ಪ್ರಿಯಕರನ ಜೊತೆ ಹೋಟೆಲ್ ಕೋಣೆಯಲ್ಲಿದ್ದ ಪತ್ನಿ ರೆಡ್ ಹ್ಯಾಂಡ್! ಬಯಲಾಯ್ತು ವರದಕ್ಷಿಣೆ ಕಿರುಕುಳದ ಸುಳ್ಳು ಕೇಸ್ ಮಹಾನಾಟಕ!

Spread the love

ಅಲಿಗಢ: ತನ್ನ ವಿರುದ್ಧವೇ ವರದಕ್ಷಿಣೆ ಕಿರುಕುಳದ ಸುಳ್ಳು ಆರೋಪ ಹೊರಿಸಿ, ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸಲು ಸ್ಕೆಚ್ ಹಾಕಿದ್ದ ಪತ್ನಿಯ ಅಕ್ರಮ ಸಂಬಂಧವನ್ನು ಪತಿಯು ಪೊಲೀಸರ ಸಹಾಯದಿಂದ ರೆಡ್ ಹ್ಯಾಂಡ್ ಆಗಿ ಬಯಲಿಗೆಳೆದಿದ್ದಾನೆ. ಪ್ರಿಯಕರನೊಂದಿಗೆ ಹೋಟೆಲ್ ಕೋಣೆಯಲ್ಲಿದ್ದ ಪತ್ನಿಯನ್ನು ಪತಿ ಹಾಗೂ ಪೊಲೀಸರು ಹಿಡಿದಿರುವ ಸಿಸಿಟಿವಿ ಹಾಗೂ ವಿಡಿಯೋ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಪ್ರೇಮ ವಿವಾಹದ ಬೆನ್ನಲ್ಲೇ ಅಕ್ರಮ ಸಂಬಂಧ!

ಮೂರುವರೆ ವರ್ಷಗಳ ಹಿಂದೆ ಬುಲಂದ್‌ಶಹರ್ ಜಿಲ್ಲೆಯ ಗಲಾವಟಿ ನಿವಾಸಿಯಾದ ಆಕಾಶ್ ಕುಮಾರ್ ಎಂಬುವವರು ಮಹಿಮಾರಾಣಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಮದುವೆಯ ನಂತರವೂ ಮಹಿಮಾರಾಣಿ ನಿಖಿಲ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಮನೆಯಲ್ಲಿದ್ದಾಗ ಈ ಬಗ್ಗೆ ಆಕಾಶ್‌ಗೆ ಅನುಮಾನ ಬಂದು ಪ್ರಶ್ನಿಸಿದಾಗಲೆಲ್ಲಾ, ಪತ್ನಿ ಆಣೆ ಪ್ರಮಾಣ ಮಾಡಿ ತನ್ನದೇನೂ ತಪ್ಪಿಲ್ಲ ಎಂದು ನಂಬಿಸುತ್ತಿದ್ದಳು. ಅಲ್ಲದೆ, ಪತಿಯಿಂದ ದೂರವಾಗಿ ಪ್ರಿಯಕರನೊಂದಿಗೆ ನೆಲೆಸುವ ಉದ್ದೇಶದಿಂದ, ಒಂದು ತಿಂಗಳ ಇತ್ತೀಚೆಗಷ್ಟೇ ಪತಿ ಆಕಾಶ್ ವಿರುದ್ಧ ವರದಕ್ಷಿಣೆ ಕಿರುಕುಳದ ಸುಳ್ಳು ದೂರನ್ನು ದಾಖಲಿಸಿ ಜೈಲಿಗೆ ಅಟ್ಟಲು ಪ್ಲಾನ್ ಮಾಡಿದ್ದಳು.

ಹೋಟೆಲ್‌ ರೂಮ್‌ವರೆಗೂ ಹಿಂಬಾಲಿಸಿ ಹಿಡಿದ ಪತಿ!

ಇತ್ತೀಚೆಗೆ ಆಕಾಶ್ ಕುಮಾರ್ ಅವರು ಅಲಿಗಢದಲ್ಲಿರುವ ತಮ್ಮ ಸೋದರಿ ಮನೆಗೆ ಬಂದಿದ್ದರು. ಈ ವೇಳೆ ನಗರದಲ್ಲಿ ಸುತ್ತಾಡುತ್ತಿದ್ದಾಗ, ಪತ್ನಿ ಮಹಿಮಾರಾಣಿ ಮತ್ತು ಆಕೆಯ ಪ್ರಿಯಕರ ನಿಖಿಲ್ ಒಟ್ಟಿಗೆ ಓಡಾಡುತ್ತಿರುವುದು ಆಕಾಶ್ ಕಣ್ಣಿಗೆ ಬಿದ್ದಿದೆ. ಕೂಡಲೇ ಎಚ್ಚೆತ್ತ ಆಕಾಶ್, ಅವರಿಬ್ಬರಿಗೂ ತಿಳಿಯದಂತೆ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಇಬ್ಬರೂ ನಗರದ ಹೋಟೆಲ್‌ವೊಂದಕ್ಕೆ ತೆರಳಿ, ಆಧಾರ್ ಕಾರ್ಡ್ ನೀಡಿ ಕೋಣೆ ಸಂಖ್ಯೆ 303 ಅನ್ನು ಪಡೆದುಕೊಂಡು ಒಳಗೆ ಹೋಗಿದ್ದಾರೆ.

