Horoscope Today : 29 ಏಪ್ರಿಲ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಹಣಕಾಸು ಮತ್ತು ವ್ಯವಹಾರ ಸಂಬಂಧಿ ವಿಚಾರಗಳಿಗೆ ಇಂದು ಅನುಕೂಲಕರ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಆರ್ಥಿಕ ಲಾಭದ ಹೊರತಾಗಿ ಭವಿಷ್ಯದಲ್ಲಿ ನಿಮಗೆ ಸಹಾಯವಾಗುವಂತಹ ದೀರ್ಘಾವಧಿಯ ಬಂಡವಾಳ ಹೂಡಲಿದ್ದೀರಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗೆ ನೀವು ಕಳೆಯುವ ಸಮಯವು ನಿಮ್ಮನ್ನು ಎಂದಿಗಿಂತಲೂ ಖುಷಿಯಲ್ಲಿರಿಸುತ್ತದೆ. ಸಣ್ಣ ಪ್ರವಾಸಕ್ಕೆ ತೆರಳಲು ಯೋಜನೆ ರೂಪಿಸಬಹುದು. ಧಾರ್ಮಿಕತೆಯತ್ತ ಹೆಚ್ಚಿನ ಒಲವು ತೋರುವ ಸಾಧ್ಯತೆಯಿದೆ. ವೃಷಭ :- ನೀವು ಸಂವಹನ ಮತ್ತು ಸಾರ್ವಜನಿಕ ಸಂಭಾಷಣಾ ಕ್ಷೇತ್ರದಲ್ಲಿದ್ದರೆ, ಕೇಳುಗರನ್ನು ಮೋಡಿ ಮಾಡುವ ಸಾಮರ್ಥ್ಯವು ನಿಮಗೆ ಬರಲಿದೆ. … Read more

ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!

ಆತ ಕಷ್ಟಪಟ್ಟು ದುಡಿಯುತ್ತಿದ್ದ ಲಾರಿ ಚಾಲಕ. ಮನೆಯಲ್ಲಿ ಅಪ್ಪ-ಅಮ್ಮ, ಅಣ್ಣಂದಿರು, ಹತ್ತಾರು ಎಕರೆ ಜಮೀನು, ಟ್ರ್ಯಾಕ್ಟರ್‌ಗಳಿದ್ದವು. ಸುಖವಾಗಿಯೇ ಇದ್ದ ಸಂಸಾರಕ್ಕೆ ಪ್ರವೇಶಿಸಿದ್ದು ‘ಪ್ರೀತಿ’. ತನ್ನದೇ ಗ್ರಾಮದ ಹುಡುಗಿ ಈತನನ್ನ ಇಷ್ಟಪಟ್ಟಿದ್ದಳು. ಆಕೆಯ ಪ್ರೀತಿಗಾಗಿ ಮನೆ-ಮಠ ಬಿಟ್ಟು ಬಂದಿದ್ದ ರೇವಣಸಿದ್ದಪ್ಪ, ಈಗ ಹೆಣವಾಗಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆದರೆ ಈ ಸಾವಿನ ಸುತ್ತ ಹತ್ತಾರು ಅನುಮಾನಗಳು ಆರಂಭವಾಗಿವೆ. ಗುಜರಾತ್‌ನಲ್ಲಿ ಮದುವೆ, ಕರ್ನಾಟಕದಲ್ಲಿ ಕೇಸ್! ರೇವಣಸಿದ್ದಪ್ಪ ಲಾರಿ ಕೆಲಸಕ್ಕಾಗಿ ಹೈದರಾಬಾದ್‌ಗೆ ಹೋಗಿದ್ದಾಗ, ಆತನನ್ನೇ ನಂಬಿ 18 ವರ್ಷವೂ ತುಂಬದ … Read more

