ಇನ್ಮುಂದೆ ಅಪಘಾತವಾದ್ರೆ ಪೊಲೀಸ್ ಠಾಣೆಗೆ ಹೋಗೋ ಅವಶ್ಯಕತೆ ಇಲ್ಲ, ಜಸ್ಟ್ ಹೀಗೆ ಮಾಡಿ

ಬೆಂಗಳೂರು ನಗರದಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಪರಿಣಾಮವಾಗಿ (Tech Tips) ರಸ್ತೆ ಅಪಘಾತಗಳ (Accident) ಪ್ರಮಾಣವೂ ಏರಿಕೆಯಾಗಿದ್ದು, ಸಣ್ಣಪುಟ್ಟ ಗುದ್ದಾಟಗಳು ಸಾಮಾನ್ಯವಾಗಿವೆ. ಇಂತಹ ಸಂದರ್ಭಗಳಲ್ಲಿ ಪೊಲೀಸ್ ಠಾಣೆಗೆ (Police Station) ಹೋಗಿ ಅಪಘಾತ ದಾಖಲಿಸುವುದು ಜನರಿಗೆ ಸಮಯ ಖರ್ಚು ಮತ್ತು ತೊಂದರೆ. ಈ ಸಮಸ್ಯೆಯನ್ನು ಪರಿಹರಿಸಲು ಪೊಲೀಸ್ ಇಲಾಖೆ ಹೊಸ ಸುಲಭ ವಿಧಾನವನ್ನು ಪರಿಚಯಿಸಿದೆ. ಇದೀಗ, ಇ-ಆಕ್ಸಿಡೆಂಟ್ ರಿಪೋರ್ಟ್ ಮೂಲಕ ಸಣ್ಣ ಅಪಘಾತಗಳನ್ನು ನೀವು ಸ್ವತಃ ಆನ್‌ಲೈನ್‌ನಲ್ಲಿ ದಾಖಲಿಸಬಹುದು. ಯಾವಾಗ, ಎಲ್ಲಲ್ಲಿ ಅಪಘಾತವಾಗಿದೆ … Read more

ಧ್ವಂಸಗೊಂಡಿದ್ದು ಬಾಬ್ರಿ ಮಸೀದಿಯಲ್ಲ, ಭಾರತದ ಭ್ರಾತೃತ್ವ ಭಾವನೆ : ಬಾನು ಮುಷ್ತಾಕ್

ಡಿಸೆಂಬರ್ 6 ಭಾರತವು ಬಾಬಾಸಾಹೇಬ ಅಂಬೇಡ್ಕರ್ ಮತ್ತು ಭಾತೃತ್ವವನ್ನು ಕಳೆದುಕೊಂಡ ದಿನವಾಗಿದ್ದು, ಇದು ಭಾರತೀಯರಿಗೆ ಕರಾಳ ದಿನವಾಗಿದೆ ಎಂದು ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ, ವಕೀಲೆ ಮತ್ತು ಕಾರ್ಯಕರ್ತೆಯೂ ಆಗಿರುವ ಬಾನು ಮುಷ್ತಾಕ್ ಶನಿವಾರ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದ (ಬಿಎಲ್‌ಎಫ್) 14 ನೇ ಆವೃತ್ತಿಯಲ್ಲಿ ಆಶಯ ನುಡಿಗಳ ಜತೆಗೆ, ‘ಬಾನು ಬಾನುವಾಗಿ, ಬಾನು ಬಂಡಾಯವಾಗಿ’ ಗೋಷ್ಠಿಯನ್ನು ಉದ್ದೇಶಿಸಿ ಬಾನು ಮುಷ್ತಾಕ್ ಅವರು ಮಾತನಾಡಿದರು. ದೇಶದ ಜನರಿಗೆ ಸಮಾನತೆ ಭ್ರಾತೃತ್ವವನ್ನು ಬೋಧಿಸಿದ್ದ … Read more

