Horoscope Today : 22 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಅದೃಷ್ಟಕರ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಕುಟುಂಬದಲ್ಲಿ ಮಂಗಳಕರ ಸಮಾರಂಭವು ನಡೆಯುವ ಸಾಧ್ಯತೆಯಿದೆ. ಇದು ನೀವು ತುಂಬಾ ಸಮಯದಿಂದ ಸಂಪರ್ಕವನ್ನೇ ಕಳೆದುಕೊಂಡಿದ್ದ ಸಂಬಂಧಿಕರನ್ನು, ಸ್ನೇಹಿತರನ್ನು ಮತ್ತು ಬಂಧುವರ್ಗದವರನ್ನು ಭೇಟಿ ಮಾಡುವ ಸುವರ್ಣ ಅವಕಾಶವನ್ನು ಒದಗಿಸುತ್ತದೆ.

ಅವರ ಸೆಲ್ ಫೋನ್ ಸಂಖ್ಯೆ ಅಥವಾ ಸಾಮಾಜಿಕ ನೆಟ್‌ವರ್ಕಿಂಗ್ ತಾಣಗಳ ವಿಳಾಸಗಳನ್ನು ತೆಗೆದುಕೊಳ್ಳಲು ಮರೆಯದಿರಿ. ವ್ಯವಹಾರದಲ್ಲಿ ಅಥವಾ ವಿನೋದಕ್ಕಾಗಿ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸಕಾಲ. ಈಗ ನೀವು ಯಾವುದೇ ವಿಚಾರದಲ್ಲೂ ತುಂಬಾ ಉತ್ಸಾಹಿಗಳಾಗಿರುತ್ತೀರಿ. ವಾಸ್ತವವಾಗಿ, ಎಷ್ಟು ಉತ್ಸಾಹಿಗಳೆಂದರೆ, ಯಾವುದೇ ಯೋಜನೆಯ ಬಗ್ಗೆ ಪೂರ್ಣವಾಗಿ ಕೇಳದೆಯೇ ನೀವು ಅದನ್ನು ದೃಢಪಡಿಸಲು ಶಕ್ತರಿರುತ್ತೀರಿ. ಇದನ್ನು ತಡೆಹಿಡಿಯಿರಿ. ಯಾವುದೂ ಮಿತಿಮೀರಿದರೆ ಅಪಾಯ. ನಿಮ್ಮ ಆರೋಗ್ಯ ಮತ್ತು ಹಣಕಾಸಿನ ಬಗ್ಗೆ ಎಚ್ಚರವಹಿಸಿ. ವಿಪರೀತ ಖರ್ಚು ಮಾಡಬೇಡಿ. ಅನಿರೀಕ್ಷಿತ ಐಶ್ವರ್ಯವು ನಿಮಗಾಗಿ ಕಾದಿದೆ.

