Petrol : ನಮಸ್ಕಾರ ಸ್ನೇಹಿತರೇ, ಇಂದು ನಮ್ಮ ದೇಶದಲ್ಲಿ ಪೆಟ್ರೋಲ್ ವಾಹನಗಳ ಬಳಕೆಯೇ ಹೆಚ್ಚು. ಎಲೆಕ್ಟ್ರಿಕ್ ವಾಹನಗಳ ಆವಿಷ್ಕಾರಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದೇ ಆದರೂ ಪೆಟ್ರೋಲ್ ಗಾಡಿಗಳ ಚಾಲನೆಯೇ ಅಧಿಕ ಸಂಖ್ಯೆಯಲ್ಲಿದೆ. ಇಂತಹ ವಾಹನಗಳ ಸಂಚಾರ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಇಂಧನ ಬೆಲೆ ಗಗನಕ್ಕೇರಿದ್ದು, ವಾಹನ ಸವಾರರ ಅಳಲು ಕೂಡ ಮುಗಿಲು ಮುಟ್ಟಿದೆ. ಸದ್ಯ ಬೆಲೆ ಇಳಿಕೆ ದೂರದ ಮಾತಾಗಿದೆ. ಹೀಗಿರುವಾಗ ಪೆಟ್ರೋಲ್ (Petrol) ಬೈಕ್ ಮತ್ತು ಕಾರುಗಳನ್ನು ಚಲಾಯಿಸುವ ಬಹುತೇಕರು, ತಮ್ಮ ವಾಹನದ ಟ್ಯಾಂಕ್ ಖಾಲಿ ಆಗುವವರೆಗೂ ಪೆಟ್ರೋಲ್ ಹಾಕಿಸುವ ಆಲೋಚನೆ ಮಾಡುವುದಿಲ್ಲ. ಇದೇ ರೀತಿ ಒಂದಷ್ಟು ತಪ್ಪುಗಳನ್ನು ಮಾಡುವ ಸವಾರರು ಈ ಮಾಹಿತಿಯನ್ನು ತಪ್ಪದೇ ತಿಳಿಯುವುದು ಒಳಿತು.
ಎಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು.?
ಪೆಟ್ರೋಲ್ ಇಲ್ಲ ಎಂದರೆ ನಮ್ಮ ವಾಹನಗಳು ಒಂದು ಹೆಜ್ಜೆಯೂ ಮುಂದೆ ಹೋಗಲ್ಲ. ಇದು ಗಾಡಿ ಓಡಿಸುವ ಪ್ರತಿಯೊಬ್ಬರಿಗೂ ಗೊತ್ತಿರುವ ಸಾಮಾನ್ಯ ಸಂಗತಿಯೇ. ಪೆಟ್ರೋಲ್ ಹಾಕಿಸಿಕೊಳ್ಳುವಾಗ ನಾವು ಎಷ್ಟು ಜವಾಬ್ದಾರಿ ವಹಿಸಬೇಕು? ಏನು ತಪ್ಪು ಮಾಡಿದರೆ, ವಾಹನದ ಇಂಜಿನ್ಗೆ ಎಷ್ಟು ಪ್ರಮಾಣದಲ್ಲಿ ಪೆಟ್ಟು ಬೀಳಬಹುದು? ಇದರಿಂದ ವಾಹನದ ಬಾಳಿಕೆಗೆ ಯಾವ ರೀತಿಯ ಹೊಡೆತ ಎದುರಾಗಬಹುದು ಎಂಬ ಸೂಕ್ಷ್ಮತೆ ವಾಹನ ಬಳಕೆದಾರರಿಗೆ ತಿಳಿದರಲೇ ಬೇಕಾದ ವಿಷಯ. ಆದರೆ, ಇಂತಹ ವಿಚಾರಗಳನ್ನೇ ಮರೆಯುವ ವಾಹನ ಮಾಲೀಕರು, ಪದೇ ಪದೇ ಈ ತಪ್ಪುಗಳನ್ನು ಮಾಡಿ, ತಮ್ಮ ದುಬಾರಿ ವಾಹನಗಳ ಆಯಾಸ್ಸನ್ನು ತಾವೇ ತಮ್ಮ ಕೈಯಾರೆ ಕಡಿತಗೊಳಿಸುತ್ತಾರೆ.
