Horoscope Today : 28 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಮೇಷ ರಾಶಿಯವರಿಗೆ ಇದು ಅತ್ಯಂತ ಸೂಕ್ಷ್ಮ ಸಮಯ. ಎಲ್ಲಾ ರೀತಿಯ ಉದ್ವಿಗ್ನತೆಗಳು ಉಕ್ಕಿ ಹರಿದು ನಿಮ್ಮನ್ನು ಅವಮಾನದಲ್ಲಿರುವಂತೆ ಮಾಡುತ್ತದೆ ಎಂಬುಗಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ಮುಟ್ಟಿದರೆ ಮುನಿ’ ಎಂಬಂತೆ ವರ್ತಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಸ್ನೇಹಿತರ ಅನಿರೀಕ್ಷಿತ ಪ್ರತಿಕ್ರಿಯೆಗಳಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ ವಿಚಾರಾಸಕ್ತರಾಗಿರುವುದು ಸೂಕ್ತ. ಆಸ್ತಿ ಅಥವಾ ಭೂ ವಿವಾದಗಳಿಂದ ಆದಷ್ಟು ದೂರವಿರಿ. ಅದಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಲು ಇಂದು ಸೂಕ್ತ ದಿನವಲ್ಲ. ನಿಮ್ಮ ಹೆತ್ತವರ ಬಗ್ಗೆ ಚಿಂತೆಗೊಳಗಾಗಿದ್ದಲ್ಲಿ ಕೊರಗುತ್ತಾ ಕೂರುವ ಬದಲು ಅವರೊಂದಿಗೆ ಮಾತನಾಡಿ. ನಕಾರಾತ್ಮಕ ಪ್ರಭಾವವನ್ನು ಹೊಂದಿರುವಂತಹ ಮಹಿಳೆಯರಿಂದ ದೂರವಿರಿ. ಒತ್ತಡ, ಉದ್ವೇಗ ಮುಂತಾದವುಗಳಿಂದ ದೂರ ಉಳಿಯಲು ಈಜಲು ಹೋಗುವ ಬದಲು ಯೋಗ, ಧ್ಯಾನ ಮತ್ತು ಇತರ ಆಧ್ಯಾತ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ವಿದ್ಯಾರ್ಥಿಗಳಿಗೆ ಈ ಅವಧಿಯು ನೀರಸವಾಗಿ ಕಂಡುಬರಬಹುದು.

ವೃಷಭ :-

ನಿನ್ನೆಯ ಗ್ರಹಗತಿಗಳ ಭಾವನಾತ್ಮಕ ಪ್ರಭಾವವವು ಇನ್ನೂ ಮುಂದುವರಿಯಲಿವೆ. ಪುಣ್ಯಕ್ಕೆ, ಅವುಗಳು ನಿಮ್ಮ ಗ್ರಹಸ್ಥಾನದಲ್ಲಿ ಉತ್ತಮವಾಗಿಯೇ ಫಲವನ್ನು ನೀಡುತ್ತದೆ ಮತ್ತು ನೀವು ಕನಸಿನ ರೀತಿಯ, ಕಾಲ್ಪನಿಕ, ಸ್ನೇಹಪರ ಹಾಗೂ ಭಾವಪರವಶರಾಗಿರುವಂತೆ ಮಾಡುತ್ತದೆ. ವಿಚಿತ್ರವಾಗಿ ವರ್ತಿಸಿದಾಗ, ನಿಮ್ಮ ಹಳೆಯ ಸ್ನೇಹಿತರು ನಿಮ್ಮ ಆಲಂಗಿಸಿದ ವೇಳೆ ಮೌನಭರಿತ ಸಂತೋಷದ ಕಣ್ಣೀರು ಹರಿಸಿದಾಗ ಮತ್ತು ಹಿನ್ನೆಲೆಯಲ್ಲಿ ಭಾವನಾತ್ಮಕ ಮಧುರ ಹಾಡುಗಳನ್ನು ಕೇಳಿದಾಗ ನಿಮ್ಮನ್ನು ನೀವು ಕಂಡು ಬೆರಗಾಗಬೇಡಿ. ನೀವು ಭಾವುಕರಾಗಿರಬಹುದು. ಸುತ್ತಲಿರುವ ದೈನಂದಿನ ಕೆಲಸಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮದೇ ಲೋಕದಲ್ಲಿ ಕಳೆದುಹೋಗಿರಬಹುದು. ನೀವು ಆಹ್ಲಾದಕರ, ಕಲ್ಪನಾತ್ಮಕ ಮತ್ತು ಸೃಜನಾತ್ಮಕ ಮನೋಭಾವವನ್ನು ಹೊಂದುತ್ತೀರಿ. ಸೃಜನಾತ್ಮಕ ಉತ್ತೇಜನಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೀರಿ. ನಿಮ್ಮ ಪ್ರೀತಿಪಾತ್ರರಿಗಾಗಿ ಅಡುಗೆ ತಯಾರಿಸಿ. ಅಡುಗೆಯೂ ಒಂದು ರೀತಿಯ ಕಲೆಯಾಗಿದೆ. ಅನಿರೀಕ್ಷಿತ ಪ್ರಯಾಣ ಹಾಗೂ ಆರ್ಥಿಕ ವಿವಾದಗಳು ತಲೆದೋರಬಹುದು.