ವೃಷಭ :-

ಏನೋ ಒಂದು ವಿಚಾರದ ಕುರಿತಾದ ಚಿಂತೆಯು ಇನ್ನೂ ನಿಮ್ಮನ್ನು ಕಾಡುತ್ತಿದೆ. ಬಹುಶಃ ಬಹುಮುಖ್ಯವಾದ ವಿಚಾರವೊಂದಕ್ಕೆ ಸಂಬಂಧಿಸಿ ನೀವು ಇನ್ನೂ ಒಂದು ನಿರ್ಧಾರಕ್ಕೆ ಬಂದಿರಲಿಕ್ಕಿಲ್ಲ. ಅದು ಏನೇ ಆಗಿರಲಿ, ಇದು ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರಲ್ಲಿ ಮಾನಸಿಕ ಕಳವಳವನ್ನು ಉಂಟುಮಾಡುತ್ತಿದೆ. ಎಲ್ಲಾ ಕುಟುಂಬ ಸಂಘರ್ಷಗಳನ್ನು ಪ್ರಸ್ತಾಪಿಸಬೇಡಿ. ನೀವು ಕುಟುಂಬ ಸದಸ್ಯರಿಂದ ಹೆಚ್ಚು ಸಹಕಾರ ಮತ್ತು ಸಮಾನತೆಯನ್ನು ನಿರೀಕ್ಷಿಸಿರುತ್ತೀರಿ ಮತ್ತು ಇದು ನಿಮ್ಮ ಮನಸ್ಸಿಗೆ ತುಂಬಾ ನೋವುಂಟುಮಾಡುತ್ತದೆ. ವಿಚಾರಗಳ ಬಗ್ಗೆ ನಿಧಾನವಾಗಿ ಆಲೋಚಿಸಿ. ಅವರು ಯಾಕೆ ಕರುಣೆ ತೋರುತ್ತಿಲ್ಲ? ಅವರು ಒಪ್ಪದೇ ಇರಲು ಇದು ಪ್ರೀತಿ ಸಂಬಂಧವೇ? ಇದು ನಿಜವಾಗಿಯೂ ನಿಮಗೆ ಒಳ್ಳೆಯದೇ? ನೀವು ತುಂಬಾ ಒತ್ತಡದಲ್ಲಿದ್ದೀರಿ ಮತ್ತು ಇದು ನಿಮ್ಮ ಕೆಲಸದ ಮೇಲೂ ಅಡ್ಡಿಯನ್ನುಂಟುಮಾಡುತ್ತದೆ. ಚೆನ್ನಾಗಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ.

ಮಿಥುನ :-

ವ್ಯವಹಾರ ಮತ್ತು ವ್ಯವಹಾರ ಸಂಬಂಧಿ ವಿಚಾರಗಳಿಗೆ ಇದು ಉತ್ತಮ ದಿನ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇಂದು ನೀವು ‘ಸ್ವರ್ಣಸ್ಪರ್ಷ’ವನ್ನು ಹೊಂದಿದ್ದೀರಿ. ಆದ್ದರಿಂದ ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಈ ಫಲವನ್ನು ಅನುಭವಿಸಿ. ವ್ಯಾಪಾರದಲ್ಲಿ ಆದಾಯವು ತೀವ್ರವಾಗಿ ಹೆಚ್ಚಾಗಲಿದೆ ಮತ್ತು ಬಂಡವಾಳಗಳು ಉತ್ತಮ ಲಾಭಾಂಶವನ್ನು ತರುವ ಸಾಧ್ಯತೆಯಿದೆ. ಸ್ನೇಹಿತರಿಂದಲೂ ನಿಮಗೆ ಪ್ರಯೋಜನ ಉಂಟಾಗಲಿದೆ. ಅವರೊಂದಿಗೆ ಸಂಪರ್ಕದಲ್ಲಿರಿ. ಹೊಸ ಲಾಭದಾಯಕ ಉದ್ಯೋಗವನ್ನು ಅರಸುತ್ತಿರುವ ಉದ್ಯೋಗಿಗಳಿಗೆ ಅದೃಷ್ಟ ಕೂಡಿಬರಲಿದೆ. ಕಚೇರಿಯಲ್ಲಿ ಬಡ್ತಿಯನ್ನು ಎದುರುನೋಡುತ್ತಿರುವವರಿಗೂ ಇದು ಉತ್ತಮ ಸಮಯ. ವೃತ್ತಿಯಲ್ಲಿ ಪದೋನ್ನತಿ ಉಂಟಾಗಲಿದೆ. ಅವಿವಾಹಿತರಿಗೆ ಅಥವಾ ಎರಡನೇ ವಿವಾಹದ ಆಲೋಚನೆಯನ್ನು ಹೊಂದಿದ ವಿವಾಹ ವಿಚ್ಛೇದಿತರಿಗೆ ಕಲ್ಯಾಣಕ್ಕೆ ಇದು ಸಕಾಲ. ಸತ್ಕಾರಕೂಟದ ಆಮಂತ್ರಣವನ್ನು ನಿರಾಕರಿಸಬೇಡಿ. ಸಂಜೆಯ ವೇಳೆಗೆ ಹೆಚ್ಚಿನ ಶುಭಸುದ್ದಿ ಬರಲಿದೆ..

