ಮೂವರೊಡನೆ ಚಕ್ಕಂದ ಆಡುತ್ತಿದ್ದ ಕಿರುತೆರೆ ನಟಿ – ಇಬ್ಬರಿಗಾಗಿ ಒಬ್ಬನ ಕೈಕಾಲು ಕಟ್ಟಿ ಹತ್ಯೆ!

ಬೆಂಗಳೂರಲ್ಲಿ ಪ್ರಿಯತಮನ ಪಾಲಿಗೆ ಪ್ರೇಯಸಿಯೇ ವಿಲನ್ ಆಗಿದ್ದಾಳೆ. ಕೈಕಾಲು ಕಟ್ಟಿ ಬಾಯಿಗೆ ಟೈಪ್ ಸುತ್ತಿ ಪ್ರಿಯಕರನ ಕೊಲೆ ಮಾಡಿದ್ದಾಳೆ. ಈ ಕೇಸ್ ಸಂಬಂಧ ಮಹಿಳೆಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಊರ್ವಶಿ ಅಲಿಯಾಸ್ ಸಿಂಧು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಹಾಸನ ಮೂಲದ ಪ್ರಿಯಕರ ಮೋಹನ ಕೃಷ್ಣ(29) ನನ್ನು ಇತ್ತೀಚೆಗೆ ಕೊಲೆ ಮಾಡಿದ್ದಳು. ಪ್ರಾಥಮಿಕ ವಿಚಾರಣೆಯಲ್ಲಿ ಕಿರುಕುಳ ನೀಡುತ್ತಿರುವುದಕ್ಕೆ ಪ್ರಿಯಕರನನ್ನು ಕೊಲೆ ಮಾಡಿರುವುದಾಗಿ ಊರ್ವಶಿ ಪೊಲೀಸರಿಗೆ ತಿಳಿಸಿದ್ದಾಳೆ. ಮೂರು ತಿಂಗಳ ಹಿಂದೆ ಬಾಗಲಗುಂಟೆಯ ವಿಜಯಲಕ್ಷ್ಮಿ ಬಡಾವಣೆಗೆ ಬಂದಿದ್ದ … Read more

ಕರಡಿ ದಾಳಿಗೆ ಕುರಿಗಾಹಿ ಓಬಣ್ಣ ಸಾವು; ರೊಚ್ಚಿಗೆದ್ದ ಜನರಿಂದ ದೊಣ್ಣೆಯ ಹೊಡೆತ ತಿಂದು ಪ್ರಾಣಬಿಟ್ಟ ಕರಡಿ.!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಮನುಷ್ಯ ಮತ್ತು ಪ್ರಾಣಿ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದೆ. ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿಯ ಮೇಲೆ ಕರಡಿಯೊಂದು ದಾಳಿ ನಡೆಸಿದ್ದು, ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕುರಿಗಾಹಿಯನ್ನು ಕೊಂದ ಕರಡಿಯನ್ನು ಬೆನ್ನಟ್ಟಿ ಹೊಡೆದು ಸಾಯಿಸಿರುವ ಘಟನೆ ನಡೆದಿದೆ. ಘಟನೆಯ ವಿವರ ಕೂಡ್ಲಿಗಿ ತಾಲೂಕಿನ ಹಲಸಾಗರ ಗ್ರಾಮದ ಓಬಣ್ಣ (30) ಎಂಬುವವರೇ ಕರಡಿ ದಾಳಿಗೆ ಬಲಿಯಾದ ದುರ್ದೈವಿ ಕುರಿಗಾಹಿ. ಎಂದಿನಂತೆ ಶನಿವಾರ ಬೆಳಿಗ್ಗೆ ಓಬಣ್ಣ ತಮ್ಮ … Read more