ಹಣಕಾಸಿನ ವಿಚಾರಕ್ಕೆ ಗಲಾಟೆ : ದೊಡ್ಡಪ್ಪನನ್ನೇ ಕೊಲೆಗೈದ ಪಾಪಿ ಪುತ್ರ

ಮನೆ ಮಾರಾಟ ಮಾಡಿದ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿ ದೊಡ್ಡಪ್ಪನನ್ನೇ ಪಾಪಿ ಪುತ್ರ ಹತ್ಯೆ ಮಾಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುರ್ರಂಪಲ್ಲಿಯಲ್ಲಿ ಘಟನೆ ನಡೆದಿದೆ. ನಾರಾಯಣಸ್ವಾಮಿ ಕೊಲೆಯಾದವರು ಎಂದು ಹೇಳಲಾಗಿದೆ. ಮಧುಸೂದನ ದೊಡ್ಡಪ್ಪನನ್ನೇ ಕೊಲೆ ಮಾಡಿದ ಆರೋಪಿ. ಗಲಾಟೆಯ ವೇಳೆ ನಾರಾಯಣ ಸ್ವಾಮಿಯನ್ನು ಮಧುಸೂದನ್ ತಳ್ಳಿದ್ದಾನೆ. ಈ ವೇಳೆ ಮನೆಯ ಗೇಟ್ ತಗುಲಿ ನಾರಾಯಣಸ್ವಾಮಿ ಸಾವನ್ನಪ್ಪಿದ್ದಾರೆ. ಘಟನೆ ನಂತರ ಆರೋಪಿ ಮಧುಸೂಧನ ಪರಾರಿಯಾಗಿದ್ದಾನೆ. ಕೆಂಚರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. sjnkannadanewstime.in

‘ಹೆಣ್ಣುಮಕ್ಕಳ ತಂಟೆಗೆ ಬಂದ್ರೆ.. ಯಮರಾಜ ಕಾಯುತ್ತಿರುತ್ತಾನೆ’: ಸಿಎಂ ಯೋಗಿ ಆದಿತ್ಯಾನಾಥ್ ಎನ್ಕೌಂಟರ್ ಎಚ್ಚರಿಕೆ!

ಹೆಣ್ಣುಮಕ್ಕಳ ತಂಟೆಗೆ ಬಂದರೆ ತಮ್ಮ ಸರ್ಕಾರ ಸಹಿಸುವುದಿಲ್ಲ.. ಮಗಳ ಸುರಕ್ಷತೆಯೊಂದಿಗೆ ಆಟವಾಡಿದರೆ, ಯಮರಾಜ ನಿಮಗಾಗಿ ಕಾಯುತ್ತಿರುತ್ತಾನೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಯೋಗಿ ಆದಿತ್ಯಾನಾಥ್, ‘ಉತ್ತರ ಪ್ರದೇಶದಲ್ಲಿ ಅಪರಾಧ ಮತ್ತು ಅಪರಾಧಿಗಳಿಗೆ ಜಾಗವಿಲ್ಲ. ಹೆಣ್ಣುಮಕ್ಕಳ ಸುರಕ್ಷತೆಯನ್ನು ಹಾಳುಮಾಡುವ ಯಾರನ್ನಾದರೂ ನಿರ್ಮೂಲನೆ ಮಾಡಲಾಗುತ್ತದೆ’ ಎಂದು ಎನ್‌ಕೌಂಟರ್‌ಗಳು ಮತ್ತು ಬುಲ್ಡೋಜರ್‌ ಕ್ರಮಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ವ್ಯವಸ್ಥೆಯ ಮೇಲೆ ಹೊರೆಯಾಗಿರುವವರ ಹೊರೆಯಿಂದ … Read more

