Petrol : ನಮಸ್ಕಾರ ಸ್ನೇಹಿತರೇ, ಇಂದು ನಮ್ಮ ದೇಶದಲ್ಲಿ ಪೆಟ್ರೋಲ್ ವಾಹನಗಳ ಬಳಕೆಯೇ ಹೆಚ್ಚು. ಎಲೆಕ್ಟ್ರಿಕ್ ವಾಹನಗಳ ಆವಿಷ್ಕಾರಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದೇ ಆದರೂ ಪೆಟ್ರೋಲ್ ಗಾಡಿಗಳ ಚಾಲನೆಯೇ ಅಧಿಕ ಸಂಖ್ಯೆಯಲ್ಲಿದೆ. ಇಂತಹ ವಾಹನಗಳ ಸಂಚಾರ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಇಂಧನ ಬೆಲೆ ಗಗನಕ್ಕೇರಿದ್ದು, ವಾಹನ ಸವಾರರ ಅಳಲು ಕೂಡ ಮುಗಿಲು ಮುಟ್ಟಿದೆ. ಸದ್ಯ ಬೆಲೆ ಇಳಿಕೆ ದೂರದ ಮಾತಾಗಿದೆ. ಹೀಗಿರುವಾಗ ಪೆಟ್ರೋಲ್ (Petrol) ಬೈಕ್ ಮತ್ತು ಕಾರುಗಳನ್ನು ಚಲಾಯಿಸುವ ಬಹುತೇಕರು, ತಮ್ಮ ವಾಹನದ ಟ್ಯಾಂಕ್ ಖಾಲಿ ಆಗುವವರೆಗೂ ಪೆಟ್ರೋಲ್ ಹಾಕಿಸುವ ಆಲೋಚನೆ ಮಾಡುವುದಿಲ್ಲ. ಇದೇ ರೀತಿ ಒಂದಷ್ಟು ತಪ್ಪುಗಳನ್ನು ಮಾಡುವ ಸವಾರರು ಈ ಮಾಹಿತಿಯನ್ನು ತಪ್ಪದೇ ತಿಳಿಯುವುದು ಒಳಿತು.
ಎಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು.?
ಪೆಟ್ರೋಲ್ ಇಲ್ಲ ಎಂದರೆ ನಮ್ಮ ವಾಹನಗಳು ಒಂದು ಹೆಜ್ಜೆಯೂ ಮುಂದೆ ಹೋಗಲ್ಲ. ಇದು ಗಾಡಿ ಓಡಿಸುವ ಪ್ರತಿಯೊಬ್ಬರಿಗೂ ಗೊತ್ತಿರುವ ಸಾಮಾನ್ಯ ಸಂಗತಿಯೇ. ಪೆಟ್ರೋಲ್ ಹಾಕಿಸಿಕೊಳ್ಳುವಾಗ ನಾವು ಎಷ್ಟು ಜವಾಬ್ದಾರಿ ವಹಿಸಬೇಕು? ಏನು ತಪ್ಪು ಮಾಡಿದರೆ, ವಾಹನದ ಇಂಜಿನ್ಗೆ ಎಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು? ಇದರಿಂದ ವಾಹನದ ಬಾಳಿಕೆಗೆ ಯಾವ ರೀತಿಯ ಹೊಡೆತ ಎದುರಾಗಬಹುದು ಎಂಬ ಸೂಕ್ಷ್ಮತೆ ವಾಹನ ಬಳಕೆದಾರರಿಗೆ ತಿಳಿದರಲೇ ಬೇಕಾದ ವಿಷಯ. ಆದರೆ, ಇಂತಹ ವಿಚಾರಗಳನ್ನೇ ಮರೆಯುವ ವಾಹನ ಮಾಲೀಕರು, ಪದೇ ಪದೇ ಈ ತಪ್ಪುಗಳನ್ನು ಮಾಡಿ, ತಮ್ಮ ದುಬಾರಿ ವಾಹನಗಳ ಆಯಾಸ್ಸನ್ನು ತಾವೇ ತಮ್ಮ ಕೈಯಾರೆ ಕಡಿತಗೊಳಿಸುತ್ತಾರೆ.
