Petrol : ನಮಸ್ಕಾರ ಸ್ನೇಹಿತರೇ, ಇಂದು ನಮ್ಮ ದೇಶದಲ್ಲಿ ಪೆಟ್ರೋಲ್ ವಾಹನಗಳ ಬಳಕೆಯೇ ಹೆಚ್ಚು. ಎಲೆಕ್ಟ್ರಿಕ್ ವಾಹನಗಳ ಆವಿಷ್ಕಾರಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದೇ ಆದರೂ ಪೆಟ್ರೋಲ್ ಗಾಡಿಗಳ ಚಾಲನೆಯೇ ಅಧಿಕ ಸಂಖ್ಯೆಯಲ್ಲಿದೆ. ಇಂತಹ ವಾಹನಗಳ ಸಂಚಾರ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಇಂಧನ ಬೆಲೆ ಗಗನಕ್ಕೇರಿದ್ದು, ವಾಹನ ಸವಾರರ ಅಳಲು ಕೂಡ ಮುಗಿಲು ಮುಟ್ಟಿದೆ. ಸದ್ಯ ಬೆಲೆ ಇಳಿಕೆ ದೂರದ ಮಾತಾಗಿದೆ. ಹೀಗಿರುವಾಗ ಪೆಟ್ರೋಲ್ (Petrol) ಬೈಕ್ ಮತ್ತು ಕಾರುಗಳನ್ನು ಚಲಾಯಿಸುವ ಬಹುತೇಕರು, ತಮ್ಮ ವಾಹನದ ಟ್ಯಾಂಕ್ ಖಾಲಿ ಆಗುವವರೆಗೂ ಪೆಟ್ರೋಲ್ ಹಾಕಿಸುವ ಆಲೋಚನೆ ಮಾಡುವುದಿಲ್ಲ. ಇದೇ ರೀತಿ ಒಂದಷ್ಟು ತಪ್ಪುಗಳನ್ನು ಮಾಡುವ ಸವಾರರು ಈ ಮಾಹಿತಿಯನ್ನು ತಪ್ಪದೇ ತಿಳಿಯುವುದು ಒಳಿತು.
ಎಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು.?
ಪೆಟ್ರೋಲ್ ಇಲ್ಲ ಎಂದರೆ ನಮ್ಮ ವಾಹನಗಳು ಒಂದು ಹೆಜ್ಜೆಯೂ ಮುಂದೆ ಹೋಗಲ್ಲ. ಇದು ಗಾಡಿ ಓಡಿಸುವ ಪ್ರತಿಯೊಬ್ಬರಿಗೂ ಗೊತ್ತಿರುವ ಸಾಮಾನ್ಯ ಸಂಗತಿಯೇ. ಪೆಟ್ರೋಲ್ ಹಾಕಿಸಿಕೊಳ್ಳುವಾಗ ನಾವು ಎಷ್ಟು ಜವಾಬ್ದಾರಿ ವಹಿಸಬೇಕು? ಏನು ತಪ್ಪು ಮಾಡಿದರೆ, ವಾಹನದ ಇಂಜಿನ್ಗೆ ಎಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು? ಇದರಿಂದ ವಾಹನದ ಬಾಳಿಕೆಗೆ ಯಾವ ರೀತಿಯ ಹೊಡೆತ ಎದುರಾಗಬಹುದು ಎಂಬ ಸೂಕ್ಷ್ಮತೆ ವಾಹನ ಬಳಕೆದಾರರಿಗೆ ತಿಳಿದರಲೇ ಬೇಕಾದ ವಿಷಯ. ಆದರೆ, ಇಂತಹ ವಿಚಾರಗಳನ್ನೇ ಮರೆಯುವ ವಾಹನ ಮಾಲೀಕರು, ಪದೇ ಪದೇ ಈ ತಪ್ಪುಗಳನ್ನು ಮಾಡಿ, ತಮ್ಮ ದುಬಾರಿ ವಾಹನಗಳ ಆಯಾಸ್ಸನ್ನು ತಾವೇ ತಮ್ಮ ಕೈಯಾರೆ ಕಡಿತಗೊಳಿಸುತ್ತಾರೆ.