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ನಾನೇನೋ ಪುಟಿನ್‌ಗೆ ಇಲ್ಲೇ ಟಿಕೆಟ್‌ ಕೊಡ್ತಾರೆ ಎಂದುಕೊಂಡಿದ್ದೆ. ಮೋದಿ-ಪುಟಿನ್‌ ಫ್ರೆಂಡ್‌ಶಿಪ್‌ ಎಷ್ಟಿದೆ ಅನ್ನೋದನ್ನೇ ಎಲ್ಲರೂ ತೋರಿಸ್ತಾರೆ. ಆದರೆ, ಇದರಿಂದ ನಮಗೇನು ಲಾಭವಾಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ ಎಂದು ಕಾರ್ಮಿಕ ಕಲ್ಯಾಣ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಎಲೆಕ್ಟ್ರಿಕ್ ರಾಪಿಡ್‌ ಟ್ರಾನ್ಸಿಟ್ ಯೋಜನೆ ಆರಂಭಿಸುವ ಬಗ್ಗೆ ಸಿಎಂ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಈ ಮಾತು ಹೇಳಿದ್ದಾರೆ. ಸಿಎಂ … Read more

ಸ್ವಂತ ಮಗನಾದ್ರೂ ಸಿಗಲ್ಲ ತಂದೆಯ ಆಸ್ತಿ..! ತಂದೆಯ ಆಸ್ತಿ ವರ್ಗಾವಣೆ ಕುರಿತು ಹೈಕೋರ್ಟ್ ಹೇಳುವುದೇನು ಗೊತ್ತಾ?

Rights on Fathers Property : ರಾಜಸ್ಥಾನ ಹೈಕೋರ್ಟ್ ತನ್ನ ತಂದೆ ಸಂಪಾದಿಸಿದ ಆಸ್ತಿಯ ಮೇಲೆ ಮಗನಿಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ತಂದೆ ಪ್ರೀತಿಯಿಂದ ಮಗನನ್ನು ಮನೆಯಲ್ಲಿ ಇರಲು ಬಿಟ್ಟ ಮಾತ್ರಕ್ಕೆ ಮಗನಿಗೆ ಮನೆಯ ಮಾಲೀಕತ್ವ ಸಿಗುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮಕ್ಕಳು ಪೋಷಕರ ಅನುಮತಿಯೊಂದಿಗೆ ಮಾತ್ರ ಮನೆಯಲ್ಲಿ ಉಳಿಯಬಹುದು ಮತ್ತು ತಂದೆಗೆ ಯಾವುದೇ ಸಮಯದಲ್ಲಿ ಆ ಅನುಮತಿಯನ್ನು ಹಿಂಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ. ಒಂದು ಪ್ರಕರಣದಲ್ಲಿ, ಒಬ್ಬ … Read more

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!

ಹಾವೇರಿ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರು ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಜೀವ ದಹನವಾಗಿದ್ದಾರೆ. ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದ ಅವರ ದೇಹವನ್ನು ಕೈಯಲ್ಲಿದ್ದ ಉಂಗುರ ಮತ್ತು ಕಾರ್ ನಂಬರ್ ಪ್ಲೇಟ್‌ನಿಂದ ಪತ್ತೆಹಚ್ಚಲಾಗಿತ್ತು. ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಸಜೀವ ದಹನವಾದ ಹಾವೇರಿ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ಅಂತ್ಯಕ್ರಿಯೆ ಶನಿವಾರ ಅವರ ಹುಟ್ಟೂರು ಮುರಗೋಡದಲ್ಲಿ ನಡೆಯಿತು. ಹುಬ್ಬಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆದು ಶವ … Read more

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!