ಕರ್ಕಾಟಕ :-

ಗ್ರಹಗತಿಗಳು ಅದೃಷ್ಟಕರವಾಗಿಯೇ ಮುಂದುವರಿಯಲಿದೆ ಮತ್ತು ಸಮಯವು ಅನುಕೂಲಕರವಾಗಿರುತ್ತದೆ ಎಂಬುದಾಗಿ ಗಣೇಶ ಪ್ರತಿಪಾದಿಸುತ್ತಾರೆ. ಅದೃಷ್ಟದ ಕರ್ಕಾಟಕ ರಾಶಿಯವರು ನೀವು. ನಿನ್ನೆಯ ದಿನದಂತ್ಯದಿಂದ ಎಲ್ಲಾ ಅದೃಷ್ಟಗಳನ್ನು ನೀವು ಆನಂದಿಸುತ್ತಿದ್ದೀರಿ. ನಗುವಿಂದಿರಿ ಮತ್ತು ಅಪರೂಪದ ಕೊಡುಗೆಗಳನ್ನು ಆಶ್ಚರ್ಯದಿಂದ ಪಡೆಯಿರಿ. ಕಾರ್ಯಸ್ಥಳದಲ್ಲಿ ಮತ್ತು ಮನೆಯಲ್ಲಿ ನಿಮಗೆ ಅತ್ಯುತ್ತಮ ಸಮಯ ಕಾದಿದೆ. ಪರಿವಾರದೊಂದಿಗೆ ನೀವು ಹಂಚಿಕೊಂಡಿರುವ ಸ್ನೇಹಪರ ಸಂಬಂಧ ನಿಮಗೆ ಒಂದು ಆದರ್ಶಭರಿತ ಪರಿಕಲ್ಪನೆ. ಹಾಗೂ ನಿಮಗೆ ಈ ಸುಲಲಿತವಾಗಿ ಬರುವ ಆಲೋಚನೆಗಳು ಇಷ್ಟವಾಗುತ್ತಿದೆಯೇ?ನಿಮ್ಮ ತಾಯಿಯಿಂದ ಮತ್ತು ಆಕೆಯ ಬುದ್ಧಿವಂತಿಕೆಯಿಂದ ನಿಮಗೆ ಲಾಭ ಉಂಟಾಗಲಿದೆ. ಇವೆಲ್ಲವೂ ನಿಮ್ಮ ಸ್ವಂತ ಆವರಣವನ್ನು ಕಲಾತ್ಮಕವಾಗಿ ಹೆಚ್ಚಿಸಲು ಪ್ರೇರೇಪಿಸುತ್ತದೆ. ಗೃಹಗತಿಗಳ ಅನುಗ್ರಹದ ಪ್ರಭಾವದಿಂದಾಗಿ ನಿಮ್ಮ ಘನತೆ ಮತ್ತು ಹಣಕಾಸು ಸ್ಥಿತಿಯು ವರ್ಧಿಸುತ್ತದೆ.