ಈ ತಪ್ಪುಗಳು ಖಂಡಿತವಾಗಿಯೂ ನಿಮ್ಮ ಕಾರು ಮತ್ತು ಬೈಕ್ ಇಂಜಿನ್ ಮೇಲೆ ಪರಿಣಾಮ ಬೀರುತ್ತವೆ. ಎಷ್ಟೋ ಜನ ಪೆಟ್ರೋಲ್ ವಿಚಾರದಲ್ಲಿ ತಮಗೆ ಅರಿವಿಲ್ಲದೇ ಬಹಳ ನಿರ್ಲಕ್ಷ್ಯ ವಹಿಸುತ್ತಾರೆ. ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗಿದೆಯೇ? ನೀವು ಪೆಟ್ರೋಲ್ ಬಂಕ್ಗೆ ಹೋಗಿದ್ದೀರಾ? ಪೆಟ್ರೋಲ್ ಹಾಕಿಸುವ ಸೂಕ್ತ ಕ್ರಮ ಹೇಗೆ? ನಾವು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬುದರ ಬಗ್ಗೆ ಅದರ ಕೆಳಭಾಗಕ್ಕೆ ಹೋಗೋಣ.
ಪೆಟ್ರೋಲ್-ಡೀಸೆಲ್ ಟ್ಯಾಂಕ್ ಕೊಳಕು
ಇಂಜಿನ್ ವಾಹನದ ಹೃದಯವಿದ್ದಂತೆ. ಆದ್ದರಿಂದ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ನಮ್ಮಲ್ಲಿ ಹೆಚ್ಚಿನವರು ಪೆಟ್ರೋಲ್ ಟ್ಯಾಂಕ್ ಸಂಪೂರ್ಣವಾಗಿ ಖಾಲಿಯಾಗುವವರೆಗೆ ಪೆಟ್ರೋಲ್ ಹಾಕಿಸುವ ಮನಸ್ಸು ಮಾಡುವುದೇ ಇಲ್ಲ. ಆದರೆ ಪೆಟ್ರೋಲ್ ಟ್ಯಾಂಕ್ ಖಾಲಿ ಇಡುವುದು ತುಂಬಾ ಅಪಾಯಕಾರಿ. ಕಾರಣ, ಪೆಟ್ರೋಲ್-ಡೀಸೆಲ್ ಟ್ಯಾಂಕ್ ಕೊಳಕು. ಪೆಟ್ರೋಲ್ ಖಾಲಿಯಾದ ನಂತರ, ಎಲ್ಲಾ ತ್ಯಾಜ್ಯ ವಸ್ತುಗಳು ವಾಹನಕ್ಕೆ ಪೆಟ್ರೋಲ್ ಪೂರೈಸುವ ಪಂಪ್ ಮೂಲಕ ಇಂಜಿನ್ ಪಾಲಾಗುತ್ತವೆ. ಆ ತ್ಯಾಜ್ಯವು ಫಿಲ್ಟರ್ ಅನ್ನು ಮುಚ್ಚುತ್ತದೆ. ಇದರಿಂದ ವಾಹನದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಈ ಕಾರಣದಿಂದಾಗಿ ವಾಹನವನ್ನು ಸರಿಯಾಗಿ ನಿಯಂತ್ರಿಸಲು ಆಗುವುದಿಲ್ಲ.
ಕಳಪೆ ಗುಣಮಟ್ಟದ ಇಂಧನ
ಒಮ್ಮೊಮ್ಮೆ ಇದರಿಂದ ಅಪಘಾತ ಸಂಭವವು ಅಧಿಕ. ಹಾಗಾಗಿ ಖಂಡಿತ ಈ ಬಗ್ಗೆ ವಾಹನ ಸವಾರರು ಜಾಗರೂಕರಾಗಿರಿ. ಯಾವತ್ತೂ ಈ ರೀತಿ ಪೆಟ್ರೋಲ್ ಖಾಲಿಯಾಗುವವರೆಗೂ ಕಾದು, ತುಂಬಿಸಬೇಡಿ. ಇದು ಅತ್ಯಂತ ಮುಖ್ಯವಾದ ಸಂಗತಿ. ಅದೇ ಇಂಧನ ಗುಣಮಟ್ಟ. ಕೆಲವರು ಪೆಟ್ರೋಲ್ ಗುಣಮಟ್ಟದಿಂದ ದೂರ ಉಳಿದಿರುವ ಬಂಕ್ಗಳಿಂದ ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಅಂತಹ ಕಳಪೆ ಗುಣಮಟ್ಟದ ಪೆಟ್ರೋಲ್ ವಾಹನಕ್ಕೆ ಒಳ್ಳೆಯದಲ್ಲ. ಪೆಟ್ರೋಲ್ ಉತ್ತಮ ಗುಣಮಟ್ಟದಲ್ಲಿಲ್ಲದಿದ್ದರೆ ಅದು ಇಂಜಿನ್ನಲ್ಲಿ ಸಂಗ್ರಹವಾಗುತ್ತದೆ. ಆಗ ವಾಹನದ ಕಾರ್ಯಕ್ಷಮತೆ ಉತ್ತಮವಾಗಿರುವುದಿಲ್ಲ. ಹಾಗಾಗಿ ಯಾವುದೇ ಸಮಯದಲ್ಲಿ ವಾಹನಕ್ಕೆ ಗುಣಮಟ್ಟದ ಪೆಟ್ರೋಲ್ ಬಳಸುವುದು ಒಳಿತು.