ನಾನು 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ, ಎಂದು ಮಾಜಿ ಸಚಿವ ಕೆಎನ್‌ ರಾಣಣ್ಣ ಅವರು ಮಹತ್ವದ ನಿರ್ಧಾರವೊಂದನ್ನು ಘೋಷಿಸಿದ್ದಾರೆ. ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ತುಮಕೂರಿನಲ್ಲಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ ಡಿಕೆಶಿ ಸಿಎಂ ಆದ್ರೆ ನಾನು ಅವರ ಸಂಪುಟದಲ್ಲಿ ಮಂತ್ರಿ ಆಗೋಲ್ಲ: ಸಚಿವ ಸ್ಥಾನದ ಬೇಡಿಕೆ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ರಾಜಣ್ಣ ಅವರು, ನಾನು ಮೊದಲೇ ಹೇಳಿದ್ದೇನೆ, ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ … Read more

‘ಸೀರಿಯಲ್ ಕಿಲ್ಲರ್’ ಮಹಿಳೆಯಿಂದ ಶಾಕಿಂಗ್‌ ಹೇಳಿಕೆ: ಏಕಾದಶಿ, ದಶಮಿಯಂದೇ ನಾಲ್ಕು ಮಕ್ಕಳ ಹತ್ಯೆ !

ಹರಿಯಾಣದ ಪಾಣಿಪತ್‌ನಲ್ಲಿ ಸರಣಿ ಮಕ್ಕಳ ಹತ್ಯೆ ಆರೋಪದ ಮೇಲೆ 34 ವರ್ಷದ ಪೂನಂ ಎಂಬ ಮಹಿಳೆಯನ್ನು ಮಂಗಳವಾರ ಬಂಧಿಸಲಾಗಿದೆ. ಈಕೆಯ ಪತಿ ನವೀನ್, ಬರೋಡಾ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ತನ್ನ ಮಕ್ಕಳಿಗಿಂತ ‘ಹೆಚ್ಚು ಆಕರ್ಷಕವಾಗಿ’ ಅಥವಾ ‘ಸುಂದರವಾಗಿ’ ಇರುವ ಮಕ್ಕಳನ್ನು ಕೊಲ್ಲಲು ತನಗೆ ಪ್ರೇರಣೆ ಬರುತ್ತಿತ್ತು ಎಂದು ಪೂನಂ ಒಪ್ಪಿಕೊಂಡಿದ್ದಾಳೆ. ಇತರ ಮಕ್ಕಳ ಕೊಲೆಗೆ ತನ್ನ ಮಗ ಸಾಕ್ಷಿಯಾಗಿದ್ದಾನೆ ಎಂಬ ಭಯದಿಂದ, ಪೂನಂ ತನ್ನ ಸ್ವಂತ ಮಗನನ್ನೂ ಕೊಂದಿರುವುದಾಗಿ … Read more

ಗ್ಯಾಸ್ ಗೀಸರ್ ಹಾಕಿಸಿದ್ದೀರಾ? ಹುಷಾರು..! ಗ್ಯಾಸ್‌ ಸೋರಿಕೆಯಾಗಿ 24 ರ ಯುವತಿ ಸಾವು

ಬೆಂಗಳೂರಿನಲ್ಲಿ (Bengaluru) ಗ್ಯಾಸ್ ಗೀಸರ್ (Gas Geyser) ಅವಘಡಕ್ಕೆ ಮತ್ತೊಂದು ಬಲಿಯಾಗಿದೆ. ಸ್ನಾನ ಮಾಡುವ ವೇಳೆ ವಿಷಕಾರಿ ಅನಿಲ ಬಿಡುಗಡೆಯಾದ ಪರಿಣಾಮ 24 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ. ಮೃತ ಯುವತಿಯನ್ನು 24 ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ. ಕಳೆದ 15 ದಿನಗಳಿಂದ ಭೂಮಿಕಾ ಮತ್ತು ಕೃಷ್ಣಮೂರ್ತಿ ಎಂಬುವವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅದರಂತೆ ಇದೀಗ ಸ್ನಾನಕ್ಕೆ ಹೋದಾಗ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಈ ಅವಘಡ ಸಂಭವಿಸಿದೆ. ಕೃಷ್ಣಮೂರ್ತಿ ನವೆಂಬರ್ 29 ರಂದು ಬೆಳಿಗ್ಗೆ … Read more