Horoscope Today : 03 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಮುಖದಲ್ಲಿ ದುಗುಡತೆ, ತರಾತುರಿ… ಈ ವ್ಯಕ್ತಿ ಯಾರೆಂದು ಊಹಿಸಬಲ್ಲಿರಾ? ಹೌದು ಅದು ನೀವೇ. ಮತ್ತು ಈಗ ವಿಶೇಷವಾಗಿ ನೀವು ಈ ಸ್ಥಿತಿಯಲ್ಲಿರುತ್ತೀರಿ. ನಿಮ್ಮಲ್ಲಿರುವ ಪ್ರತಿಭಟನಾತ್ಮಕ ನಿಲುವನ್ನು ಹತೋಟಿಗೆ ತರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ತಾಳ್ಮೆಯಿಂದಿರಿ ಮತ್ತು ಆತುರದ ಪ್ರತಿಕ್ರಿಯೆ ಅಥವಾ ನಿರ್ಧಾರವನ್ನು ತಪ್ಪಿಸಿ. ಇಂದು ನೀವು ಮಾನಸಿಕವಾಗಿ ಕುಗ್ಗಬಹುದು. ಅಪೇಕ್ಷಿತ ಫಲಿತಾಂಶವನ್ನು ಪಡೆಯುವ ನಿಮ್ಮ ಹೆಣಗಾಟವು ಕೊನೆಯಿಲ್ಲದ್ದಾಗಿರುತ್ತದೆ ಆದರೂ, ಅಧಿಕಾರ ಸಂಬಂಧಿ ಕಾರ್ಯಗಳಿಂದ ಪ್ರಯೋಜನ ಉಂಟಾಗುತ್ತದೆ. ಇಂದು ನಿಮ್ಮ ಗ್ರಹಗತಿಯು ಉತ್ತಮವಾಗಿರುವುದಿಲ್ಲ. ಕಚೇರಿಯಲ್ಲಿ … Read more

ವಿಶ್ವಕ್ಕೆ ಯುದ್ದದ ಭೀತಿ : ಜಾಗತಿಕ ನಾಯಕನ ದುರ್ಮರಣ : ನಿಜವಾಯ್ತು ಕೋಡಿಶ್ರೀಗಳ ಭವಿಷ್ಯವಾಣಿ.!

ರಾಜ್ಯ, ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಪ್ರಮುಖ ಘಟನೆಗಳು ನಡೆದರೂ, ಅದಕ್ಕೆ ಹಾಸನದ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವನ್ನು ತಾಳೆ ಹಾಕುವುದು ಈಗಿನ ಸಂಪ್ರದಾಯವಾಗಿ ಬಿಟ್ಟಿದೆ. ಈಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಬೆಳವಣಿಗೆಗಳು ಶ್ರೀಗಳ ಭವಿಷ್ಯವಾಣಿಯನ್ನು ಮತ್ತೆ ಮುನ್ನೆಲೆಗೆ ತಂದಿವೆ. ಜಾಗತಿಕ ನಾಯಕನ ದುರ್ಮರಣ: ಶ್ರೀಗಳ ಭವಿಷ್ಯವಾಣಿ ಕೆಲವು ದಿನಗಳ ಹಿಂದೆ ಬೆಳಗಾವಿಯ ಭಕ್ತರ ಮನೆಯೊಂದರಲ್ಲಿ ಮಾತನಾಡಿದ್ದ ಕೋಡಿಶ್ರೀಗಳು, “ದೇಶ ದೇಶಗಳ ನಡುವೆ ಜಿದ್ದು … Read more

ಲಿವರ್ ಕ್ಯಾನ್ಸರ್ 4ನೇ ಹಂತದಲ್ಲಿದ್ದರೆ ದೇಹದಲ್ಲಿ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ.?

