ಬೆಂಗಳೂರು ಆರ್‌ಟಿಒ ಕರ್ಮಕಾಂಡ: ಹೊರರಾಜ್ಯದ ವಾಹನಗಳಿಗೆ ತಪಾಸಣೆ ಇಲ್ಲದೆ ‘ಫಿಟ್ನೆಸ್ ಸರ್ಟಿಫಿಕೇಟ್’ ಆರೋಪ

ಬೆಂಗಳೂರು : ನಗರದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ತಪಾಸಣೆಯೇ ಇಲ್ಲದೇ ಹೊರರಾಜ್ಯದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ವಾಹನಗಳಿಗೆ ಯಾವುದೇ ಭೌತಿಕ ತಪಾಸಣೆ ನಡೆಸದೇ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್‌ಗಳನ್ನು ‘ಮಾರಾಟ’ ಮಾಡಲಾಗುತ್ತಿದೆ ಎಂಬ ಮಾಹಿತಿ ಗುಜರಾತ್ ಅಧಿಕಾರಿಗಳಿಂದಲೇ ಲಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತು ತೀವ್ರ ವಾಗ್ದಾಳಿ ನಡೆಸಿರುವ ವಿಜಯೇಂದ್ರ, “ಇದು ಕೇವಲ … Read more

ನಮ್ಮ ತಾಳ್ಮೆಗೂ ಮಿತಿಯಿದೆ ಎಂದ ಡಿಕೆ ಸುರೇಶ್‌ ; ಸಕಾರಾತ್ಮಕ ಸಂದೇಶ ಬಂದಿದೆ – ಶಾಸಕರ ಸಭೆ ಬೇಡವೆಂದ ಡಿಕೆ ಶಿವಕುಮಾರ್!

ಕರ್ನಾಟಕ ಸಿಎಂ ಸ್ಥಾನ ಬದಲಾವಣೆ ವಿಚಾರವಾಗಿ 2 ಮಹತ್ವದ ವಿದ್ಯಮಾನ ನಡೆದಿವೆ. ನಮ್ಮ ತಾಳ್ಮೆಗೂ ಮಿತಿಯಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್‌ ಹೇಳಿದ್ರೆ, ಸಕಾರಾತ್ಮಕ ಸಂದೇಶ ಬಂದಿದೆ, ಶಾಸಕರ ಸಭೆ ಬೇಡ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ. ಅಧಿಕಾರ ಹಸ್ತಾಂತರ ವಿಚಾರದಲ್ಲಿ ವಿಳಂಬ ತಂತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ ಸಹೋದರ ಡಿಕೆ ಸುರೇಶ್‌ ಗರಂ ಆಗಿದ್ದು, ‘ಮಾತು ಕೊಟ್ಟಿದ್ದೀರಿ, ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟ’ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ … Read more

Accident : ಬರ್ತ್‌ಡೇ ಪಾರ್ಟಿಯ ಥ್ರಿಲ್ ರೈಡ್ ಆಯ್ತು ಲಾಸ್ಟ್ ರೈಡ್ : ನಾಲ್ವರು ಸ್ನೇಹಿತರು ಜೊತೆಗೆ ಸಾವು