ಮಿಥುನ :-

ಸಂಬಂಧಿಕರು, ಪ್ರೀತಿಪಾತ್ರರು ಮತ್ತು ಸ್ನೇಹಿತರೊಂದಿಗಿನ ಪೂರ್ತಿ ಖುಷಿ, ನಲಿವು ಮತ್ತು ಆನಂದಭರಿತ ಸಮಾಗಮದೊಂದಿಗೆ, ಅದ್ಭುತ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನಿಶ್ಚಿತಾರ್ಥ ಅಥವಾ ಮದುವೆ ಸಮಾರಂಭಗಳಿಗೆ ಆಮಂತ್ರಣವಿದ್ದರೆ, ಅದನ್ನು ತಪ್ಪಿಸಬೇಡಿ. ಆರ್ಥಿಕ ಯೋಜನೆಯಲ್ಲಿನ ತೊಂದರೆಯಿಂದಾಗಿ ಸಂಜೆಗಾಗಿ ನೀವು ಗೊತ್ತುಪಡಿಸಿದ್ದ ಯೋಜನೆಗಳಿಗೆ ತಡೆಯಾಗಬಹುದು.ಪ್ರಾರಂಭದಲ್ಲಿ ನೀವು ತೊಂದರೆ ಅನುಭವಿಸಬಹುದು. ಆದರೆ, ಚಿಂತಿಸಬೇಡಿ. ಎಲ್ಲವೂ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿದು ನಿಮ್ಮ ಮನಸ್ಸಿಗೆ ನಿರಾಳವಾಗಿ ಖುಷಿಯಾಗುವುದರಿಂದ ಈ ಚಿಂತೆಗಳು ಕೇವಲ ತಾತ್ಕಾಲಿಕ. ವೃತ್ತಿ ಜೀವನದಲ್ಲಿ ಉತ್ತಮ ಸಮಯ. ಆದರೆ, ಎಣಿಸಿದ್ದೆಲ್ಲವೂ ಕೂಡಲೇ ನಡೆಯದಿರುವ ಕಾರಣ ತ್ವರಿತ ಗಮನ ಬೇಕಾಗಬಹುದು. ಗ್ರಹಗತಿಗಳು ನಿಮ್ಮ ವೈಯಕ್ತಿಕ ಜೀವನದಲ್ಲಿ ತರುವ ಲಾಭಗಳಿಗೆ ಆದ್ಯತೆ ನೀಡಿ ಮತ್ತು ಅವುಗಳ ಪ್ರಯೋಜನ ಪಡೆದುಕೊಳ್ಳಿ.

