ಬಂಜೆತನ ಅಥವಾ ಗರ್ಭಧಾರಣೆಯ ಸಮಸ್ಯೆಗಳು (Fertility Issues) ಗಣನೀಯವಾಗಿ ಹೆಚ್ಚುತ್ತಿವೆ. ಮಗುವನ್ನು ಹೊಂದಲು ಬಯಸುವ ದಂಪತಿಗಳು ಹೆಚ್ಚಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಬೇಗನೆ ಗರ್ಭಧರಿಸಬಹುದು ಎಂದು ಭಾವಿಸುತ್ತಾರೆ. ಆದರೆ, ಅತಿಯಾದ ಲೈಂಗಿಕ ಕ್ರಿಯೆಯು ವೀರ್ಯಾಣುಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಕುಗ್ಗಿಸಿ, ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಸಂತಾನೋತ್ಪತ್ತಿ ತಜ್ಞರು. ಗರ್ಭಧಾರಣೆಗೆ ಯೋಜಿಸುತ್ತಿರುವ ಇಂದಿನ ಯುವ ದಂಪತಿಗಳು ತಿಳಿದುಕೊಳ್ಳಲೇಬೇಕಾದ … Read more

ಎಚ್ಚರ! ನಿಮ್ಮ ಜೀವನಶೈಲಿ ನಿಮ್ಮ ಹೃದಯವನ್ನು ನಿಮಗಿಂತ ಮುಂಚಿತವಾಗಿಯೇ ಮುದುಕರನ್ನಾಗಿಸಬಹುದು!

ನಮ್ಮ ವಯಸ್ಸನ್ನು ನಾವು ಕ್ಯಾಲೆಂಡರ್ ದಿನಗಳ ಆಧಾರದ ಮೇಲೆ (Chronological Age) ಲೆಕ್ಕ ಹಾಕುತ್ತೇವೆ. ಆದರೆ ನಮ್ಮ ದೇಹದ ಒಳಗಿರುವ ಪ್ರಮುಖ ಅಂಗಗಳು, ವಿಶೇಷವಾಗಿ ಹೃದಯ, ನಮ್ಮ ನಿಜವಾದ ವಯಸ್ಸಿಗಿಂತ ವೇಗವಾಗಿ ವಯಸ್ಸಾಗುತ್ತಿರಬಹುದು (Biological Age)! “ನೀವು ನಿಮ್ಮ ದೇಹವನ್ನು ಯಾವ ಪರಿಸರದಲ್ಲಿ ಇಡುತ್ತೀರೋ, ಅದೇ ಪರಿಸರದಲ್ಲಿ ನಿಮ್ಮ ಹೃದಯವೂ ವಯಸ್ಸಾಗುತ್ತದೆ” ಎಂದು ಪ್ರಮುಖ ಹೃದ್ರೋಗ ತಜ್ಞರು ಎಚ್ಚರಿಸಿದ್ದಾರೆ. ಅಂದರೆ, ನಿಮ್ಮ ತಪ್ಪು ಜೀವನಶೈಲಿ ಮತ್ತು ಕೆಟ್ಟ ಹವ್ಯಾಸಗಳು ನಿಮ್ಮ ಹೃದಯದ ವಯಸ್ಸನ್ನು ನಿಮಗಿಂತ ಹತ್ತಾರು ವರ್ಷ … Read more

ಎಚ್ಚರ! ನಿಮ್ಮ ಹೃದಯ ದುರ್ಬಲವಾಗುತ್ತಿರುವುದನ್ನು ಸೂಚಿಸುವ 10 ಆರಂಭಿಕ ಲಕ್ಷಣಗಳು.!

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ, ತಪ್ಪು ಆಹಾರ ಪದ್ಧತಿ ಮತ್ತು ಅತಿಯಾದ ಒತ್ತಡದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಹೃದಯವು ದೇಹದ ಪ್ರಮುಖ ಅಂಗವಾಗಿದ್ದು, ಅದು ದುರ್ಬಲಗೊಳ್ಳಲು ಪ್ರಾರಂಭಿಸಿದಾಗ ದೇಹವು ಕೆಲವು ಆರಂಭಿಕ ಮುನ್ಸೂಚನೆಗಳನ್ನು ನೀಡುತ್ತದೆ. ಇವುಗಳನ್ನು ಕಡೆಗಣಿಸದೆ ಸೂಕ್ತ ಸಮಯದಲ್ಲಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಜೀವ ರಕ್ಷಕವಾಗಬಲ್ಲದು. ಹೃದಯವು ದುರ್ಬಲವಾಗುತ್ತಿರುವುದನ್ನು ತೋರ್ಪಡಿಸುವ 10 ಪ್ರಮುಖ ಆರಂಭಿಕ ಲಕ್ಷಣಗಳು ಇಲ್ಲಿವೆ: 1. ಅತಿಯಾದ ಆಯಾಸ ಮತ್ತು ಸುಸ್ತು (Extreme Fatigue)ಯಾವುದೇ ಕಠಿಣ ಕೆಲಸ ಮಾಡದಿದ್ದರೂ ಸದಾ … Read more