ಸಿಂಹ :-

ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ.ಏನೂ ಅದ್ಭುತವಾಗಿರುವುದಿಲ್ಲ. ಸಂಕ್ಷಿಪ್ತವಾಗಿ ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ಪ್ರಾಯೋಗಿಕ ಪರೀಕ್ಷೆಗಳಲ್ಲಿ ನೀವು ಎಂದಿಗಿಂತ ಹೆಚ್ಚು ಶ್ರಮಪಡಬೇಕಾದೀತು ಅಥವಾ ನಿಮ್ಮ ಮನಸ್ಸಿನಲ್ಲಿನ ರೂಪರೇಷೆಗಳನ್ನು ಕಾಗದದ ಮೇಲೆ ಕಾರ್ಯರೂಪಕ್ಕೆ ತರಲು ನಿಮಗೆ ಎಂದಿಗಿಂತ ಹೆಚ್ಚು ಸಮಯ ಬೇಕಾದೀತು.ಎಲ್ಲವೂ ಗ್ರಹಗತಿಯನ್ನು ಹೊಂದಿರುವುದಿಲ್ಲ.ದೃಢನಿಷ್ಠೆಯನ್ನು ಹೊಂದಿ. ನೀವು ಆಲಸ್ಯವನ್ನು ಹೊಂದಿರುತ್ತೀರಿ ಮತ್ತು ಗೆಲುವಿಲ್ಲದವರಾಗಿರುತ್ತೀರಿ. ನೀವು ಒತ್ತಡಕ್ಕೆ ಒಳಗಾಗಬಹುದು ಅಥವಾ ಸುಸ್ತಾಗಿರುವಂತೆಯೂ ಕಂಡುಬರಬಹುದು. ನಿಮಗೆ ಯಾರಾದರೂ ಕಿರಿಕಿರಿಯನ್ನುಂಟುಮಾಡಿದರೆ ಅವರ ಮೇಲೆ ಹರಿಹಾಯಬೇಡಿ. ವಾಗ್ವಾದ ನಡೆಸುವವರಿಂದ ದೂರವಿರಿ. ಮಾತುಕತೆಯಿಂದ, ಚರ್ಚೆಗಳಿಗೆ ಇಂದು ಸೂಕ್ತದಿನವಲ್ಲ. ಏನೇ ಆದರೂ, ಅವುಗಳು ಹುರಿದುಂಬಿಸುವಂತೆ ಅನಿಸಬಹುದು. ಅವುಗಳಿಂದ ಹೊರಗುಳಿಯಿರಿ.

ಕನ್ಯಾ :-

ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತಿರುವುದು ಏನದು? ನಿಮ್ಮ ಮನಸ್ಸಿನಲ್ಲಿ ಕ್ರಾಂತಿಕಾರಿ ಆಲೋಚನೆಗಳಿರುವ ಸಾಧ್ಯತೆಯಿರಬಹುದು.ನಿಮ್ಮ ಸ್ನೇಹಿತರು ಈ ಕಾಲ್ಪನಿಕ ಆಸೆಯನ್ನು ತೋರಿಸಿಕೊಟ್ಟಿರಬಹುದು.ಮತ್ತು ಇದು ನಿಮ್ಮ ಊಹನೆಯ ಅಸಮಧಾನಕ್ಕೆ ಕಾರಣವಾಗಿರಬಹುದು. ಮತ್ತು ಈಗ ನೀವು ಈ ನಿರರ್ಥಕ ವಿಚಾರವನ್ನು ಪ್ರಯತ್ನಿಸಲು ಬಯಸುತ್ತಿರಬಹುದು. ಕಾದು ನೋಡಿ. ಎಲ್ಲಾ ವಿಷಯಗಳು ತೋರಿಕೆಗೆ ಕಾಣುವಷ್ಟು ಸುಲಭವಲ್ಲ ಮತ್ತು ಫಲಕಾರಿಯಾಗಿಯೂ ಇರುವುದಿಲ್ಲ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಆದ್ದರಿಂದ ಯೋಚಿಸಿ ಹೆಜ್ಜೆಯಿಡಿ. ನಿಮ್ಮ ಸ್ವಭಾವ ಅಥವಾ ಮೌಲ್ಯಗಳಿಗೆ ವಿರುದ್ಧವಾದ ಯಾವುದೇ ವಿಚಾರದಲ್ಲಿ ತೊಡಗಬೇಡಿ. ಇಲ್ಲವಾದಲ್ಲಿ ನೀವು ಗಂಭೀರ ಸಮಸ್ಯೆಯಲ್ಲಿ ಬೀಳುತ್ತೀರಿ. ವೆಚ್ಚಗಳು ಹೆಚ್ಚಾಗಲಿವೆ ಮತ್ತು ಪರಿಸ್ಥಿತಿಯು ನಿರಾಶಾದಾಯಕವಾಗಲಿದೆ. ಧೈರ್ಯ ತಂದುಕೊಳ್ಳಿ. ಮತ್ತು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಇದು ಅತಿ ಮುಖ್ಯವಾಗಿದೆ