Accident : ಗೆಳೆಯನ ಹುಟ್ಟುಹಬ್ಬದ ಜಾಲಿ ಮೂಡ್‌ನಲ್ಲಿದ್ದ ನಾಲ್ವರು ಸ್ನೇಹಿತರು ಜೊತೆಯಾಗಿ ಮಸಣ ಸೇರಿದ್ದಾರೆ. ಹೌದು ಅವರ ಕೈಯಲ್ಲಿ ಸಿಗರೇಟ್‌ಗಳಿದ್ದವು, ಕಾರಿನೊಳಗೆ ಮ್ಯೂಸಿಕ್ ಕಿವಿಗಡಚಿಕ್ಕುತ್ತಿದ್ದವು. ಅಹ್ಮದಾಬಾದ್‌ನ ಬೈಪಾಸ್ ರಸ್ತೆಯಲ್ಲಿ ಕಾರು ಚಾಲನೆಯಲ್ಲಿದ್ದಾಗಲೇ ಡ್ರೈವಿಂಗ್ ಸೀಟ್‌ನಲ್ಲಿದ್ದ ಓರ್ವ ಗೆಳೆಯ ಕಾರು 140 ವೇಗಕ್ಕೆ ತಲುಪುವವರೆಗೂ ಆಕ್ಸಿಲರೇಟರ್ ಮೇಲೆ ಕಾಲಿಟ್ಟಿದ್ದ ಮುಂದೆ ಆಗಿದ್ದು, ದೊಡ್ಡ ಅನಾಹುತ. ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಆರು ಜನರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತದ ರಭಸಕ್ಕೆ ಗಾಜು ಒಡೆದಂತೆ ಜೋರಾಗಿ ಸದ್ದಾಗಿ ನಂತರ ಕತ್ತಲಾವರಿಸಿತು. ಈ … Read more

ಗುಂಡೇಟಿನಿಂದ ಒಂದೇ ಕುಟುಂಬದ ಐವರು ಸಾವು, ಕೋಣೆಯಲ್ಲಿನ ದೃಶ್ಯ ಕಂಡು ಭಯಭೀತನಾದ ಸಹೋದರ!

ಉತ್ತರ ಪ್ರದೇಶದ ಸಹರಾನ್‌ಪುರದ ಕೊಠಡಿಯೊಂದರಲ್ಲಿ ಒಂದೇ ಕುಟುಂಬದ ಐದು ಸದಸ್ಯರು ಮೃತಪಟ್ಟಿರುವುದು ಪತ್ತೆಯಾಗಿದೆ. ಮೃತರಲ್ಲಿ ಭೂ ಸರ್ವೇಯರ್ ಅವರ ಪತ್ನಿ, ತಾಯಿ ಮತ್ತು ಅವರ ಇಬ್ಬರು ಪುತ್ರರು ಸೇರಿದ್ದಾರೆ. ಅಶೋಕ್ ಮತ್ತು ಅವರ ಪತ್ನಿ ಅಂಜಿತಾ ಶವಗಳು ನೆಲದ ಮೇಲೆ ಬಿದ್ದಿದ್ದರೆ, ಅವರ ತಾಯಿ ಮತ್ತು ಇಬ್ಬರು ಮಕ್ಕಳ ಶವ ಹಾಸಿಗೆಯ ಮೇಲೆ ಪತ್ತೆಯಾಗಿದೆ. ಎಷ್ಟೇ ಕರೆ ಮಾಡಿದರೂ ಸ್ವೀಕರಿಸದ ಕಾರಣ ಅಶೋಕ್ ಸಹೋದರ ಮನೆಗೆ ಬಂದು ನೋಡಿದ ನಂತರ ದಾರುಣ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ … Read more