ಕರ್ಕಾಟಕ :-

ಕರ್ಕಾಟಕ ರಾಶಿಯವರಿಗೆ ಇಂತಹ ಸಮಯ ಬೇರೊಂದಿಲ್ಲ. ಗ್ರಹಗತಿಗಳು ನಿಮ್ಮ ಸ್ವಭಾವದ ರೀತಿಯಲ್ಲೇ ಪ್ರಭಾವ ಬೀರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಭಾವಾವೇಶದಿಂದ ಯಾವಾಗಲೂ ಆವರಿಸಿರುವ ಕರ್ಕಾಟಕ ರಾಶಿಯವರಾದ ನಿಮಗೆ ಇಂದು ಒಳ್ಳೆಯ ದಿನ ಯಾಕೆಂದರೆ ಎಲ್ಲರೂ ಹಾಗೂ ಎಲ್ಲವೂ ನೀವು ಅಂದುಕೊಂಡಂತೆಯೇ ನಡೆದುಕೊಳ್ಳುತ್ತಾರೆ ಮತ್ತು ಆಗುವುದು. ನೀವು ಕೂಡ ಅವರು ಗಮನಹರಿಸಿದಷ್ಟು ಗಮನ ನೀಡಿ.ಸ್ನೇಹಿತರನ್ನು ಭೇಟಿ ಮಾಡಿ. ಕಾಫಿಯೊಂದಿಗೆ ಹರಟೆ ಹೊಡೆಯಿರಿ.ಉಡುಗೊರೆಗಳನ್ನು ಹಂಚಿಕೊಳ್ಳಿ. ನಿಮಗೆ ಸಾಕಾಗುವಷ್ಟು ಶಾಪಿಂಗ್ ಮಾಡಿ. ಸುಮ್ಮನೆ ಆನಂದಿಸಿ. ಒಳ್ಳೆಯ ಗ್ರಹಗತಿಗಳ ಹೊಂದಾಣಿಕೆಯಿಂದ ಲಾಭ ಪಡೆಯಿರಿ. ಮತ್ತು ನೆನಪಿಡಿ ನಿಮ್ಮ ಮನಸ್ಸಿನಾಳದ ಭಾವನೆಗಳನ್ನು ಇತರರಿಗೆ ಹೇಳಲು ಬಯಸಿದ್ದರೆ ಅದನ್ನು ಈಗಲೇ ಹೇಳಿಬಿಡಿ. ಮೋಜಿನ ಪ್ರಯಾಣ ಮತ್ತು ರುಚಿಕರ ಭೋಜನವು ನಿಮಗಾಗಿ ಕಾದಿದೆ. ಪ್ರೀತಿ ಸಂಬಂಧವನ್ನು ಹೊಂದಿರುವವರು ತಮ್ಮ ಸಂಗಾತಿಗಳೊಂದಿಗೆ ಉತ್ತಮ ಕೆಮೆಸ್ಟ್ರಿ ಹಂಚಿಕೊಳ್ಳುವಿರಿ.