ಈ ತಪ್ಪುಗಳು ಖಂಡಿತವಾಗಿಯೂ ನಿಮ್ಮ ಕಾರು ಮತ್ತು ಬೈಕ್ ಇಂಜಿನ್ ಮೇಲೆ ಪರಿಣಾಮ ಬೀರುತ್ತವೆ. ಎಷ್ಟೋ ಜನ ಪೆಟ್ರೋಲ್ ವಿಚಾರದಲ್ಲಿ ತಮಗೆ ಅರಿವಿಲ್ಲದೇ ಬಹಳ ನಿರ್ಲಕ್ಷ್ಯ ವಹಿಸುತ್ತಾರೆ. ಕಾರಿನಲ್ಲಿ ಪೆಟ್ರೋಲ್ ಖಾಲಿಯಾಗಿದೆಯೇ? ನೀವು ಪೆಟ್ರೋಲ್ ಬಂಕ್ಗೆ ಹೋಗಿದ್ದೀರಾ? ಪೆಟ್ರೋಲ್ ಹಾಕಿಸುವ ಸೂಕ್ತ ಕ್ರಮ ಹೇಗೆ? ನಾವು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬುದರ ಬಗ್ಗೆ ಅದರ ಕೆಳಭಾಗಕ್ಕೆ ಹೋಗೋಣ.
ಪೆಟ್ರೋಲ್-ಡೀಸೆಲ್ ಟ್ಯಾಂಕ್ ಕೊಳಕು
ಇಂಜಿನ್ ವಾಹನದ ಹೃದಯವಿದ್ದಂತೆ. ಆದ್ದರಿಂದ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ನಮ್ಮಲ್ಲಿ ಹೆಚ್ಚಿನವರು ಪೆಟ್ರೋಲ್ ಟ್ಯಾಂಕ್ ಸಂಪೂರ್ಣವಾಗಿ ಖಾಲಿಯಾಗುವವರೆಗೆ ಪೆಟ್ರೋಲ್ ಹಾಕಿಸುವ ಮನಸ್ಸು ಮಾಡುವುದೇ ಇಲ್ಲ. ಆದರೆ ಪೆಟ್ರೋಲ್ ಟ್ಯಾಂಕ್ ಖಾಲಿ ಇಡುವುದು ತುಂಬಾ ಅಪಾಯಕಾರಿ. ಕಾರಣ, ಪೆಟ್ರೋಲ್-ಡೀಸೆಲ್ ಟ್ಯಾಂಕ್ ಕೊಳಕು. ಪೆಟ್ರೋಲ್ ಖಾಲಿಯಾದ ನಂತರ, ಎಲ್ಲಾ ತ್ಯಾಜ್ಯ ವಸ್ತುಗಳು ವಾಹನಕ್ಕೆ ಪೆಟ್ರೋಲ್ ಪೂರೈಸುವ ಪಂಪ್ ಮೂಲಕ ಇಂಜಿನ್ ಪಾಲಾಗುತ್ತವೆ. ಆ ತ್ಯಾಜ್ಯವು ಫಿಲ್ಟರ್ ಅನ್ನು ಮುಚ್ಚುತ್ತದೆ. ಇದರಿಂದ ವಾಹನದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಈ ಕಾರಣದಿಂದಾಗಿ ವಾಹನವನ್ನು ಸರಿಯಾಗಿ ನಿಯಂತ್ರಿಸಲು ಆಗುವುದಿಲ್ಲ.
