ಮೇಷ :–
ನಿಮ್ಮ ಸುತ್ತಲಿರುವ ಕಾರ್ಯಗಳ ಬಗ್ಗೆ ತೀರಾ ಸಾಕಷ್ಟು ಹೊಣೆಯನ್ನು ಹೊಂದಬೇಡಿ ಹಾಗೂ ಮುಂದುವರಿಸಲಾಗದ ಪರಿಸ್ಥಿತಿಯಲ್ಲಿ ಬೀಳಬೇಡಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಆಲಸ್ಯವು ನಿಮಗೆ ಸಹಾಯ ಮಾಡದು. ನೀವು ತಾಳ್ಮೆ ಕಳೆದುಕೊಳ್ಳುವ ಬಗ್ಗೆ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ ಇಲ್ಲವಾದಲ್ಲಿ ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ನಿಮ್ಮ ಮನಸ್ಸು ಮತ್ತು ಆಲೋಚನೆಗಳನ್ನು ಶಾಂತಗೊಳಿಸಲು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ.
ವೃಷಭ :-
ಒತ್ತಡದಿಂದ ಮುಕ್ತಿಪಡೆಯಲು ಯೋಗ ಮತ್ತು ಧ್ಯಾನವು ಖಂಡಿತವಾಗಿಯೂ ಉತ್ತಮ ಪರಿಹಾರವಾಗಿದೆ. ಅವುಗಳಲ್ಲಿ ತೊಡಗಿಕೊಳ್ಳಿ, ಇಂದು ನೀವು ವ್ಯವಹರಿಸಬೇಕಾಗಿರುವುದು ತುಂಬಾ ಇದೆ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಕೆಲವು ಸಂದರ್ಭಗಳಲ್ಲಿ ನೀವು ಅಸಮರ್ಥರು ಎಂದು ಅನಿಸಿದರೆ ಅಥವಾ ನಿಮಗೆ ಹಿಂಜರಿಕೆ ಉಂಟಾದಾಗ ತಾಳ್ಮೆ ಕಳೆದುಕೊಳ್ಳಬೇಡಿ. ಇದು ದೈಹಿಕ ನೋವಾಗಿರಬಹುದು ಅಥವಾ ಮಾನಸಿಕ ತಳಮಳ, ಹೊಸ ಕಾರ್ಯದ ಪ್ರಾರಂಭ, ನಿಯೋಜಿತ ಕಾರ್ಯದ ಪೂರ್ಣಗೊಳ್ಳುವಿಕೆ ಅಥವಾ ಇತರ ಯಾವುದೇ ವಿಚಾರಗಳಾಗಿರಬಹುದು. ವಿಶ್ರಾಂತರಾಗಿರಿ ಮತ್ತು ಸಂದೇಹದ ಲಾಭವನ್ನು ನೀವೇ ಪಡೆದುಕೊಳ್ಳಿ. ನಿಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಗ್ರಹಗತಿಗಳು ನಿಮಗೆ ಸೂಚಿಸುತ್ತವೆ. ಪ್ರಯಾಣವನ್ನು ತಪ್ಪಿಸಿ.
ಮಿಥುನ :-
ಇಂದು ನಿಮಗೆ ಗ್ರಹತಿಗಳು ಧನಾತ್ಮಕ ಆಲೋಚನೆಗಳನ್ನೇ ನೀಡಲಿವೆ. ಉತ್ತಮ ಸಮಯ ಹಾಗೂ ಮನೆ, ಕುಟುಂಬ ಹಾಗೂ ಗ್ರಹಜೀವನದಲ್ಲಿ ಸಂತೋಷವನ್ನು ಗಣೇಶ ದಯಪಾಲಿಸುತ್ತಾರೆ. ನಿಮ್ಮ ಉತ್ತಮ ಭಾವನೆ ಅಂಶವನ್ನು ವೃದ್ಧಿಗೊಳಿಸುವ ಚಟುವಟಿಕೆಗಳಲ್ಲಿ ನೀವು ಭಾಗವಹಿಸಬಹುದು ಮತ್ತು ನೀವು ಸಮಾಜ ಮತ್ತು ವರಿಷ್ಠರ ನಡುವೆ ಗೌರವವನ್ನು ಪಡೆಯಬಹುದು. ಸಿನಿಮಾ ದಿನಾಂಕ, ಕ್ಯಾಂಡಲ್ಲೈಟ್ ಡಿನ್ನರ್, ಹತ್ತಿರದ ಪಾರ್ಕ್ಗೆ ವಿಹಾರ ತೆರಳುವುದು ಇವೆಲ್ಲವೂ ನಿಮಗೆ ಸಂತೋಷವನ್ನು ನೀಡುತ್ತದೆ.