ಸಿಂಹ :-

ಗೊಂದಲಭರಿತ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಅತ್ಯಂತ ತುಮುಲಕ್ಕೆ ಒಳಗಾಗಬಹುದು. ಹೃದಯದ ವಿಚಾರಗಳು ಮತ್ತು ಗೊತ್ತುಗುರಿಯಿಲ್ಲದ ದೈನಂದಿನ ಕಾರ್ಯಗಳು ನಿಮ್ಮನ್ನು ಕಂಗಾಲಾಗಿಸುತ್ತದೆ. ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳು ಇಂದು ಎಂದಿಗಿಂತ ಪ್ರಬಲವಾಗಿರುವ ಸಾಧ್ಯತೆಯಿದೆ. ಜಾಗ್ರತೆ ವಹಿಸಿಕೊಳ್ಳಿ, ನಿಮ್ಮ ಮಾತು ಮತ್ತು ಸಿಟ್ಟು ಸ್ತಿಮಿತದಲ್ಲಿರಲಿ ಮತ್ತು ಕಾನೂನು ವ್ಯವಹಾರಗಳ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಲು ಅಭ್ಯಾಸ ಮಾಡಿ.ಸಾಧ್ಯವಿದ್ದರೆ ಕಾನೂನು ಅಥವಾ ಅಧಿಕಾರ ಸಂಬಂಧಿ ನಿರ್ಧಾರಗಳನ್ನು ಮುಂದೂಡಿ. ನಿಮ್ಮ ಭಾವನೆಗಳನ್ನು ಅರ್ಥೈಸಿಕೊಂಡು ಹತೋಟಿಯಲ್ಲಿಡಿ ಯಾಕೆಂದರೆ ಕೆಲವರು ನಿಮ್ಮನ್ನು ಸುಲಭದಲ್ಲಿ ಘಾಸಿಗೊಳಿಸಬಹುದು ಅಥವಾ ನಿಮಗೆ ಗೊತ್ತಿಲ್ಲದಂತೆಯೇ ಕೆಲವು ಆತುರದ ನಿರ್ಧಾರಗಳಿಗೆ ನಿಮ್ಮನ್ನು ಎಳೆಯಬಹುದು.ಅದು ನಂತರ ನಿಮಗೆ ಬೇಸರವನ್ನುಂಟುಮಾಡಬಹುದು. ಪರಿಚಯವಷ್ಟೇ ಇರುವ ಮಹಿಳೆಯರೊಂದಿಗೆ ಎಚ್ಚರಿಕೆಯಿಂದಿರಿ. ವಿದೇಶದಿಂದ ಶುಭಸುದ್ದಿ ಬರಬಹುದು.

ಕನ್ಯಾ :-

ಅದೃಷ್ಟದ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಗೌರವಗಳು, ಪ್ರಯೋಜನಗಳು, ಲಾಭಗಳು, ಸೌಲಭ್ಯಗಳು ಇವುಗಳಲ್ಲಿ ನಿಮ್ಮ ಹೆಸರಿರುತ್ತದೆ ಮತ್ತು ಇವೆಲ್ಲವನ್ನೂ ನೀವು ಪಡೆದುಕೊಳ್ಳುವಿರಿ. ಮತ್ತು ಇವೆಲ್ಲವೂ ಮನೆ, ಕುಟುಂಬ, ವ್ಯಾಪಾರ ಹೀಗೆ ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿರುತ್ತದೆ. ಈ ಸಮಯದಲ್ಲಿ ಪ್ರಯಾಣ ಬೆಳೆಸುವುದು ನಿಜಕ್ಕೂ ಆನಂದದಾಯಕವಾಗಿರುತ್ತದೆ. ಮತ್ತು ನಿಮ್ಮ ಪ್ರೀತಿಪಾತ್ರರ ಮನಸ್ಸಿಗೆ ನೀವು ಇನ್ನಷ್ಟು ಹತ್ತಿರವಾಗುವಂತೆ ಮಾಡುತ್ತದೆ. ಪ್ರೀತಿ ಅಥವಾ ಸಂಗಾತಿಯನ್ನು ಅರಸುತ್ತಿರುವವರು ಗ್ರಹಗತಿಗಳ ಉತ್ತಮ ಹೊಂದಾಣಿಕೆಯಿಂದ ಭಾರೀ ಪ್ರಯೋಜನವನ್ನು ಪಡೆದುಕೊಳ್ಳಲಿದ್ದೀರಿ. ಗೆಳತಿಯರಿಂದ ಸಹಾಯ ದೊರೆಯಲಿದೆ. ಆನಂದಿಸಿ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಹಗತಿಗಳು ತುಂಬಾ ಉತ್ತಮವಾಗಿವೆ. ಫಲವಾಗಿ ಆರ್ಥಿಕ ವೃದ್ಧಿಯಾಗಲಿದೆ. ಉದ್ಯಮ ಪಾವತಿಯನ್ನು ಪಡೆಯಲು ನೀವು ಪ್ರಯಾಣ ಬೆಳಸುವ ಸಾಧ್ಯತೆ ಇದೆ ಮತ್ತು ಅದು ಫಲಕಾರಿಯಾಗಲಿದೆ.