ಮೇಡಮ್ ಮಗಳಿಗೆ ಹೊಡೀಬೇಡಿ, ತಾಯಿ ಇಲ್ಲದೆ ಬೆಳೆಸಿದ್ದೇನೆ, ಟೀಚರ್ ಮುಂದೆ ಕಣ್ಣೀರಿಟ್ಟ ತಂದೆ

ಟೀಚರ್ ಹೊಡೆಯುತ್ತಾರೆ ನಾನು ಶಾಲೆಗೆ ಹೋಗಲ್ಲ ಎಂದು ಅಳುತ್ತಿದ್ದ ಮಗಳ ಕಣ್ಣೀರು ನೋಡಿ ತಂದೆ ಕಣ್ಣೀರಾಗಿದ್ದಾರೆ. ಮಗಳನ್ನು ಕರೆದುಕೊಂಡು ನೇರವಾಗಿ ಶಾಲೆ ಬಂದ ತಂದೆ, ಆಕೆಯ ತರಗತಿಗೆ ತೆರಳಿ ಆಕೆಯ ಜೊತೆಗೆ ಬೆಂಚ್‌ನಲ್ಲಿ ಕುಳಿತುಕೊಂಡು ತರಗತಿ ಟೀಚರ್‌ಗೆ ಕಣ್ಣೀರಿನ ಮನವಿ ಮಾಡಿದ್ದಾರೆ. ದಯವಿಟ್ಟು ಮೇಡಂ, ನನ್ನ ಮಗಳಿಗೆ ಹೊಡೆಯಬೇಡಿ, ಆಕೆಗೆ ತಾಯಿ ಇಲ್ಲ. ನಾನು ಏಕಾಂಗಿಯಾಗಿ ಮಗಳನ್ನು ಬೆಳೆಸಿದ್ದೇನೆ, ಆಕೆಯೆ ಹೊಡೆಯಬೇಡಿ ಎಂದು ಮಗಳನ್ನು ಅಪ್ಪಿಕೊಂಡು ತಂದೆ ಕಣ್ಣೀರಿಟ್ಟ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಮಗಳ … Read more

ಯೋಗ ಕೊನೆಯಾಗುವ ದಿನಗಳು ಸಮೀಪಿಸಿವೆ : ಸಿಎಂ ಸಿದ್ದರಾಮಯ್ಯ ವಿರುದ್ದ ನಟ ಜಗ್ಗೇಶ್ ಬೇಸರ

ಸಿದ್ದರಾಮಯ್ಯ ಅವರು ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ನಿರಾಕರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, ಇದು ರಾಯರಿಗೆ ಮಾಡಿದ ಅಪಮಾನವಾಗಿದ್ದು, ಇಂತಹ ಕೃತ್ಯದಿಂದ ಯೋಗ ಕೊನೆಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಸೋಮವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವಗ ನಟ ಜಗ್ಗೇಶ್, ಯೋಗ ಕೊನೆಯಾಗುವ ದಿನಗಳು ಸಮೀಪಿಸಿವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರವಾದ ಇತಿಹಾಸವಿಲ್ಲ. … Read more

ಮಾತನಾಡಲು ನಿರಾಕರಿಸಿದ್ದಕ್ಕೆ 14 ಬಾಲಕಿ ಮೇಲೆ 19ರ ಬಾಲಕ ಆಸಿಡ್ ದಾಳಿ! ಪೊಲೀಸರಿಂದ ‘ಮೆರವಣಿಗೆ’ ಶಾಸ್ತಿ

ತನ್ನೊಂದಿಗೆ ಮಾತನಾಡಲು ನಿರಾಕರಿಸಿದ ಮತ್ತು ಗದರಿಸಿದ ಕಾರಣಕ್ಕೆ 14 ವರ್ಷದ ಶಾಲಾ ಬಾಲಕಿಯ ಮೇಲೆ 19 ವರ್ಷದ ಯುವಕನೊಬ್ಬ ಆಸಿಡ್ ದಾಳಿ ಮಾಡಿದ್ದಾನೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಮನಕಲಕುವ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದೆ. ಬಂಧಿತ ಆರೋಪಿಯನ್ನು ಓಂಪ್ರಕಾಶ್ ಅಲಿಯಾಸ್ ಜಾನಿ (19) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಈತ, ಮದುವೆಯೊಂದರ ಚಿತ್ರೀಕರಣದ ವೇಳೆ 9ನೇ ತರಗತಿ ವಿದ್ಯಾರ್ಥಿನಿಯನ್ನು ನೋಡಿದ್ದನು. ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಈತ, ಅವಳನ್ನು ಸಂಪರ್ಕಿಸಲು ಮತ್ತು … Read more