ಕಳಪೆ ಗುಣಮಟ್ಟದ ಇಂಧನ
ಒಮ್ಮೊಮ್ಮೆ ಇದರಿಂದ ಅಪಘಾತ ಸಂಭವವು ಅಧಿಕ. ಹಾಗಾಗಿ ಖಂಡಿತ ಈ ಬಗ್ಗೆ ವಾಹನ ಸವಾರರು ಜಾಗರೂಕರಾಗಿರಿ. ಯಾವತ್ತೂ ಈ ರೀತಿ ಪೆಟ್ರೋಲ್ ಖಾಲಿಯಾಗುವವರೆಗೂ ಕಾದು, ತುಂಬಿಸಬೇಡಿ. ಇದು ಅತ್ಯಂತ ಮುಖ್ಯವಾದ ಸಂಗತಿ. ಅದೇ ಇಂಧನ ಗುಣಮಟ್ಟ. ಕೆಲವರು ಪೆಟ್ರೋಲ್ ಗುಣಮಟ್ಟದಿಂದ ದೂರ ಉಳಿದಿರುವ ಬಂಕ್ಗಳಿಂದ ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಆದರೆ ಅಂತಹ ಕಳಪೆ ಗುಣಮಟ್ಟದ ಪೆಟ್ರೋಲ್ ವಾಹನಕ್ಕೆ ಒಳ್ಳೆಯದಲ್ಲ. ಪೆಟ್ರೋಲ್ ಉತ್ತಮ ಗುಣಮಟ್ಟದಲ್ಲಿಲ್ಲದಿದ್ದರೆ ಅದು ಇಂಜಿನ್ನಲ್ಲಿ ಸಂಗ್ರಹವಾಗುತ್ತದೆ. ಆಗ ವಾಹನದ ಕಾರ್ಯಕ್ಷಮತೆ ಉತ್ತಮವಾಗಿರುವುದಿಲ್ಲ. ಹಾಗಾಗಿ ಯಾವುದೇ ಸಮಯದಲ್ಲಿ ವಾಹನಕ್ಕೆ ಗುಣಮಟ್ಟದ ಪೆಟ್ರೋಲ್ ಬಳಸುವುದು ಒಳಿತು.
ಇಂಜಿನ್ ಕಾರ್ಯಕ್ಷಮತೆ ಕುಸಿಯುತ್ತದೆ
ಪೆಟ್ರೋಲ್ ಖಾಲಿಯಾದ ನಂತರ, ಇಂಧನ ಟ್ಯಾಂಕ್ನ ಕ್ಯಾಪ್ ಅನ್ನು ಸರಿಯಾಗಿ ಮುಚ್ಚಲಾಗಿದೆಯೇ? ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಇಲ್ಲದಿದ್ದರೆ ಗಾಳಿ ಮತ್ತು ತೇವಾಂಶವು ಟ್ಯಾಂಕಿನೊಳಗೆ ಹೋಗುತ್ತದೆ. ಈ ಕಾರಣದಿಂದಾಗಿ, ನೀರಿನ ಆವಿಯು ಪೆಟ್ರೋಲ್ನೊಂದಿಗೆ ಮಿಕ್ಸ್ ಆಗಿ ಪೆಟ್ರೋಲ್ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ. ಇದು ವಾಹನದ ಎಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಕೆಲವರು ಪೆಟ್ರೋಲ್ ಟ್ಯಾಂಕ್ ಸದಾ ತುಂಬಿರಲಿ ಎಂದು ಪಂಪ್ನಲ್ಲಿ ಪೆಟ್ರೋಲ್ ತುಂಬಿಸುತ್ತಲೇ ಇರುತ್ತಾರೆ. ಇದು ಅತಿಯಾದ ಭರ್ತಿಗೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಇಂಧನ ಪೈಪ್ನಲ್ಲಿ ಸೋರಿಕೆಯಾಗುವ ಅಪಾಯವಿರಲಿದೆ. ಇದರಿಂದ ಇಂಜಿನ್ ಹಾಳಾಗುತ್ತದೆ ಎನ್ನುತ್ತಾರೆ ಟೆಕ್ ತಜ್ಞರು.
ಮೈಲೇಜ್ ಮತ್ತು ಇಂಜಿನ್
ಇನ್ನು ಕೆಲವರು ಪೆಟ್ರೋಲ್ ತುಂಬಿಸುವಾಗ ವಾಹನದ ಇಂಜಿನ್ ಅನ್ನು ಆನ್ನಲ್ಲಿ ಇಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದು ತುಂಬಾ ಅಪಾಯಕಾರಿ. ಇದು ಮೈಲೇಜ್ ಮತ್ತು ಇಂಜಿನ್ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಕೆಲವೊಮ್ಮೆ ಬೆಂಕಿ ಅವಘಡ ಸಂಭವಿಸುವ ಅಪಾಯವೂ ಇರುತ್ತದೆ. ಆದ್ದರಿಂದ ಎಂದಿಗೂ ಇಂಜಿನ್ ಅನ್ನು ಆನ್ನಲ್ಲಿಟ್ಟು, ಪೆಟ್ರೋಲ್ ಹಾಕಿಸಬೇಡಿ. ನಿಮ್ಮ ವಾಹನಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಈ ವಿಷಯಗಳನ್ನು ತಪ್ಪದೆ ನೆನಪಿನಲ್ಲಿಡಿ.