ತುಲಾ :-

ದಿನಪೂರ್ತಿ ಸಂತಸ, ನಗು ಮತ್ತು ಮೋಜು ತುಂಬಿರಲಿದೆ. ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗುವ ಯೋಜನೆಗಳಲ್ಲಿ ಮುಂದುವರಿಯುತ್ತೀರಿ. ಈ ಭೇಟಿಯು ಅದ್ಭುತವಾಗಿರುತ್ತದೆ. ಸಕಾರಾತ್ಮಕ ವಾತಾವರಣಗಳಿಂದಾಗಿ ನೀವು ಆನಂದದಲ್ಲಿರುತ್ತೀರಿ ಮತ್ತು ಪ್ರಾಯೋಗಿಕವಾಗಿ ಪ್ರಕಾಶಿತಗೊಳ್ಳುವಿರಿ. ನಿಮ್ಮ ಹಣ ಮತ್ತು ಸಮಯಕ್ಕೆ ಬೆಲೆ ಸಿಕ್ಕ ಕಾರಣ ಸಿನಿಮಾ ದಿನಾಂಕವು ನಿಮ್ಮಲ್ಲಿ ಉತ್ಸಾಹವನ್ನು ತುಂಬುತ್ತದೆ. ಸಿನಿಮಾವು ಸಂತಸ, ಉತ್ತೇಜನಕಾರಿಯಾಗಿರುತ್ತದೆ. ನಿಮ್ಮನ್ನೇ ರಂಜಿಸುವಂತಹ ಎಲ್ಲಾ ಹಾದಿಗಳು ಮತ್ತು ವಿಚಾರಗಳು ಅಗಾಧ ಖುಷಿಯನ್ನು ನೀಡುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಶಾಪಿಂಗ್ ತೆರಳುವುದು ಉತ್ತಮ ಆಲೋಚನೆ. ದುಬಾರಿ ಬೆಲೆಯ ಆಭರಣ ಖರೀದಿಸುವ ಬಗ್ಗೆ ನೀವು ಆಲೋಚಿಸಬಹುದು. ನಿಮ್ಮ ಗೌರವ ಮತ್ತು ಸಾಮಾಜಿಕ ನಿಲುವು ವೃದ್ಧಿಗೊಳ್ಳಲಿದೆ.