ತುಲಾ :-

ಈ ಸೂಕ್ಷ್ಮ, ಅತಿ ಭಾವನೆಯ ದಿನವು ನಿಮ್ಮನ್ನು ಸಂತೋಷ ಹಾಗೂ ಆನಂದದಿಂದಿರಿಸುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಅಂತರವು ಅಷ್ಟೊಂದು ಪ್ರಾಮುಖ್ಯವಲ್ಲ. ಇಂದು ನಿಮ್ಮ ಸಂಗಾತಿಯನ್ನು ನೋಡುವಾಗ ಮತ್ತು ಭೇಟಿ ಮಾಡುವಾಗ ನೀವು ದೃಢಸಂಕಲ್ಪದಿಂದಿರಬೇಕು. ನೀವು ಒಟ್ಟಿಗಿರಲು ಸಾಕಷ್ಟು ಅದೃಷ್ಟವಂತರಾಗಿದ್ದರೆ, ನೀವು ಇನ್ನೂ ಮನಸ್ಸಿಗೆ ಹತ್ತಿರವಾಗುತ್ತೀರಿ. ನೀವು ಭಾವಾತಿರೇಕದಿಂದ ತುಂಬಿರುತ್ತೀರಿ. ಮತ್ತು ನಿಮ್ಮ ಪ್ರೀತಿಗಾಗಿ ಕೆಲವು ರೋಮಾಂಚಕ ಪದಗಳ ಸಾಲುಗಳನ್ನು ಬರೆಯುವ ಕುರಿತು ಚಿಂತನೆ ನಡೆಸುತ್ತೀರಿ. ತಾಯಿಯ ಕಡೆಯಿಂದ ವಿಶೇಷ ಸಹಕಾರ ದೊರೆಯಲಿದೆ. ವೃತ್ತಿ ಹಾಗೂ ಹಣಕಾಸು ವಿಚಾರಗಳಿಗೆ ಉತ್ತಮ ಸಮಯ. ನಿಮ್ಮ ಕನಸಿನ ಉದ್ಯೋಗವು ನಿಮಗೆ ದೊರೆಯಬಹುದು ಅಥವಾ ಕೆಲಸದಲ್ಲಿ ಶ್ಲಾಘನೆಯನ್ನು ಪಡೆಯಬಹುದು. ಆಸ್ತಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಫಲಕಾರಿಯಾಗಲಿದೆ ಮತ್ತು ವ್ಯವಹಾರದಲ್ಲಿ ಏಳಿಗೆ ಉಂಟಾಗಲಿದೆ.

ವೃಶ್ಚಿಕ :-

ಎಲ್ಲಾ ತೆರನಾದ ಭಾವಗಳೊಂದಿಗೆ ನೀವು ತುಂಬಿತುಳುಕಿರುವಿರಿ ಮತ್ತು ಇವುಗಳನ್ನು ಹತೋಟಿಯಲ್ಲಿರಲು ರೂಢಿಮಾಡಿಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಕಷ್ಟಕರವಾದದ್ದು, ಆದರೂ ಅಗತ್ಯವಾದದ್ದು ಇದರಲ್ಲಿ ನಿಮ್ಮ ಏಳಿಗೆಯು ನೆಲೆಯಾಗಿದೆ. ಉನ್ನತಿ, ಅವನತಿಗಳ ಮಿಶ್ರಣದ ದಿನವು ಇದಾಗಿದ್ದು, ವಿಚಿತ್ರರೀತಿಯ ಘಟನೆಗಳಿಂದಾಗಿ ನೀವು ದಿಗ್ಭ್ರಮೆಗೊಳಗಾಗಬಹುದು. ಜೀವನಾಧಾರಕ್ಕಾಗಿ ನೀವು ಬರಹಗಾರರಾಗಿದ್ದಲ್ಲಿ ಅಥವಾ ಇತರ ಯಾವುದೇ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ ಇದು ಉತ್ತಮ ಸಮಯ. ಏನೇ ಆದರೂ ವ್ಯವಹಾರದಲ್ಲಿ ಅಥವಾ ಸಾಂಸಾರಿಕವಾಗಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳು ಒಮ್ಮೆ ನಿಮ್ಮ ಕೆಲಸದ ಬಗ್ಗೆ ಸಂತೋಷಪಡಬಹುದು ಮತ್ತೊಮ್ಮೆ ಅಸಮಾಧಾನ ಹೊಂದಬಹುದು. ಕಾರ್ಯಕ್ಷೇತ್ರದಲ್ಲಿ ಅಸೂಯೆ ಹೊಂದಿದ ಪ್ರತಿಸ್ಪರ್ಧಿಗಳೊಂದಿಗೆ ಅಥವಾ ಮಕ್ಕಳೊಂದಿಗೆ ಉತ್ತಮ ರೀತಿಯ ಚರ್ಚೆಯಾಗಿದ್ದರೂ ಅದರಿಂದ ದೂರವಿರಿ.ಪ್ರಯಾಣದ ಯೋಗವಿದೆ ಮತ್ತು ಖರ್ಚು ಹೆಚ್ಚಾಗಬಹುದು.