ಈ ತಪ್ಪುಗಳು ಖಂಡಿತವಾಗಿಯೂ ನಿಮ್ಮ ಕಾರು ಮತ್ತು ಬೈಕ್ ಇಂಜಿನ್ ಮೇಲೆ ಪರಿಣಾಮ ಬೀರುತ್ತವೆ. ಎಷ್ಟೋ ಜನ ಪೆಟ್ರೋಲ್ ವಿಚಾರದಲ್ಲಿ ತಮಗೆ ಅರಿವಿಲ್ಲದೇ ಬಹಳ ನಿರ್ಲಕ್ಷ್ಯ ವಹಿಸುತ್ತಾರೆ. ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗಿದೆಯೇ? ನೀವು ಪೆಟ್ರೋಲ್ ಬಂಕ್ಗೆ ಹೋಗಿದ್ದೀರಾ? ಪೆಟ್ರೋಲ್ ಹಾಕಿಸುವ ಸೂಕ್ತ ಕ್ರಮ ಹೇಗೆ? ನಾವು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬುದರ ಬಗ್ಗೆ ಅದರ ಕೆಳಭಾಗಕ್ಕೆ ಹೋಗೋಣ.
ಪೆಟ್ರೋಲ್-ಡೀಸೆಲ್ ಟ್ಯಾಂಕ್ ಕೊಳಕು
ಇಂಜಿನ್ ವಾಹನದ ಹೃದಯವಿದ್ದಂತೆ. ಆದ್ದರಿಂದ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ನಮ್ಮಲ್ಲಿ ಹೆಚ್ಚಿನವರು ಪೆಟ್ರೋಲ್ ಟ್ಯಾಂಕ್ ಸಂಪೂರ್ಣವಾಗಿ ಖಾಲಿಯಾಗುವವರೆಗೆ ಪೆಟ್ರೋಲ್ ಹಾಕಿಸುವ ಮನಸ್ಸು ಮಾಡುವುದೇ ಇಲ್ಲ. ಆದರೆ ಪೆಟ್ರೋಲ್ ಟ್ಯಾಂಕ್ ಖಾಲಿ ಇಡುವುದು ತುಂಬಾ ಅಪಾಯಕಾರಿ. ಕಾರಣ, ಪೆಟ್ರೋಲ್-ಡೀಸೆಲ್ ಟ್ಯಾಂಕ್ ಕೊಳಕು. ಪೆಟ್ರೋಲ್ ಖಾಲಿಯಾದ ನಂತರ, ಎಲ್ಲಾ ತ್ಯಾಜ್ಯ ವಸ್ತುಗಳು ವಾಹನಕ್ಕೆ ಪೆಟ್ರೋಲ್ ಪೂರೈಸುವ ಪಂಪ್ ಮೂಲಕ ಇಂಜಿನ್ ಪಾಲಾಗುತ್ತವೆ. ಆ ತ್ಯಾಜ್ಯವು ಫಿಲ್ಟರ್ ಅನ್ನು ಮುಚ್ಚುತ್ತದೆ. ಇದರಿಂದ ವಾಹನದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಈ ಕಾರಣದಿಂದಾಗಿ ವಾಹನವನ್ನು ಸರಿಯಾಗಿ ನಿಯಂತ್ರಿಸಲು ಆಗುವುದಿಲ್ಲ.
ಕಳಪೆ ಗುಣಮಟ್ಟದ ಇಂಧನ
ಒಮ್ಮೊಮ್ಮೆ ಇದರಿಂದ ಅಪಘಾತ ಸಂಭವವು ಅಧಿಕ. ಹಾಗಾಗಿ ಖಂಡಿತ ಈ ಬಗ್ಗೆ ವಾಹನ ಸವಾರರು ಜಾಗರೂಕರಾಗಿರಿ. ಯಾವತ್ತೂ ಈ ರೀತಿ ಪೆಟ್ರೋಲ್ ಖಾಲಿಯಾಗುವವರೆಗೂ ಕಾದು, ತುಂಬಿಸಬೇಡಿ. ಇದು ಅತ್ಯಂತ ಮುಖ್ಯವಾದ ಸಂಗತಿ. ಅದೇ ಇಂಧನ ಗುಣಮಟ್ಟ. ಕೆಲವರು ಪೆಟ್ರೋಲ್ ಗುಣಮಟ್ಟದಿಂದ ದೂರ ಉಳಿದಿರುವ ಬಂಕ್ಗಳಿಂದ ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಅಂತಹ ಕಳಪೆ ಗುಣಮಟ್ಟದ ಪೆಟ್ರೋಲ್ ವಾಹನಕ್ಕೆ ಒಳ್ಳೆಯದಲ್ಲ. ಪೆಟ್ರೋಲ್ ಉತ್ತಮ ಗುಣಮಟ್ಟದಲ್ಲಿಲ್ಲದಿದ್ದರೆ ಅದು ಇಂಜಿನ್ನಲ್ಲಿ ಸಂಗ್ರಹವಾಗುತ್ತದೆ. ಆಗ ವಾಹನದ ಕಾರ್ಯಕ್ಷಮತೆ ಉತ್ತಮವಾಗಿರುವುದಿಲ್ಲ. ಹಾಗಾಗಿ ಯಾವುದೇ ಸಮಯದಲ್ಲಿ ವಾಹನಕ್ಕೆ ಗುಣಮಟ್ಟದ ಪೆಟ್ರೋಲ್ ಬಳಸುವುದು ಒಳಿತು.