19300 ರೂ ವಿಥ್‌ಡ್ರಾ ಮಾಡಲು ಸಮಾಧಿಯಿಂದ ಸಹೋದರಿ ಹೆಣ ತೆಗೆದು ಬ್ಯಾಂಕ್‌ಗೆ ಹೊತ್ತುತಂದ ಸಹೋದರ

ಒಡಿಶಾದ ಗ್ರಾಮೀಣ ಬ್ಯಾಂಕ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಸಹೋದರನೊಬ್ಬ ತನ್ನ ಸಹೋದರಿ ಖಾತೆಯಲ್ಲಿದ್ದ ಹಣವನ್ನು ವಿಥ್‌ಡ್ರಾ ಮಾಡುವ ಸಲುವಾಗಿ ಹೂತುಹಾಕಿದ್ದ ಆಕೆಯ ಹೆಣವನ್ನು ಸಮಾಧಿಯಿಂದ ಕಿತ್ತು ತಂದಿದ್ದಾನೆ. ಜಿತು ಮುಂಡ ಎಂಬಾತ ಈ ಕೃತ್ಯ ಎಸಗಿರುವ ವ್ಯಕ್ತಿ. ಈತನ ಸಹೋದರಿ ಕಲ್ರ ಮುಂಡ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಸಾಯುವ ಮುನ್ನ ಕಲ್ರ ಮುಂಡ ಸೋದರ ಜಿತು ಬಳಿ ತನ್ನ ಬ್ಯಾಂಕ್ ಖಾತೆಯಲ್ಲಿ 19,300 ರೂಪಾಯಿಗಳಿದ್ದು, ಅದನ್ನು ಪಡೆದುಕೊಳ್ಳುವಂತೆ ಹೇಳಿದ್ದರು. ಅದರಂತೆ ಜಿತು ಮುಂಡ ಹಣ ಪಡೆದುಕೊಳ್ಳಲು … Read more

ವಾಕಿಂಗ್ ಹೋಗಿದ್ದ ಮಹಿಳೆಗೆ ಶಾಕ್ : ಸಾರ್ವಜನಿಕ ಸ್ಥಳದಲ್ಲೇ ಕಾಮುಕನಿಂದ ಹಸ್ತಮೈಥುನ

ಸೋಮವಾರ ಸೈಬರಾಬಾದ್‌ನ ಔಟರ್ ರಿಂಗ್ ರಸ್ತೆ (ORR) ನಲ್ಲಿರುವ ಸೈಕ್ಲಿಂಗ್ ಟ್ರ್ಯಾಕ್‌ ನಲ್ಲಿ ಅಶ್ಲೀಲ ಕೃತ್ಯದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಭೇಟಿಯಾದೆ ಎಂದು ಬೆಳಗಿನ ವ್ಯಾಯಾಮಕ್ಕೆ ಹೋಗಿದ್ದ ಮಹಿಳೆ ಆರೋಪಿಸಿದ್ದಾರೆ. ಮಹಿಳೆಯ ಪ್ರಕಾರ, ಟ್ರ್ಯಾಕ್ ಈಗಾಗಲೇ ಜಾಗಿಂಗ್ ಮಾಡುವವರು ಮತ್ತು ಸೈಕ್ಲಿಸ್ಟ್‌ಗಳಿಂದ ತುಂಬಿದ್ದಾಗ ಬೆಳಿಗ್ಗೆ 6:15 ರ ಸುಮಾರಿಗೆ ಈ ಘಟನೆ ನಡೆದಿದೆ. ಅವರು ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. “ಟ್ರ್ಯಾಕ್ ಜನದಟ್ಟಣೆಯಲ್ಲಿದ್ದಾಗ ಆ ವ್ಯಕ್ತಿ ಹೀಗೆ ಮಾಡುತ್ತಿದ್ದ. ನನ್ನ … Read more

ಗೊತ್ತಾಗದಂತೆ ಅಟ್ಯಾಕ್‌ ಮಾಡುವ ‘ಸೈಲೆಂಟ್‌ ಕಿಲ್ಲರ್‌ʼ ಕಾಯಿಲೆಗಳಿವು.. ತಡವಾದ್ರೆ ಜೀವಕ್ಕೆ ಡೇಂಜರ್!!