- BSNL Plan : ಬರೋಬ್ಬರಿ 150 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಅತ್ಯುತ್ತಮ ರಿಚಾರ್ಜ್ ಪ್ಲಾನ್!
- ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ.! ಪೋಷಕರ ತೀರ್ಮಾನವೇನು ಗೊತ್ತಾ.?
- 5 ದಿನಗಳಲ್ಲಿ ಈ ಕೆಲಸ ಮಾಡದವರ ಪಿಂಚಣಿ ಬಂದ್.! ಸರ್ಕಾರದ ಹೊಸ ಆದೇಶ.! Pension New Updates
- ಒಂದು EMI ಮಿಸ್ ಆದವರಿಗೆ ಇನ್ಮೇಲೆ ಹೊಸ ರೂಲ್ಸ್ | Missed EMI & CIBIL Score
- ಬ್ಯಾಂಕ್ ಖಾತೆ ಇದ್ದು ಈ ತಪ್ಪು ಮಾಡಿದವರಿಗೆ 2 ವರ್ಷ ಜೈಲು ಹಾಗು ದಂಡ – ಸಂಪೂರ್ಣ ಮಾಹಿತಿ
- ಎಲ್ಲಾ ಗೃಹಲಕ್ಷ್ಮಿ ಯರಿಗೆ ಬಿಗ್ ಶಾಕ್.! ರಾತ್ರೋರಾತ್ರಿ ಹೊಸ ಲಿಸ್ಟ್ ಬಿಡುಗಡೆ | ಹೆಸರು ಇದ್ದವರಿಗೆ ಮಾತ್ರ ಹಣ.!
- ಮಳೆ.! ಮಳೆ.! ಅಕ್ಟೋಬರ್ 29 ರ ವರೆಗೆ | 18 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ | weather forecast
- ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರದಿಂದ ಸಿಹಿಸುದ್ಧಿ.! ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆ ರೂಪಿಸಲು ಅವಕಾಶ
- ತುಟ್ಟಿಭತ್ಯೆ ಶೇ. 55 ರಿಂದ 58ಕ್ಕೆ ಹೆಚ್ಚಳ, ಸರ್ಕಾರದ ಅಧಿಕೃತ ಆದೇಶ ಪ್ರಕಟ – ಯಾರೆಲ್ಲಾ ಇದರ ಪ್ರಯೋಜನ ಪಡೆಯುತ್ತಾರೆ?
- ಕ್ಷುಲಕ ಕಾರಣಕ್ಕೆ ದಂಪತಿ ನಡುವೆ ಜಗಳ, ತವರು ಮನೆ ಸೇರಿದ ಪತ್ನಿ, ಅವಳಿ ಹೆಣ್ಣು ಮಕ್ಕಳ ‘ಕತ್ತು ಸೀಳಿ’ ಕೊಂದ ಕಟುಕ ತಂದೆ!
- ಇನ್ಮೇಲೆ ಈ ಕೆಲಸ ಅಪರಾಧವಲ್ಲ ಕೋರ್ಟ್ ಹೊಸ ಆದೇಶ ಜಾರಿಗೆ | ಹೈಕೋರ್ಟ್ ಕೊಟ್ಟಿರುವ ಈ ತೀರ್ಪು ಯಾವುದು.?
- ರೈತರ ಸಾಲಮನ್ನಾ : ಗುಡ್ ನ್ಯೂಸ್ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
- ನವೆಂಬರ್ 1 ರಿಂದ ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ | ಬ್ಯಾಂಕ್ ಖಾತೆಯನ್ನ ಹೊಂದಿರುವವರು ತಪ್ಪದೇ ನೋಡಿ
- ನೀವು ಈ 10 ರೀತಿಯ ಕ್ಯಾಷ್ ಟ್ರಾನ್ಸಾಕ್ಷನ್ ಮಾಡ್ತಿದ್ದೀರಾ? ಐಟಿ ನೋಟಿಸ್ ಬರಬಹುದು ಎಚ್ಚರ! Income Tax
- ಪೊಲೀಸರು 5 ತಿಂಗಳಲ್ಲಿ 4 ಬಾರಿ ಅತ್ಯಾಚಾರ ಮಾಡಿದ್ರು : ಕೈಯಲ್ಲಿ ಡೆತ್ ನೋಟ್ ಬರೆದುಕೊಂಡು ವೈದ್ಯೆ ಆತ್ಮಹತ್ಯೆ
- ಪರಿಶಿಷ್ಟ ಪಂಗಡದ ಮಹಿಳೆ ಆಸ್ತಿಗೆ ಹಕ್ಕುದಾರಳಲ್ಲ : ಸಂವಿಧಾನವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ಹೇಳಿದ್ದೇನು?