ಇಂಜಿನ್ ಕಾರ್ಯಕ್ಷಮತೆ ಕುಸಿಯುತ್ತದೆ
ಪೆಟ್ರೋಲ್ ಖಾಲಿಯಾದ ನಂತರ, ಇಂಧನ ಟ್ಯಾಂಕ್ನ ಕ್ಯಾಪ್ ಅನ್ನು ಸರಿಯಾಗಿ ಮುಚ್ಚಲಾಗಿದೆಯೇ? ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಇಲ್ಲದಿದ್ದರೆ ಗಾಳಿ ಮತ್ತು ತೇವಾಂಶವು ಟ್ಯಾಂಕಿನೊಳಗೆ ಹೋಗುತ್ತದೆ. ಈ ಕಾರಣದಿಂದಾಗಿ, ನೀರಿನ ಆವಿಯು ಪೆಟ್ರೋಲ್ನೊಂದಿಗೆ ಮಿಕ್ಸ್ ಆಗಿ ಪೆಟ್ರೋಲ್ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ. ಇದು ವಾಹನದ ಎಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಕೆಲವರು ಪೆಟ್ರೋಲ್ ಟ್ಯಾಂಕ್ ಸದಾ ತುಂಬಿರಲಿ ಎಂದು ಪಂಪ್ನಲ್ಲಿ ಪೆಟ್ರೋಲ್ ತುಂಬಿಸುತ್ತಲೇ ಇರುತ್ತಾರೆ. ಇದು ಅತಿಯಾದ ಭರ್ತಿಗೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಇಂಧನ ಪೈಪ್ನಲ್ಲಿ ಸೋರಿಕೆಯಾಗುವ ಅಪಾಯವಿರಲಿದೆ. ಇದರಿಂದ ಇಂಜಿನ್ ಹಾಳಾಗುತ್ತದೆ ಎನ್ನುತ್ತಾರೆ ಟೆಕ್ ತಜ್ಞರು.
ಮೈಲೇಜ್ ಮತ್ತು ಇಂಜಿನ್
ಇನ್ನು ಕೆಲವರು ಪೆಟ್ರೋಲ್ ತುಂಬಿಸುವಾಗ ವಾಹನದ ಇಂಜಿನ್ ಅನ್ನು ಆನ್ನಲ್ಲಿ ಇಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದು ತುಂಬಾ ಅಪಾಯಕಾರಿ. ಇದು ಮೈಲೇಜ್ ಮತ್ತು ಇಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಕೆಲವೊಮ್ಮೆ ಬೆಂಕಿ ಅವಘಡ ಸಂಭವಿಸುವ ಅಪಾಯವೂ ಇರುತ್ತದೆ. ಆದ್ದರಿಂದ ಎಂದಿಗೂ ಇಂಜಿನ್ ಅನ್ನು ಆನ್ನಲ್ಲಿಟ್ಟು, ಪೆಟ್ರೋಲ್ ಹಾಕಿಸಬೇಡಿ. ನಿಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಈ ವಿಷಯಗಳನ್ನು ತಪ್ಪದೆ ನೆನಪಿನಲ್ಲಿಡಿ.
- Gold Rate Today : ಚಿನ್ನ ಖರೀದಿಗೆ ಇದೇ ಸರಿಯಾದ ಸಮಯಾನಾ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ನಿಖರ ಬೆಲೆ.?