ಧನು :-

ಕಾರ್ಯತಃ ಕಳೆದ ಕೆಲವು ದಿನಗಳಿಂದ ನೀವು ಏಳುಬೀಳು ಸ್ಥಿತಿಯಲ್ಲಿದ್ದಿರಿ. ಈಗ ನಿಮ್ಮ ಕಾರ್ಯವನ್ನು ನಿಧಾನೀಕರಿಸಲು ಉತ್ತಮ ಸಮಯ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಮನಸ್ಸು ಇನ್ನೂ ಅಧಿಕ ಸಮಯದಲ್ಲಿ ಕೆಲಸ ಮಾಡುತ್ತಿದೆ ಎಂಬುದು ಒಪ್ಪಬೇಕಾದದ್ದೇ ಆದರೆ, ಭಾವನಾತ್ಮಕವಾಗಿ ಮಿತಿಮೀರಿದ ಗೃಹಗತಿಗಳಿಂದಾಗಿ ನೀವು ಅಗತ್ಯವಾಗಿ ಬಿಡುವು ತೆಗೆದುಕೊಳ್ಳಲೇಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಉತ್ತಮ ಚಿಂತನಗೆಳತ್ತ ನಿಮ್ಮ ಮನಸ್ಸನ್ನು ಕೊಂಡೊಯ್ಯಿರಿ. ಖರ್ಚುಗಳು ಅಧಿಕಗೊಂಡಾಗ, ಕೆಲಸಗಳು ನಿಂತುಹೋದಾಗ ಮತ್ತು ಇದು ಭಾರೀ ಹೊಣೆ ಎಂಬುದಾಗಿ ನೀವು ಚಿಂತಿಸಿದಾಗ ಸಿಡಿಮಿಡಿಗೊಳ್ಳಬೇಡಿ. ಅವುಗಳು ಹಾಗೇಯೇ ಇರಲಿ. ಈಗಾಗಲೇ ದಣಿದ ನಿಮ್ಮ ದೇಹ ಹಾಗೂ ಮನಸ್ಸಿಗೆ ಇನ್ನಷ್ಟು ಒತ್ತಡವನ್ನು ನೀಡಬೇಡಿ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ಇದರ ಬದಲಾಗಿ ಆರೋಗ್ಯಕರ ರುಚಿಕರ, ಸುವಾಸನೆಯ ಭೋಜನ ತಯಾರಿಸಿ ಮತ್ತು ಮಧ್ಯಾಹ್ನದ ವೇಳೆ ಸ್ವಲ್ಪ ವಿಶ್ರಾಂತಿ ಪಡೆಯಿರಿ.

