19 ನಿಮಿಷಗಳ ವೈರಲ್ ವಿಡಿಯೋದಲ್ಲಿರುವ ಜೋಡಿ ಇವರೇನಾ! ತಪ್ಪು ವಿಡಿಯೋ ಲಿಂಕ್ ಮಾಡಲಾಯ್ತಾ?

ಪ್ರತಿ ವಿಷಯಗಳನ್ನು ಅಂಗೈನಲ್ಲೇ ತಿಳಿಸುವ ಸಾಮಾಜಿಕ ಜಾಲತಾಣಗಳ ಪ್ರಭಾವವು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಸುಳ್ಳು, ಸಂಬಂಧವಿಲ್ಲ ವಿಷಯ, ವಿಡಿಯೋಗಳು ಹರಿದಾಡಿ ಜನರನ್ನ ದಾರಿತಪ್ಪಿಸಿದ್ದು ಇದೆ. ಇಂತಹ ಸಾಲಿಗೆ ಮತ್ತೊಂದು ವಿಡಿಯೋ ಸೇರಿದೆ. “ಇನ್‌ಸ್ಟಾಗ್ರಾಮ್ 19 ನಿಮಿಷಗಳ ವೀಡಿಯೊ’ ಹೆಸರಿನಲ್ಲಿ ವಿಡಿಯೋ ಹರದಾಡಿತ್ತು. ಯುವಕ-ಯುವತಿಯ ಜೋಡಿ ಇರುವ ಫೋಟೋಗೆ ಲಿಂಕ್ ಮಾಡಿ ವೈರಲ್ ಮಾಡಲಾಗಿದೆ. ಅಲಿಗೆ ವೈರಲ್ ಆಗಿದ್ದ ಯುವಕ-ಯುವತಿಯ ಎಂಎಂಎಸ್ ಗೂ ಹಾಗೂ ಪೊಲೀಸರಿಂದ ಏಟು ತಿನ್ನುತ್ತ ಬರುವ ಯುವಕನಿಗೂ ಸಂಬಂಧವೇ ಇಲ್ಲ ಎಂಬುದು ಸಾಬೀತಾಗಿದೆ. … Read more

ಮೋದಿ ಕೃಷ್ಣ ದರ್ಶನ ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆಗೆ ನೆಟ್ಟಿಗರ ಕ್ಲಾಸ್ : ಮೊದಲು ನಿಮ್ಮ ಕ್ಷೇತ್ರದ ಹೊಂಡ ಮುಚ್ಚಿ ಆಮೇಲೆ ಮಾತಾಡಿ

ಪ್ರಧಾನಿ ನರೇಂದ್ರ ಮೋದಿಯವರ ಉಡುಪಿ ಶ್ರೀಕೃಷ್ಣ ಮಠದ ಭೇಟಿ ಹಾಗೂ ಕನಕನಕಿಂಡಿಯ ದರ್ಶನವನ್ನು ವ್ಯಂಗ್ಯವಾಗಿ ಟೀಕಿಸಿದ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೇವರ ದರ್ಶನವನ್ನೂ ರಾಜಕೀಯಕ್ಕೆ ಎಳೆದು ತಂದ ಸಚಿವರ ನಡೆಯನ್ನು ಖಂಡಿಸಿರುವ ಜನತೆ, ಕೇಂದ್ರವನ್ನು ಪ್ರಶ್ನಿಸುವ ಮೊದಲು ನಿಮ್ಮ ಕ್ಷೇತ್ರದ ಕಡೆ ಗಮನ ಕೊಡಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಚಿವ ಖರ್ಗೆ ಹೇಳಿದ್ದೇನು? ನಿನ್ನೆ ಪ್ರಧಾನಿ ಮೋದಿ ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಪಂಚೆ ಧರಿಸಿ … Read more

ಅಪ್ಪಾ , ಪ್ರೀತ್ಸೋದ್ ತಪ್ಪಾ? – ಡೆತ್ ನೋಟ್ ಬರೆದು ನೇಣಿಗೆ ಶರಣಾದ ಯುವತಿ!