ಇಂದಿನ ಅಡಿಕೆ ಧಾರಣೆ – 20 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆ ಧಾರಣೆ – ಕರ್ನಾಟಕ ಮಾರುಕಟ್ಟೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಚಿಕ್ಕಮಗಳೂರು ಸಿಪ್ಪೆಗೋಟು ₹13,000 ₹12,651 ಕುಮಟಾ ಫ್ಯಾಕ್ಟರಿ ₹24,829 ₹21,769 ಶಿರಸಿ ಬೆಟ್ಟೆ ₹52,066 ₹45,652 ದಾವಣಗೆರೆ ಸಿಪ್ಪೆಗೋಟು ₹12,000 ₹12,000 ಚಿತ್ರದುರ್ಗ ರಾಶಿ ₹52,469 ₹52,289 ಸಾಗರ ರಾಶಿ ₹58,710 ₹56,299 ಶಿರಸಿ ಕೆಂಪುಗೋಟು ₹39,518 ₹32,936 ಸಾಗರ ಚಾಲಿ ₹45,599 ₹44,599 ಶಿರಸಿ ರಾಶಿ ₹57,109 ₹53,771 ಶಿರಸಿ ಬಿಳೆಗೋಟು ₹43,160 ₹33,654 ಚಿತ್ರದುರ್ಗ ಬೆಟ್ಟೆ ₹38,079 ₹37,849 … Read more

ಗಿಲ್ಲಿ ‘ಬಡವನ ಥರ ಗೆಟಪ್ ಹಾಕ್ಕೊಂಡು ಬಿಗ್ ಬಾಸ್ ಗೆದ್ದಿದ್ದಾರೆ’ : ಅಶ್ವಿನಿ ಗೌಡ

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ (ಗಿಲ್ಲಿ ನಟರಾಜ್) ಅಧಿಕೃತವಾಗಿ ಟ್ರೋಫಿ ಗೆದ್ದು ಕನ್ನಡಿಗರ ಮನಗೆದ್ದಿದ್ದಾರೆ. ಜನವರಿ 18, 2026ರಂದು ನಡೆದ ಫಿನಾಲೆಯಲ್ಲಿ ಗಿಲ್ಲಿ ಭರ್ಜರಿ ಮತಗಳೊಂದಿಗೆ ವಿನ್ನರ್ ಆಗಿ ಹೊರಹೊಮ್ಮಿದ್ದು, ₹50 ಲಕ್ಷ ಬಹುಮಾನ ಹಣ, ಹೊಸ SUV ಕಾರು ಮತ್ತು ಹೋಸ್ಟ್ ಕಿಚ್ಚ ಸುದೀಪ್‌ ಅವರಿಂದ ₹10 ಲಕ್ಷ ಗಿಫ್ಟ್ ಪಡೆದಿದ್ದಾರೆ. ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆಗಿದ್ದರೆ, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಸ್ಥಾನ … Read more

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರೇ ಗಮನಿಸಿ: ಇನ್ಮುಂದೆ ವಸ್ತ್ರ ಸಂಹಿತೆ ಜಾರಿ!

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದ್ದು, ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಪುರುಷ ಭಕ್ತರು ತಮ್ಮ ಶರ್ಟ್‌ಗಳನ್ನು ತೆಗೆಯುವುದು ಕಡ್ಡಾಯವಾಗಿದೆ. ಪರ್ಯಾಯ ಶಿರೂರು ಮಠ ಹೊರಡಿಸಿದ ಈ ನಿರ್ದೇಶನವು ಜನವರಿ 19 ಸೋಮವಾರದಿಂದ ಜಾರಿಗೆ ತಂದಿದೆ. ಮಹಿಳಾ ಭಕ್ತರು ಸಾಧಾರಣ ಮತ್ತು ಸಾಂಪ್ರದಾಯಿಕ ಉಡುಪನ್ನು ಧರಿಸುವುದು ಕಡ್ಡಾಯವಾಗಿದೆ, ಆದರೆ ಜೀನ್ಸ್, ಟಿ-ಶರ್ಟ್, ತೋಳಿಲ್ಲದ ಬಟ್ಟೆ ಅಥವಾ ಇತರ ಸಾಂಪ್ರದಾಯಿಕವಲ್ಲದ ಉಡುಪುಗಳನ್ನು ಧರಿಸಿ ಬರಬಾರದು. ಪುರುಷರು ದರುಶನಕ್ಕೆ ಆಗಮಿಸುವ ವೇಳೆ ಶರ್ಟ್, … Read more