ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಕುಮಾರಸ್ವಾಮಿ ಅವರ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ಮಾಡಿದ್ದು, ಸಿದ್ದರಾಮಯ್ಯನವರ ಸಾಧನೆಯನ್ನು ಉಲ್ಲೇಖಿಸಿ ಭರ್ಜರಿಯಾಗಿ ಟಾಂಗ್ ಕೊಟ್ಟಿದ್ದಾರೆ.ಬೆಂಗಳೂರು: ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಕುಮಾರಸ್ವಾಮಿ ಅವರ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ಮಾಡಿದ್ದು, ಸಿದ್ದರಾಮಯ್ಯನವರ ಸಾಧನೆಯನ್ನು ಉಲ್ಲೇಖಿಸಿ ಭರ್ಜರಿಯಾಗಿ ಟಾಂಗ್ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರದ ಕುರಿತು ಟೀಕೆ ಮಾಡಿದ ಕುಮಾರಸ್ವಾಮಿ ಕುರಿತು ಮಾತನಾಡಿದ ಜಮೀರ್ ಅಹ್ಮದ್ ಕಾಂಗ್ರೆಸ್ ಸರ್ಕಾರ ಈ ಹಿಂದೆ ಅಧಿಕಾರದಲ್ಲಿದ್ದಾಗ ಏನೆಲ್ಲ ಕೆಲಸ ಮಾಡಿದೆ ಎಂಬುದು ಗೊತ್ತಿದೆ, ಹಾಗೆಯೇ ಈ ಬಾರಿಯೂ ಅಧಿಕಾರದಲ್ಲಿದ್ದು ಜನಪರ ಕೆಲಸಗಳನ್ನು ಮಾಡಿ, ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತೇವೆ ಎಂದರು.
ಅಲ್ಲದೇ ನಾನೂ ಸಹ ಕುಮಾರಸ್ವಾಮಿ ಜೊತೆ ಜೆಡಿಎಸ್ ಪಕ್ಷದಲ್ಲಿದ್ದವನು, ಕುಮಾರಸ್ವಾಮಿ ಯಾವಾಗ ನೋಡಿದ್ರೂ ನಾವೇ ಅಂತಾನೇ ಇರುತ್ತಾರೆ, ಸಾಧ್ಯನಾ ಅದು ಎಂದು ಟೀಕಿಸಿದರು. ಅಲ್ಲದೇ 2004ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಣಕ್ಕಿಳಿದಿದ್ದ ಜೆಡಿಎಸ್ 58 ಸೀಟ್ಗಳನ್ನು ಗೆದ್ದಿದ್ದನ್ನು ನೆನಪಿಸಿದರು. ಸಿದ್ದರಾಮಯ್ಯ ಇದ್ದಾಗ ಜೆಡಿಎಸ್ 58 ಸೀಟ್ ಗೆದ್ದಿತ್ತು. ಆ ಬಳಿಕ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಕೇವಲ 28ಕ್ಕೆ ಬಂದರು. ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗ ಗೆದ್ದಿದ್ದ 58 ಸೀಟ್ಗಳನ್ನು ಕುಮಾರಸ್ವಾಮಿಗೆ ಮತ್ತೆ ಮುಟ್ಟಾಲಾಗಲೇ ಇಲ್ಲ. ಈಗ ನೋಡಿದ್ರೆ 18ಕ್ಕೆ ಬಂದಿದ್ದಾರೆ ಎಂದು ನಕ್ಕರು.
ಇನ್ಮುಂದೆ ಕಾಲ್ತುಳಿತ ಘಟನೆ ನಡೆದರೆ 3 ವರ್ಷ ಜೈಲು ಫಿಕ್ಸ್ : ಹೊಸ ಕಾನೂನು ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ
ಅಲ್ಲದೇ 2023ರ ಚುನಾವಣೆಯಲ್ಲಿ 130ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದಿದ್ದೆ, ಅದರಂತೆ 136 ಸ್ಥಾನ ಗೆದ್ದೆವು, ಉಪಚುನಾವಣೆಯಲ್ಲಿ ಇನ್ನೂ ಮೂರು ಸ್ಥಾನ ಗೆದ್ದು ಒಟ್ಟು 139 ಸ್ಥಾನಗಳನ್ನು ಗೆದ್ದಂತಾಯಿತು. ಉಪ ಚುನಾವಣೆಯಲ್ಲೇಕೆ ಬಿಜೆಪಿ ಗೆಲ್ಲಲಿಲ್ಲ. ಹೊಸಪೇಟೆಯಲ್ಲಿ ಗ್ಯಾರಂಟಿ ಸಮಾವೇಶ ನಡೆಸಿದೆವು, ಒಂದ ಲಕ್ಷ ಸೇರಬಹುದು ಎಂದುಕೊಂಡಿದ್ದೆ, ಅಷ್ಟು ಜನಸಾಗರ ಏಕೆ ಬಂತು, ಆಡಳಿತ ಇಷ್ಟವಾಗಿದ್ದಕ್ಕೆ ಬಂದಿದ್ದಾರೆ ಎಂದು ಜಮೀರ್ ಕಾಂಗ್ರೆಸ್ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.