ವೃಶ್ಚಿಕ :-

ಒಳ್ಳೆಯ ದಿನಗಳು ಮುಂದುವರಿಯಲಿದೆ ಎಂಬುದಾಗಿ ಗಣೇಶ ನಗು ಬೀರುತ್ತಾರೆ. ಶುಭಕರ ಗ್ರಹಗತಿಗಳಿಂದಾಗಿ ಪ್ರಣಯ ಸಂಬಂಧಗಳು ಇನ್ನಷ್ಟು ದೃಢವಾಗುತ್ತದೆ. ಪ್ರೇಮ ಅಥವಾ ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಸಮಯ. ನಿಮ್ಮ ಸ್ನೇಹಿತೆಯರನ್ನು ಭೇಟಿ ಮಾಡುವ ಅವಕಾಶ ಪಡೆಯುವಿರಿ ಮತ್ತು ಇದು ಒಂದು ಆಸಕ್ತಿ ವಿಚಾರಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ ಎಂಬುದಾಗಿ ಗಣೇಶ ಕಣ್ಣುಮಿಟುಕಿಸುತ್ತಾರೆ. ವೃತ್ತಿ ಸಂಬಂಧಿತ ಪ್ರಯಾಣದಲ್ಲಿ ಎಲ್ಲವೂ ಹಿಂದಿಗಿಂತ ಉತ್ತಮವಾಗಿ ಸಾಗುತ್ತದೆ. ಹಣಕಾಸು ಸ್ಥಿತಿ, ಸಹೋದ್ಯೋಗಿಗಳ ನಡುವಿರುವ ನಿಮ್ಮ ಗೌರವ, ಅವರ ಸಹಕಾರ, ಹೊಸ ಯೋಜನೆಗಳಲ್ಲಿನ ಅದೃಷ್ಟ, ಶುಭಕರ ಗ್ರಹಗತಿಗಳಿಂದಾಗಿ ಎಲ್ಲದರಲ್ಲಿಯೂ ಅದೃಷ್ಟ ಕಾದಿರುತ್ತದೆ. ನಿಮ್ಮ ವಿರೋಧಿಗಳು ಆಶ್ಚರ್ಯಕರ ರೀತಿಯಲ್ಲಿ ನೆರವು ನೀಡುತ್ತಾರೆ ಹಾಗೂ ಸಹಕಾರಿ ಮನೋಭಾವವನ್ನು ಹೊಂದಿರುತ್ತಾರೆ. ಬಾಕಿ ಉಳಿದಿರುವ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಆನಂದಿಸಿ.

ಧನು :-

ನೀವು ಯಶಸ್ಸು ಗಳಿಸುವವರೆಗೆ ನಿಮ್ಮ ಶ್ರಮ ಮುಂದುವರಿಯಲಿ. ತೊಂದರೆಗಳು ಉಂಟಾದಲ್ಲಿ ಇಂದು ನಿಮ್ಮ ವಿಶ್ವಾಸ ಕಳೆದುಕೊಳ್ಳಬೇಡಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಈ ದಿನವು ಸರಾಗವಾಗಿರುವಂತೆ ಕಂಡುಬರುವುದಿಲ್ಲ ಪರಿಣಾಮವಾಗಿ ಫಲಿತಾಂಶ ಮತ್ತು ಪ್ರಶಂಸೆಗಳು ಸುಲಭವಾಗಿ ಬರುವುದಿಲ್ಲ.ಅನಗತ್ಯವಾಗಿ ಯೋಜನೆಗಳು ಮತ್ತು ಕಾರ್ಯಗಳು ಮುಂದೂಡಲ್ಪಡುತ್ತಿರುವುದರಿಂದ ನೀವು ತಟಸ್ಥ ಹಾಗೂ ನಿರಾಶೆಗೊಳಗಾಗಬಹುದು.ಜನರ ಅಸಹಕಾರ ಮನೋಭಾವವು ಇದಕ್ಕೆ ಕಾರಣವಾಗಿರಬಹುದು ಮತ್ತು ಇವೆಲ್ಲವೂ ನಿಮ್ಮ ಕೋಪಕ್ಕೆ ಕಾರಣವಾಗಿರಬಹುದು. ಆದರೂ, ನಿಯಂತ್ರಣದಲ್ಲಿರಿ. ತಾಳ್ಮೆಯಿಂದಿರಿ. ಅವರ ಈ ರೀತಿಯ ವರ್ತನೆಗೆ ಯಾವುದೋ ಕಾರಣವಿರಬಹುದು. ಇವೆಲ್ಲವೂ ಸಾಗಲೇಬೇಕಾದದ್ದು. ಕಾಯಿರಿ. ನಿಮ್ಮ ಪ್ರೀತಿಪಾತ್ರರ ಜೀವನ ಮತ್ತು ವೃತ್ತಿಯ ಕುರಿತಾಗಿ ನೀವು ಕೂಡಾ ಚಿಂತೆಗೊಳಗಾಗಬಹುದು. ಪ್ರಯಾಣ ಯೋಜನೆಗಳನ್ನು ತಪ್ಪಿಸಿ.