ಕರ್ಕಾಟಕ :-
ಸರಕಾರಿ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು ಅಥವಾ ಹೊಸ ಉದ್ಯೋಗದಲ್ಲಿರುವವರು ಗ್ರಹಗತಿಗಳು ನಿಮಗೆ ನೀಡುತ್ತಿರುವ ಅನುಕೂಲಕರ ಕಾರ್ಯದ ವಾತಾವರಣದಿಂದ ಪ್ರಯೋಜನವಾಗಲಿದೆ. ನಿಮ್ಮ ಸುತ್ತಲಿರುವ ಪ್ರೀತಿಪಾತ್ರರೊಂದಿಗೆ ಮತ್ತು ಸಂಗಾತಿಯೊಂದಿಗೆ ಹಾಗೂ ಕುಟುಂಬ ಸದಸ್ಯರೊಂದಿಗೆ ನೀವು ಸಂತೋಷದಲ್ಲಿರುವುದನ್ನು ಗಣೇಶ ದಯಪಾಲಿಸುತ್ತಾರೆ ಹಾಗೂ ದಿನಪೂರ್ತಿ ನೀವು ಉತ್ಸಾಹದಿಂದಿರುತ್ತೀರಿ. ದೈನಂದಿನ ಕಾರಣಗಳಿಗೆ ಹಣ ವೆಚ್ಚವಾದರೂ, ಉತ್ತಮ ಕಾರ್ಯಗಳಿಗಾಗಿ ವ್ಯಯಿಸಿರುವ ಸಂಬಂಧ ನೀವು ತೃಪ್ತರಾಗುತ್ತೀರಿ.
ಸಿಂಹ :-
ಆರೋಗ್ಯಕರ ದಿನವು ನಿಮಗಾಗಿ ಕಾದಿದೆ ಎಂದು ಗಣೇಶ ಹೇಳುತ್ತಾರೆ. ನಿಮ್ಮ ಮಾನಸಿಕ ಹಾಗೂ ದೈಹಿಕ ಸ್ಥಿತಿಯು ಜೊತೆಯಾಗಿ ಜೊತೆಯಾಗಿರುತ್ತದೆ ಮತ್ತು ಇದು ನಿಮ್ಮ ಸೃಜನಶೀಲತೆಯಲ್ಲಿ ಅದ್ಭುತ ವರ್ಧನೆಯನ್ನು ನೀಡುತ್ತದೆ. ಇಂದು ನೀವು ಕ್ರಿಯಾತ್ಮಕ ಆಸಕ್ತಿಯಲ್ಲಿ ತೊಡಗಿಕೊಳ್ಳುವಿರಿ ಮತ್ತು ಇದರ ಸಂತಸಕರ ಅಭಿವೃದ್ಧಿಯಿಂದಾಗಿ ನಿಮಗೆ ಪ್ರಯೋಜನವನ್ನು ತರಲಿದೆ. ನಿಮ್ಮ ಜನನ ನಕ್ಷೆಯಲ್ಲಿರುವ ಈ ಅಂಶವು ಕೂಡಾ ನಿಮ್ಮ ಮಕ್ಕಳಿಗೆ ಹೊಂದಾಣಿಕೆಯಾಗುತ್ತದೆ. ಆದ್ದರಿಂದ ಅವರಿಂದ ಶುಭಸುದ್ದಿಯನ್ನು ನಿರೀಕ್ಷಿಸಬಹುದು. ನಿಮ್ಮ ಅದೃಷ್ಟವನ್ನು ಸಾಮಾಜಿಕ ಕಾರಣಗಳಲ್ಲಿ ಕಾಲ ಕಳೆಯುವ ಮೂಲಕ ಅಥವಾ ವ್ಯವಹರಿಸು ಮೂಲಕ ಹಂಚಿಕೊಳ್ಳಿ.