ಹೋಟೆಲ್ ರೂಮ್ ಮೇಲೆ ಪೊಲೀಸರ ಬಿರುಗಾಳಿ ದಾಳಿ!

ಪತ್ನಿ ಪ್ರಿಯಕರನೊಂದಿಗೆ ಲಾಡ್ಜ್ ಒಳಗೆ ಹೋಗುತ್ತಿದ್ದಂತೆ ಆಕಾಶ್ ಕುಮಾರ್ ತಕ್ಷಣವೇ ‘112’ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಮತ್ತೊಬ್ಬ ಹಿರಿಯ ಅಧಿಕಾರಿಯನ್ನು ಕರೆಸಿಕೊಂಡು ಜಂಟಿಯಾಗಿ ಹೋಟೆಲ್ ಕೋಣೆಯ ಬಾಗಿಲು ತಟ್ಟಿದ್ದಾರೆ.

ಮುಖ ಮುಚ್ಚಿಕೊಂಡ ಕಿರಾತಕಿ: ಪೊಲೀಸರು ರೂಮ್ ಓಪನ್ ಮಾಡಿಸಿದಾಗ ಮಹಿಮಾರಾಣಿ ಮತ್ತು ನಿಖಿಲ್ ಇಬ್ಬರೂ ಕೋಣೆಯೊಳಗೆ ಒಟ್ಟಿಗೆ ಇರುವುದು ಪತ್ತೆಯಾಗಿದೆ. ಚಿತ್ರದಲ್ಲಿ ಕಾಣುವಂತೆ, ಪೊಲೀಸರ ಸಮ್ಮುಖದಲ್ಲೇ ಸಿಕ್ಕಿಬಿದ್ದ ತಕ್ಷಣ ಮಹಿಮಾರಾಣಿ ಮುಖ ಮುಚ್ಚಿಕೊಂಡು ಹೋಟೆಲ್‌ನಿಂದ ಹೊರಗೆ ಓಡಲು ಯತ್ನಿಸಿದ್ದಾಳೆ.

ನನ್ನ ಮೇಲೆಯೇ ಆಣೆ ಮಾಡ್ತಿದ್ಳು” – ಪತಿಯ ಕಣ್ಣೀರು!

ಈ ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಪತಿ ಆಕಾಶ್ ಕುಮಾರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ:

“ನಮ್ಮಿಬ್ಬರದ್ದು ಪ್ರೇಮ ವಿವಾಹವಾಗಿತ್ತು. ಮದುವೆಯಲ್ಲಿ ಅವರು ನಮಗೆ ಯಾವುದೇ ಹಣ ನೀಡಿಲ್ಲ. ಆದರೆ ನನ್ನ ಪತ್ನಿ ಮಾತ್ರ 5 ಲಕ್ಷ ರೂ. ವರದಕ್ಷಿಣೆ ನೀಡಿ, 15 ಲಕ್ಷ ರೂ. ವೆಚ್ಚದಲ್ಲಿ ಮದುವೆ ಮಾಡಿಕೊಡಲಾಗಿದೆ ಎಂದು ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿದ್ದಳು. ಮನೆಯಲ್ಲಿದ್ದಾಗಲೂ ನಿಖಿಲ್ ಜೊತೆಗಿನ ಸಂಬಂಧದ ಬಗ್ಗೆ ಕೇಳಿದರೆ, ‘ನೀನೇ ನನ್ನ ಚಿನ್ನ ರನ್ನ’ ಎಂದು ನನ್ನ ಮೇಲೆಯೇ ಆಣೆ ಮಾಡುತ್ತಿದ್ದಳು. ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ, ಆತನ ಜೊತೆ ಹೊಸ ಜೀವನ ಕಟ್ಟಿಕೊಳ್ಳಲು ಪ್ಲಾನ್ ಮಾಡಿದ್ದಳು” ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಪೊಲೀಸರು ಹೋಟೆಲ್ ಡೈರಿ ಹಾಗೂ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದು, ಈ ಹೈಡ್ರಾಮಾ ಪ್ರಕರಣದ ಕುರಿತು ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ.

WhatsApp Group Join Now

Spread the love

Leave a Reply