- Gold Rate : ಇಳಿಕೆಯತ್ತ ಮುಖ ಮಾಡಿದ ಚಿನ್ನ.! ಇವತ್ತಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ಗೊತ್ತಾ.?
- Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
- Gold Rate Today : ಭಾರೀ ಏರಿಕೆಯತ್ತ ಸಾಗಿದ ಚಿನ್ನದ ಬೆಲೆ.! ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸ ಮೂಡುತ್ತಾ.?
- ಪತಿಯ ಬಂಧನ ಭೀತಿ : ಮಗುವಿಗೆ ನೇಣು ಬಿಗಿದು ತಾಯಿಯೂ ಆತ್ಮಹತ್ಯೆ – ಪೊಲೀಸರ ನೋಟಿಸ್, ಬೆದರಿಕೆಯಿಂದ ನೊಂದ ಮಹಿಳೆ
- ಚಾಮುಂಡಿ ಬೆಟ್ಟ ಹಿಂದೂಗಳದ್ದು, ರಾಜಕೀಯಕ್ಕೆ ಚಾಮುಂಡಿ ತಾಯಿ ಹೆಸರು ಎಳೆದು ತಂದಿದ್ದು ಬೇಸರ ತರಿಸಿದೆ ಎಂದ ರಾಜಮಾತೆ ಪ್ರಮೋದಾದೇವಿ ಒಡೆಯರ್
- ಹಣೆಗೆ ಅರಿಶಿಣ, ಕುಂಕುಮವಿಟ್ಟು, ಹೂ ಮುಡಿದು ದಸರಾ ಉದ್ಘಾಟನೆ ಮಾಡೋದಾದ್ರೆ ಬನ್ನಿ ಎಂದ ಪ್ರತಾಪ್ ಸಿಂಹ
- ಇಂದೇ ಲೋಕಸಭೆ ಚುನಾವಣೆ ನಡೆದರೆ ಎನ್ಡಿಎ 324 ಸ್ಥಾನ ಗೆಲ್ಲುವ ಸಾಧ್ಯತೆ – ಇಂಡಿಯಾ ಮೈತ್ರಿಕೂಟಕ್ಕೆ ಆಘಾತ!
- ಯಾದಗಿರಿ ಹಾಸ್ಟೆಲ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಹೈಸ್ಕೂಲ್ ವಿದ್ಯಾರ್ಥಿನಿ : ಗರ್ಭಿಣಿಯಾಗಿದ್ದೇ ಗೊತ್ತಿಲ್ಲ ಎಂದ ವಾರ್ಡನ್
- ಬೆಳ್ಳಂಬೆಳಗ್ಗೆ 5 ಗಂಟೆಗೆ ಆಗಮಿಸಿ ಎಸ್ಐಟಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಸುಜಾತ ಭಟ್! ಅನನ್ಯಾ ಭಟ್ ನಾಪತ್ತೆ ಪ್ರಕರಣ!
- Gold Rate Today : ಏರಿಳಿತ ಕಾಣುತ್ತಿರುವ ಬಂಗಾರದ ಬೆಲೆ.? ಇವತ್ತಿನ ಚಿನ್ನದ ರೇಟ್ ಎಷ್ಟಿದೆ ಗೊತ್ತಾ.?
- ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು ಎಂದ ಬಿಜೆಪಿ ಸಂಸದ ಯದುವೀರ್
- ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು 24 ಗಂಟೆಯಲ್ಲಿ ಪಡೆದ ವೀವ್ಸ್ ಎಷ್ಟು ಗೊತ್ತಾ.? ಡಿಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ಧಿ!