ಕನ್ಯಾ :-
ಇಂದು ನೀವು ಸಹಿ ಹಾಕಬೇಕಾಗಿರುವ ಅಥವಾ ನಿಮ್ಮೊಂದಿಗೆ ಕೊಂಡೊಯ್ಯಬೇಕಾಗುವ ಕಾನೂನು ಪತ್ರಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಇವು ನಿಯೋಜಿತವಾಗಿ ಅನುಕೂಲಕರವಾಗಿರುವಂತೆ ಕಂಡುಬರುವುದಿಲ್ಲ ಮತ್ತು ಇದರಿಂದ ನಿಮ್ಮ ಹಾಗೂ ನಿಮ್ಮ ತಾಯಿಯು ಮಾನಸಿಕ ಅಸ್ಥಿರತೆ ಹಾಗೂ ದೈಹಿಕ ಅನಾರೋಗ್ಯವನ್ನು ಹೊಂದಬಹುದು. ಇಂದು ಭಿನ್ನಾಭಿಪ್ರಾಯಗಳು ಉಂಟಾಗಬಹುದು ಅಥವಾ ಕುಟುಂಬ ಸದಸ್ಯರು ನಿಮ್ಮ ಉದ್ದೇಶಗಳಲ್ಲಿ ಅಪಾರ್ಥಕಲ್ಪಿಸುತ್ತಾರೆ. ಮಿತಿಮೀರಿದ ವೆಚ್ಚದ ಬಗ್ಗೆ ಎಚ್ಚರಿಕೆಯಿಂದಿರಿ.
ತುಲಾ :-
ಸಂತೋಷಕರ ಹೊಸ ಪ್ರಾರಂಭ, ನೂತನ ಯೋಜನೆಗಳು, ಫಲಪ್ರದ ಪ್ರಯಾಣ ಅಥವಾ ಒಡಹುಟ್ಟಿದವರೊಂದಿಗಿನ ಸುಧಾರಿತ ಸಂಬಂಧಗಳು ಈ ದಿನ ನಿಮ್ಮನ್ನು ಸಂತಸ ಹಾಗೂ ಸಂತುಷ್ಟರನ್ನಾಗಿಸುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಸೂಕ್ತ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಮತ್ತು ನೀವು ವಿದೇಶದಿಂದ ಉತ್ತೇಜನಕಾರಿ ಸುದ್ದಿಯನ್ನು ಪಡೆಯಬಹುದು. ಗೌರವ ಮತ್ತು ಕೀರ್ತಿ ವೃದ್ಧಿ, ಬಂಡವಾಳದಲ್ಲಿ ಉತ್ತಮ ಪ್ರತಿಫಲ, ವಿರೋಧಿಗಳ ವಿರುದ್ಧ ಗೆಲುವು ಮುಂತಾದ ಅದೃಷ್ಟಕಾರಿ ಘಟನೆಗಳು ನಿಮ್ಮನ್ನು ದಿನಪೂರ್ತಿ ಸಂತಸದಲ್ಲಿರಿಸಲಿದೆ. ಆನಂದಿಸಿ.
