ಕಟ್ಟಡ ನಿರ್ಮಾಣ ಮಾಡಲು ಬಿಡದ ಪಕ್ಕದ ಮನೆಯವರು : ಕನಸಿನ ಮನೆಯಲ್ಲೇ ಟೆಕ್ಕಿ ಆತ್ಮಹತ್ಯೆ

ವೈಟ್‌ಫೀಲ್ಡ್‌ನಲ್ಲಿ ತಾನೇ ಕಟ್ಟಿಸುತ್ತಿದ್ದ ಮನೆಯಲ್ಲಿ ಟೆಕ್ಕಿ ಮುರಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮುರಳಿ ಅವರು ಉಷಾ ನಂಬಿಯಾರ್ ಎಂಬುವರ ಜಾಗವನ್ನು ಖರೀದಿ ಮಾಡಿಕೊಂಡು ಮನೆ ನಿರ್ಮಿಸುತ್ತಿದ್ದರು. ಆದರೆ, ಕಟ್ಟಡದಲ್ಲಿ ನಿಯಮ ಮೀರಿ ಕೆಲಸ ನಡೆಸಲಾಗಿದೆ ಎಂಬ ಆರೋಪದ ಮೇಲೆ ಉಷಾ ನಂಬಿಯಾರ್ ಅವರು ಜಿಬಿಎಗೆ ದೂರು ನೀಡಿದ್ದು, ಇದರಿಂದ ಜಿಬಿಎ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದೇ ವೇಳೆ, ಜಿಬಿಎ ಅಧಿಕಾರಿಗಳೊಂದಿಗೆ ಸೇರಿ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಮುರಳಿ ತಮ್ಮ ಡೆತ್ ನೋಟ್‌ನಲ್ಲಿ … Read more

ಪ್ರತಿದಿನ ಕುಡಿಯುವವರು vs ವಾರಕ್ಕೊಮ್ಮೆ ಕುಡಿಯುವವರು : ವೈದ್ಯರ ಪ್ರಕಾರ ಯಾರಿಗೆ ಜಾಸ್ತಿ ʼಎಣ್ಣೆʼ ಎಫೆಕ್ಟ್‌..?

ಇತ್ತೀಚಿನ ದಿನಗಳಲ್ಲಿ ವಾರಾಂತ್ಯ ಬಂದ ತಕ್ಷಣ ಪಾರ್ಟಿಗಳನ್ನ ಆಯೋಜಿಸುವ ಜನರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಆ ಪಾರ್ಟಿಗಳಲ್ಲಿ ಮದ್ಯ, ಆಹಾರ, ಪಾನೀಯಗಳು ಮತ್ತು ಬಹಳಷ್ಟು ಮೋಜು ಇರುತ್ತದೆ. ಸಾಂದರ್ಭಿಕವಾಗಿ ಕುಡಿಯುವುದರಿಂದ ಯಾವುದೇ ಹಾನಿ ಇಲ್ಲ ಎಂದು ಭಾವಿಸಿ ಜನರು ವಾರಾಂತ್ಯದಲ್ಲಿ ಕುಡಿಯುತ್ತಾರೆ. ವಾರಕ್ಕೊಮ್ಮೆ ಮದ್ಯಪಾನ ಮಾಡುವುದರಿಂದ ದೇಹದ ಮೇಲೆ ಯಾವುದೇ ವಿಶೇಷ ಪರಿಣಾಮ ಬೀರುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಹಾಗಲ್ಲ. ನೀವು ಮದ್ಯಪಾನ ಮಾಡುವ ಪ್ರಮಾಣ ಮತ್ತು ದಿನಗಳ ಸಂಖ್ಯೆಯನ್ನ ಅವಲಂಬಿಸಿ ನಿಮಗೆ ಹಾನಿಯಾಗಬಹುದು. … Read more

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡೋದು ಪಕ್ಕಾ- ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ

ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಬದಲಾವಣೆ ಚರ್ಚೆ (CM Change row) ಅಧಿಕಾರ ಹಸ್ತಾಂತರದ ಕುರಿತ ಹೇಳಿಕೆಗಳು ಇನ್ನೂ ತಣ್ಣಗಾಗಿಲ್ಲ. ಇದರ ಮುಂದುವರಿದ ಭಾಗ ಎಂಬಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಖುದ್ದು ಬೇಳೂರು ಗೋಪಾಲಕೃಷ್ಣ ಅವರ ಜೊತೆ ಅಧಿಕಾರ ತ್ಯಾಗದ ಕುರಿತು ಆಡಿದ್ದ ಮಾತುಗಳು ಸಿಎಂ ಬದಲಾವಣೆ ಚರ್ಚೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಇದೀಗ ಈ ಎಲ್ಲಾ ಬೆಳವಣಿಗೆಗಳ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ. ಹೌದು, ಸಿ.ಎಂ. ಸಿದ್ದರಾಮಯ್ಯ ಅವರ ಅಧಿಕಾರ … Read more

ಸಿಎಂ ಪಟ್ಟಕ್ಕೆ ಪಟ್ಟು ; ದೆಹಲಿಗೆ ಬಂದ ಕನಕಪುರ ಬಂಡೆ :‌ ರಾಹುಲ್‌ ಗಾಂಧಿ ಭೇಟಿಯಾಗ್ತಾರಾ ಡಿ ಕೆ ಶಿವಕುಮಾರ್?

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಅಧಿಕಾರ ಹಂಚಿಕೆ ಕುರಿತಂತೆ ಕಾಂಗ್ರೆಸ್‌ ನಾಯಕರಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಮಧ್ಯೆ ಗುದ್ದಾಟಗಳು ನಡೆದಿದ್ದು, ಹೈಕಮಾಂಡ್‌ ಸೂಚನೆ ಮೇರೆ ಎರಡು ಭಾರೀ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ನಡೆಸಿದ್ದಾರೆ. ಅಲ್ಲದೇ ಇಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ ಸಿ ವೇಣುಗೋಪಾಲ್‌ ಅವರನ್ನ ಭೇಟಿ ಮಾಡಿದ್ರೆ, ಇತ್ತ ಡಿಸಿಎಂ ಡಿ ಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದೆಹಲಿಗೆ ಭೇಟಿ ಕೊಟ್ಟಿರುವ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ … Read more

ನೀರಿನಲ್ಲಿ ಮುಳುಗಿಸಿ ತನ್ನ ಪುತ್ರ ಸೇರಿ ನಾಲ್ವರು ಮಕ್ಕಳನ್ನು ಹತ್ಯೆಗೈದ ಮಹಿಳೆ.!

ಪಾಣಿಪತ್ : ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂದು ಮಹಿಳೆಯೊಬ್ಬಳು 4 ಮಕ್ಕಳನ್ನು ಹತ್ಯೆಗೈದ ಆಘಾತಕಾರಿ (Shocking) ಘಟನೆ ಹರಿಯಾಣದ ಪಾಣಿಪತ್‌ನ ಹಳ್ಳಿಯೊಂದರಲ್ಲಿ ನಡೆದಿದೆ. ಪೂನಂ ಬಂಧಿತ ಆರೋಪಿಯಾಗಿದ್ದು, ಹರಿಯಾಣದ ಪಾಣಿಪತ್‌ನಲ್ಲಿ ಪೊಲೀಸರು ಪೂನಂಳನ್ನು 4 ಮಕ್ಕಳನ್ನು ನೀರಿನ ಟ್ಯಾಂಕ್‌ಗಳಲ್ಲಿ ಮುಳುಗಿಸಿ ಕೊಂದ ಆರೋಪದ ಮೇಲೆ ಬಂಧಿಸಿದ್ದಾರೆ. 2023ರಲ್ಲಿ ಸೋನಿಪತ್‌ನ ಬೋಹಾದ್ ಗ್ರಾಮದಲ್ಲಿ ತನ್ನ ಅತ್ತಿಗೆಯ ಮಗಳನ್ನು ಕೊಂದಿದ್ದಳು. ಅದಾದ ನಂತರ ಯಾರೂ ಅನುಮಾನ ಪಡಬಾರದು ಎಂದು ತಪ್ಪಿಸಿಕೊಳ್ಳಲು ತನ್ನ ಸ್ವಂತ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ … Read more

ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಲವ್ವಿಡವ್ವಿ ; ಮೂರು ಮಕ್ಕಳ ತಾಯಿಯ ಕತ್ತು ಸೀಳಿ ಬರ್ಬರ ಹತ್ಯೆ!

