ಶಿವಣ್ಣನ ರೀತಿಯಲ್ಲಿ ಇನ್ಯಾರು ಕಮಲ್‌ ಹಾಸನ್ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಎಂದ ಮುಖ್ಯಮಂತ್ರಿ ಚಂದ್ರು

Spread the love

ಶಿವಣ್ಣನ ರೀತಿಯಲ್ಲಿ ಇನ್ಯಾರು ಕಮಲ್‌ ಹಾಸನ್‌ ಪರವಾಗಿದ್ದರೋ ಅವರೆಲ್ಲ ನಾಡದ್ರೋಹಿಗಳು ಅಂತ ಮುಖ್ಯಮಂತ್ರಿ ಚಂದ್ರು ಕೆಂಡಕಾರಿದ್ದಾರೆ. ಕಮಲ್‌ ಹಾಸನ್‌ ಕನ್ನಡ ಹೇಳಿಕೆ ಕುರಿತು ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ತಮಿಳು ನಟನನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರಲ್ಲದೇ ನಟ ಶಿವರಾಜ್‌ ಕುಮಾರ್‌ ವಿರುದ್ಧವೂ ಗರಂ ಆದರು.

ಈ ಘಟನೆ ನಡೀಬಾರದಿತ್ತು, ಈ ಹೇಳಿಕೆ ಕೊಟ್ಟ ಅವ್ನು ದುರಹಂಕಾರಿ, ಅಯೋಗ್ಯ. ಅವ್ನು ಹೇಳಿದ ಹೇಳಿಕೆ ನಮ್ಮ ನಾಡಿಗೆ ಅವಮಾನ ಆಗಿದೆ. ಆ ಘಟನೆಗೆ ಸಾಕ್ಷಿಯಾಗಿದ್ದ ಶಿವರಾಜ್ ಕುಮಾರ್ ಪಲಾಯನವಾದ ಮಾಡಿ ಬಿಟ್ಟರು. ಕಮಲ್ ಹಾಸನ್ ಅವ್ರ ಹೇಳಿಕೆಯನ್ನ ಖಂಡಿಸಬೇಕಿತ್ತು. ನಾನು, ನನ್ನ ಕುಟುಂಬ ನಿಮಗೆ ಧನ್ಯವಾದ ಹೇಳ್ತೀವಿ ಆದ್ರೆ ನಾಡು, ನುಡಿ ವಿಚಾರದಲ್ಲಿ ಹೋರಾಟದ ಪರವಾಗಿ ಇರ್ತೀನಿ ಅಂತ ಹೇಳಬೇಕಿತ್ತು.

ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಅಂತ ಹೇಳ್ತಾರೆ… ಹಾಗಿದ್ರೆ ಕನ್ನಡ ವಿಚಾರಕ್ಕೆ ಬಂದಾಗ ನೀವೇನು ಮಾಡ್ತಿದ್ರಿ? ನನಗೆ ಅರ್ಥವೇ ಆಗಲಿಲ್ಲ ಅನ್ನೋದು ಬೇಜವಾಬ್ದಾರಿ ತನ ಎಂದರಲ್ಲದೇ ಶಿವಣ್ಣ ರೀತಿಯಲ್ಲಿ ಇನ್ನೂ ಯಾರು ಅವರ (ಕಮಲ್‌ ಹಾಸನ್) ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಅಂತ ಮಾರ್ಮಿಕವಾಗಿ ನುಡಿದರು.

ನಾಡು ನುಡಿಗೆ ಧಕ್ಕೆ ಬಂದಾಗ ರಾಜ್‌ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಒಬ್ಬರೇ ಕನ್ನಡ ನಾಡಲ್ಲ. ಕನ್ನಡ ನಾಡಿನಿಂದ ಅವರೆಲ್ಲ ಬಂದಿದ್ದಾರೆ. ಆದ್ರೆ ಅವರ ಪ್ರತಿಕ್ರಿಯೆ ನೋಡಿದಾಗ ಅರಿವಿನ ಕೊರತೆಯಿಂದ ಫಲಾಯನವಾದ ಮಾಡಿದ್ರು ಅನ್ನಿಸುತ್ತೆ ಎಂದು ಬೇಸರ ಹೊರಹಾಕಿದರು.

ಕಮಲ್‌ ಹಾಸನ್‌ ಅಯೋಗ್ಯ :-
ಇನ್ನೂ ಕಮಲ್‌ ಹಾಸನ್‌ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಅವನೊಬ್ಬ ಅಯೋಗ್ಯ. ಅವ್ನ ಸಿನಿಮಾ ರಿಲೀಸ್ ಮಾಡದೇ ಇದ್ರೆ ನಮ್ಮ ವಿತರಕರಿಗೆ ಲಾಸ್ ಆಗುತ್ತೆ. ನಮ್ಮ ರಾಜ್ಯಕ್ಕೆ ಬರದಂತೆ ಅವ್ನಿಗೆ ಬಹಿಷ್ಕಾರ ಹಾಕ್ಬೇಕು ಅಂತಾ ಒತ್ತಾಯ ಮಾಡಿದರು.

ಈ ವಿಚಾರದಲ್ಲಿ ಸರ್ಕಾರಕ್ಕೆ ಧನ್ಯವಾದ ಹೇಳ್ತೀನಿ.. ಮಂತ್ರಿ ಈ ವಿಚಾರದಲ್ಲಿ ಖಡಕ್ ಆಗಿ ಹೇಳಿದ್ದಾರೆ. ತಮಾಷೆಗೆ ಹೇಳಿದ್ದು ಅಂತ ಹೇಳ್ತಾನೆ ಕಮಲ್ ಹಾಸನ್ ವಿವೇಕ ರಹಿತ ವ್ಯಕ್ತಿ. ಕಮಲ್ ಹಾಸನ್ ಮಾಡಿದ್ದು ತಪ್ಪು ಅಂತಾ ಹೇಳದೇ ಇದ್ರೆ, ರಾಜಕೀಯ ಗಿಮಿಕ್ಕು, ಚಿತ್ರ ಚೆನ್ನಾಗಿ ಓಡಲಿ ಅಂತ ಕೂಡ ಮಾಡಿರಬಹುದು. ಕಮಲ್‌ ಹಾಸನ್‌ ಮಾಡಿದ್ದು ತಪ್ಪು ಅಂತ ಹೇಳದಿದ್ರೆ, ಶಿವಣ್ಣ ಕೂಡ ತಪ್ಪಿತಸ್ಥರಾಗ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

WhatsApp Group Join Now

Spread the love

Leave a Reply