ಇಂಜಿನ್ ಕಾರ್ಯಕ್ಷಮತೆ ಕುಸಿಯುತ್ತದೆ
ಪೆಟ್ರೋಲ್ ಖಾಲಿಯಾದ ನಂತರ, ಇಂಧನ ಟ್ಯಾಂಕ್ನ ಕ್ಯಾಪ್ ಅನ್ನು ಸರಿಯಾಗಿ ಮುಚ್ಚಲಾಗಿದೆಯೇ? ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಇಲ್ಲದಿದ್ದರೆ ಗಾಳಿ ಮತ್ತು ತೇವಾಂಶವು ಟ್ಯಾಂಕಿನೊಳಗೆ ಹೋಗುತ್ತದೆ. ಈ ಕಾರಣದಿಂದಾಗಿ, ನೀರಿನ ಆವಿಯು ಪೆಟ್ರೋಲ್ನೊಂದಿಗೆ ಮಿಕ್ಸ್ ಆಗಿ ಪೆಟ್ರೋಲ್ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ. ಇದು ವಾಹನದ ಎಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಕೆಲವರು ಪೆಟ್ರೋಲ್ ಟ್ಯಾಂಕ್ ಸದಾ ತುಂಬಿರಲಿ ಎಂದು ಪಂಪ್ನಲ್ಲಿ ಪೆಟ್ರೋಲ್ ತುಂಬಿಸುತ್ತಲೇ ಇರುತ್ತಾರೆ. ಇದು ಅತಿಯಾದ ಭರ್ತಿಗೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಇಂಧನ ಪೈಪ್ನಲ್ಲಿ ಸೋರಿಕೆಯಾಗುವ ಅಪಾಯವಿರಲಿದೆ. ಇದರಿಂದ ಇಂಜಿನ್ ಹಾಳಾಗುತ್ತದೆ ಎನ್ನುತ್ತಾರೆ ಟೆಕ್ ತಜ್ಞರು.
ಮೈಲೇಜ್ ಮತ್ತು ಇಂಜಿನ್
ಇನ್ನು ಕೆಲವರು ಪೆಟ್ರೋಲ್ ತುಂಬಿಸುವಾಗ ವಾಹನದ ಇಂಜಿನ್ ಅನ್ನು ಆನ್ನಲ್ಲಿ ಇಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದು ತುಂಬಾ ಅಪಾಯಕಾರಿ. ಇದು ಮೈಲೇಜ್ ಮತ್ತು ಇಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಕೆಲವೊಮ್ಮೆ ಬೆಂಕಿ ಅವಘಡ ಸಂಭವಿಸುವ ಅಪಾಯವೂ ಇರುತ್ತದೆ. ಆದ್ದರಿಂದ ಎಂದಿಗೂ ಇಂಜಿನ್ ಅನ್ನು ಆನ್ನಲ್ಲಿಟ್ಟು, ಪೆಟ್ರೋಲ್ ಹಾಕಿಸಬೇಡಿ. ನಿಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಈ ವಿಷಯಗಳನ್ನು ತಪ್ಪದೆ ನೆನಪಿನಲ್ಲಿಡಿ.