ಮಕರ :-

ಗಣೇಶ ಈ ದಿನವು ಶುಭಕರವಾಗಿರುವುದಿಲ್ಲ ಎಂಬ ಮುನ್ಸೂಚನೆ ನೀಡುವುದಿಲ್ಲ. ಅನಾರೋಗ್ಯದ ಕಿರಿಕಿರಿಯಿಂದಾಗಿ ನೀವು ಆಯಾಸ ಮತ್ತು ನಿರುತ್ಸಾಹದಿಂದ ಕೂಡಿರುವಿರಿ.ಅಥವಾ ನಿದ್ರಾಹೀನತೆಯೊಂದಿಗಿನ ನಿಮ್ಮ ಹೋರಾಟವು ನಿಮ್ಮನ್ನು ಪೂರ್ತಿ ಹಿಂಡಿಬಿಡಬಹುದು. ವಿಶ್ರಾಂತರಾಗಿ, ಮತ್ತು ಬಿಡುವ ಪಡೆಯಲು ಪ್ರಯತ್ನಿಸಿ. ಇಂದು ನೀವು ರಜಾ ಅರ್ಜಿ ಸಲ್ಲಿಸಿದರೆ ಉತ್ತಮ. ಯೋಗ ಧ್ಯಾನವು ನಿದ್ರಾಹೀನತೆಗೆ ಉತ್ತಮ ಪರಿಹಾರೋಪಾಯ. ಮತ್ತು ನಿಮ್ಮ ನಿರುತ್ಸಾಹಕ್ಕೆ ಉತ್ತಮ ಔಷಧಿ ನಗು.ನಿಮ್ಮ ಪ್ರೀತಿಪಾತ್ರರೊಂದಿಗೆ ಹರಟೆ ಹೊಡೆಯಿರಿ ಮತ್ತು ನಿಮ್ಮ ಕಷ್ಟಗಳನ್ನು ನಗುವಿನ ಮೂಲಕ ಮರೆಯಿರಿ. ನಿಮಗಿಷ್ಟವಾದ ರೆಸ್ಟೋರೆಂಟ್‌ನಿಂದ ಯಾವುದೇ ತಿನಿಸುಗಳಿಲ್ಲದೆ ನೀವು ಹಿಂತಿರುಗುವ ಸಂದರ್ಭ ಬರುವ ಸಾಧ್ಯತೆಯಿರುವುದರಿಂದ ನೀವೇ ಅಡುಗೆ ತಯಾರಿಸಿ.

ಕುಂಭ :-

ಏನೋ ಚಿಂತೆಯು ನಿಮ್ಮನ್ನು ಕಾಡುತ್ತಿದೆ. ಬಹುಶಃ ಕೆಟ್ಟ ಕನಸಾಗಿರಬಹುದು ಅಥವಾ ಕಳೆದ ಎರಡು ದಿನಗಳಲ್ಲಿನ ಸಾಮಾಜಿಕ ವಿಚಾರಗಳಾಗಿರಬಹುದು. ಯಾವುದೇ ಆಗಿರಬಹುದು ಆದರೆ, ಇದು ನಿಮ್ಮನ್ನು ಅನ್ಯಮನಸ್ಕರನ್ನಾಗಿಸುತ್ತದೆ ಮತ್ತು ಯಾವುದರಲ್ಲೂ ಏಕಾಗ್ರತೆಯನ್ನು ತರಲು ನಿಮಗೆ ಬಿಡುವುದಿಲ್ಲ. ಮಧ್ಯಾಹ್ನದ ವೇಳೆಗೆ ಗ್ರಹಗತಿಗಳು ಅನುಕೂಲಕರವಾಗಬಹುದು ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನೀವು ಶಾಂತ ಹಾಗೂ ಹೆಚ್ಚು ಸಹವಾಸಪ್ರಿಯರಾಗಬಹುದು. ಇದಕ್ಕಾಗಿಯೇ ನೀವು ಚಟುವಿಟಕೆಯಿಲ್ಲದೆ ಇದ್ದ ನಿಮ್ಮ ಕೋಣೆಯಿಂದ ಹೊರಬರಬಹುದು. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ವಿಶೇಷವಾಗಿ ನಿಮ್ಮ ಒಡಹುಟ್ಟಿದವರೊಂದಿಗೆ ಉತ್ತಮ ರೀತಿಯಲ್ಲಿ ಕಾಲಕಳೆಯುವಿರಿ.ಮಧ್ಯಾಹ್ನದ ವೇಳೆಗಿನ ಬೇಸರವನ್ನು ಕಳೆಯಲು ಮೊನೋಪಲಿ ಅಥವಾ ಲೂಡಾ ಮುಂತಾದ ಆಟಗಳ ಕಡೆಗೆ ಗಮನಹರಿಸಬಹುದು. ಸಣ್ಣ ಹಂತದ ಪ್ರಯಾಣವು ಅನುಕೂಲಕರ ಹಾಗೂ ಆನಂದದಾಯಕವಾಗಿರುತ್ತದೆ.