ಸೈಲೆಂಟ್ ರೋಗಗಳು ಎಂದರೆ ಆರಂಭದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ದೇಹದಲ್ಲಿ ನಿಧಾನವಾಗಿ ಬೆಳೆಯುವ ಗಂಭೀರ ಕಾಯಿಲೆಗಳು. ಹೈ ಬ್ಲಡ್ ಪ್ರೆಶರ್, ಮಧುಮೇಹ, ಹೃದಯ ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳು ಇವುಗಳಲ್ಲಿ ಪ್ರಮುಖವಾಗಿವೆ. ಇತ್ತೀಚಿನ ಆರೋಗ್ಯ ವರದಿಗಳ ಪ್ರಕಾರ ಹಲವಾರು ಗಂಭೀರ ರೋಗಗಳು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ನಿಧಾನವಾಗಿ ದೇಹದಲ್ಲಿ ಬೆಳೆಯುತ್ತಿವೆ. ಇವುಗಳನ್ನ “ಸೈಲೆಂಟ್ ಡಿಸೀಸಸ್” (Silent Diseases) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ರೋಗಗಳು ಮೊದಲ ಹಂತದಲ್ಲಿ ಗಮನಕ್ಕೆ ಬಾರದ ಕಾರಣ, ನಂತರದ ಹಂತದಲ್ಲಿ ದೊಡ್ಡ ಆರೋಗ್ಯ … Read more

ಕಲ್ಲಂಗಡಿ ಹಣ್ಣು ತಿಂದು ಒಂದೇ ಕುಟುಂಬದ ನಾಲ್ವರು ಸಾವು!

ದಕ್ಷಿಣ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಊಟದ ನಂತರ ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 25ರಂದು ಜೆಜೆ ಮಾರ್ಗ್ ನಿವಾಸದಲ್ಲಿ ನಡೆದ ಕುಟುಂಬ ಭೋಜನದ ನಂತರ ಅಬ್ದುಲ್ಲಾ (40), ಪತ್ನಿ ನಸ್ರೀನ್ (35), ಪುತ್ರಿಯರಾದ ಜೈನಾಬ್ (13) ಮತ್ತು ಆಯೇಷಾ (16) ಅನಾರೋಗ್ಯಕ್ಕೆ ಒಳಗಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಟುಂಬವು ಇತರ ಐದು ಅತಿಥಿಗಳೊಂದಿಗೆ ಚಿಕನ್ ಪುಲಾವ್ ತಿಂದಿದ್ದಾರೆ. ಬಳಿಕ ಮನೆಗೆ ತೆರಳಿ ಕಲ್ಲಂಗಡಿ ಸೇವಿಸಿದ್ದಾರೆ. ಬಳಿಕ ಅವರಿಗೆಲ್ಲಾ ವಾಂತಿ … Read more

ಮದ್ಯ ಪ್ರಿಯರಿಗೆ ಬಿಗ್ ಶಾಕ್ : ರಾಜ್ಯದಲ್ಲಿ ಮೇ.1ರಿಂದಲೇ ‘ಎಣ್ಣೆ’ ಬೆಲೆಗಳು ಏರಿಕೆ.!

ರಾಜ್ಯದ ಮದ್ಯ ಪ್ರಿಯರಿಗೆ ಸರ್ಕಾರವು ಮೇ ಮೊದಲ ದಿನವೇ ಕಹಿಸುದ್ದಿ ನೀಡಲು ಮುಂದಾಗಿದೆ. ಮೇ 1 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರವು ಅಬಕಾರಿ ಸುಂಕದ ವ್ಯವಸ್ಥೆಯನ್ನು ಪುನರ್ರಚಿಸುತ್ತಿದ್ದು, ಇದರ ನೇರ ಪರಿಣಾಮವಾಗಿ ಮದ್ಯದ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಲಿದೆ ಎನ್ನಲಾಗುತ್ತಿದೆ. ಹೊಸ ತೆರಿಗೆ ನೀತಿ ಏನು? ಈವರೆಗೆ ಮದ್ಯದ ಉತ್ಪಾದನಾ ವೆಚ್ಚದ (Ex-factory price) ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಆಲ್ಕೋಹಾಲ್ ಬೈ ವಾಲ್ಯೂಮ್ (ABV) ಅಂದರೆ, ಪಾನೀಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ … Read more

ರಾತ್ರಿ ಈ ಲಕ್ಷಣಗಳು ಕಾಣಿಸಿಕೊಂಡ್ರೆ ನಿಮ್ಮ ಲಿವರ್‌ ಡ್ಯಾಮೇಜ್‌ ಆಗಿದೆ ಎಂದರ್ಥ..!