ಮುಸ್ಲಿಂ ಮಹಿಳೆಯಿಂದ ದಸರಾ ಉದ್ಘಾಟನೆ ಮಾಡಿಸಿದ್ದಕ್ಕೆ ಸಿದ್ದು ಮೇಲೆ ಚಾಮುಂಡೇಶ್ವರಿಯ ಸೇಡು: ಅದಕ್ಕೆ ಸಿಎಂ ಪೋಸ್ಟ್ ಹೊಗೆಯಂತೆ!

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಮಹತ್ವದ ದಿನವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಬಿರುಗಾಳಿಯೇ ಬೀಸಿತು. ಹಲವು ದಿನಗಳಿಂದ ವದಂತಿ ಎಂದೇ ಕರೆಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರ ಸತ್ಯವಾಗಿದ್ದು, ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ್ಯವನ್ನು ದೇವರಾಜು ಅರಸು ಬಳಿಕ ಅತಿಹೆಚ್ಚು ಕಾಲ ಆಳಿದ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆ ಎಂದು ಘೋಷಣೆ ಮಾಡಿದರು. ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಅವರ ಸಿದ್ಧಾಂತ ಹಾಗೂ ತತ್ವಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡ ಸಾಮಾನ್ಯ ಜನರು ಕೋಮುಗಲಭೆ … Read more

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು : ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಹೊರಹಾಕಿರುವ ಮಾತುಗಳು ಕೇವಲ ರಾಜಕೀಯ ಹೇಳಿಕೆಗಳಲ್ಲ, ಅವು ಹತ್ತಾರು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಒಬ್ಬ ನಾಯಕನ ಅಂತರಾತ್ಮದ ಆಕ್ರೋಶ ಮತ್ತು ನೋವಿನ ಸಂಕೇತಗಳಾಗಿವೆ. ಕುಟುಂಬದ ಮೇಲಿನ ದಾಳಿಗೆ ಸಿದ್ದರಾಮಯ್ಯ ಕಣ್ಣೀರು ನಾನು ಮಾತ್ರವಲ್ಲ, ನನ್ನ ಕುಟುಂಬ ಕೂಡ ರಾಜಕೀಯ ದ್ವೇಷಕ್ಕೆ ಬಲಿಯಾಗಿದೆ ಎಂದು ಸಿದ್ದರಾಮಯ್ಯ ಅತ್ಯಂತ ಬೇಸರದಿಂದ ಹೇಳಿಕೊಂಡಿದ್ದಾರೆ. ರಾಜಕೀಯದ ಗಂಧ ಗಾಳಿಯೇ ಇಲ್ಲದ, ಕೇವಲ ಸಂಸಾರ ಮತ್ತು ಕುಟುಂಬದ ಪೋಷಣೆಯಲ್ಲಿ ತೊಡಗಿದ್ದ ತಮ್ಮ ಪತ್ನಿಯ … Read more

ನಿಜವಾಯ್ತು ಕೋಡಿಶ್ರೀ ಭವಿಷ್ಯ, ಸಿದ್ದರಾಮಯ್ಯ ಬಗ್ಗೆ ಸ್ವಾಮೀಜಿ ಹೇಳಿದ್ದೇನು.?

ಹೈಕಮಾಂಡ್ ಆದೇಶಕ್ಕೆ ಗೌರವ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕರ್ನಾಟಕ ರಾಜಕೀಯದಲ್ಲಿ ಹೊಸ ಆಯಾಮ ಸೃಷ್ಟಿಸಿದೆ. ನಾಯಕರ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿರುವ ಸಿದ್ದರಾಮಯ್ಯ, ದೆಹಲಿಯಲ್ಲಿ ಎಐಸಿಸಿ ಮುಖಂಡರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದ್ದಾರೆ. ಈ ಪ್ರಮುಖ ರಾಜಕೀಯ ಸ್ಥಿತ್ಯಂತರದ ಬೆನ್ನಲ್ಲೇ, ಕೋಡಿಮಠದ ಶ್ರೀಗಳು ರಾಜ್ಯದ (Kodi Mutt Shree) ಸಿಎಂ ಕುರ್ಚಿ ಬದಲಾವಣೆ ಕುರಿತು ಈ ಹಿಂದೆ ನುಡಿದಿದ್ದ ಭವಿಷ್ಯ ಈಗ ಅಕ್ಷರಶಃ ನಿಜವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ. … Read more