ಮೀನ :-

ನೀವು ಏನು ಮಾತನಾಡುತ್ತೀರಿ ಮತ್ತು ಯಾರೊಂದಿಗೆ ಮಾತನಾಡುತ್ತೀರಿ ಎಂಬುದರ ಬಗ್ಗೆ ಜಾಗರೂಕತೆಯಿಂದಿರುವಂತೆ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ. ಇಲ್ಲವಾದಲ್ಲಿ ನೀವು ಮಾತನಾಡುವ ಯಾವುದೇ ಮಾತಿಗೆ ಇಂದು ವಿವರಣೆ ನೀಡಬೇಕಾಗಿ ಬರಬಹುದು. ಭಿನ್ನಾಭಿಪ್ರಾಯ ಅಥವಾ ವಾಗ್ವಾದಗಳು ನಡೆಯಲಿವೆ. ನಿಮ್ಮ ಎಲ್ಲಾ ವ್ಯವಹಾರಗಳಲ್ಲೂ ಜಾಗರೂಕರಾಗಿರಿ. ನಿಮ್ಮ ಶಕುನದ ನಿರಂತರ ಭಾಗವಾಗಬೇಕಾಗಿದ್ದು, ಖರ್ಚುವೆಚ್ಚಗಳ ಬಗ್ಗೆ ಗಮನವಿರಲಿ ಎಂಬುದು. ಕೊಡುಕೊಳ್ಳುವಿಕೆಯ ವ್ಯವಹಾರ ದಯವಿಟ್ಟು ಬೇಡ. ಬದಲಾಗಿ ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ. ಬಹುಶಃ ತುಂಬಾ ಸಮಯದಿಂದ ನೀವು ಇದರ ಬಗ್ಗೆ ನಿರ್ಲ್ಯಕ್ಷ ತಾಳಿರಬಹುದು. ವ್ಯಾಯಾಮ, ಸ್ಕಿಪಿಂಗ್, ನಡಿಗೆ ಯಾವುದೇ ರೀತಿಯದ್ದಾಗಿರಬಹುದು ಇದು ನಿಮ್ಮ ಮಾನಸಿಕ ಸ್ಥಿತಿಯ ಮೇಲೂ ಪ್ರಯೋಜನವನ್ನು ನೀಡುತ್ತದೆ. ಇಂದು ನೀವು ಏನು ಸೇವಿಸುತ್ತೀರಿ ಅದರ ಬಗ್ಗೆ ಎಚ್ಚರಿಕೆಯಿಂದಿರಿ. ನೀವೇ ಸ್ವತಃ ಅಡುಗೆಯನ್ನು ಪ್ರಾರಂಭಿಸಲು ಉತ್ತಮ ಸಮಯ.

WhatsApp Group Join Now

Spread the love

Leave a Reply