ಮಕರ :-

ನೀವು ಕರ್ಕಾಟಕ ರಾಶಿಯವರು ಕಠಿಣ ಪರಿಶ್ರಮಿಗಳು ಆದರೂ, ಇಂದಿನ ಗ್ರಹಗತಿಯು ಯಾವ ಉತ್ತಮ ರೀತಿಯ ಫಲವನ್ನು ನೀಡುತ್ತವೆ ಎಂಬುದರ ಬಗ್ಗೆ ತಿಳಿದುಕೊಂಡು ನಂತರ ಅದಕ್ಕೆ ತಕ್ಕನಾಗಿ ನಿಮ್ಮ ಕೆಲಸ ನಿರ್ವಹಿಸುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಯಶಸ್ಸು, ಸರಕು ಲಾಭ, ಹಣಕಾಸು ಮತ್ತು ಉದ್ಯಮಗಳಲ್ಲಿ ಮಹತ್ತರ ಅಭಿವೃದ್ಧಿ. ಲಾಟರಿಯಲ್ಲಿ ಗೆಲುವು ಸಾಧಿಸುವ ಅದೃಷ್ಟವಿದೆ ಆದರೆ, ಇದು ನಿಮಗೆ ಅತ್ಯಂತ ವಾಡಿಕೆಯಿಲ್ಲದ ವಿಚಾರವಾಗಿದೆ. ಆದ್ದರಿಂದ, ಪ್ರಯೋಜನಗಳು ನಿಮ್ಮ ಯಶಸ್ಸಿನಿಂದ ನೇರವಾಗಿ ಹರಿದುಬರಲಿದೆ ಮತ್ತು ನೀವು ನಿರರ್ಥಕ ಎಂದು ಭಾವಿಸಿದ್ದ ಮೂಲಗಳಿಂದಲೂ ಹರಿದು ಬರಲಿದೆ. ಒಪ್ಪಂದಗಳು ಕಾರ್ಯರೂಪಕ್ಕೆ ಬಂದರೆ ಅಥವಾ ಭಾರೀ ಮೊತ್ತದ ದಲ್ಲಾಳಿ ಹಣವು ದೊರೆತರೆ ಆಶ್ಚರ್ಯಪಡಬೇಡಿ. ಆನಂದಿಸಲು ಸಿದ್ಧರಾಗಿರಿ. ವಿವಿಧ ಸಂಸ್ಕೃತಿಗಳಿಂದ ಆಕರ್ಷಿಸುವಂತಹ ಒಬ್ಬರನ್ನು ನೀವು ಭೇಟಿ ಮಾಡಲಿದ್ದೀರಿ ಮತ್ತು ಇದು ದೀರ್ಘಸಮಯದ ಭೇಟಿಯೂ ಆಗಿರಬಹುದು. ನಿಮಗಿಷ್ಟವಾದ ಉಡುಪು ಧರಿಸಿ ಮತ್ತು ನಿಮಗಾಗಿ ನೀಡಿರುವ ಮಾಗಿದ ಮದ್ಯವನ್ನು ಆನಂದಿಸಿ.

ಕುಂಭ :-

ಗೃಹಗತಿಗಳ ಇಂದಿನ ಪ್ರೋತ್ಸಾಹಭರಿತ ಮತ್ತು ಉತ್ತಮ ಹೊಂದಾಣಿಕೆಯಿಂದ ನಿಮ್ಮ ಕೀರ್ತಿ, ಗೌರವ, ಮತ್ತು ಸಾಮಾಜಿಕ ನಿಲುವು ಇಂದಿನಿಂದ ಇನ್ನಷ್ಟು ವೃದ್ಧಿಗೊಳ್ಳಲು ಸಿದ್ಧವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಹೆಚ್ಚೆಚ್ಚು ಯೋಜನೆಗಳ ಆಗಮನ, ನಿರೀಕ್ಷೆಗೂ ಮೀರಿ ಸಹೋದ್ಯೋಗಿಗಳ ಸಹಕಾರ, ಕಾರ್ಯತಃ ನಿಮ್ಮನ್ನು ಸ್ಥಾನದಿಂದ ತೆಗೆದುಹಾಕಿದವರಿಂದ ಪ್ರಶಂಸೆಗಳು ಸಿಗಲಿವೆ. ಇತರರ ಬಗ್ಗೆ ನೀವು ತುಂಬಾ ಕರುಣೆ ಹಾಗೂ ಸೂಕ್ಷ್ಮ ಸ್ವಭಾವದವರು ಮತ್ತು ಇದಕ್ಕಾಗಿ ನೀವು ಶ್ಲಾಘನೆಗೊಳಗಾಗುತ್ತೀರಿ. ತಾಯಿಯ ಕಡೆಯಿಂದ ನಿಮಗೆ ಶುಭಸುದ್ದಿ ಬರಲಿದೆ ಮತ್ತು ಮನೆಯ ವಾತಾವರಣವು ಹಗುರ ಹಾಗೂ ವಿನೋದಕರವಾಗಿರಲಿದೆ. ನೀವು ಅತ್ಯಂತ ಆನಂದ, ಖುಷಿ ಹಾಗೂ ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೊಂದುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ನಿಮ್ಮ ಆಸಕ್ತಿ ಹಾಗೂ ಹಿತಕ ಮನೋಭಾವವನ್ನು ಹೆಚ್ಚಿಸಲು ಕಾಡು ಪ್ರದೇಶದಲ್ಲಿ ವಿಹಾರ ಕೈಗೊಳ್ಳಿ.