ಟೀಮ್  ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಲಿವರ್ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ರಿಂಕು ತಂದೆ ಖಾನ್‌ಚಂದ್ ಸಿಂಗ್ ನಾಲ್ಕನೇ ಸ್ಟೇಜ್ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಷ್ಟಕ್ಕೂ ನಾಲ್ಕನೇ ಸ್ಟೇಜ್ ಲಿವರ್ ಕ್ಯಾನ್ಸರ್ ಲಕ್ಷಣಗಳೇನು ಎನ್ನುವುದನ್ನು ನೋಡೋಣ ಬನ್ನಿ. ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ಅವರು ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಹಂತದಲ್ಲಿ ಕ್ಯಾನ್ಸರ್ ಕೋಶಗಳು ಲಿವರ್‌ನಿಂದ ದೇಹದ ಇತರ ಭಾಗಗಳಿಗೆ ಹರಡಿರುತ್ತವೆ. … Read more

Horoscope Today : 01 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ದಿನ ಪೂರ್ತಿಯ ಕೊರಗು ಹಾಗೂ ತೊಂದರೆಗಳಿಗೆ ಸಿದ್ಧರಾಗಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾನೆ. ನೀವು ಭಾವೇವೇಶಕ್ಕೆ ಒಳಗಾಗಿ ಅನುಚಿತ ಮಾತುಗಳನ್ನು ಆಡಿ ನಂತರ ಪಶ್ಚಾತ್ತಾಪಕ್ಕೆ ಒಳಪಡುವಿರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆಸ್ತಿ ಸಂಬಂಧಿ ಮಾತುಕತೆಗಳಲ್ಲಿ ಅಥವಾ ವಾಗ್ವಾದಗಳಲ್ಲಿ ಪ್ರವೇಶಿಸಬೇಡಿ. ಎಚ್ಚರಿಕೆಯಿಂದ ಮುನ್ನಡೆಯಿರಿ. ಜಲಜಂತುಗಳಿಂದ ದೂರವಿರಿ. ವಿದ್ಯಾರ್ಥಿಗಳಿಗೆ ಮತ್ತು ಪಂಡಿತರಿಗೆ ಈ ದಿನವು ಇತರ ದಿನದಂತೆ ಸಾಮಾನ್ಯವಾಗಿರುತ್ತದೆ. ವೃಷಭ :- ಈ ದಿನವು ನಿಮ್ಮನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಅತ್ಯಂತ ಹುರುಪು,ಉತ್ಸಾಹ … Read more

ಹೃದಯಾಘಾತವಲ್ಲ ಇದು ವ್ಯವಸ್ಥಿತ ಕೊಲೆ? ಪತ್ನಿಯ 3ನೇ ಮದುವೆಯಿಂದ ಬಯಲಾಯ್ತು ಪರಮೇಶ್ ಸಾವಿನ ರಹಸ್ಯ.!

ಜನವರಿ 30ರಂದು ಸಂಭವಿಸಿದ ಪರಮೇಶ್ ಎಂಬುವವರ ಸಾವು ಈಗ ಪೊಲೀಸ್ ತನಿಖೆಯ ಕೌತುಕಕ್ಕೆ ಕಾರಣವಾಗಿದೆ. ಮೊದಲಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ, ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ, ಪತಿ ಸತ್ತ ಕೇವಲ 20 ದಿನಕ್ಕೆ ಪತ್ನಿ ಮತ್ತೊಂದು ಮದುವೆಯಾಗಿರುವುದು ಈಗ ಅನುಮಾನಕ್ಕೆ ನಾಂದಿ ಹಾಡಿದೆ. ಬೆಂಗಳೂರಿನಲ್ಲಿ ಕಾರ್ ಚಾಲಕನಾಗಿದ್ದ ಪರಮೇಶ್ ಮತ್ತು ಆಶಾ ಪ್ರೀತಿಸಿ ಹತ್ತು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಪರಮೇಶ್‌ಗೆ ಆಶಾ ಎರಡನೇ ಹೆಂಡತಿಯಾಗಿದ್ದರೆ, ಆಶಾಗೆ ಪರಮೇಶ್ ಎರಡನೇ ಗಂಡನಾಗಿದ್ದರು. ಕಳೆದ … Read more

ಈಗಾಗಲೇ ನಾವು ಸುಸ್ತಾಗಿದ್ದೇವೆ, ಪಿಂಚಣಿಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ : ಡಿಸಿಎಂ ಡಿ.ಕೆ ಶಿವಕುಮಾರ್