ಬೆಂಗಳೂರು : ನಗರದ ಹೊರವಲಯ ಹೆಸರುಘಟ್ಟ ರಸ್ತೆಯ ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬಳು ಸೋಲದೇವನಹಳ್ಳಿಯ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಶರಣಾಗುವ ಮುನ್ನ ನನಗೆ ನಿಮ್ಮ ಪ್ರೀತಿಗೆ ಅರ್ಹಳಲ್ಲ ಅಪ್ಪ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾಳೆ. ಹಾಸನ ಮೂಲದ ವತ್ಸಲಾ (19) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ತಿಳಿದು ಬಂದಿದೆ. ಈಕೆ ಅಂತಿಮ ವರ್ಷದ ಬಿ ಫಾರ್ಮ್ ವ್ಯಾಸಾಂಗ ಮಾಡುತ್ತಿದ್ದಳು. ಪಿಜಿಯಲ್ಲಿದ್ದು ಬೆಳಿಗ್ಗೆಯಿಂದ 8 ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್‌ನೋಟ್‌ನಲ್ಲಿ … Read more

Patanjali Cow Ghee : ಗುಣಮಟ್ಟ ಪರೀಕ್ಷೆಯಲ್ಲಿ ‘ಪತಂಜಲಿ ತುಪ್ಪ’ ಫೇಲ್ ; ಆಹಾರ ಇಲಾಖೆಯಿಂದ 10 ಲಕ್ಷ ರೂ. ದಂಡ

ಕಳಪೆ ಗುಣಮಟ್ಟದ ತುಪ್ಪವನ್ನ ಮಾರಾಟ ಮಾಡಿದ್ದಕ್ಕಾಗಿ ಪತಂಜಲಿ ಮತ್ತು ಅದರೊಂದಿಗೆ ಸಂಯೋಜಿತವಾಗಿರುವ ಇತರ ಎರಡು ಕಂಪನಿಗಳಿಗೆ ₹1.4 ಲಕ್ಷ ದಂಡ ವಿಧಿಸಲಾಗಿದೆ. ಉತ್ತರಾಖಂಡ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಈ ನಿರ್ಧಾರವನ್ನ ಹೊರಡಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಸಹಾಯಕ ಆಯುಕ್ತ ಆರ್.ಕೆ. ಶರ್ಮಾ, ಈ ಪ್ರಕರಣವು 2020ರ ಪತಂಜಲಿಯ ಹಸುವಿನ ತುಪ್ಪದ ಮಾದರಿಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ. ಪಿಥೋರಗಢದ ಕಸ್ನಿ ಪ್ರದೇಶದ ಕರಣ್ ಜನರಲ್ ಸ್ಟೋರ್‌’ನಿಂದ ನಿಯಮಿತ ತಪಾಸಣೆಯ ಸಮಯದಲ್ಲಿ ಮಾದರಿಯನ್ನು … Read more

ಕನಕನ ಕಿಂಡಿಗೆ ಸ್ವರ್ಣ ಲೇಪನ ಕೊಡುಗೆ ನೀಡಿದ್ದು ಪ್ರಮೋದ್‌ ಮಧ್ವರಾಜ್‌, ಕಾರ್ಯಕ್ರಮಕ್ಕೆ ಅವರಿಗೆ ಇರಲಿಲ್ಲ ಅವಕಾಶ.!

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೃಷ್ಣನಗರಿ ಉಡುಪಿಗೆ ಆಗಮಿಸಿ ಲಕ್ಷಕಂಠ ಭಗವದ್ಗೀತಾ ಶ್ಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೃಷ್ಣಮಠದಲ್ಲಿ ಕೆಲವೊಂದು ಉದ್ಘಾಟನೆಯನ್ನೂ ಮಾಡಿದರು. ಕೃಷ್ಣಮಠದ ಕನಕನ ಕಿಂಡಿಗೆ ಸ್ವರ್ಣಲೇಪನ ಮಾಡಿದ್ದನ್ನು ಮೋದಿ ಅನಾವರಣ ಮಾಡಿದರು. ಇದರ ಬೆನ್ನಲ್ಲಿಯೇ ಹೊಸ ವಿವಾದ ಸೃಷ್ಟಿಯಾಗಿದೆ. ಉಡುಪಿಯ ಕೃಷ್ಣಮಠದ ಕನಕನ ಕಿಂಡಿಗೆ ಸ್ವರ್ಣ ಲೇಪನ ಮಾಡಲು ಕೊಡುಗೆ ನೀಡಿದ್ದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರುವುದು ಕರಾವಳಿ ನಗರದಲ್ಲಿ ಚರ್ಚೆಗೆ ಕಾರಣವಾಗಿದೆ. ಐತಿಹಾಸಿಕ … Read more

