ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್ಗೆ ಈ ಮೆಸೇಜ್ ಬಂದಿದೆಯಾ? ಹಾಗಿದ್ದರೆ ನೀವು ಅತೀವ ಎಚ್ಚರಿಕೆ ವಹಿಸಬೇಕು. ಕಾರಣ ಒಂದು ಸಣ್ಣ ಎಡವಟ್ಟಾದರೂ ಗ್ರಾಹಕರಿಗೆ ಸಮಸ್ಯೆ ತೀವ್ರಗೊಳ್ಳಲಿದೆ. ಏನಿದು ಮೆಸೇಜ್.?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ.
ಹಲವು ರೀತಿಯಲ್ಲಿ ವಂಚನೆಗಳು ನಡೆಯುತ್ತಿದೆ. ಬ್ಯಾಂಕ್ ಗ್ರಾಹಕರು ಮೋಸ ಹೋಗುವುದನ್ನು ತಪ್ಪಿಸಲು ಎಸ್ಬಿಐ ಈ ಎಚ್ಚರಿಕೆ ನೀಡಿದೆ. ಎಸ್ಬಿಐ ಗ್ರಾಹಕರಿಗೆ ವಂಚಕರು ಇತ್ತೀಚೆಗೆ ಮೆಸೇಜ್ ಮಾಡುತ್ತಿದ್ದಾರೆ. ಈ ಮೆಸೇಜ್ ಅಪಾಯಕಾರಿಯಾಗಿದೆ.
ಎಸ್ಬಿಐ ಗ್ರಾಹಕರಿಗೆ ಪ್ರಮುಖವಾಗಿ ರಿವಾರ್ಡ ಪಾಯಿಂಟ್ಸ್ ವಿಚಾರದಲ್ಲಿ ಬ್ಯಾಂಕ್ ಸೂಚನೆ ನೀಡಿದೆ. ವಂಚಕರು ನಿಮ್ಮ ರಿವಾರ್ಡ್ ಪಾಯಿಂಟ್ಸ್ ನಗದು ಆಗಿ ಪರಿವರ್ತಿಸಲು ಕೊನೆಯ ದಿನಾಂಕವಾಗಿದೆ. 3,000, 5000 ರಿವಾರ್ಡ್ ಸೇರಿದಂತೆ ಹಲವು ಅಂಕಿ ಸಂಖ್ಯೆ ನೀಡಿ ಇಂದೇ ರಿವಾರ್ಡ್ ಪಾಯಿಂಟ್ಸ್ಗಳನ್ನು ನಗದು ಆಗಿ ಕನ್ವರ್ಟ್ ಮಾಡಿ ಎಂಬ ಸೂಚನೆಯ್ನು ನೀಡಲಾಗುತ್ತದೆ.
ರಿವಾರ್ಡ್ ಪಾಯಿಂಟ್ಸ್ಗಳನ್ನು ನಗದು ರೂಪಕ್ಕೆ ಪರಿವರ್ತಿಸಿ ಬ್ಯಾಂಕ್ ಖಾತೆಗೆ ಜಮೆ ಮಾಡಲು ಲಿಂಕ್ ನೀಡಲಾಗುತ್ತದೆ. ಈ ಲಿಂಕ್ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆ ಖಾಲಿಯಾಗಲಿದೆ. ಈ ಲಿಂಕ್ ಕ್ಲಿಕ್ ಮಾಡಿದ ಬೆನ್ನಲ್ಲೇ ರಿವಾರ್ಡ್ ಪಾಯಿಂಟ್ಸ್ ನಗದು ರೂಪದಲ್ಲಿ ನಿಮ್ಮ ಖಾತೆಗೆ ಜಮೆ ಆಗಲು ಖಾತೆ ವಿವರ, ಅಥವಾ ಎಟಿಎಂ, ಯುಪಿಐ ಸೇರಿದಂತೆ ಬ್ಯಾಂಕ್ ವಿವರ ಕೇಳುತ್ತದೆ. ಇಲ್ಲಿ ಯಾವುದೇ ಒಂದು ವಿವರ ಹಾಕಿದರೂ ಸಾಕು. ಖಾತೆ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಹಣವೂ ಖಾಲಿ ಮಾಡುತ್ತಾರೆ.
ನಕಲಿ ಸಂದೇಶಗಳ ಬಗ್ಗೆ ಎಸ್ಬಿಐ ಎಚ್ಚರಿಸಿದೆ. ಮೆಸೇಜ್ಗೆ ಬರುವ ಈ ರೀತಿಯ ಸಂದೇಶಗಳ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ ಎಂದು ಎಸ್ಬಿಐ ತನ್ನ ಗ್ರಾಹಕರಿಗೆ ಅಲರ್ಟ್ ನಡಿದೆ. ಎಸ್ಬಿಐ ರೀತಿಯ ಮೆಸೇಜ್ ಮೂಲಕ ಯಾವುದೇ ಲಿಂಕ್ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬ್ಯಾಂಕ್ ಮಾಹಿತಿಗಳನ್ನು ಆನ್ಲೈನ್ ಮೂಲಕ ಅಥವಾ ಇನ್ಯಾವುದೇ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳಬೇಡಿ. ಇದರಿಂದ ಅಪಾಯ ಹೆಚ್ಚು. ಇತ್ತ ಎಟಿಎಂ ನಂಬರ್, ಸಿವಿವಿ, ಒಟಿಪಿ, ಯುಪಿಐ ಐಡಿ ಸೇರಿದಂತೆ ಇತರ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಅತೀವ ಎಚ್ಚರಿಕೆ ಅತ್ಯಗತ್ಯವಾಗಿದೆ.
ಬ್ಯಾಂಕ್ ವಿವರ ಯಾರೊಂದಿಗೂ ಹಂಚಿಕೊಳ್ಳಬೇಡಿ.
ಬ್ಯಾಂಕ್ ಗ್ರಾಹಕರೇ ಎಚ್ಚರ, ನಿಮ್ಮ ಮೊಬೈಲ್ಗೆ ಈ ಮೆಸೇಜ್ ಬಂದಿದೆಯಾ ಚೆಕ್ ಮಾಡಿ.?
WhatsApp Group
Join Now