ಮೀನ :-

ಅವರ ಭೇಟಿಗಾಗಿ ನಿಮಗೆ ಕಾಯಲು ಸಾಧ್ಯವಿಲ್ಲ. ನೀವು ಕಾರ್ಯತಃ ಕಚೇರಿಯಿಂದ ಮನೆಗೆ ಓಡುವಿರಿ ಅಥವಾ ಫೋನ್‌ನಲ್ಲಿ ಅವರಿಗಾಗಿ ಪ್ರೀತಿಯ ಮಾತನಾಡುವುದನ್ನು ನಿಲ್ಲಿಸಲಾರಿರಿ. ಇದು ಇತರರಿಗೆ ಕಿರಿಕಿರಿಯನ್ನುಂಟುಮಾಡಬಹುದು. ಆದರೆ ನೀವು ಬಗಲಾಗುವುದಿಲ್ಲ. ವೃತ್ತಿ ವಿಚಾರಗಳಲ್ಲಿ ಇದೊಂದು ಅದ್ಭುತ ದಿನವಾದರೂ, ಹೊಸ ವೃತ್ತಿಯ ಅವಕಾಶಗಳು ನಿಮಗೆ ಬರುವ ಸಾಧ್ಯತೆಯಿದ್ದರೂ, ನೀವು ನಿಮ್ಮ ವೈಯಕ್ತಿಕ ಜೀವನದ ಕಡೆಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತೀರಿ. ನೀವು ನಿಮ್ಮ ಮಾರ್ಗಗಳಲ್ಲಿ ಅತ್ಯಂತ ಭಾವಾತೀತ ಹಾಗೂ ಉತ್ಸುಕದಿಂದ ಕೂಡಿರುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಕಳೆದ ಸಂಜೆಯು ಅವಿಸ್ಮರಣೀಯವಾಗಿರುತ್ತದೆ. ನೀವು ಸ್ಥಿರ ಸಂಬಂಧಗಳನ್ನು ಹೊಂದಿರದಿದ್ದಲ್ಲಿ, ನಿಮಗೆ ಅವಿರತ ಪ್ರಣಯಚೇಷ್ಟೆಯ ಅವಕಾಶಗಳು ಸಿಗಲಿವೆ. ನೀವು ಉದಾರವಾಗಿ ಖರ್ಚುಮಾಡುವಿರಿ. ಯಾವುದೂ ಉಚಿತವಾಗಿ ಸಿಗುವುದಿಲ್ಲ ಎಂಬುದಾಗಿ ಗಣೇಶ ಕಣ್ಣುಮಿಟುಕಿಸುತ್ತಾರೆ. ನಿಕಟ ಸಂಬಂಧ ಹೊಂದಿಲ್ಲದವರಿಗೆ, ಸೃಜನಶೀಲ ಹವ್ಯಾಸಗಳಿಗೆ ಇದು ಸಕಾಲ.

WhatsApp Group Join Now

Spread the love

Leave a Reply