“ನಮಗೆ ಬ್ರೇಕ್‌ಫಾಸ್ಟ್‌ ಇಲ್ಲ, ಏನೂ ಇಲ್ಲ” : ಗೃಹ ಸಚಿವ ಜಿ. ಪರಮೇಶ್ವರ್‌ ಮಾರ್ಮಿಕ ಹೇಳಿಕೆ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಉಪಾಹಾರ ತೆಗೆದುಕೊಳ್ಳುತ್ತಾರೆ. ನಮಗೆ ಉಪಾಹಾರವೂ ಇಲ್ಲ, ಏನೂ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾರ್ಮಿಕವಾಗಿ ಹೇಳಿದ್ದಾರೆ.ಅಧಿಕಾರ ಹಂಚಿಕೆಯ ಬಗ್ಗೆ ಉಂಟಾಗಿದ್ದ ಗೊಂದಲಗಳನ್ನು ಬಗೆ ಹರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉಪಾಹಾರ ಕೂಟ ನಡೆಸಿದ ಬಗ್ಗೆ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಸಚಿವ ಪರಮೇಶ್ವರ್‌, ಅವರಿಬ್ಬರು ಬ್ರೇಕ್‌ಫಾಸ್ಟ್‌ ತೆಗೆದುಕೊಳ್ಳುತ್ತಾರೆ. ನೀವು ಏನೂ ಹೇಳುತ್ತೀರಾ? ಎಂದು ನಮನ್ನು ಕೇಳಿದರೆ, ನಮಗೆ ಬ್ರೇಕ್‌ಫಾಸ್ಟ್‌ ಇಲ್ಲ, ಏನೂ ಇಲ್ಲ. ಅವರು ನಮನ್ನು ಕರೆದಿಲ್ಲ ಎಂದರು. ಪರಸ್ಪರ ಉಪಾಹಾರ ಮಾಡುವುದಕ್ಕೆ … Read more

‘ಅಪಾರ್ಥ ಮಾಡ್ಕೋಬೇಡಿ’ ಡೈಲಾಗ್ ಖ್ಯಾತಿಯ ಸ್ಯಾಂಡಲ್ ವುಡ್ ಹಿರಿಯ ನಟ ಉಮೇಶ್ ವಿಧಿವಶ

ಸ್ಯಾಂಡಲ್ ವುಡ್ ಹಿರಿಯ ನಟ M.S. ಉಮೇಶ್(80) ವಿಧಿವಶರಾಗಿದ್ದಾರೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಉಮೇಶ್ ನಿಧನರಾಗಿದ್ದಾರೆ. ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕಿದ್ವಾಯಿ ಆಸ್ಪತ್ರೆಯಲ್ಲಿ ಉಮೇಶ್ ಕೊನೆಯುಸಿರೆಳೆದಿದ್ದಾರೆ. ಎಂ. ಎಸ್. ಉಮೇಶ್ ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಜನಿಸಿದರು. ವೃತ್ತಿ ರಂಗಭೂಮಿ ಮತ್ತು ಚಲನಚಿತ್ರ ನಟರಾಗಿ 1948ರಿಂದ ಸಕ್ರಿಯರಾಗಿದ್ದರು. ಮಕ್ಕಳ ರಾಜ್ಯ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಭೂಮಿಗೆ ಬಂದ ಭಗವಂತ, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, … Read more

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉಪನ್ಯಾಸಕಿ ಮೃತ್ಯು.. ಕಂಬನಿ ಮಿಡಿದ ವಿದ್ಯಾರ್ಥಿಗಳು