ಗಂಡನನ್ನು ಬಿಟ್ಟು ಮಕ್ಕಳ ಜೊತೆ ತಾಯಿಮನೆ ಸೇರಿದ್ದ ಮಹಿಳೇಯೋರ್ವರು ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹಿಂದೆ ಬಟ್ಟೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಬರ್ಬರ ಹತ್ಯೆ ಮಾಡಲಾಗಿದೆ. ಸಂಧ್ಯಾ (32) ಮೃತ ಮಹಿಳೆಯಾಗಿದ್ದಾರೆ. ಮೃತ ಸಂಧ್ಯಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅರೇನೂರು ಗ್ರಾಮದವರು. ಕಳೆದ 10 ವರ್ಷಗಳ ಹಿಂದೆ ಅರೇನೂರು ಗ್ರಾಮದಿಂದ 20 ಕಿಮೀ ದೂರದ ಶಿರಗೋಳ ಗ್ರಾಮದ ರವಿ ಅವರೊಂದಿಗೆ ಸಂಧ್ಯಾ ಮದುವೆಯಾಗಿತ್ತು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿ … Read more

KTM ಡ್ಯೂಕ್‌ ಬೈಕ್‌ ನಲ್ಲಿ ಮಿತಿಮೀರಿದ ವೇಗದಲ್ಲಿ ಚಲಿಸಿ ಶಿರಚ್ಛೇದಗೊಂಡು ಬ್ಲಾಗರ್ ಸಾವು.!

ಕೆಟಿಎಂ ಡ್ಯೂಕ್‌ ಬೈಕ್‌ ನಲ್ಲಿ ಮಿತಿಮೀರಿದ (140 ಕಿಲೋ ಮೀಟರ್‌ ಸ್ಪೀಡ್)‌ ವೇಗದಲ್ಲಿ ಚಲಿಸಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ 18 ವರ್ಷದ ಯುವ ಬ್ಲಾಗರ್‌ ಶಿರಚ್ಛೇದಗೊಂಡು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೂರತ್‌ ನಲ್ಲಿ ಬುಧವಾರ (ಡಿ.03) ನಡೆದಿದೆ. ಮಿತಿಮೀರಿದ ವೇಗದಲ್ಲಿ ಚಲಿಸಿದ ಪರಿಣಾಮ ಪಿಕೆಆರ್‌ ಬ್ಲಾಗರ್‌ ಪ್ರಿನ್ಸ್‌ ಪಟೇಲ್‌ (18ವರ್ಷ) ತಲೆ ತುಂಡಾಗಿ ರಸ್ತೆಯಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಸಿಸಿಟಿವಿಯಲ್ಲಿ, ಪ್ರಿನ್ಸ್‌ ಪಟೇಲ್‌ ಕೆಟಿಎಂ ಡ್ಯೂಕ್‌ ಬೈಕ್‌ ನಲ್ಲಿ 140 ಕಿಲೋ ಮೀಟರ್‌ ವೇಗದಲ್ಲಿ ಗ್ರೇಟ್‌ ಲೈನರ್‌ ಬ್ರಿಡ್ಜ್‌ … Read more

ವೃದ್ಧೆಯ ಭೀಕರ ಕೊಲೆಗೆ ಮಗನೇ ಕಾರಣ ಎಂದ ಅಳಿಯ : 45 ದಿನಗಳ ಬಳಿಕ ಅಸಲಿ ಕಥೆ ತೆರೆದಿಟ್ಟ ಪೊಲೀಸರು