ಈಗಾಗಲೇ ನಾವು ಸುಸ್ತಾಗಿದ್ದೇವೆ. ಹಾಗಾಗಿ ಹೊಸ ಪಿಂಚಣಿ ಹಳೇ ಪಿಂಚಣಿಯ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ ಹಾಗೂ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಕರ ಸಂಘದ 26 ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಿದರು. ಬೆಂಗಳೂರಿನಲ್ಲಿ ಶಿಕ್ಷಕರ ಸಂಘಕ್ಕೆ ಜಾಗ ಕೊಡುವುದು ನಮ ವ್ಯಾಪ್ತಿಯಲ್ಲಿ ಇದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುವದಾಗಿ ಭರವಸೆ ನೀಡಿದರು.ಮತದಾರರ ಪಟ್ಟಿ ಪರಿಷ್ಕರಣೆಯಿಂದ ಕೈ ಬಿಡುವಂತೆ … Read more

ಆಂಟಿಯೊಡನೆ ಲವಿಡವಿ, ಹಂತಕನಾದ ಪ್ರೇಮಿ – ಪುಟ್ಟ ಮಕ್ಕಳು ಅನಾಥ.!

ಮದುವೆಯಾಗಿ ಇಬ್ಬರು ಮಕ್ಕಳಿರುವ ಮಹಿಳೆಯೊಂದಿಗೆ ಯುವಕನೊಬ್ಬ ಪ್ರೇಮ ಸಂಬಂಧ ಇಟ್ಟುಕೊಂಡು, ಕುಡಿದ ಅಮಲಿನಲ್ಲಿ ಚಾಕು ಬೀಸಿ ಆಕೆಯನ್ನು ಹತ್ಯೆ ಮಾಡಿರುವ ಶಾಕಿಂಗ್‌ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಯಿಯನ್ನು ಕಳೆದುಕೊಂಡಿರುವ ಪುಟ್ಟ ಮಕ್ಕಳಿಬ್ಬರು ಈಗ ಅನಾಥರಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ತೇಜಸ್ವೀನಿ (26) ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನನ್ನು ಬಿಟ್ಟು ಇಬ್ಬರು ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತಿದ್ದಳು. ಹೋಟೆಲ್‌ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಹೋಟೆಲ್‌ನವರೇ ಕೊಟ್ಟಿದ್ದ ರೂಮಿನಲ್ಲಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಳು. ಈ ನಡುವೆ ಮಹಿಳೆಗೆ ಸಂದೀಪ್ … Read more

ಮೋದಿಗೆ 10 ಕೋಟಿ ಫಾಲೋವರ್ಸ್- ಇದರಿಂದ ಏನು ಪ್ರಯೋಜನ ಎಂದ ಪ್ರಕಾಶ್ ರಾಜ್ : ಬರ್ನಲ್ ಬೇಕಾ ಎಂದ ಅಣ್ಣಾಮಲೈ

ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಸಾಧನೆಯನ್ನು ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ನೂರು ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ವಿಶ್ವದ ಮೊದಲ ನಾಯಕರಾಗಿ ಹೊರಹೊಮ್ಮಿದ್ದರು. ಇದನ್ನು, ಬಿಜೆಪಿ ನಾಯಕ ಅಣ್ಣಾಮಲೈ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಕ್ಕೆ, ಪ್ರಕಾಶ್ ರಾಜ್ ಲೇವಡಿ ಮಾಡಿದ್ದರು. ಇದಕ್ಕೆ, ಮಾಜಿ ಐಪಿಎಸ್ ತಿರುಗೇಟು ನೀಡಿದ್ದಾರೆ. ಬಿಜೆಪಿ, ಸಂಘ ಪರಿವಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವವರಲ್ಲಿ ಮಂಚೂಣಿಯಲ್ಲಿರುವ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ … Read more