- ಚಪ್ಪಲಿ ರಾಜಕೀಯ..! ಸಿದ್ದರಾಮಯ್ಯ ಎದುರು ಕಣ್ಣೀರು ಹಾಕಿದ ಶಾಸಕ ಪ್ರದೀಪ್ ಈಶ್ವರ್
- ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?: ಜಿಬಿಎ ಸಭೆಯಲ್ಲಿ ಅಧಿಕಾರಿಗಳ ಮೇಲೆ ಸಚಿವ ಕೃಷ್ಣಭೈರೇಗೌಡ ಗರಂ
- ಆರೆಸ್ಸೆಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ; ಪ್ರಿಯಾಂಕ್ ಖರ್ಗೆ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
- ಕೇವಲ 40 ನಿಮಿಷದಲ್ಲೇ ಕೂದಲು ಉದುರುವ ಸಮಸ್ಯೆಗೆ ಮುಕ್ತಿ ನೀಡುತ್ತೆ ಈ ಎಲೆ..! ಇಂದೇ ಟ್ರೈ ಮಾಡಿ
- ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಒಂದೆರಡು ಬಾರಿ ಡ್ರಿಂಕ್ಸ್ ಮಾಡಿದರೂ, ಲಿವರ್ ಗೆ ಸಮಸ್ಯೆ ಆಗುತ್ತಾ.?
- ಯಾರ ಮನೆ ಬಾಗಿಲಿಗೆ ಯಾರು ಹೋಗಿದ್ದರು ಎಂಬುದು ನನಗೂ ಗೊತ್ತು: ಎಚ್ಡಿಕೆ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು!
- ‘ವಿಜಯೇಂದ್ರನನ್ನು ಒದ್ದು ಬಿಸಾಕಿ’ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಲೀಕ್, ನೋ ಕಮೆಂಟ್ಸ್ ಎಂದ ಡಿವಿಎಸ್!!
- ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ
- ‘ನಮ್ಮ ರಾಜಕೀಯ ಮುಗಿಯಿತು.. ಚುನಾವಣಾ ರಾಜಕೀಯದ ಅಂತ್ಯದ ಬಗ್ಗೆ ಮೈಸೂರಲ್ಲಿ ಮುನ್ಸೂಚನೆ ನೀಡಿದ್ರಾ ಮಾಜಿ ಸಿಎಂ ಸಿದ್ದರಾಮಯ್ಯ!
- ಹೋಟೆಲ್ನಲ್ಲಿ ಕೊನೆಯ ಊಟ ಮಾಡಿ ನದಿಗೆ ಹಾರಿದ ದಂಪತಿ, ಇಬ್ಬರು ಮಕ್ಕಳು; ಬಡತನ ತಾಳಲಾರದೆ ಒಂದೇ ಕುಟುಂಬದ ನಾಲ್ವರ ಸಾಮೂಹಿಕ ಆತ್ಮಹತ್ಯೆ!
- ಗರ್ಭದಲ್ಲಿರೋ ಮಗುವಿಗೆ DNA ಟೆಸ್ಟ್ ಮಾಡಿಸಲು ಗಂಡನ ಪಟ್ಟು; ಮನನೊಂದು 23 ವರ್ಷದ ಗರ್ಭಿಣಿ ಆತ್ಮಹತ್ಯೆ!
- 10 ಕೆಜಿ ತೂಕ ಇಳಿಸಿಕೊಳ್ಳಲು ಜೀರಿಗೆ ನೀರನ್ನ ಎಷ್ಟು ದಿನಗಳವರೆಗೆ ಕುಡಿಯಬೇಕು.?
- ರಕ್ತದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಕಿಡ್ನಿ ಹಾಗೂ ಮೂಳೆಗಳಿಗೆ ಹಾನಿ ಜಾಸ್ತಿಯಂತೆ!
- ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ! SIR ಪರಿಣಾಮ ಏನೆಂದು ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳದ ಫಲಿತಾಂಶದಲ್ಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ
- ಕಾರಿನಲ್ಲಿ ನಾಡಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸ್ಪೋಟಕ ವಿಚಾರ ಬಿಚ್ಚಿಟ್ಟ ಸಂತ್ರಸ್ತೆ.!
- ಹರ್ನಿಯಾ : ಹೊಟ್ಟೆ ಭಾಗದಲ್ಲಿ ನೋವು, ತೊಡೆಸಂಧಿಯ ಉಬ್ಬು, ಹರ್ನಿಯಾ ನಡುವಿನ ವ್ಯತ್ಯಾಸ ತಿಳಿಯಿರಿ
- ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಆಗುತ್ತಾ? ವೈದ್ಯರೇ ಬಿಚ್ಚಿಟ್ಟ ಸತ್ಯವಿದು..