- BPL ಕಾರ್ಡ್ ಇದ್ದ 75 ವರ್ಷದವರಿಗೆ ದೊಡ್ಡ ಸಿಹಿಸುದ್ದಿ – ಹಿರಿಯ ನಾಗರಿಕರಿಗೆ ಈ ಸೇವೆ ಉಚಿತ | BPL Ration Card
- ಪೋಷಕರು ಮಾರಿದ ಆಸ್ತಿಯನ್ನು ಪ್ರಾಪ್ತ ವಯಸ್ಕ ಮಕ್ಕಳು ನಿರಾಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
- ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಹೊಸ ರೂಲ್ಸ್ – ಯಾವ ಪಟ್ಟಿಯಲ್ಲಿ ಹೆಸರಿರಬೇಕು.?
- ನವೆಂಬರ್ 1 ರಿಂದ ಗ್ಯಾಸ್ ಸಿಲಿಂಡರ್ ಗೆ ಹೊಸ ರೂಲ್ಸ್ | ಏನಿದು ಹೊಸ ನಿಯಮ.? Gas Cylinder
- ಗ್ರಾಮೀಣ ಜನತೆಗೆ ಸಿಹಿಸುದ್ದಿ : ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಬಿ-ಖಾತಾ ವಿತರಣೆ, ಇ-ಸ್ವತ್ತು ಸರಳೀಕರಣ
- ಬ್ಯಾಂಕ್ ಸಾಲ ಬಾಕಿ ಇದ್ದವರಿಗೆ RBI ನಿಂದ ಗುಡ್ ನ್ಯೂಸ್ | ಆರ್ ಬಿಐ ನೀಡಿರುವ ಗುಡ್ ನ್ಯೂಸ್ ಏನು.?
- Gold Rate : ಭಾರೀ ಇಳಿಕೆ ಕಂಡ ಚಿನ್ನದ ಬೆಲೆ.? ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ದರ.? ಭರ್ಜರಿ ಇಳಿಕೆಯತ್ತ!
- ಬ್ಯಾಂಕ್ FD ಇಟ್ಟ ಹಿರಿಯ ನಾಗರೀಕರಿಗೆ RBI ಹೊಸ ರೂಲ್ಸ್ | Senior Citizen FD New Rules
- ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್.! BPL Ration Card Updates
- ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್- Inherited property rights
- Online gambling : ಆನ್ಲೈನ್ ಜೂಜು ನಿಷೇಧ : ಕೇಂದ್ರದ ನೆರವು ಕೇಳಿದ ಸುಪ್ರೀಂ ಕೋರ್ಟ್
- ಪ್ಯಾನ್ ಕಾರ್ಡ್ ಹೊಂದಿರೋರೇ ಎಚ್ಚರ! ಈ ತಪ್ಪು ಮಾಡಿದ್ರೇ 10,000 ದಂಡ ಕಟ್ಟಬೇಕಾಗುತ್ತೆ ಹುಷಾರ್! | PAN Card Alert
- 2026 ರ ಚಿನ್ನದ ಬೆಲೆ ಎಷ್ಟಾಗುತ್ತೆ ಎಂದು ತಿಳಿಸಿದ ಸರ್ಕಾರ.! ಚಿನ್ನದ ಭವಿಷ್ಯ ಹೇಗಿದೆ.? | Gold Price Prediction 2026
- ದೀಪಾವಳಿಗೆ BSNL ನಿಂದ ಕೈಗೆಟುಕುವ ದರದಲ್ಲಿ 365 ದಿನಗಳ ಸೇವೆಯ ‘BSNL ಸಮ್ಮಾನ್’ ಪ್ಲಾನ್ ಬಿಡುಗಡೆ
- Weather Forecast : ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ – 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ






