ಲಿವರ್ ದೇಹದಿಂದ ವಿಷ ತೆಗೆದುಹಾಕಲು ಕೆಲಸ ಮಾಡುತ್ತದೆ. ಯಾವುದೇ ಲಿವರ್‌ ಸಮಸ್ಯೆ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ಲಿವರ್‌ ಹಾನಿಯ ಲಕ್ಷಣಗಳ ಬಗ್ಗೆ ತಜ್ಞರಿಂದ ತಿಳಿಯಿರಿ. ಲಿವರ್‌ ದೇಹದಿಂದ ವಿಷವನ್ನ ತೆಗೆದುಹಾಕಲು ಕೆಲಸ ಮಾಡುತ್ತದೆ. ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಲಿವರ್ ಸಮಸ್ಯೆಯು ರೋಗಲಕ್ಷಣಗಳನ್ನ ಉಂಟುಮಾಡಬಹುದು. ಜನರು ಸಾಮಾನ್ಯವಾಗಿ ಈ ರೋಗಲಕ್ಷಣಗಳನ್ನ ನಿರ್ಲಕ್ಷಿಸುತ್ತಾರೆ. ಲಿವರ್‌ನ ಹಾನಿಯಿಂದ ಲಿವರ್‌ನ ಕ್ಯಾನ್ಸರ್ ಮತ್ತು ಫ್ಯಾಟಿ ಲಿವರ್‌ ಅಪಾಯ ಹೆಚ್ಚುತ್ತದೆ. … Read more

ಡಿ.ಕೆ ಶಿವಕುಮಾರ್‌ಗೆ ಸಿಎಂ ಪಟ್ಟ ನೀಡದಿದ್ದರೆ ಕಠೋರ ನಿರ್ಧಾರ : ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರಣವಾನಂದ ಶ್ರೀ ಎಚ್ಚರಿಕೆ!

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪ್ರಣವಾನಂದ ಸ್ವಾಮೀಜಿ ಕಾಂಗ್ರೆಸ್ ಹೈಕಮಾಂಡ್‌ಗೆ ಗಡುವು ನೀಡಿದ್ದಾರೆ. ಇದು 32 ಹಿಂದುಳಿದ ಸಮುದಾಯಗಳ ಮಠಾಧೀಶರ ಒತ್ತಾಯವಾಗಿದ್ದು, ನ್ಯಾಯ ಸಿಗದಿದ್ದರೆ ಕಠೋರ ನಿರ್ಧಾರದ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪ್ರಣವಾನಂದ ಸ್ವಾಮೀಜಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ಅವರನ್ನು ತಕ್ಷಣವೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಗಡುವು ನೀಡಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ … Read more

ದೇವನಹಳ್ಳಿ ಪೊಲೀಸ್ ಗೂಂಡಾಗಿರಿಗೆ ಉದ್ಯಮಿ ಮೋಹನ್‌ದಾಸ್ ಪೈ ಆಕ್ರೋಶ: ನಾವು ಸ್ವತಂತ್ರ ಪ್ರಜೆಗಳು, ಗುಲಾಮರಲ್ಲ ಎಂದು ಗರಂ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಕನ್ನಮಂಗಲ ಬಳಿ ಟೀ ಅಂಗಡಿ ತೆರೆದಿದ್ದ ಯುವಕನ ಮೇಲೆ ದೇವನಹಳ್ಳಿ ಪೊಲೀಸ್‌ ಅಧಿಕಾರಿಯಿಂದ ಲಾಠಿ ಪ್ರಹಾರದ ಘಟನೆಯು ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಖ್ಯಾತ ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ, ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಅಲ್ಲದೆ ದೇವನಹಳ್ಳಿ ಪೊಲೀಸ್‌ ಅಧಿಕಾರಿ ರಾಕ್ಷಸನಂತೆ ವರ್ತಿಸಿರುವ ವಿಡಿಯೋ ಕೂಡ ಪೈ ಹಂಚಿಕೊಂಡಿದ್ದಾರೆ. ನಾವು ಗುಲಾಮರಲ್ಲ, ಸ್ವತಂತ್ರರು ಯುವಕನನ್ನು ಪೊಲೀಸ್‌ ಅಧಿಕಾರಿ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಹಂಚಿಕೊಂಡಿರುವ … Read more