ವೃಶ್ಚಿಕ :-
ನೀರಸ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಧಾರ್ಮಿರ ಕ್ಷೇತ್ರಗಳಲ್ಲಿ ಹಣಕಾಸು, ಆರ್ಥಿಕ ಮತ್ತು ವೆಚ್ಚಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಮಿತವ್ಯಯ ಹಾಗೂ ವ್ಯವಹಾರ ನಿಪುಣರಾಗಿರುವಂತೆ ಗ್ರಹಗತಿಗಳು ನಿಮ್ಮನ್ನು ಒತ್ತಾಯಿಸುತ್ತವೆ. ನಿಮ್ಮ ಪ್ರೀತಿಪಾತ್ರರ ವರ್ತನೆಯ ಬಗ್ಗೆ ಗಮನಹರಿಸಿ ಇಲ್ಲವಾದಲ್ಲಿ ಅವರು ನಿಮ್ಮ ವಿರುದ್ಧ ರಹಸ್ಯ ವಿಚಾರಗಳನ್ನು ಹೊಂದಿರುವ ಸಾಧ್ಯತೆಯಿರುವುದರಿಂದ ಇದು ಧ್ವೇಷದ ಮುನ್ಸೂಚನೆಯನ್ನು ನೀಡಬಹುದು. ನಿಮ್ಮ ಹೃದಯಕ್ಕೆ ಹತ್ತಿರವಾದವರು ನಿಂದಿಸಿದರೆ ಅವರ ಮೇಲೆ ಹರಿಹಾಯಬೇಡಿ. ಇದು ನಿಮ್ಮ ಸುತ್ತಲಿರುವ ಋಣಾತ್ಮಕ ವಾತಾವರಣದಿಂದಾಗಿ ಹೀಗಾಗಿರಬಹುದು. ಆಳವಾದ ಉಸಿರು ತೆಗೆದುಕೊಳ್ಳಿ ಮತ್ತು ಅವುಗಳನ್ನು ಹಾಗೆಯೇ ಸಾಗಲು ಬಿಡಿ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಲ್ಲ ಮತ್ತು ಅವರು ಹೆಚ್ಚು ಶ್ರಮಪಡಬೇಕಾದ ಅಗತ್ಯವಿದೆ.
ಧನು :-
ಯಾತ್ರಾಸ್ಥಳಕ್ಕೆ ತೆರಳುವಿರಿ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನಿಮ್ಮ ಯೋಜನೆಯಂತೆಯೇ ನಿಮ್ಮ ಕಾರ್ಯವನ್ನು ಪೂರ್ಣಗೊಳಿಸುವಿರಿ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ಉತ್ತಮವಾಗಿರುವುದರಿಂದ ನೀವು ಉತ್ಸಾಹ ಮತ್ತು ಉಲ್ಲಾಸದಿಂದಿರುತ್ತೀರಿ. ಕುಟುಂಬದಲ್ಲಿ ಮಂಗಳಕರ ಸಮಾರಂಭವು ನಡೆಯುವ ಸಾಧ್ಯತೆಯಿದೆ. ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಮಾಡುವಿರಿ ಮತ್ತು ದಿನಪೂರ್ತಿ ಹರ್ಷದಾಯಕ ಭಾವನೆಯಲ್ಲಿರುತ್ತೀರಿ. ಸಮಾಜದಲ್ಲಿನ ನಿಮ್ಮ ಕೀರ್ತಿಯು ವರ್ಧಿಸಲಿದೆ.
ಮಕರ :-
ಧಾರ್ಮಿಕ ಮತ್ತು ಆಧ್ಯಾತ್ಮ ವಿಷಯಗಳಲ್ಲಿನ ನಿಮ್ಮ ಆಕರ್ಷಣೆಯು ದಿನಪೂರ್ತಿ ನಿಮ್ಮನ್ನು ಕ್ರಿಯಾಶೀಲರಾಗಿರಿಸುವುದಲ್ಲದೆ ನಿಮಗೆ ವೆಚ್ಚವನ್ನು ತಂದಿಡುತ್ತದೆ. ಕೆಲವು ಕಾನೂನು ಸಂಬಂಧಿ ವ್ಯವಹಾರಗಳಲ್ಲಿ ನೀವು ಸಿಲುಕಬಹುದು. ಉದ್ಯಮ ಸಂಬಂಧಿ ವಿಚಾರಗಳಲ್ಲಿ ಪ್ರತಿಕೂಲ ಸ್ಥಿತಿ ಬರಬಹುದು. ನಿಮ್ಮ ಪ್ರೀತಿಪಾತ್ರರ ಕೀರ್ತಿಗೆ ಕಳಂಕ ಉಂಟಾಗಬಹುದು. ದೈಹಿಕ ಶಕ್ತಿ ಮತ್ತು ಮಾನಸಿಕ ಶಾಂತಿಯು ನಿಮ್ಮಲ್ಲಿ ಇಲ್ಲವಾಗಬಹುದು. ಇಂದು ನಿಮಗೆ ಅಪಘಾತ ಅಥವಾ ಶಸ್ತ್ರಚಿಕಿತ್ಸೆಯ ಸಂಭಾವ್ಯತೆಯಿದೆ.ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ಇರಬಹುದು ಮತ್ತು ಇದರಿಂದ ನೀವು ನಿರಾಶೆಗೊಳಗಾಗಬಹುದು.