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | Health Tips
- ಅಂಬಾನಿ ನೀಡಿದ ₹900 ಕೋಟಿ ದೇಣಿಗೆಯ ಲೆಕ್ಕ ನೀಡಿ: ರಾಮಮಂದಿರ ಟ್ರಸ್ಟ್ʼಗೆ ಬಿ.ಕೆ. ಹರಿಪ್ರಸಾದ್ ಪ್ರಶ್ನೆ
- ಭಾಮೈದುನ ಮೇಲಿನ ದಾಳಿ ಸತ್ಯಾಂಶ ತಿಳಿಯಲು 6 ತಿಂಗಳು ಬೇಕು : ಸಚಿವ ಸತೀಶ್ ಜಾರಕಿಹೊಳಿ
- ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ
- ಮಗುವಿನ ಅಳುವಿಗೆ ಬೇಸತ್ತು ಕತ್ತು ಸೀಳಿ ಹೆತ್ತ ಕಂದನನ್ನೇ ಹತ್ಯೆಗೈದ ತಾಯಿ! ಬಳಿಕ ತನ್ನ ಗಂಟಲು ಸೀಳಿ ಆತ್ಮಹತ್ಯೆಗೆ ಯತ್ನ
- 27 ಎಕರೆ ಜಮೀನಿಗಾಗಿ ಹೆತ್ತ ತಂದೆಯ ಸಾವು ಸಸ್ಪೆನ್ಸ್! ಅಣ್ಣನೇ ಕೊಲೆಗಾರ ಎಂದ ತಂಗಿಯರು, ತಂಗಿಯರೇ ಹಂತಕರು ಎಂದ ಅಣ್ಣ!
- ಅತ್ತಿಗೆಯ ಜೊತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಅಣ್ಣನನ್ನೇ ಕೊಂದ ತಮ್ಮ.! ಉತ್ತರ ಕನ್ನಡದಲ್ಲಿ ಬೆಚ್ಚಿಬೀಳಿಸುವ ಕೊಲೆ
- ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪತಿ ; ಶೀಲ ಶಂಕೆಯೇ ಯುವತಿಯ ಜೀವ ಬಲಿ!
- ಈ ಕರುಳಿನ ಸೋಂಕು ಸದ್ದಿಲ್ಲದೆ ಹರಡುತ್ತದೆ , ಹೊಟ್ಟೆಯೊಳಗೆ ಹೀಗೆಲ್ಲಾ ಆದರೆ ನೆಗ್ಲೆಕ್ಟ್ ಮಾಡಲು ಹೋಗಬೇಡಿ
- ರಕ್ತನಾಳಗಳ ಉಬ್ಬುವಿಕೆ ಏಕೆ ಆಗುತ್ತದೆ.? ಯಾವ ಕಾರಣಗಳಿಂದ ಈ ಸಮಸ್ಯೆ ಹೆಚ್ಚಾಗುತ್ತದೆ.? ಇದಕ್ಕಿರುವ ಚಿಕಿತ್ಸೆ ಏನು.?
- ದೇಹದ ಒಂದು ಭಾಗದಲ್ಲಿ ಮರಗಟ್ಟುತ್ತಿದ್ದರೆ ಅದನ್ನು ಸಾಮಾನ್ಯ ಎಂದು ತಿಳಿಯುವ ತಪ್ಪು ಮಾಡದಿರಿ
- ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಮಾತ್ರೆ ಬೇಕಿಲ್ಲ! ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಹೃದಯದ ಆರೋಗ್ಯದ ಗುಟ್ಟು
- ಗೃಹಲಕ್ಷ್ಮಿ ಯೋಜನೆಯಲ್ಲಿ ₹250 ಕೋಟಿ ಹಗರಣ?; ‘ಸಿಬಿಐ ತನಿಖೆಗೆ ಬಿಜೆಪಿ ಮುಖಂಡ ಸಿ.ಟಿ. ರವಿ ಆಗ್ರಹ
- ಆಕ್ಸಿಡೆಂಟ್ ಆದಾಗ ವಿನೀಶ್ ಕಾರ್ ಡ್ರೈವ್ ಮಾಡ್ತಿದ್ರಾ? ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ವಿಜಯಲಕ್ಷ್ಮಿ ದರ್ಶನ್






