ಶಿವಮೊಗ್ಗ : ತಾಲೂಕಿನ ಕುಂಸಿ ಗ್ರಾಮದಲ್ಲಿ ಅಕ್ಟೋಬರ್ 2ರಂದು ಶಾಂತಿಧೂತ ಮಹಾತ್ಮ ಗಾಂಧಿ ಜನ್ಮದಿನಾಚರಣೆಯಂದೇ ಅಹಿಂಸೆ ಮೆರೆದಿದ್ದ ಕೊಲೆಗಾರರು 70 ವರ್ಷ ವಯಸ್ಸಿನ ವೃದ್ಧೆಯನ್ನು ಭೀಕರವಾಗಿ ಇರಿದು ಕೊಂದಿದ್ದರು. ಬಸಮ್ಮ ಎಂಬ ವೃದ್ಧೆ ಒಬ್ಬರೇ ಕುಂಸಿ ಗ್ರಾಮದಲ್ಲಿ ವಾಸವಿದ್ದರು. ಹೀಗೆ ಮನೆಯಲ್ಲಿದ್ದ ಒಂಟಿ ವೃದ್ಧೆ ಕೊಲೆಯಾದ ಪ್ರಕರಣವನ್ನು ದಾಖಲಿಸಿಕೊಂಡ ಕೊಲೆಗಾರರು ಯಾರು ಎಂದು ಹುಡುಕಲಾರಂಭಿಸಿದರು. ಕೊಲೆಯಾದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಸವಾಲು ಎದುರಾಗಿತ್ತು. ಕೊಲೆ ಮಾಡಿದವರು ರಕ್ತದ ಕಲೆಗಳನ್ನು ಒರೆಸಿ ನೆಲವನ್ನು ಸ್ವಚ್ಛಗೊಳಿಸಿ … Read more

ಮದುವೆಯಾದ ಮರುದಿನವೇ ಮದುಮಗ ಸಾವು! ನವಜೋಡಿಯ ಬಾಳಲ್ಲಿ ವಿಧಿಯ ಅಟ್ಟಹಾಸ

ಶಿವಮೊಗ್ಗ ಮೂಲದ ಯುವಕ ಮದುವೆಯಾದ ಮರುದಿನವೇ ಸಾವನ್ನಪ್ಪಿರುವ ಮನಕಲಕುವ ಘಟನೆ  (Groom Death) ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದ್ದು, ಸಂಭ್ರಮದ ಮನೆಯಲ್ಲಿ ಸೂತಕ ಆವರಿಸಿದೆ.  ಮದುವೆಯ ಬಳಿಕ ದೇವರ ದರ್ಶನ ಪಡೆಯಲು ತೆರಳಿದ ಸಂದರ್ಭದಲ್ಲಿ ಯುವಕನಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ವರ ಕೊನೆಯುಸಿರೆಳೆದಿದ್ದಾನೆ. ಭಾನುವಾರ ಅದ್ಧೂರಿಯಾಗಿ ಜರುಗಿದ್ದ ಮದುವೆ ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತಪುರದ ನಿವಾಸಿಯಾಗಿರುವ ರಮೇಶ್(30) ಮೃತ ದುರ್ದೈವಿ. ರಮೇಶ್ ತನ್ನ ತಂದೆ ತಾಯಿ ನಿಧನದ … Read more

ನಾಯಕ ನಟನಾಗಿ ಎಂಟ್ರಿ ಕೊಟ್ಟ ಗಿಲ್ಲಿ ನಟ; ‘ಸೂಪರ್‌ ಹಿಟ್‌’ ಟೀಸರ್‌ ಔಟ್!

ʻಬಿಗ್‌ ಬಾಸ್‌ʼ ಮನೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ʻಕಾಮಿಡಿ ಸ್ಟಾರ್‌ʼ ಗಿಲ್ಲಿ ನಟ ನಾಯಕ ನಟನಾಗಿ ನಟಿಸಿರುವ ʻಸೂಪರ್‌ ಹಿಟ್‌ʼ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು, ಟೀಸರ್‌ ರಿಲೀಸ್‌ ಆಗಿದೆ. ಏನಿದು ಕಥೆ? ಗಿಲ್ಲಿಗೆ ಜೋಡಿ ಯಾರು? ಅನ್ನೋ ನಿಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.. ಕಾಮಿಡಿ ಶೋಗಳಲ್ಲಿ ಪಂಚ್‌ ಡೈಲಾಗ್‌ ಹೊಡೆಯುವ ಮೂಲಕ ಸಖತ್‌ ಫೇಮಸ್‌ ಆಗಿ ಬಂದು, ಇದೀಗ ʻಬಿಗ್ ಬಾಸ್ʼ ಶೋನಲ್ಲಿಯೂ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ ಗಿಲ್ಲಿ ನಟ. ಈಗಾಗಲೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ʻದಿ … Read more