ಕುಂಭ :-
ಇಂದು ಪ್ರತಿಕೂಲ ದಿನವು ನಿಮ್ಮದಾಗಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಉದ್ಯಮದಲ್ಲಿರುವವರ ಲಾಭವು ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಸ್ನೇಹಿತರೊಂದಿಗಿನ ಭೇಟಿಯು ನಿಮ್ಮ ಇಂದಿನ ಉಲ್ಲಾಸ ಮನೋಭಾವಕ್ಕೆ ಕಾರಣವಾಗಬಹುದು. ನಿಮ್ಮ ಸ್ನೇಹಿತರೊಂದಿಗೆ ನೀವು ಸಣ್ಣ ಪ್ರವಾಸಕ್ಕೂ ತೆರಳಬಹುದು. ನಿಮ್ಮ ಗ್ರಹಗತಿಗಳು ಅನುಕೂಲಕರ ದೈವಬಲವನ್ನು ಹೊಂದಿರುವುದರಿಂದ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಸೂಕ್ತ ದಿನವ. ವಿವಾದ ಯೋಜನೆಯಲ್ಲಿರುವ ಅವಿವಾಹಿತರಿಗೆ ಸಂಬಂಧ ಕೂಡಿಬರಲಿದೆ.
ಮೀನ :-
ಅದೃಷ್ಟಕರ ದಿನವನ್ನು ಗಣೇಶ ದಯಪಾಲಿಸುತ್ತಾರೆ ಮತ್ತು ಜೊತೆದೆ ವೃತ್ತಿಯಲ್ಲಿ ಯಶಸ್ಸು ಕುಟುಂಬ ವಿಚಾರಗಳಲ್ಲಿ ಸಂತಸವನ್ನು ಅನುಗ್ರಹಿಸುತ್ತಾರೆ. ಮೇಲಾಧಿಕಾರಿಗಳಿಗೆ ನೀವು ಉತ್ತಮ ವ್ಯಕ್ತಿಯಾಗಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ ಮತ್ತು ಲಕ್ಷ್ಮೀದೇವಿಗೂ ಕೂಡ. ಇದರಿಂದಾಗಿ ವ್ಯವಹಾರದಲ್ಲಿ ಅಭಿವೃದ್ಧಿ ಮತ್ತು ಸಾಲವು ಹಿಂತಿರುಗಲಿದೆ. ಹಿರಿಯರಿಂದ ಮತ್ತು ತಂದೆಯ ಕಡೆಯಿಂದ ಪ್ರಯೋಜನಗಳು ಸಿಗಲಿವೆ ಮತ್ತು ಸಾಮಾಜಿಕ ಸ್ಥಾನಮಾನ ವರ್ಧಿಸಲಿದೆ. ಆರೋಗ್ಯ ನಿಮ್ಮನ್ನು ಚಿಂತೆಗೀಡು ಮಾಡುವುದಿಲ್ಲ ಮತ್ತು ಒಟ್ಟಾರೆಯಾಗಿ ನೀವು ಸಂತಸದಿಂದಿರುವಿರಿ.
Horoscope Today : 13 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now