ಕಿರಿಯ ವಯಸ್ಸಿನಲ್ಲಿಯೇ ಸಾವಿರಾರು ವಿದ್ಯಾರ್ಥಿಗಳ ಮನದಲ್ಲಿ ಮನೆ ಮಾಡಿದ್ದ ಉಪನ್ಯಾಸಕಿ ಅಕ್ಕಮಹಾದೇವಿ ಕೊನೆಯುಸಿರೆಳೆದಿದ್ದಾರೆ. ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ರೀಶಶಿಧರಸ್ವಾಮಿ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಮಾಧ್ಯಮದ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ಕಮಹಾದೇವಿ ರವರು 4 ದಿನದ ಹಿಂದೆ ಪತಿ ಜತೆ ಕಾರಿನಲ್ಲಿ ಸಿಂಧನೂರು ತಾಲೂಕಿನ ತುರವಿಹಾಳ ಬಳಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಉಪನ್ಯಾಸಕಿ ಮೃತಪಟ್ಟಿದ್ದಾರೆ. ಅಪಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ ಸಾವಿರಾರು ವಿದ್ಯಾರ್ಥಿಗಳು ತಮ್ಮ … Read more

ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ..’ ಸ್ವಾಮೀಜಿಗಳಿಗೆ ಕುಟುಕಿದ ಕುಮಾರಸ್ವಾಮಿ

ಅಧಿಕಾರ ಬದಲಾವಣೆ ವಿಚಾರದಲ್ಲಿ ನಡೆಯುತ್ತಿದ್ದ ವಾಕ್ಸಮರ ಈಗ ರಾಜಕೀಯ ನಾಯಕರ ದಾಟಿ ಹೋಗಿದೆ. ಕುರ್ಚಿ ಕದನ ಈಗ ಸಮುದಾಯಗಳ ಕದನವಾಗಿದ್ದು, ಸ್ವಾಮೀಜಿಗಳ ಮಾತಿನ ಯುದ್ಧ ಕಿಚ್ಚು ಹೆಚ್ಚಿಸಿದೆ. ಇದರ ಮಧ್ಯೆ ಸ್ವಾಮೀಜಿಗಳ ಹೇಳಿಕೆಗೆ ಎಚ್.ಡಿ ಕುಮಾರಸ್ವಾಮಿ (HD Kumararaswamy)ಕಿಡಿ ಕಾರಿದ್ದಾರೆ. ರಾಜ್ಯ ಕಾಂಗ್ರೆಸ್ನ (Congress) ಪಟ್ಟದ ಫೈಟ್ಗೆ ಈಗ ಕೆಲ ಸ್ವಾಮೀಜಿಗಳು ಮತ್ತಷ್ಟು ಕಿಚ್ಚು ಹಚ್ಚಿದ್ದಾರೆ.. ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆಶಿ ಪರವಾಗಿ ಒಕ್ಕಲಿಗ ಮಠಾಧೀಶರು ಎಂಟ್ರಿ ಕೊಟ್ಟಿದ್ರೆ.. ಸಿಎಂ ಸಿದ್ದರಾಮಯ್ಯ ಪರ ಕುರುಬ … Read more

ಸಿಎಂ ಕೊಟ್ಟ ಮಾತಿನಂತೆ ನಡೆಯಲಿ ಎಂದು ನಾನು ಹೇಳಿಯೇ ಇಲ್ಲ – ಡಿಕೆಸು ಫುಲ್‌ ಯೂಟರ್ನ್‌!

ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ನಾನು ಹೇಳಿಲ್ಲ. ನಾನು ಹೇಳಿರುವುದು ಬೇರೆ ತರ, ಅದನ್ನು ತಿರುಚಲಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್‌ (DK Suresh) ಹೇಳಿದ್ದಾರೆ. ಸಿಎಂ ಕುರ್ಚಿ ಕಿತ್ತಾಟ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಸ್ಪಷ್ಟನೆ ಕೊಡುವುದು ಸಿಎಂ ಹಾಗೂ ಡಿಸಿಎಂ ಅವರ ಕರ್ತವ್ಯ. ಸಿಎಂ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ನಾನು ಹೇಳಿಲ್ಲ. ನಾನು ಹೇಳಿರುವುದು ಬೇರೆ ತರ. ಅದನ್ನು … Read more