- ಪ್ರಿಯತಮೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಹತ್ಯೆ : ಮೊಬೈಲ್ ಸ್ಫೋಟಗೊಂಡು ಸತ್ತಿದ್ದಾಳೆ ಎಂದು ಕಥೆ ಕಟ್ಟಿದ್ದ ಪ್ರಿಯಕರ ಅರೆಸ್ಟ್
- ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಫಂಡಿಂಗ್ ಬರ್ತಿತ್ತು ಅನ್ನೋದು ಸುಳ್ಳು, ಕೂಲಿ ಮಾಡಿದ್ರಷ್ಟೇ ಜೀವನ ನಡೀತಿತ್ತು – ಚಿನ್ನಯ್ಯನ 2ನೇ ಪತ್ನಿ ಕಣ್ಣೀರು
- ಎಡಪಂಥೀಯರನ್ನ ಕೇಳಿ ತನಿಖೆಗೆ ಕೊಟ್ಟಿದ್ದಾರೆ, ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿ
- Gold Rate Today : ಏರಿಳಿತ ಕಾಣುತ್ತಿರುವ ಬಂಗಾರದ ಬೆಲೆ.? ಇವತ್ತಿನ ಚಿನ್ನದ ರೇಟ್ ಎಷ್ಟಿದೆ ಗೊತ್ತಾ.?
- Gold Rate : ಇಳಿಕೆಯತ್ತ ಸಾಗಿದ ಬಂಗಾರದ ಬೆಲೆ.?ಇಂದಿನಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- Gold Rate : ಭಾರೀ ಇಳಿಕೆ ಕಂಡ ಚಿನ್ನದ ರೇಟ್.! ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- Gold Rate Today : ಮತ್ತೆ ಅಲ್ಪ ಇಳಿಕೆ ಕಂಡ ಚಿನ್ನದ ರೇಟ್.! ಇಂದಿನ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ.?
- ನನ್ನನ್ನು ಬೇಕಾದರೆ ಜೈಲಿಗೆ ಹಾಕಿ ಆದರೆ ಧರ್ಮಸ್ಥಳ ಹೆಸರು ಹಾಳು ಮಾಡಲು ಪೂಜಾರಿ ಬಿಡೋದಿಲ್ಲ – ಜನಾರ್ಧನ ಪೂಜಾರಿ ಗುಡುಗು
- LPG Gas Cylinder : ಮನೆಯಲ್ಲಿ ‘ಗ್ಯಾಸ್’ ಸಂಪರ್ಕವಿದ್ಯಾ.? ಹಾಗಿದ್ರೆ, ನೀವು 50 ಲಕ್ಷ ರೂ.ಗಳ ಉಚಿತ ವಿಮೆಗೆ ಹೇಗೆ ಅರ್ಹರು ಗೊತ್ತಾ.?
- Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?
- ಬಿಪಿಎಲ್ ಕಾರ್ಡ್ ಇದ್ದವರಿಗೆ ₹30,000/- ರೂಪಾಯಿ ಸಹಾಯಧನ.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?
- Kisan Credit Card Scheme : ಇನ್ನು ಮುಂದೆ ಎಲ್ಲ ರೈತರಿಗೂ ಪಶು ಕಿಸಾನ್ ಕಾರ್ಡ್ ನಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ.! ಅರ್ಜಿ ಸಲ್ಲಿಸುವುದು ಹೇಗೆ.?
- Gold Rate Today : ಭಾರೀ ಇಳಿಕೆ ಕಂಡಿದ ಚಿನ್ನದ ಬೆಲೆ.! ಇಂದಿನ ಗೋಲ್ಡ್ ಬೆಲೆ ಎಷ್ಟಾಗಿದೆ ಗೊತ್ತಾ.?
- Post Office FD : ಸ್ಥಿರ ಠೇವಣಿದಾರರಿಗೆ ಭರ್ಜರಿ ಸಿಹಿ ಸುದ್ದಿ, ಪೋಸ್ಟ್ ಆಫೀಸ್ನಲ್ಲಿ ಅದ್ಭುತ ಸ್ಕೀಮ್
- Borewell Scheme : ಬೋರ್ವೆಲ್ ಕೊರಿಸಲು ರೈತರಿಗೆ ಸಹಾಯಧನ: ಯಾವ ರೈತರು ಅರ್ಜಿ ಸಲ್ಲಿಸಬಹುದು..? ಅರ್ಜಿ ಸಲ್ಲಿಸುವುದು ಹೇಗೆ..?
- Post office Scheme : ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!
- ವರಮಹಾಲಕ್ಷ್ಮೀ ಹಬ್ಬದ ಗಿಫ್ಟ್ – ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ
- Driving Licence : ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಹೊಸ ಆದೇಶ ಜಾರಿಗೊಳಿಸಿದ ಸಂಚಾರ ಸಾರಿಗೆ ಇಲಾಖೆ! ಸಂಪೂರ್ಣ ಮಾಹಿತಿ